<p><strong>ಬಾಗ್ದಾದ್ (ಎಎಫ್ಪಿ):</strong> ಮುಂದಿನ ವರ್ಷ ಐಎಸ್ ಉಗ್ರರ ಹಿಡಿತದಿಂದ ದೇಶವನ್ನು ಸಂಪೂರ್ಣ ಸ್ವತಂತ್ರಗೊಳಿಸುವುದಾಗಿ ಇರಾಕ್ ಪ್ರಧಾನಿ ಹೈದರ್ ಅಲ್ ಅಬಾದಿ ಅವರು ಮಂಗಳವಾರ ಶಪಥ ಮಾಡಿದ್ದಾರೆ.<br /> <br /> ಐಎಸ್ ಉಗ್ರರಿಂದ ರಮದಿಯನ್ನು ವಶಪಡಿಸಿಕೊಂಡ ಬಳಿಕ ಸರ್ಕಾರಿ ಸ್ವಾಮ್ಯದ ವಾಹಿನಿಯಲ್ಲಿ ಮಾತನಾಡಿದ ಅವರು, ‘2015 ವಿಮೋಚನಾ ವರ್ಷವಾಗಿದ್ದರೆ, 2016 ಇರಾಕ್ ಮತ್ತು ಮೆಸಪೊಟೆಮಿಯಾದಲ್ಲಿನ ಐಎಸ್ ಉಗ್ರರನ್ನು ನಾಶಪಡಿಸುವ ಮಹಾನ್ ಗೆಲುವುಗಳ ವರ್ಷವಾಗಲಿದೆ’ ಎಂದರು.<br /> <br /> ‘ಮೊಸುಲ್ ನಗರವನ್ನು ವಿಮೋಚನೆಮಾಡಲು ಬರುತ್ತಿದ್ದೇವೆ. ಇದು ಐಎಸ್ಗೆ ನಿರ್ಣಾಯಕ ಸೋಲಾಗಲಿದೆ’ ಎಂದರು. ಆದರೆ, ಇರಾಕ್ ಪಡೆಯ ಮುಂದಿನ ಯುದ್ಧ ಮೊಸುಲ್ನಲ್ಲಿ ನಡೆಯಲಿದೆಯೇ ಅಥವಾ ಇತರೆ ಪಟ್ಟಣ ಮತ್ತು ನಗರಗಳನ್ನು ಮರುವಶಪಡಿಸಿಕೊಳ್ಳು ಉದ್ದೇಶಿಸಿದೆಯೇ ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ.<br /> <br /> <strong>ಕುರ್ದಿಶ್ ನೆರವು ಅಗತ್ಯ:</strong> ಮೊಸುಲ್ ನಗರವನ್ನು ಐಎಸ್ ಉಗ್ರರಿಂದ ಬಿಡಿಸಿಕೊಳ್ಳಲು ಕುರ್ದಿಶ್ ಹೋರಾಟಗಾರರ ನೆರವಿನ ಅಗತ್ಯವಿದೆ ಎಂದು ಇರಾಕ್ನ ಹಣಕಾಸು ಸಚಿವ ಹೋಷಿಯಾರ್ ಜೆಬಾರಿ ಹೇಳಿದ್ದಾರೆ.<br /> <br /> ‘ಮೊಸುಲ್ ನಗರದಲ್ಲಿನ ಐಎಸ್ ಉಗ್ರರ ಮೇಲೆ ದಾಳಿ ನಡೆಸಲು ಸಮರ್ಪಕ ಯೋಜನೆ, ಸಿದ್ಧತೆ ಮತ್ತು ಬದ್ಧತೆ ಅಗತ್ಯವಿದೆ. ಇದು ಕುರ್ದಿಶ್ ಸಹಾಯವಿಲ್ಲದೆ ಅಸಾಧ್ಯ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗ್ದಾದ್ (ಎಎಫ್ಪಿ):</strong> ಮುಂದಿನ ವರ್ಷ ಐಎಸ್ ಉಗ್ರರ ಹಿಡಿತದಿಂದ ದೇಶವನ್ನು ಸಂಪೂರ್ಣ ಸ್ವತಂತ್ರಗೊಳಿಸುವುದಾಗಿ ಇರಾಕ್ ಪ್ರಧಾನಿ ಹೈದರ್ ಅಲ್ ಅಬಾದಿ ಅವರು ಮಂಗಳವಾರ ಶಪಥ ಮಾಡಿದ್ದಾರೆ.<br /> <br /> ಐಎಸ್ ಉಗ್ರರಿಂದ ರಮದಿಯನ್ನು ವಶಪಡಿಸಿಕೊಂಡ ಬಳಿಕ ಸರ್ಕಾರಿ ಸ್ವಾಮ್ಯದ ವಾಹಿನಿಯಲ್ಲಿ ಮಾತನಾಡಿದ ಅವರು, ‘2015 ವಿಮೋಚನಾ ವರ್ಷವಾಗಿದ್ದರೆ, 2016 ಇರಾಕ್ ಮತ್ತು ಮೆಸಪೊಟೆಮಿಯಾದಲ್ಲಿನ ಐಎಸ್ ಉಗ್ರರನ್ನು ನಾಶಪಡಿಸುವ ಮಹಾನ್ ಗೆಲುವುಗಳ ವರ್ಷವಾಗಲಿದೆ’ ಎಂದರು.<br /> <br /> ‘ಮೊಸುಲ್ ನಗರವನ್ನು ವಿಮೋಚನೆಮಾಡಲು ಬರುತ್ತಿದ್ದೇವೆ. ಇದು ಐಎಸ್ಗೆ ನಿರ್ಣಾಯಕ ಸೋಲಾಗಲಿದೆ’ ಎಂದರು. ಆದರೆ, ಇರಾಕ್ ಪಡೆಯ ಮುಂದಿನ ಯುದ್ಧ ಮೊಸುಲ್ನಲ್ಲಿ ನಡೆಯಲಿದೆಯೇ ಅಥವಾ ಇತರೆ ಪಟ್ಟಣ ಮತ್ತು ನಗರಗಳನ್ನು ಮರುವಶಪಡಿಸಿಕೊಳ್ಳು ಉದ್ದೇಶಿಸಿದೆಯೇ ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ.<br /> <br /> <strong>ಕುರ್ದಿಶ್ ನೆರವು ಅಗತ್ಯ:</strong> ಮೊಸುಲ್ ನಗರವನ್ನು ಐಎಸ್ ಉಗ್ರರಿಂದ ಬಿಡಿಸಿಕೊಳ್ಳಲು ಕುರ್ದಿಶ್ ಹೋರಾಟಗಾರರ ನೆರವಿನ ಅಗತ್ಯವಿದೆ ಎಂದು ಇರಾಕ್ನ ಹಣಕಾಸು ಸಚಿವ ಹೋಷಿಯಾರ್ ಜೆಬಾರಿ ಹೇಳಿದ್ದಾರೆ.<br /> <br /> ‘ಮೊಸುಲ್ ನಗರದಲ್ಲಿನ ಐಎಸ್ ಉಗ್ರರ ಮೇಲೆ ದಾಳಿ ನಡೆಸಲು ಸಮರ್ಪಕ ಯೋಜನೆ, ಸಿದ್ಧತೆ ಮತ್ತು ಬದ್ಧತೆ ಅಗತ್ಯವಿದೆ. ಇದು ಕುರ್ದಿಶ್ ಸಹಾಯವಿಲ್ಲದೆ ಅಸಾಧ್ಯ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>