<p><strong>ಬಂದಾ ಏಸೇ/ ಬ್ಯಾಂಕಾಕ್ (ಪಿಟಿಐ/ಎಪಿ): </strong>ಎಂಟು ವರ್ಷಗಳ ಹಿಂದೆ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡ ಭೀಕರ ಸುನಾಮಿಯ ಕರಾಳ ನೆನಪು ಇನ್ನೂ ಹಸಿಯಾಗಿರುವಾಗಲೇ ಮತ್ತೊಮ್ಮೆ ವಸುಂಧರೆ ಸಹನೆ ಕಳೆದುಕೊಂಡಿದ್ದಾಳೆ.<br /> <br /> ಬುಧವಾರ ಇಂಡೊನೇಷ್ಯಾದಲ್ಲಿ ರಿಕ್ಟರ್ ಮಾಪಕದಲ್ಲಿ 8.5 ಹಾಗೂ 8.2ರಷ್ಟು ತೀವ್ರತೆಯ ಎರಡು ಪ್ರಬಲ ಭೂಕಂಪನಗಳು ಸಂಭವಿಸಿದ ಹಿನ್ನೆಲೆಯಲ್ಲಿ, ಭಾರತ ಸೇರಿ 28 ರಾಷ್ಟ್ರಗಳಲ್ಲಿ ಸುನಾಮಿ ಎಚ್ಚರಿಕೆ ನೀಡಿ, ಸಂಜೆಯ ವೇಳೆಗೆ ವಾಪಸ್ ಪಡೆಯಲಾಯಿತು. ಸಾವು, ನೋವಿನ ವರದಿಯಾಗಿಲ್ಲ.<br /> <br /> <br /> </p>.<p>ಭಾರತದ ದಕ್ಷಿಣ ಹಾಗೂ ಪೂರ್ವ ಭಾಗ, ಶ್ರೀಲಂಕಾ, ಆಸ್ಟ್ರೇಲಿಯಾ, ಥಾಯ್ಲೆಂಡ್, ಸಿಂಗಪುರ, ಮಲೇಷ್ಯಾ ಮತ್ತಿತರ ಪ್ರದೇಶಗಳಲ್ಲಿ ಭೂಮಿ ನಡುಗಿದ ಅನುಭವವಾಗಿದ್ದು, ನಗರ ಪ್ರದೇಶಗಳಲ್ಲಿ ಜನರು ಬಹುಮಹಡಿ ಕಟ್ಟಡಗಳಿಂದ ಭಯಭೀತರಾಗಿ ಹೊರಗೆ ಬಂದರು. ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಲ್ಲೆಡೆ ಸಂಚಾರ ದಟ್ಟಣೆ ಕಂಡುಬಂತು.<br /> <br /> `ಇಂಡೊನೇಷ್ಯಾದ ಉತ್ತರ ಸುಮಾತ್ರಾದ ಪಶ್ಚಿಮ ಕರಾವಳಿಯಲ್ಲಿ ಅಂತರ ರಾಷ್ಟ್ರೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2 ಗಂಟೆ 8 ನಿಮಿಷದ ಹೊತ್ತಿಗೆ ಪ್ರಬಲ ಕಂಪನ, ಬಳಿಕ ಎರಡು ಮರು ಕಂಪನಗಳು ಸಂಭವಿಸಿವೆ. ಬಾಂದಾ ಏಸೇ ನಗರದಿಂದ 431 ಕಿ.ಮೀ ದೂರದಲ್ಲಿ, 33 ಕಿ.ಮೀ ಸಾಗರದ ಆಳದಲ್ಲಿ ಅದರ ಕೇಂದ್ರ ಬಿಂದು ಇತ್ತು~ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ. ಬಾಂದಾ ಏಸೇಯಲ್ಲಿ ಸುಮಾರು ಐದು ನಿಮಿಷಗಳ ಕಾಲ ಭೂಮಿ ಕಂಪಿಸಿತು. ದೂರವಾಣಿ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು. <br /> <br /> ಥಾಯ್ಲೆಂಡ್ನ ಫುಕೆಟ್ ದ್ವೀಪದಲ್ಲಿನ ರೆಸಾರ್ಟ್ನಲ್ಲಿಯೂ ಕಂಪನವು ಅನುಭವಕ್ಕೆ ಬಂತು. ಇಲ್ಲಿನ ಹೋಟೆಲ್ಗಳಲ್ಲಿ ತಂಗಿದ್ದ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಯಿತು.<br /> <br /> `ಜನರು ಈಜು ಕೊಳದಿಂದ ಭಯಭೀತರಾಗಿ ಹೊರಗೆ ಓಡಿ ಬಂದರು. ಕಂಪನದಿಂದಾಗಿ ಈಜು ಕೊಳದ ನೀರು ರಭಸವಾಗಿ ಅಪ್ಪಳಿಸುತ್ತಿದ್ದುದು ಕಂಡುಬಂತು~ ಎಂದು ತಮ್ಮ ಕುಟುಂಬದೊಂದಿಗೆ ಫುಕೆಟ್ಗೆ ತೆರಳಿರುವ ಸವಿತಾ ಶ್ರೀರಾಂ ಅವರು ಸುದ್ದಿ ಸಂಸ್ಥೆಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಿದ್ದಾರೆ. <br /> <br /> <strong>ಭಾರತೀಯರಿಗೆ ಎಚ್ಚರಿಕೆ</strong>: ಇಂಡೊನೇಷ್ಯಾ ಭೂಕಂಪನದ ಹಿನ್ನೆಲೆಯಲ್ಲಿ, ಫುಕೆಟ್ನಲ್ಲಿರುವ ಭಾರತೀಯರಿಗೆ ಎಚ್ಚರದಿಂದ ಇರುವಂತೆ ಭಾರತೀಯ ಹೈಕಮಿಷನ್ ಸೂಚನೆ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೊಲಂಬೊದಲ್ಲಿ ಕೆಲವು ಗಗನಚುಂಬಿ ಕಟ್ಟಡಗಳಿಂದ ಜನರನ್ನು ತೆರವುಗೊಳಿಸಲಾಯಿತು.<br /> <br /> <strong>ಬೆಂಗಳೂರು, ಚೆನ್ನೈ, ಕೋಲ್ಕತ್ತಗಳಲ್ಲಿ ನಡುಗಿದ ಭೂಮಿ( ನವದೆಹಲಿ ವರದಿ):</strong> ಸುಮಾತ್ರದಲ್ಲಿ ಭೂಕಂಪನ ಸಂಭವಿಸಿದ ಸಮಯದಲ್ಲಿ ಪೂರ್ವ ಕರಾವಳಿಯ ರಾಜ್ಯಗಳು ಹಾಗೂ ಬೆಂಗಳೂರು, ಚೆನ್ನೈ, ಕೋಲ್ಕತ್ತ, ಭುವನೇಶ್ವರ ಸೇರಿದಂತೆ ಪೂರ್ವ ಭಾರತದ ಪ್ರಮುಖ ನಗರಗಳಲ್ಲಿ ಕಂಪನದ ಅನುಭವವಾಯಿತು. ಆದರೆ, ಎಲ್ಲಿಯೂ ಆಸ್ತಿಪಾಸ್ತಿ, ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ.<br /> <br /> <strong>ಪೂರ್ವ ಕರಾವಳಿಗೆ ಸುನಾಮಿ ಎಚ್ಚರಿಕೆ:</strong> ಭೂಕಂಪನದ ಹಿನ್ನೆಲೆಯಲ್ಲಿ ಕೇಂದ್ರ ಭೂವಿಜ್ಞಾನ ಸಚಿವಾಲಯ ಅಂಡಮಾನ್, ನಿಕೋಬಾರ್ ದ್ವೀಪಸಮೂಹ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕರಾವಳಿಯ ಜನರಿಗೆ ಸುನಾಮಿ ಮುನ್ನೆಚ್ಚರಿಕೆ ನೀಡಿತ್ತು. ಆದರೆ, ಸಂಜೆ ಆರು ಗಂಟೆಯ ಹೊತ್ತಿಗೆ ಈ ಭಯ ನಿವಾರಣೆಯಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಕರಾವಳಿ ತೀರದ ಜನರಿಗೆ ಭಯಭೀತರಾಗದಂತೆ ಮನವಿ ಮಾಡಿಕೊಂಡಿತು.<br /> <br /> ಭೂಕಂಪನದಿಂದ ಎದ್ದ ಅಲೆಗಳು ತಮಿಳುನಾಡು ಕರಾವಳಿ, ಆಂಧ್ರಪ್ರದೇಶ ಹಾಗೂ ಅಂಡಮಾನ್ ದ್ವೀಪಗಳಿಗೆ ಸಂಜೆ 4.33ಕ್ಕೆ ತಲುಪುವ ಸಾಧ್ಯತೆಯಿದೆ ಎಂದೂ ಭಾರತೀಯ ಸುನಾಮಿ ಮನ್ಸೂಚನಾ ಕೇಂದ್ರ ಹೇಳಿತ್ತು. <br /> <br /> ಸೇನಾಪಡೆಯ ಅಂಡಮಾನ್- ನಿಕೋಬಾರ್ ಕಮಾಂಡ್ಗಳಿಗೂ ಸುನಾಮಿ ಸಾಧ್ಯತೆಯ ಸಂದೇಶ ನೀಡಲಾಗಿತ್ತು. ಅಹಿತಕರ ಘಟನೆಗಳು ನಡೆದಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಲು ಭಾರತೀಯ ವಾಯುಪಡೆ ಮತ್ತು ನೌಕಾಪಡೆಗಳು ಯುದ್ಧವಿಮಾನ ಹಾಗೂ ಹಡಗುಗಳನ್ನು ಸನ್ನದ್ಧವಾಗಿಟ್ಟಿದ್ದವು.<br /> <br /> ಆರಂಭದಲ್ಲಿ ಸುನಾಮಿ ಭಯ ಕಾಡಿತ್ತು. ಆದರೆ, ಅಂಡಮಾನ್, ನಿಕೋಬಾರ್ಗಳಲ್ಲಿ ಸಂಜೆಯವರೆಗೂ ದೈತ್ಯ ಅಲೆಗಳು ಕಾಣಲಿಲ್ಲ. ಕಂಪನದಿಂದ ಭೂಫಲಕ ಅಡ್ಡವಾಗಿ ಚಲಿಸಿದ್ದರಿಂದ ಸುನಾಮಿ ಏಳಲಿಲ್ಲ ಎನ್ನಲಾಗಿದೆ.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂದಾ ಏಸೇ/ ಬ್ಯಾಂಕಾಕ್ (ಪಿಟಿಐ/ಎಪಿ): </strong>ಎಂಟು ವರ್ಷಗಳ ಹಿಂದೆ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡ ಭೀಕರ ಸುನಾಮಿಯ ಕರಾಳ ನೆನಪು ಇನ್ನೂ ಹಸಿಯಾಗಿರುವಾಗಲೇ ಮತ್ತೊಮ್ಮೆ ವಸುಂಧರೆ ಸಹನೆ ಕಳೆದುಕೊಂಡಿದ್ದಾಳೆ.<br /> <br /> ಬುಧವಾರ ಇಂಡೊನೇಷ್ಯಾದಲ್ಲಿ ರಿಕ್ಟರ್ ಮಾಪಕದಲ್ಲಿ 8.5 ಹಾಗೂ 8.2ರಷ್ಟು ತೀವ್ರತೆಯ ಎರಡು ಪ್ರಬಲ ಭೂಕಂಪನಗಳು ಸಂಭವಿಸಿದ ಹಿನ್ನೆಲೆಯಲ್ಲಿ, ಭಾರತ ಸೇರಿ 28 ರಾಷ್ಟ್ರಗಳಲ್ಲಿ ಸುನಾಮಿ ಎಚ್ಚರಿಕೆ ನೀಡಿ, ಸಂಜೆಯ ವೇಳೆಗೆ ವಾಪಸ್ ಪಡೆಯಲಾಯಿತು. ಸಾವು, ನೋವಿನ ವರದಿಯಾಗಿಲ್ಲ.<br /> <br /> <br /> </p>.<p>ಭಾರತದ ದಕ್ಷಿಣ ಹಾಗೂ ಪೂರ್ವ ಭಾಗ, ಶ್ರೀಲಂಕಾ, ಆಸ್ಟ್ರೇಲಿಯಾ, ಥಾಯ್ಲೆಂಡ್, ಸಿಂಗಪುರ, ಮಲೇಷ್ಯಾ ಮತ್ತಿತರ ಪ್ರದೇಶಗಳಲ್ಲಿ ಭೂಮಿ ನಡುಗಿದ ಅನುಭವವಾಗಿದ್ದು, ನಗರ ಪ್ರದೇಶಗಳಲ್ಲಿ ಜನರು ಬಹುಮಹಡಿ ಕಟ್ಟಡಗಳಿಂದ ಭಯಭೀತರಾಗಿ ಹೊರಗೆ ಬಂದರು. ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಲ್ಲೆಡೆ ಸಂಚಾರ ದಟ್ಟಣೆ ಕಂಡುಬಂತು.<br /> <br /> `ಇಂಡೊನೇಷ್ಯಾದ ಉತ್ತರ ಸುಮಾತ್ರಾದ ಪಶ್ಚಿಮ ಕರಾವಳಿಯಲ್ಲಿ ಅಂತರ ರಾಷ್ಟ್ರೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2 ಗಂಟೆ 8 ನಿಮಿಷದ ಹೊತ್ತಿಗೆ ಪ್ರಬಲ ಕಂಪನ, ಬಳಿಕ ಎರಡು ಮರು ಕಂಪನಗಳು ಸಂಭವಿಸಿವೆ. ಬಾಂದಾ ಏಸೇ ನಗರದಿಂದ 431 ಕಿ.ಮೀ ದೂರದಲ್ಲಿ, 33 ಕಿ.ಮೀ ಸಾಗರದ ಆಳದಲ್ಲಿ ಅದರ ಕೇಂದ್ರ ಬಿಂದು ಇತ್ತು~ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ. ಬಾಂದಾ ಏಸೇಯಲ್ಲಿ ಸುಮಾರು ಐದು ನಿಮಿಷಗಳ ಕಾಲ ಭೂಮಿ ಕಂಪಿಸಿತು. ದೂರವಾಣಿ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು. <br /> <br /> ಥಾಯ್ಲೆಂಡ್ನ ಫುಕೆಟ್ ದ್ವೀಪದಲ್ಲಿನ ರೆಸಾರ್ಟ್ನಲ್ಲಿಯೂ ಕಂಪನವು ಅನುಭವಕ್ಕೆ ಬಂತು. ಇಲ್ಲಿನ ಹೋಟೆಲ್ಗಳಲ್ಲಿ ತಂಗಿದ್ದ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಯಿತು.<br /> <br /> `ಜನರು ಈಜು ಕೊಳದಿಂದ ಭಯಭೀತರಾಗಿ ಹೊರಗೆ ಓಡಿ ಬಂದರು. ಕಂಪನದಿಂದಾಗಿ ಈಜು ಕೊಳದ ನೀರು ರಭಸವಾಗಿ ಅಪ್ಪಳಿಸುತ್ತಿದ್ದುದು ಕಂಡುಬಂತು~ ಎಂದು ತಮ್ಮ ಕುಟುಂಬದೊಂದಿಗೆ ಫುಕೆಟ್ಗೆ ತೆರಳಿರುವ ಸವಿತಾ ಶ್ರೀರಾಂ ಅವರು ಸುದ್ದಿ ಸಂಸ್ಥೆಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಿದ್ದಾರೆ. <br /> <br /> <strong>ಭಾರತೀಯರಿಗೆ ಎಚ್ಚರಿಕೆ</strong>: ಇಂಡೊನೇಷ್ಯಾ ಭೂಕಂಪನದ ಹಿನ್ನೆಲೆಯಲ್ಲಿ, ಫುಕೆಟ್ನಲ್ಲಿರುವ ಭಾರತೀಯರಿಗೆ ಎಚ್ಚರದಿಂದ ಇರುವಂತೆ ಭಾರತೀಯ ಹೈಕಮಿಷನ್ ಸೂಚನೆ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೊಲಂಬೊದಲ್ಲಿ ಕೆಲವು ಗಗನಚುಂಬಿ ಕಟ್ಟಡಗಳಿಂದ ಜನರನ್ನು ತೆರವುಗೊಳಿಸಲಾಯಿತು.<br /> <br /> <strong>ಬೆಂಗಳೂರು, ಚೆನ್ನೈ, ಕೋಲ್ಕತ್ತಗಳಲ್ಲಿ ನಡುಗಿದ ಭೂಮಿ( ನವದೆಹಲಿ ವರದಿ):</strong> ಸುಮಾತ್ರದಲ್ಲಿ ಭೂಕಂಪನ ಸಂಭವಿಸಿದ ಸಮಯದಲ್ಲಿ ಪೂರ್ವ ಕರಾವಳಿಯ ರಾಜ್ಯಗಳು ಹಾಗೂ ಬೆಂಗಳೂರು, ಚೆನ್ನೈ, ಕೋಲ್ಕತ್ತ, ಭುವನೇಶ್ವರ ಸೇರಿದಂತೆ ಪೂರ್ವ ಭಾರತದ ಪ್ರಮುಖ ನಗರಗಳಲ್ಲಿ ಕಂಪನದ ಅನುಭವವಾಯಿತು. ಆದರೆ, ಎಲ್ಲಿಯೂ ಆಸ್ತಿಪಾಸ್ತಿ, ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ.<br /> <br /> <strong>ಪೂರ್ವ ಕರಾವಳಿಗೆ ಸುನಾಮಿ ಎಚ್ಚರಿಕೆ:</strong> ಭೂಕಂಪನದ ಹಿನ್ನೆಲೆಯಲ್ಲಿ ಕೇಂದ್ರ ಭೂವಿಜ್ಞಾನ ಸಚಿವಾಲಯ ಅಂಡಮಾನ್, ನಿಕೋಬಾರ್ ದ್ವೀಪಸಮೂಹ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕರಾವಳಿಯ ಜನರಿಗೆ ಸುನಾಮಿ ಮುನ್ನೆಚ್ಚರಿಕೆ ನೀಡಿತ್ತು. ಆದರೆ, ಸಂಜೆ ಆರು ಗಂಟೆಯ ಹೊತ್ತಿಗೆ ಈ ಭಯ ನಿವಾರಣೆಯಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಕರಾವಳಿ ತೀರದ ಜನರಿಗೆ ಭಯಭೀತರಾಗದಂತೆ ಮನವಿ ಮಾಡಿಕೊಂಡಿತು.<br /> <br /> ಭೂಕಂಪನದಿಂದ ಎದ್ದ ಅಲೆಗಳು ತಮಿಳುನಾಡು ಕರಾವಳಿ, ಆಂಧ್ರಪ್ರದೇಶ ಹಾಗೂ ಅಂಡಮಾನ್ ದ್ವೀಪಗಳಿಗೆ ಸಂಜೆ 4.33ಕ್ಕೆ ತಲುಪುವ ಸಾಧ್ಯತೆಯಿದೆ ಎಂದೂ ಭಾರತೀಯ ಸುನಾಮಿ ಮನ್ಸೂಚನಾ ಕೇಂದ್ರ ಹೇಳಿತ್ತು. <br /> <br /> ಸೇನಾಪಡೆಯ ಅಂಡಮಾನ್- ನಿಕೋಬಾರ್ ಕಮಾಂಡ್ಗಳಿಗೂ ಸುನಾಮಿ ಸಾಧ್ಯತೆಯ ಸಂದೇಶ ನೀಡಲಾಗಿತ್ತು. ಅಹಿತಕರ ಘಟನೆಗಳು ನಡೆದಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಲು ಭಾರತೀಯ ವಾಯುಪಡೆ ಮತ್ತು ನೌಕಾಪಡೆಗಳು ಯುದ್ಧವಿಮಾನ ಹಾಗೂ ಹಡಗುಗಳನ್ನು ಸನ್ನದ್ಧವಾಗಿಟ್ಟಿದ್ದವು.<br /> <br /> ಆರಂಭದಲ್ಲಿ ಸುನಾಮಿ ಭಯ ಕಾಡಿತ್ತು. ಆದರೆ, ಅಂಡಮಾನ್, ನಿಕೋಬಾರ್ಗಳಲ್ಲಿ ಸಂಜೆಯವರೆಗೂ ದೈತ್ಯ ಅಲೆಗಳು ಕಾಣಲಿಲ್ಲ. ಕಂಪನದಿಂದ ಭೂಫಲಕ ಅಡ್ಡವಾಗಿ ಚಲಿಸಿದ್ದರಿಂದ ಸುನಾಮಿ ಏಳಲಿಲ್ಲ ಎನ್ನಲಾಗಿದೆ.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>