<p><strong>ಇಸ್ಲಾಮಾಬಾದ್ (ಪಿಟಿಐ):</strong> ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಬುಧವಾರ ಇಲ್ಲಿ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೊ ಅವರ ಪುಣ್ಯತಿಥಿಯ ವೇದಿಕೆಯನ್ನು ತಮ್ಮ ವಿರೋಧಿಗಳ ಟೀಕೆಗೆ ಎದಿರೇಟು ನೀಡಲು ಬಳಸಿಕೊಂಡರು.<br /> <br /> ಭುಟ್ಟೊ ಕುಟುಂಬದ ಪ್ರಭಾವಿ ಪ್ರದೇಶ ಗಾರ್ಹಿ ಖುದಾ ಬಕ್ಷ್ನಲ್ಲಿ ಬೆಳಿಗ್ಗೆ ಅಪಾರ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಮತ್ತು ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ನೇತೃತ್ವದ ಸರ್ಕಾರವನ್ನು ಟೀಕಿಸುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದರು. `ಯಾವುದೇ ದಾಳಿಗೆ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ತಮಗಿದೆ~ ಎಂದೂ ಹೇಳಿದರು.<br /> <br /> ಸ್ವಿಡ್ಜರ್ಲೆಂಡ್ನಲ್ಲಿ ಲೇವಾದೇವಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಿಸಲಾಗಿರುವ ಭ್ರಷ್ಟಾಚಾರದ ಪ್ರಕರಣಗಳನ್ನು ಮರುವಿಚಾರಣೆಗೆ ಒಳಪಡಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಸುಪ್ರೀಂಕೋರ್ಟ್ನ ನಿಲುವನ್ನು ಜರ್ದಾರಿ ತರಾಟೆಗೆ ತೆಗೆದುಕೊಂಡರು. `ಜನರು ಮಾಡಿರುವ ತೀರ್ಮಾನವನ್ನು ಇತಿಹಾಸ ಒಪ್ಪಿಕೊಂಡಿದೆ.<br /> <br /> ಆದರೆ ನ್ಯಾಯಾಧೀಶರ ತೀರ್ಪನ್ನು ಒಪ್ಪಿಕೊಂಡಿಲ್ಲ, ಹೀಗಾಗಿ ಜನತೆ ತಮ್ಮಂದಿಗೆ ಇದ್ದಾರೆ~ ಎಂದರು.<br /> `ಇಂದು ನಾನು ಹೋರಾಡುತ್ತಿದ್ದರೆ ಅಥವಾ ಪ್ರಧಾನಿ ಯೂಸುಫ್ ರಜಾ ಗಿಲಾನಿಯವರ ವಕೀಲ ಐತ್ಜಾಜ್ ಅಹ್ಸಾನ್ ಅವರು ಸುಪ್ರೀಂಕೋರ್ಟ್ನಲ್ಲಿ ಹೋರಾಡುತ್ತಿದ್ದರೆ, ಅದಕ್ಕೆ ಜನರ ಬೆಂಬಲವೇ ಕಾರಣ. ಪಾಕಿಸ್ತಾನವು ಜನರ ಕೈಯಲ್ಲಿದ್ದು, ನಾವೆಂದಿಗೂ ತಪ್ಪಾಗಿರಲಾರೆವು~ ಎಂದು ಅವರು ನುಡಿದರು.<br /> <br /> `ರಾಜಕೀಯ ಸಾಮರಸ್ಯ ನೀತಿಗೆ ಪಿಪಿಪಿ ಈಗಲೂ ಬದ್ಧವಾಗಿದೆ~ ಎಂದು ಪುನರುಚ್ಚರಿಸಿದ ಅವರು, ಪಾಕಿಸ್ತಾನ ಎದುರಿಸುತ್ತಿರುವ ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಎದುರಿಸಲು ನೆರವಾಗುವ ನಿಟ್ಟಿನಲ್ಲಿ ಸರ್ಕಾರದೊಡನೆ ಕೈಜೋಡಿಸುವಂತೆ ವಿರೋಧ ಪಕ್ಷಗಳಿಗೆ ಮನವಿ ಮಾಡಿದರು.<br /> <br /> ಬಿಲಾವಲ್ ಸವಾಲು:ಪಾಕಿಸ್ತಾನ ಸುಪ್ರೀಂಕೋರ್ಟ್, ಮಾಜಿ ಪ್ರಧಾನಿ ದಿವಂಗತ ಜುಲ್ಫಿಕರ್ ಅಲಿ ಭುಟ್ಟೊ ಅವರ `ನ್ಯಾಯಾಂಗ ಹತ್ಯೆ~ಯಲ್ಲಿ ನಿರ್ವಹಿಸಿದ ಪಾತ್ರವನ್ನು ತೀವ್ರ ಟೀಕಿಸಿರುವ ಪಿಪಿಪಿ ಮುಖ್ಯಸ್ಥ ಬಿಲಾವಲ್ ಭುಟ್ಟೊ ಜರ್ದಾರಿ, ಹಾಲಿ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ `ದ್ವಿಮುಖ ನೀತಿ~ ಅನುಸರಿಸಿಲ್ಲ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಮತ್ತು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸುವಂತೆ ಅದಕ್ಕೆ ಆಗ್ರಹಿಸಿದ್ದಾರೆ. `ಇತಿಹಾಸದ ಕಣ್ಣಿನಲ್ಲಿ ನಮಗೆ ಸಿಗಬೇಕಾದ ನ್ಯಾಯವನ್ನು ಪಿಪಿಪಿ ಕೊನೆಗೂ ಗಳಿಸುತ್ತದೆ ಎಂದರು.<br /> <br /> ಗಿಲಾನಿ ವಿಮಾನ ತುರ್ತು ಭೂಸ್ಪರ್ಶ: ಈ ಮಧ್ಯೆ, ಜುಲ್ಫಿಕರ್ ಭುಟ್ಟೊ ಪುಣ್ಯತಿಥಿಯಲ್ಲಿ ಭಾಗವಹಿಸಲು ಪ್ರಧಾನಿ ಯೂಸುಫ್ ರಜಾ ಗಿಲಾನಿ ಮತ್ತು ಅವರ ಸಚಿವ ಸಹೋದ್ಯೋಗಿಗಳು ಪ್ರಯಾಣಿಸುತ್ತಿದ್ದ ವಿಮಾನವು ಮಂಗಳವಾರ ರಾತ್ರಿ ರಾವಲ್ಪಿಂಡಿಯ ಸೇನಾ ವಾಯುನೆಲೆಯಿಂದ ಹಾರಿದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ತೊಂದರೆಯ ಕಾರಣ ತುರ್ತು ಭೂಸ್ಪರ್ಶ ಮಾಡಿದೆ. <br /> <br /> ಸಿಂಧ್ ಪ್ರಾಂತ್ಯದ ಸಕ್ಕರ್ಗೆ ತೆರಳುತ್ತಿದ್ದ ವಿಮಾನವು ಚಕ್ಲಾಲ ವಾಯುನೆಲೆಯಲ್ಲಿ ಇಳಿದಿದೆ. ಆದರೆ ಯಾರಿಗೂ ತೊಂದರೆಯಾಗಿಲ್ಲ ಎಂದು ಟಿವಿ ಚಾನೆಲ್ಗಳು ವರದಿ ಬಿತ್ತರಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್ (ಪಿಟಿಐ):</strong> ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಬುಧವಾರ ಇಲ್ಲಿ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೊ ಅವರ ಪುಣ್ಯತಿಥಿಯ ವೇದಿಕೆಯನ್ನು ತಮ್ಮ ವಿರೋಧಿಗಳ ಟೀಕೆಗೆ ಎದಿರೇಟು ನೀಡಲು ಬಳಸಿಕೊಂಡರು.<br /> <br /> ಭುಟ್ಟೊ ಕುಟುಂಬದ ಪ್ರಭಾವಿ ಪ್ರದೇಶ ಗಾರ್ಹಿ ಖುದಾ ಬಕ್ಷ್ನಲ್ಲಿ ಬೆಳಿಗ್ಗೆ ಅಪಾರ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಮತ್ತು ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ನೇತೃತ್ವದ ಸರ್ಕಾರವನ್ನು ಟೀಕಿಸುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದರು. `ಯಾವುದೇ ದಾಳಿಗೆ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ತಮಗಿದೆ~ ಎಂದೂ ಹೇಳಿದರು.<br /> <br /> ಸ್ವಿಡ್ಜರ್ಲೆಂಡ್ನಲ್ಲಿ ಲೇವಾದೇವಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಿಸಲಾಗಿರುವ ಭ್ರಷ್ಟಾಚಾರದ ಪ್ರಕರಣಗಳನ್ನು ಮರುವಿಚಾರಣೆಗೆ ಒಳಪಡಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಸುಪ್ರೀಂಕೋರ್ಟ್ನ ನಿಲುವನ್ನು ಜರ್ದಾರಿ ತರಾಟೆಗೆ ತೆಗೆದುಕೊಂಡರು. `ಜನರು ಮಾಡಿರುವ ತೀರ್ಮಾನವನ್ನು ಇತಿಹಾಸ ಒಪ್ಪಿಕೊಂಡಿದೆ.<br /> <br /> ಆದರೆ ನ್ಯಾಯಾಧೀಶರ ತೀರ್ಪನ್ನು ಒಪ್ಪಿಕೊಂಡಿಲ್ಲ, ಹೀಗಾಗಿ ಜನತೆ ತಮ್ಮಂದಿಗೆ ಇದ್ದಾರೆ~ ಎಂದರು.<br /> `ಇಂದು ನಾನು ಹೋರಾಡುತ್ತಿದ್ದರೆ ಅಥವಾ ಪ್ರಧಾನಿ ಯೂಸುಫ್ ರಜಾ ಗಿಲಾನಿಯವರ ವಕೀಲ ಐತ್ಜಾಜ್ ಅಹ್ಸಾನ್ ಅವರು ಸುಪ್ರೀಂಕೋರ್ಟ್ನಲ್ಲಿ ಹೋರಾಡುತ್ತಿದ್ದರೆ, ಅದಕ್ಕೆ ಜನರ ಬೆಂಬಲವೇ ಕಾರಣ. ಪಾಕಿಸ್ತಾನವು ಜನರ ಕೈಯಲ್ಲಿದ್ದು, ನಾವೆಂದಿಗೂ ತಪ್ಪಾಗಿರಲಾರೆವು~ ಎಂದು ಅವರು ನುಡಿದರು.<br /> <br /> `ರಾಜಕೀಯ ಸಾಮರಸ್ಯ ನೀತಿಗೆ ಪಿಪಿಪಿ ಈಗಲೂ ಬದ್ಧವಾಗಿದೆ~ ಎಂದು ಪುನರುಚ್ಚರಿಸಿದ ಅವರು, ಪಾಕಿಸ್ತಾನ ಎದುರಿಸುತ್ತಿರುವ ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಎದುರಿಸಲು ನೆರವಾಗುವ ನಿಟ್ಟಿನಲ್ಲಿ ಸರ್ಕಾರದೊಡನೆ ಕೈಜೋಡಿಸುವಂತೆ ವಿರೋಧ ಪಕ್ಷಗಳಿಗೆ ಮನವಿ ಮಾಡಿದರು.<br /> <br /> ಬಿಲಾವಲ್ ಸವಾಲು:ಪಾಕಿಸ್ತಾನ ಸುಪ್ರೀಂಕೋರ್ಟ್, ಮಾಜಿ ಪ್ರಧಾನಿ ದಿವಂಗತ ಜುಲ್ಫಿಕರ್ ಅಲಿ ಭುಟ್ಟೊ ಅವರ `ನ್ಯಾಯಾಂಗ ಹತ್ಯೆ~ಯಲ್ಲಿ ನಿರ್ವಹಿಸಿದ ಪಾತ್ರವನ್ನು ತೀವ್ರ ಟೀಕಿಸಿರುವ ಪಿಪಿಪಿ ಮುಖ್ಯಸ್ಥ ಬಿಲಾವಲ್ ಭುಟ್ಟೊ ಜರ್ದಾರಿ, ಹಾಲಿ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ `ದ್ವಿಮುಖ ನೀತಿ~ ಅನುಸರಿಸಿಲ್ಲ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಮತ್ತು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸುವಂತೆ ಅದಕ್ಕೆ ಆಗ್ರಹಿಸಿದ್ದಾರೆ. `ಇತಿಹಾಸದ ಕಣ್ಣಿನಲ್ಲಿ ನಮಗೆ ಸಿಗಬೇಕಾದ ನ್ಯಾಯವನ್ನು ಪಿಪಿಪಿ ಕೊನೆಗೂ ಗಳಿಸುತ್ತದೆ ಎಂದರು.<br /> <br /> ಗಿಲಾನಿ ವಿಮಾನ ತುರ್ತು ಭೂಸ್ಪರ್ಶ: ಈ ಮಧ್ಯೆ, ಜುಲ್ಫಿಕರ್ ಭುಟ್ಟೊ ಪುಣ್ಯತಿಥಿಯಲ್ಲಿ ಭಾಗವಹಿಸಲು ಪ್ರಧಾನಿ ಯೂಸುಫ್ ರಜಾ ಗಿಲಾನಿ ಮತ್ತು ಅವರ ಸಚಿವ ಸಹೋದ್ಯೋಗಿಗಳು ಪ್ರಯಾಣಿಸುತ್ತಿದ್ದ ವಿಮಾನವು ಮಂಗಳವಾರ ರಾತ್ರಿ ರಾವಲ್ಪಿಂಡಿಯ ಸೇನಾ ವಾಯುನೆಲೆಯಿಂದ ಹಾರಿದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ತೊಂದರೆಯ ಕಾರಣ ತುರ್ತು ಭೂಸ್ಪರ್ಶ ಮಾಡಿದೆ. <br /> <br /> ಸಿಂಧ್ ಪ್ರಾಂತ್ಯದ ಸಕ್ಕರ್ಗೆ ತೆರಳುತ್ತಿದ್ದ ವಿಮಾನವು ಚಕ್ಲಾಲ ವಾಯುನೆಲೆಯಲ್ಲಿ ಇಳಿದಿದೆ. ಆದರೆ ಯಾರಿಗೂ ತೊಂದರೆಯಾಗಿಲ್ಲ ಎಂದು ಟಿವಿ ಚಾನೆಲ್ಗಳು ವರದಿ ಬಿತ್ತರಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>