<p><strong>ವಾಷಿಂಗ್ಟನ್:</strong> ಮುಂಬೈನಲ್ಲಿ ನಡೆದಿದ್ದ 26/11ರ ಭಯೋತ್ಪಾದಕರ ದಾಳಿ ಕೃತ್ಯದ ಅರೋಪಿ ತಹವ್ವುರ್ ರಾಣಾ ಶರಣಾಗತಿ ಮತ್ತು ಆತನನ್ನು ತನ್ನ ವಶಕ್ಕೆ ಪಡೆಯಲು ಭಾರತ ಎಲ್ಲ ಅಗತ್ಯ ಕ್ರಮವಹಿಸಿದೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಹೇಳಿದೆ.</p>.<p>‘ಕಾನೂನು ಕ್ರಮ ಎದುರಿಸಲು, ರಾಣಾನನ್ನು ಭಾರತದ ವಶಕ್ಕೆ ಒಪ್ಪಿಸಲು ನನ್ನ ಸರ್ಕಾರ ಅನುಮೋದನೆ ನೀಡಿದೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯ ಹಿಂದೆಯೇ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಕ್ರಂ ಮಿಸ್ರಿ ಈ ಹೇಳಿಕೆ ನೀಡಿದ್ದಾರೆ.</p>.<p>‘ಅಮೆರಿಕ ಸರ್ಕಾರ ಸ್ಪಷ್ಟ ನಿಲುವು ತಳೆದಿರುವ ಪ್ರಕರಣ ಇದು. ಶ್ವೇತಭವನದಲ್ಲಿ ಅಧ್ಯಕ್ಷರು ನೀಡಿದ ಹೇಳಿಕೆಯನ್ನು ನೀವೂ ಗಮನಿದ್ದೀರಿ. ಆರೋಪಿ ರಾಣಾ ವಶಕ್ಕೆ ಪಡೆಯಲು ಅಗತ್ಯ ಕ್ರಮ ವಹಿಸಲಾಗುತ್ತಿದೆ’ ಎಂದು ಮಿಸ್ರಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ವಶಕ್ಕೆ ಪಡೆಯಲು ಕಾಲಮಿತಿ ಗೊತ್ತು ಪಡಿಸಲಾಗಿದೆಯೇ ಎಂಬ ಪ್ರಶ್ನೆಗೆ, ‘ಈ ಕುರಿತು ಯತ್ನಗಳು ನಡೆದಿವೆ. ಅಂತಿಮ ಹಂತದ ಕೆಲ ವಿಧಿಗಳು ಚಾಲ್ತಿಯಲ್ಲಿವೆ’ ಎಂದರು.</p>.<p>ತಹವ್ವುರ್ ರಾಣಾ ಪಾಕಿಸ್ತಾನ ಮೂಲದವನಾಗಿದ್ದು, ಕೆನಡಾ ಪ್ರಜೆಯಾಗಿದ್ದಾನೆ. ಪ್ರಸ್ತುತ, ಲಾಸ್ ಏಂಜಲಿಸ್ನ ಜೈಲಿನಲ್ಲಿ ಇದ್ದಾನೆ. ಪಾಕ್ ಮೂಲದ ಅಮೆರಿಕ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಸಹಚರನಾದ ಈತ 26/11 ಕೃತ್ಯದ ಪ್ರಮುಖ ಸಂಚುಕಾರನಾಗಿದ್ದಾನೆ.</p>.<p>ತನ್ನನ್ನು ಭಾರತದ ವಶಕ್ಕೆ ಒಪ್ಪಿಸುವುದನ್ನು ಪ್ರಶ್ನಿಸಿ ರಾಣಾ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ಜನವರಿ 21ರಂದು ವಜಾ ಮಾಡಿತ್ತು. </p>.<p>2008ರ ನ. 26ರಂದು 10 ಪಾಕಿಸ್ತಾನಿ ಉಗ್ರರ ತಂಡ ಮುಂಬೈಗೆ ನುಸುಳಿ ರೈಲು ನಿಲ್ದಾಣ, ಎರಡು ತಾರಾ ಹೋಟೆಲ್ಗಳಲ್ಲಿ ಗುಂಡಿನ ದಾಳಿ ನಡೆಸಿತ್ತು. ಈ ದಾಳಿಯನ್ನು ತಡೆಯುವ ಕಾರ್ಯಾಚರಣೆ 60 ಗಂಟೆ ನಡೆದಿತ್ತು. 166 ಮಂದಿ ಮೃತಪಟ್ಟಿದ್ದರು.</p>.<p>ಕಾರ್ಯಾಚರಣೆಯಲ್ಲಿ ಉಗ್ರರೂ ಹತರಾಗಿದ್ದರು. ಸಿಕ್ಕಿಬಿದ್ದಿದ್ದ ಉಗ್ರ ಅಜ್ಮಲ್ ಅಮಿರ್ ಕಸಬ್ ನನ್ನು ವಿಚಾರಣೆ ಬಳಿಕ 2012ರ ನವೆಂಬರ್ನಲ್ಲಿ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿತ್ತು.</p>.<h2>ಮುಂಬೈ ಜೈಲು ಸಿದ್ಧವಾಗಿದೆ: ಫಡಣವೀಸ್ </h2>.<p><strong>ಮುಂಬೈ:</strong> ‘ರಾಣಾ ಇರಿಸಲು ಮುಂಬೈನ ಜೈಲು ಸಿದ್ಧವಾಗಿದೆ. 26/11 ಕೃತ್ಯದಲ್ಲಿ ಹುತಾತ್ಮರಾದವರು ಮತ್ತು ಸಂತ್ರಸ್ತರಿಗೆ ನ್ಯಾಯ ಸಿಗಲಿದೆ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ. ರಾಣಾ ಹಸ್ತಾಂತರಿಸಲು ಅಮೆರಿಕ ಸರ್ಕಾರ ಒಪ್ಪಿರುವುದು ಪ್ರಮುಖ ಬೆಳವಣಿಗೆ. ಈ ಬಗ್ಗೆ ಕ್ರಮವಹಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಮುಂಬೈನ ಜೈಲಿನಲ್ಲಿ ಭದ್ರತೆ ಕುರಿತ ಪ್ರಶ್ನೆಗೆ ಅವರು ‘ಅದು ಸಮಸ್ಯೆಯೇ ಅಲ್ಲ. ಇಲ್ಲೇ ಕಸಬ್ ಇಡಲಾಗಿತ್ತು’ ಎಂದರು. </p>.<p>‘26/11ಕ್ಕೆ ಮುನ್ನ ಮುಂಬೈಗೂ ಭೇಟಿ ನೀಡಿದ್ದ...’ </p>.<ul><li><p>ಮುಂಬೈ ದಾಳಿ ಕೃತ್ಯದ ಸಂಚುಕೋರ ತಹವ್ವುರ್ ಹುಸೇನ್ ರಾಣಾ </p></li><li><p>1961ರ ಜನವರಿ 12ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಚಿಕವತ್ನಿಯಲ್ಲಿ ಜನಿಸಿದ್ದ. </p></li><li><p>ವೃತ್ತಿಯಿಂದ ವೈದ್ಯನಾಗಿದ್ದ ಆತ ಪಾಕ್ ಸೇನೆಯ ಆರೋಗ್ಯ ಶಿಬಿರಗಳಲ್ಲಿ ಕ್ಯಾಪ್ಟನ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದ. </p></li><li><p>ಈತನ ಪತ್ನಿ ಕೂಡಾ ವೈದ್ಯೆ 1997ರಲ್ಲಿ ಕೆನಡಾಗೆ ವಲಸೆ ಹೋಗಿದ್ದ ಈತ ಅಲ್ಲಿತ ಪೌರತ್ವ ಪಡೆದಿದ್ದ. ಷಿಕಾಗೊದಲ್ಲಿ ವಲಸಿಗ ಸೇವೆ ಏಜೆನ್ಸಿ ನಡೆಸುತ್ತಿದ್ದು ನ್ಯೂಯಾರ್ಕ್ ಟೊರಾಂಟೊದಲ್ಲೂ ಕಚೇರಿ ಹೊಂದಿದ್ದಾನೆ. </p></li><li><p>ರಾಣಾ ತನ್ನ ಸಹಚರ ಹೆಡ್ಲಿ ಜೊತೆಗೂಡಿ ಲಷ್ಕರ್ ಎ ತೊಯಬಾ ಸಂಘಟನೆ ಪಾಕ್ನಲ್ಲಿ ನಡೆಸುತ್ತಿರುವ ತರಬೇತಿ ಶಿಬಿರಕ್ಕೆ ಭೇಟಿ ನೀಡಿದ್ದ. </p></li><li><p>2009ರ ಅಕ್ಟೋಬರ್ 18ರಂದು ರಾಣಾ ಹೆಡ್ಲಿಯನ್ನು ಜೈಲ್ಯಾಂಡ್ಸ್ ಪಾಸ್ಟನ್ ದೈನಿಕದ ಕಚೇರಿ ಮೇಲಿನ ದಾಳಿ ಕೃತ್ಯಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು. </p></li><li><p>ಮುಂಬೈಗೆ ಭೇಟಿ ನೀಡಿದ್ದಾಗ ತಾಜ್ ಮಹಲ್ ಹೋಟೆಲ್ನಲ್ಲಿ ನೆಲಸಿದ್ದ. 26/11ರಂದು ಈ ಹೋಟೆಲ್ನ ಮೇಲೂ ಉಗ್ರರು ದಾಳಿ ನಡೆಸಿದ್ದರು. </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್:</strong> ಮುಂಬೈನಲ್ಲಿ ನಡೆದಿದ್ದ 26/11ರ ಭಯೋತ್ಪಾದಕರ ದಾಳಿ ಕೃತ್ಯದ ಅರೋಪಿ ತಹವ್ವುರ್ ರಾಣಾ ಶರಣಾಗತಿ ಮತ್ತು ಆತನನ್ನು ತನ್ನ ವಶಕ್ಕೆ ಪಡೆಯಲು ಭಾರತ ಎಲ್ಲ ಅಗತ್ಯ ಕ್ರಮವಹಿಸಿದೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಹೇಳಿದೆ.</p>.<p>‘ಕಾನೂನು ಕ್ರಮ ಎದುರಿಸಲು, ರಾಣಾನನ್ನು ಭಾರತದ ವಶಕ್ಕೆ ಒಪ್ಪಿಸಲು ನನ್ನ ಸರ್ಕಾರ ಅನುಮೋದನೆ ನೀಡಿದೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯ ಹಿಂದೆಯೇ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಕ್ರಂ ಮಿಸ್ರಿ ಈ ಹೇಳಿಕೆ ನೀಡಿದ್ದಾರೆ.</p>.<p>‘ಅಮೆರಿಕ ಸರ್ಕಾರ ಸ್ಪಷ್ಟ ನಿಲುವು ತಳೆದಿರುವ ಪ್ರಕರಣ ಇದು. ಶ್ವೇತಭವನದಲ್ಲಿ ಅಧ್ಯಕ್ಷರು ನೀಡಿದ ಹೇಳಿಕೆಯನ್ನು ನೀವೂ ಗಮನಿದ್ದೀರಿ. ಆರೋಪಿ ರಾಣಾ ವಶಕ್ಕೆ ಪಡೆಯಲು ಅಗತ್ಯ ಕ್ರಮ ವಹಿಸಲಾಗುತ್ತಿದೆ’ ಎಂದು ಮಿಸ್ರಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ವಶಕ್ಕೆ ಪಡೆಯಲು ಕಾಲಮಿತಿ ಗೊತ್ತು ಪಡಿಸಲಾಗಿದೆಯೇ ಎಂಬ ಪ್ರಶ್ನೆಗೆ, ‘ಈ ಕುರಿತು ಯತ್ನಗಳು ನಡೆದಿವೆ. ಅಂತಿಮ ಹಂತದ ಕೆಲ ವಿಧಿಗಳು ಚಾಲ್ತಿಯಲ್ಲಿವೆ’ ಎಂದರು.</p>.<p>ತಹವ್ವುರ್ ರಾಣಾ ಪಾಕಿಸ್ತಾನ ಮೂಲದವನಾಗಿದ್ದು, ಕೆನಡಾ ಪ್ರಜೆಯಾಗಿದ್ದಾನೆ. ಪ್ರಸ್ತುತ, ಲಾಸ್ ಏಂಜಲಿಸ್ನ ಜೈಲಿನಲ್ಲಿ ಇದ್ದಾನೆ. ಪಾಕ್ ಮೂಲದ ಅಮೆರಿಕ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಸಹಚರನಾದ ಈತ 26/11 ಕೃತ್ಯದ ಪ್ರಮುಖ ಸಂಚುಕಾರನಾಗಿದ್ದಾನೆ.</p>.<p>ತನ್ನನ್ನು ಭಾರತದ ವಶಕ್ಕೆ ಒಪ್ಪಿಸುವುದನ್ನು ಪ್ರಶ್ನಿಸಿ ರಾಣಾ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ಜನವರಿ 21ರಂದು ವಜಾ ಮಾಡಿತ್ತು. </p>.<p>2008ರ ನ. 26ರಂದು 10 ಪಾಕಿಸ್ತಾನಿ ಉಗ್ರರ ತಂಡ ಮುಂಬೈಗೆ ನುಸುಳಿ ರೈಲು ನಿಲ್ದಾಣ, ಎರಡು ತಾರಾ ಹೋಟೆಲ್ಗಳಲ್ಲಿ ಗುಂಡಿನ ದಾಳಿ ನಡೆಸಿತ್ತು. ಈ ದಾಳಿಯನ್ನು ತಡೆಯುವ ಕಾರ್ಯಾಚರಣೆ 60 ಗಂಟೆ ನಡೆದಿತ್ತು. 166 ಮಂದಿ ಮೃತಪಟ್ಟಿದ್ದರು.</p>.<p>ಕಾರ್ಯಾಚರಣೆಯಲ್ಲಿ ಉಗ್ರರೂ ಹತರಾಗಿದ್ದರು. ಸಿಕ್ಕಿಬಿದ್ದಿದ್ದ ಉಗ್ರ ಅಜ್ಮಲ್ ಅಮಿರ್ ಕಸಬ್ ನನ್ನು ವಿಚಾರಣೆ ಬಳಿಕ 2012ರ ನವೆಂಬರ್ನಲ್ಲಿ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿತ್ತು.</p>.<h2>ಮುಂಬೈ ಜೈಲು ಸಿದ್ಧವಾಗಿದೆ: ಫಡಣವೀಸ್ </h2>.<p><strong>ಮುಂಬೈ:</strong> ‘ರಾಣಾ ಇರಿಸಲು ಮುಂಬೈನ ಜೈಲು ಸಿದ್ಧವಾಗಿದೆ. 26/11 ಕೃತ್ಯದಲ್ಲಿ ಹುತಾತ್ಮರಾದವರು ಮತ್ತು ಸಂತ್ರಸ್ತರಿಗೆ ನ್ಯಾಯ ಸಿಗಲಿದೆ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ. ರಾಣಾ ಹಸ್ತಾಂತರಿಸಲು ಅಮೆರಿಕ ಸರ್ಕಾರ ಒಪ್ಪಿರುವುದು ಪ್ರಮುಖ ಬೆಳವಣಿಗೆ. ಈ ಬಗ್ಗೆ ಕ್ರಮವಹಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಮುಂಬೈನ ಜೈಲಿನಲ್ಲಿ ಭದ್ರತೆ ಕುರಿತ ಪ್ರಶ್ನೆಗೆ ಅವರು ‘ಅದು ಸಮಸ್ಯೆಯೇ ಅಲ್ಲ. ಇಲ್ಲೇ ಕಸಬ್ ಇಡಲಾಗಿತ್ತು’ ಎಂದರು. </p>.<p>‘26/11ಕ್ಕೆ ಮುನ್ನ ಮುಂಬೈಗೂ ಭೇಟಿ ನೀಡಿದ್ದ...’ </p>.<ul><li><p>ಮುಂಬೈ ದಾಳಿ ಕೃತ್ಯದ ಸಂಚುಕೋರ ತಹವ್ವುರ್ ಹುಸೇನ್ ರಾಣಾ </p></li><li><p>1961ರ ಜನವರಿ 12ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಚಿಕವತ್ನಿಯಲ್ಲಿ ಜನಿಸಿದ್ದ. </p></li><li><p>ವೃತ್ತಿಯಿಂದ ವೈದ್ಯನಾಗಿದ್ದ ಆತ ಪಾಕ್ ಸೇನೆಯ ಆರೋಗ್ಯ ಶಿಬಿರಗಳಲ್ಲಿ ಕ್ಯಾಪ್ಟನ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದ. </p></li><li><p>ಈತನ ಪತ್ನಿ ಕೂಡಾ ವೈದ್ಯೆ 1997ರಲ್ಲಿ ಕೆನಡಾಗೆ ವಲಸೆ ಹೋಗಿದ್ದ ಈತ ಅಲ್ಲಿತ ಪೌರತ್ವ ಪಡೆದಿದ್ದ. ಷಿಕಾಗೊದಲ್ಲಿ ವಲಸಿಗ ಸೇವೆ ಏಜೆನ್ಸಿ ನಡೆಸುತ್ತಿದ್ದು ನ್ಯೂಯಾರ್ಕ್ ಟೊರಾಂಟೊದಲ್ಲೂ ಕಚೇರಿ ಹೊಂದಿದ್ದಾನೆ. </p></li><li><p>ರಾಣಾ ತನ್ನ ಸಹಚರ ಹೆಡ್ಲಿ ಜೊತೆಗೂಡಿ ಲಷ್ಕರ್ ಎ ತೊಯಬಾ ಸಂಘಟನೆ ಪಾಕ್ನಲ್ಲಿ ನಡೆಸುತ್ತಿರುವ ತರಬೇತಿ ಶಿಬಿರಕ್ಕೆ ಭೇಟಿ ನೀಡಿದ್ದ. </p></li><li><p>2009ರ ಅಕ್ಟೋಬರ್ 18ರಂದು ರಾಣಾ ಹೆಡ್ಲಿಯನ್ನು ಜೈಲ್ಯಾಂಡ್ಸ್ ಪಾಸ್ಟನ್ ದೈನಿಕದ ಕಚೇರಿ ಮೇಲಿನ ದಾಳಿ ಕೃತ್ಯಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು. </p></li><li><p>ಮುಂಬೈಗೆ ಭೇಟಿ ನೀಡಿದ್ದಾಗ ತಾಜ್ ಮಹಲ್ ಹೋಟೆಲ್ನಲ್ಲಿ ನೆಲಸಿದ್ದ. 26/11ರಂದು ಈ ಹೋಟೆಲ್ನ ಮೇಲೂ ಉಗ್ರರು ದಾಳಿ ನಡೆಸಿದ್ದರು. </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>