<p><strong>ಲಂಡನ್ (ಐಎಎನ್ಎಸ್): </strong> ಜಿರಲೆ ಎಂದೊಡನೆ ಅಸಹ್ಯ ಪಡುವವರೇ ಹೆಚ್ಚು. ಆದರೆ ಇನ್ನು ಮುಂದೆ ಜನರು ಈ ವರ್ತನೆಯನ್ನು ಬಿಡಲೇ ಬೇಕಾಗಿದೆ. ಭೂಮಿಯ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಜಿರಲೆಗಳು ಅತೀ ಅಗತ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.<br /> <br /> ಭೂಮಿಯಲ್ಲಿರುವ ಸಾರಜನಕವನ್ನು (ನೈಟ್ರೋಜನ್) ಜಿರಲೆಗಳು ಗೊಬ್ಬರವನ್ನಾಗಿ ಪರಿವರ್ತಿಸುತ್ತವೆ ಎಂದು ಜೀವವಿಜ್ಞಾನ ತಜ್ಞರು ಪ್ರತಿಪಾದಿಸಿದ್ದಾರೆ.ಜಿರಲೆಗಳು ಸಾಮಾನ್ಯವಾಗಿ ಶುಚಿಯಾಗಿಲ್ಲದ ಪ್ರದೇಶದಲ್ಲಿ ವಾಸಿಸುತ್ತವೆ. ಹಾಗಾಗಿ ಜಿರಲೆಗಳನ್ನು ಕಂಡ ಕೂಡಲೇ ಜನರು ಅವುಗಳ ನಿರ್ಮೂಲನೆಗಾಗಿ ಯತ್ನಿಸುವುದರಲ್ಲಿ ಯಾವುದೇ ಅಚ್ಚರಿ ಇಲ್ಲ. <br /> <br /> ಆದರೆ, ಇಡೀ ಜಿರಲೆ ಸಮೂಹ ಸತ್ತು ಬೀಳುತ್ತಿರುವುದನ್ನು ಕಂಡು ಕೆಲವೇ ಕೆಲವು ಜನರಷ್ಟೇ ಕಣ್ಣೀರು ಸುರಿಸಬೇಕಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.`ಜಿರಲೆಗಳ ಅಳಿಯುವಿಕೆಯು ಭೂಮಿಯ ಪರಿಸರ ವ್ಯವಸ್ಥೆಯಲ್ಲಿರುವ ಸಾರಜನಕ ವೃತ್ತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ~ ಎಂದು ಟೆಕ್ಸಾಸ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದ ಪ್ರೊಫೆಸರ್ ಭಾರತೀಯ ಮೂಲದ ಶ್ರೀನಿ ಕಂಪಾಪತಿ ಎಚ್ಚರಿಸಿದ್ದಾರೆ.<br /> <br /> `ಜಿರಲೆಗಳು ಕೊಳೆಯುತ್ತಿರುವ ಸಾವಯವ ವಸ್ತುಗಳನ್ನು ಆಹಾರವಾಗಿ ಸೇವಿಸುತ್ತವೆ. ಈ ವಸ್ತುಗಳಲ್ಲಿ ಸಾಕಷ್ಟು ಪ್ರಮಾಣದ ಸಾರಜನಕ ಇರುತ್ತವೆ. ಇವುಗಳನ್ನು ಸೇವಿಸಿದ ಜಿರಲೆಗಳು ವಿಸರ್ಜಿಸುವ ತ್ಯಾಜ್ಯವು (ಮಲ ರೂಪದ) ಮಣ್ಣಿಗೆ ಸೇರುತ್ತವೆ. ಇವುಗಳನ್ನು ಸಸ್ಯಗಳು ಬಳಸುತ್ತವೆ~ ಎಂದು ಅವರು ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಂಡನ್ (ಐಎಎನ್ಎಸ್): </strong> ಜಿರಲೆ ಎಂದೊಡನೆ ಅಸಹ್ಯ ಪಡುವವರೇ ಹೆಚ್ಚು. ಆದರೆ ಇನ್ನು ಮುಂದೆ ಜನರು ಈ ವರ್ತನೆಯನ್ನು ಬಿಡಲೇ ಬೇಕಾಗಿದೆ. ಭೂಮಿಯ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಜಿರಲೆಗಳು ಅತೀ ಅಗತ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.<br /> <br /> ಭೂಮಿಯಲ್ಲಿರುವ ಸಾರಜನಕವನ್ನು (ನೈಟ್ರೋಜನ್) ಜಿರಲೆಗಳು ಗೊಬ್ಬರವನ್ನಾಗಿ ಪರಿವರ್ತಿಸುತ್ತವೆ ಎಂದು ಜೀವವಿಜ್ಞಾನ ತಜ್ಞರು ಪ್ರತಿಪಾದಿಸಿದ್ದಾರೆ.ಜಿರಲೆಗಳು ಸಾಮಾನ್ಯವಾಗಿ ಶುಚಿಯಾಗಿಲ್ಲದ ಪ್ರದೇಶದಲ್ಲಿ ವಾಸಿಸುತ್ತವೆ. ಹಾಗಾಗಿ ಜಿರಲೆಗಳನ್ನು ಕಂಡ ಕೂಡಲೇ ಜನರು ಅವುಗಳ ನಿರ್ಮೂಲನೆಗಾಗಿ ಯತ್ನಿಸುವುದರಲ್ಲಿ ಯಾವುದೇ ಅಚ್ಚರಿ ಇಲ್ಲ. <br /> <br /> ಆದರೆ, ಇಡೀ ಜಿರಲೆ ಸಮೂಹ ಸತ್ತು ಬೀಳುತ್ತಿರುವುದನ್ನು ಕಂಡು ಕೆಲವೇ ಕೆಲವು ಜನರಷ್ಟೇ ಕಣ್ಣೀರು ಸುರಿಸಬೇಕಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.`ಜಿರಲೆಗಳ ಅಳಿಯುವಿಕೆಯು ಭೂಮಿಯ ಪರಿಸರ ವ್ಯವಸ್ಥೆಯಲ್ಲಿರುವ ಸಾರಜನಕ ವೃತ್ತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ~ ಎಂದು ಟೆಕ್ಸಾಸ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದ ಪ್ರೊಫೆಸರ್ ಭಾರತೀಯ ಮೂಲದ ಶ್ರೀನಿ ಕಂಪಾಪತಿ ಎಚ್ಚರಿಸಿದ್ದಾರೆ.<br /> <br /> `ಜಿರಲೆಗಳು ಕೊಳೆಯುತ್ತಿರುವ ಸಾವಯವ ವಸ್ತುಗಳನ್ನು ಆಹಾರವಾಗಿ ಸೇವಿಸುತ್ತವೆ. ಈ ವಸ್ತುಗಳಲ್ಲಿ ಸಾಕಷ್ಟು ಪ್ರಮಾಣದ ಸಾರಜನಕ ಇರುತ್ತವೆ. ಇವುಗಳನ್ನು ಸೇವಿಸಿದ ಜಿರಲೆಗಳು ವಿಸರ್ಜಿಸುವ ತ್ಯಾಜ್ಯವು (ಮಲ ರೂಪದ) ಮಣ್ಣಿಗೆ ಸೇರುತ್ತವೆ. ಇವುಗಳನ್ನು ಸಸ್ಯಗಳು ಬಳಸುತ್ತವೆ~ ಎಂದು ಅವರು ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>