<p><strong>ಕರ್ಚ್/ಉಕ್ರೇನ್ (ಪಿಟಿಐ):</strong> ಉಕ್ರೇನ್ನ ಕ್ರಿಮಿಯಾ ಪರ್ಯಾಯ ದ್ವೀಪ ಪ್ರದೇಶದಲ್ಲಿರುವ ಕರ್ಚ್ ನಗರದ ಹಡಗು ಕಟ್ಟೆಯನ್ನು ರಷ್ಯಾ ಸೈನಿಕರು ಸೋಮವಾರ ವಶಕ್ಕೆ ತೆಗೆದುಕೊಂಡಿದ್ದಾರೆ.<br /> <br /> ಕಪ್ಪು ಸಮುದ್ರದಲ್ಲಿ ಪ್ರಮುಖ ಆಯಕಟ್ಟಿನ ಸ್ಥಳವೆಂದೇ ಗುರುತಿಸಲಾಗುವ ಇಲ್ಲಿಗೆ ರಷ್ಯಾ ಮತ್ತಷ್ಟು ಸೈನಿಕರನ್ನು ಕಳುಹಿಸಲು ಯೋಜಿಸಿದೆ. ರಷ್ಯಾ ಸೈನಿಕರನ್ನು ತಡೆಯಲು ಪಶ್ಚಿಮ ರಾಷ್ಟ್ರಗಳು ಪ್ರಯತ್ನಿಸುತ್ತಿರುವ ಬೆನ್ನಲ್ಲೆ ರಷ್ಯಾ ಈ ಮಹತ್ವದ ಸ್ಥಳದ ಮೇಲೆ ನಿಯಂತ್ರಣ ಸಾಧಿಸಿದೆ.<br /> <br /> ಕರ್ಚ್ ನಗರದ ಹಡಗು ಕಟ್ಟೆಯು ರಷ್ಯಾದ ಕಡಲ ಕಿನಾರೆಯಿಂದ ಕೇವಲ 20 ಕಿ.ಮೀ ದೂರದಲ್ಲಿದೆ. ರಷ್ಯಾದ ಬಹುತೇಕ ಹಡಗುಗಳು ಇಲ್ಲಿಂದಲೆ ಪ್ರಯಾಣ ಬೆಳೆಸುತ್ತವೆ. ಇದೀಗ ಈ ಹಡಗು ನಿಲ್ದಾಣವನ್ನು ರಷ್ಯಾದ ಸೈನಿಕರು ನಿರ್ವಹಿಸುತ್ತಿದ್ದಾರೆ.<br /> <br /> ‘ರಷ್ಯಾದ ಸೈನಿಕರು ಕ್ರಿಮಿಯಾದ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದ್ದಾರೆ’ ಎಂದು ಉಕ್ರೇನ್ ಹೇಳಿದೆ. ವಾಯುನೆಲೆಯನ್ನು ಸಂಪೂರ್ಣವಾಗಿ ಸುತ್ತವರೆದಿದೆ. ನಿಲ್ದಾಣದಲ್ಲಿನ ವಸ್ತುಗಳನ್ನು ಹಾಳುಗೆಡವಿದೆ ಎಂದೂ ತಿಳಿಸಿದೆ.<br /> <br /> ವಿಶ್ವ ಸಮುದಾಯದ ಟೀಕೆ: ರಷ್ಯಾದ ಈ ಕ್ರಮಕ್ಕೆ ವಿಶ್ವ ಸಮುದಾಯದಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ‘ರಷ್ಯಾದ ಈ ನಡೆ ಬಹಳ ದುಸ್ಸಾಹಸದಿಂದ ಕೂಡಿದೆ. ಕೂಡಲೇ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಒತ್ತಾಯಿಸಿದ್ದಾರೆ.<br /> ಒಂದೇ ಒಂದು ಗುಂಡು ಹಾರಿಸದೆ ರಷ್ಯಾ ಸೈನಿಕರು ಕರ್ಚ್ ವಶಪಡಿಸಿಕೊಂಡಿದ್ದಾರೆ. ಇದೀಗ ಇತರ ಪ್ರದೇಶಗಳ ಮೇಲೆಯೂ ನಿಯಂತ್ರಣ ಸಾಧಿಸಲು ಮುಂದಾಗಿದ್ದು, ಉಕ್ರೇನ್ ಆತಂಕ ಮತ್ತಷ್ಟು ಹೆಚ್ಚಿಸಿದೆ.<br /> <br /> ಈ ಬೆಳವಣಿಗೆ ಮಧ್ಯೆಯೆ ಉಕ್ರೇನ್ನ ಹೊಸ ಸರ್ಕಾರ ತನ್ನ ಹಿಡಿತವನ್ನು ಬಲಪಡಿಸಿಕೊಳ್ಳಲು ಹೊಸ ಪ್ರಾಂತ್ಯಗಳಿಗೆ ಗವರ್ನರ್ಗಳನ್ನು ನೇಮಕ ಮಾಡಿದೆ.<br /> ಅಲ್ಲದೇ ದೇಶದ ಉದ್ಯಮಿಗಳ ನೆರವನ್ನೂ ಯಾಚಿಸಿದೆ. ರಷ್ಯಾ ಪರ ನಿಷ್ಠೆ ವ್ಯಕ್ತಪಡಿಸಿದ್ದ ದೇಶದ ನೌಕಾಪಡೆಯ ಮುಖ್ಯಸ್ಥರನ್ನೂ ವಜಾಗೊಳಿಸಿದೆ.<br /> <br /> ಈ ಬಿಕ್ಕಟ್ಟಿಗೆ ರಾಜತಾಂತ್ರಿಕ ಮಾರ್ಗದ ಮೂಲಕ ಪರಿಹಾರ ಕಂಡುಕೊಳ್ಳಲು ವಿಶ್ವ ನಾಯಕರು ಶ್ರಮಿಸುತ್ತಿದ್ದಾರೆ. ನ್ಯಾಟೊ ಈ ಸಂಬಂಧ ಬ್ರಸೆಲ್ಸ್ನಲ್ಲಿ ತುರ್ತು ಸಭೆ ಕರೆದಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಮಂಗಳವಾರ ಉಕ್ರೇನ್ಗೆ ಪ್ರಯಾಣ ಬೆಳೆಸಲಿದ್ದಾರೆ. ಬ್ರಿಟನ್ ವಿದೇಶಾಂಗ ಸಚಿವ ವಿಲಿಯಂ ಹೇಗ್ ಉಕ್ರೇನ್ ರಾಜಧಾನಿ ಕೀವ್ಗೆ ತೆರಳಿದ್ದಾರೆ.<br /> <br /> <strong>ರಷ್ಯಾ ಕ್ರಮಕ್ಕೆ ಜಿ7 ರಾಷ್ಟ್ರಗಳ ಖಂಡನೆ<br /> (ವಾಷಿಂಗ್ಟನ್ ವರದಿ) (ಪಿಟಿಐ):</strong> ಉಕ್ರೇನ್ ಮೇಲೆ ರಷ್ಯಾ ಕೈಗೊಂಡಿರುವ ಕ್ರಮವನ್ನು ಆರ್ಥಿಕ ವಾಗಿ ಬಲಾಢ್ಯವಾಗಿರುವ ಏಳು ರಾಷ್ಟ್ರಗಳು (ಜಿ7) ತೀವ್ರವಾಗಿ ಖಂಡಿಸಿವೆ.<br /> <br /> ಜೂನ್ನಲ್ಲಿ ರಷ್ಯಾದ ಸೋಚಿಯಲ್ಲಿ ಜಿ8 ರಾಷ್ಟ್ರಗಳ ಶೃಂಗಸಭೆ ಜರುಗಲಿದೆ. ಆ ಹಿನ್ನೆಲೆಯಲ್ಲಿ ನಡೆಯಲಿರುವ ಪೂರ್ವಸಿದ್ಧತಾ ಸಭೆಗಳಿಂದ ತಾತ್ಕಲಿಕವಾಗಿ ದೂರ ಉಳಿಯಲು ನಿರ್ಧರಿಸಿರುವುದಾಗಿಯೂ ಜಿ7 ರಾಷ್ಟ್ರಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ತಿಳಿಸಿವೆ.<br /> <br /> ಇನ್ನೊಂದೆಡೆ ಜರ್ಮನಿ ವಿದೇಶಾಂಗ ಸಚಿವ ಫ್ರಾಂಕ್ ವಾಕ್ಟೆರ್ ಸ್ಟೆನ್, ‘ಜಿ8 ಸಮಿತಿಯ ಸಭೆಯಲ್ಲಿ ಮಾತ್ರ ಪಶ್ಚಿಮ ರಾಷ್ಟ್ರಗಳು ರಷ್ಯಾದೊಂದಿಗೆ ನೇರ ಮಾತುಕತೆ ನಡೆಸಬಹುದು. ಹೀಗಿರುವಾಗ ನಾವು ಆ ಅವಕಾಶವನ್ನು ಏಕೆ ಬಿಟ್ಟು ಕೊಡಬೇಕು’ ಎಂದು ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕರ್ಚ್/ಉಕ್ರೇನ್ (ಪಿಟಿಐ):</strong> ಉಕ್ರೇನ್ನ ಕ್ರಿಮಿಯಾ ಪರ್ಯಾಯ ದ್ವೀಪ ಪ್ರದೇಶದಲ್ಲಿರುವ ಕರ್ಚ್ ನಗರದ ಹಡಗು ಕಟ್ಟೆಯನ್ನು ರಷ್ಯಾ ಸೈನಿಕರು ಸೋಮವಾರ ವಶಕ್ಕೆ ತೆಗೆದುಕೊಂಡಿದ್ದಾರೆ.<br /> <br /> ಕಪ್ಪು ಸಮುದ್ರದಲ್ಲಿ ಪ್ರಮುಖ ಆಯಕಟ್ಟಿನ ಸ್ಥಳವೆಂದೇ ಗುರುತಿಸಲಾಗುವ ಇಲ್ಲಿಗೆ ರಷ್ಯಾ ಮತ್ತಷ್ಟು ಸೈನಿಕರನ್ನು ಕಳುಹಿಸಲು ಯೋಜಿಸಿದೆ. ರಷ್ಯಾ ಸೈನಿಕರನ್ನು ತಡೆಯಲು ಪಶ್ಚಿಮ ರಾಷ್ಟ್ರಗಳು ಪ್ರಯತ್ನಿಸುತ್ತಿರುವ ಬೆನ್ನಲ್ಲೆ ರಷ್ಯಾ ಈ ಮಹತ್ವದ ಸ್ಥಳದ ಮೇಲೆ ನಿಯಂತ್ರಣ ಸಾಧಿಸಿದೆ.<br /> <br /> ಕರ್ಚ್ ನಗರದ ಹಡಗು ಕಟ್ಟೆಯು ರಷ್ಯಾದ ಕಡಲ ಕಿನಾರೆಯಿಂದ ಕೇವಲ 20 ಕಿ.ಮೀ ದೂರದಲ್ಲಿದೆ. ರಷ್ಯಾದ ಬಹುತೇಕ ಹಡಗುಗಳು ಇಲ್ಲಿಂದಲೆ ಪ್ರಯಾಣ ಬೆಳೆಸುತ್ತವೆ. ಇದೀಗ ಈ ಹಡಗು ನಿಲ್ದಾಣವನ್ನು ರಷ್ಯಾದ ಸೈನಿಕರು ನಿರ್ವಹಿಸುತ್ತಿದ್ದಾರೆ.<br /> <br /> ‘ರಷ್ಯಾದ ಸೈನಿಕರು ಕ್ರಿಮಿಯಾದ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದ್ದಾರೆ’ ಎಂದು ಉಕ್ರೇನ್ ಹೇಳಿದೆ. ವಾಯುನೆಲೆಯನ್ನು ಸಂಪೂರ್ಣವಾಗಿ ಸುತ್ತವರೆದಿದೆ. ನಿಲ್ದಾಣದಲ್ಲಿನ ವಸ್ತುಗಳನ್ನು ಹಾಳುಗೆಡವಿದೆ ಎಂದೂ ತಿಳಿಸಿದೆ.<br /> <br /> ವಿಶ್ವ ಸಮುದಾಯದ ಟೀಕೆ: ರಷ್ಯಾದ ಈ ಕ್ರಮಕ್ಕೆ ವಿಶ್ವ ಸಮುದಾಯದಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ‘ರಷ್ಯಾದ ಈ ನಡೆ ಬಹಳ ದುಸ್ಸಾಹಸದಿಂದ ಕೂಡಿದೆ. ಕೂಡಲೇ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಒತ್ತಾಯಿಸಿದ್ದಾರೆ.<br /> ಒಂದೇ ಒಂದು ಗುಂಡು ಹಾರಿಸದೆ ರಷ್ಯಾ ಸೈನಿಕರು ಕರ್ಚ್ ವಶಪಡಿಸಿಕೊಂಡಿದ್ದಾರೆ. ಇದೀಗ ಇತರ ಪ್ರದೇಶಗಳ ಮೇಲೆಯೂ ನಿಯಂತ್ರಣ ಸಾಧಿಸಲು ಮುಂದಾಗಿದ್ದು, ಉಕ್ರೇನ್ ಆತಂಕ ಮತ್ತಷ್ಟು ಹೆಚ್ಚಿಸಿದೆ.<br /> <br /> ಈ ಬೆಳವಣಿಗೆ ಮಧ್ಯೆಯೆ ಉಕ್ರೇನ್ನ ಹೊಸ ಸರ್ಕಾರ ತನ್ನ ಹಿಡಿತವನ್ನು ಬಲಪಡಿಸಿಕೊಳ್ಳಲು ಹೊಸ ಪ್ರಾಂತ್ಯಗಳಿಗೆ ಗವರ್ನರ್ಗಳನ್ನು ನೇಮಕ ಮಾಡಿದೆ.<br /> ಅಲ್ಲದೇ ದೇಶದ ಉದ್ಯಮಿಗಳ ನೆರವನ್ನೂ ಯಾಚಿಸಿದೆ. ರಷ್ಯಾ ಪರ ನಿಷ್ಠೆ ವ್ಯಕ್ತಪಡಿಸಿದ್ದ ದೇಶದ ನೌಕಾಪಡೆಯ ಮುಖ್ಯಸ್ಥರನ್ನೂ ವಜಾಗೊಳಿಸಿದೆ.<br /> <br /> ಈ ಬಿಕ್ಕಟ್ಟಿಗೆ ರಾಜತಾಂತ್ರಿಕ ಮಾರ್ಗದ ಮೂಲಕ ಪರಿಹಾರ ಕಂಡುಕೊಳ್ಳಲು ವಿಶ್ವ ನಾಯಕರು ಶ್ರಮಿಸುತ್ತಿದ್ದಾರೆ. ನ್ಯಾಟೊ ಈ ಸಂಬಂಧ ಬ್ರಸೆಲ್ಸ್ನಲ್ಲಿ ತುರ್ತು ಸಭೆ ಕರೆದಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಮಂಗಳವಾರ ಉಕ್ರೇನ್ಗೆ ಪ್ರಯಾಣ ಬೆಳೆಸಲಿದ್ದಾರೆ. ಬ್ರಿಟನ್ ವಿದೇಶಾಂಗ ಸಚಿವ ವಿಲಿಯಂ ಹೇಗ್ ಉಕ್ರೇನ್ ರಾಜಧಾನಿ ಕೀವ್ಗೆ ತೆರಳಿದ್ದಾರೆ.<br /> <br /> <strong>ರಷ್ಯಾ ಕ್ರಮಕ್ಕೆ ಜಿ7 ರಾಷ್ಟ್ರಗಳ ಖಂಡನೆ<br /> (ವಾಷಿಂಗ್ಟನ್ ವರದಿ) (ಪಿಟಿಐ):</strong> ಉಕ್ರೇನ್ ಮೇಲೆ ರಷ್ಯಾ ಕೈಗೊಂಡಿರುವ ಕ್ರಮವನ್ನು ಆರ್ಥಿಕ ವಾಗಿ ಬಲಾಢ್ಯವಾಗಿರುವ ಏಳು ರಾಷ್ಟ್ರಗಳು (ಜಿ7) ತೀವ್ರವಾಗಿ ಖಂಡಿಸಿವೆ.<br /> <br /> ಜೂನ್ನಲ್ಲಿ ರಷ್ಯಾದ ಸೋಚಿಯಲ್ಲಿ ಜಿ8 ರಾಷ್ಟ್ರಗಳ ಶೃಂಗಸಭೆ ಜರುಗಲಿದೆ. ಆ ಹಿನ್ನೆಲೆಯಲ್ಲಿ ನಡೆಯಲಿರುವ ಪೂರ್ವಸಿದ್ಧತಾ ಸಭೆಗಳಿಂದ ತಾತ್ಕಲಿಕವಾಗಿ ದೂರ ಉಳಿಯಲು ನಿರ್ಧರಿಸಿರುವುದಾಗಿಯೂ ಜಿ7 ರಾಷ್ಟ್ರಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ತಿಳಿಸಿವೆ.<br /> <br /> ಇನ್ನೊಂದೆಡೆ ಜರ್ಮನಿ ವಿದೇಶಾಂಗ ಸಚಿವ ಫ್ರಾಂಕ್ ವಾಕ್ಟೆರ್ ಸ್ಟೆನ್, ‘ಜಿ8 ಸಮಿತಿಯ ಸಭೆಯಲ್ಲಿ ಮಾತ್ರ ಪಶ್ಚಿಮ ರಾಷ್ಟ್ರಗಳು ರಷ್ಯಾದೊಂದಿಗೆ ನೇರ ಮಾತುಕತೆ ನಡೆಸಬಹುದು. ಹೀಗಿರುವಾಗ ನಾವು ಆ ಅವಕಾಶವನ್ನು ಏಕೆ ಬಿಟ್ಟು ಕೊಡಬೇಕು’ ಎಂದು ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>