<p>ನ್ಯೂಯಾರ್ಕ್ (ಪಿಟಿಐ): ರಾಜಸ್ತಾನದ ಜೈಪುರದಲ್ಲಿ ನಡೆಯಲಿರುವ ಸಾಹಿತ್ಯ ಸಮಾರಂಭದಲ್ಲಿ ಭಾಗವಹಿಸುವ ಬಗ್ಗೆ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಮೌನ ತಾಳಿದ್ದು, ಈ ಕುರಿತು ಟ್ವಿಟ್ಟರ್ನಲ್ಲಿಯೂ ಅವರು ಯಾವುದೇ ಸೂಚನೆ ನೀಡಿಲ್ಲ.<br /> <br /> ಹೀಗಾಗಿ ರಶ್ದಿ ಅವರ ಭಾರತ ಭೇಟಿ ಕುರಿತು ವದಂತಿಗಳು ಹಬ್ಬಿವೆ. ಸಾಮಾನ್ಯವಾಗಿ ಟ್ಟಿಟ್ಟರ್ನಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ರಶ್ದಿ, ಈ ವಾರದ ಆರಂಭದಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟ್ವಿಟ್ಟರ್ ಮತ್ತು ಅವರ ಏಜೆನ್ಸಿಗಳ ಮೂಲಕ ಅವರನ್ನು ಸಂಪರ್ಕಿಸುವ ಮಾಧ್ಯಮಗಳ ಪ್ರಯತ್ನ ಯಶಸ್ವಿಯಾಗಿಲ್ಲ. ಇದೇ 20ರಿಂದ ಆರಂಭವಾಗಲಿರುವ ಐದು ದಿನಗಳ ಕಾರ್ಯಕ್ರಮದಲ್ಲಿ ಮೊದಲ ಮೂರು ದಿನದ ಗೋಷ್ಠಿಗಳಲ್ಲಿ ರಶ್ದಿ ಭಾಗವಹಿಸಲಿದ್ದಾರೆ ಎಂದು ಹಿಂದೆ ಘೋಷಿಸಲಾಗಿತ್ತು.<br /> <br /> 1988ರಲ್ಲಿ ಬರೆದ `ಸಟಾನಿಕ್ ವರ್ಸಸ್~ ವಿವಾದಿತ ಪುಸ್ತಕದಲ್ಲಿನ ಧರ್ಮ ನಿಂದನೆಗಾಗಿ ರಶ್ದಿ ಅವರ ಭಾರತ ಭೇಟಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಶ್ದಿ ಅವರ ಭೇಟಿಯಿಂದ ಭದ್ರತಾ ಸಮಸ್ಯೆ ಉಂಟಾಗಬಹುದು ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರಿಗೆ ತಿಳಿಸಿದ್ದಾರೆ.<br /> <br /> ರಶ್ದಿ ತಮ್ಮ ಬಳಿ `ಭಾರತ ಮೂಲದ ವ್ಯಕ್ತಿ~ (ಪಿಐಒ) ಕಾರ್ಡ್ ಹೊಂದಿರುವುದರಿಂದ ತಮಗೆ ಬೇಕಾದಾಗ ಅವರು ದೇಶಕ್ಕೆ ಬರಬಹುದಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನ್ಯೂಯಾರ್ಕ್ (ಪಿಟಿಐ): ರಾಜಸ್ತಾನದ ಜೈಪುರದಲ್ಲಿ ನಡೆಯಲಿರುವ ಸಾಹಿತ್ಯ ಸಮಾರಂಭದಲ್ಲಿ ಭಾಗವಹಿಸುವ ಬಗ್ಗೆ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಮೌನ ತಾಳಿದ್ದು, ಈ ಕುರಿತು ಟ್ವಿಟ್ಟರ್ನಲ್ಲಿಯೂ ಅವರು ಯಾವುದೇ ಸೂಚನೆ ನೀಡಿಲ್ಲ.<br /> <br /> ಹೀಗಾಗಿ ರಶ್ದಿ ಅವರ ಭಾರತ ಭೇಟಿ ಕುರಿತು ವದಂತಿಗಳು ಹಬ್ಬಿವೆ. ಸಾಮಾನ್ಯವಾಗಿ ಟ್ಟಿಟ್ಟರ್ನಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ರಶ್ದಿ, ಈ ವಾರದ ಆರಂಭದಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟ್ವಿಟ್ಟರ್ ಮತ್ತು ಅವರ ಏಜೆನ್ಸಿಗಳ ಮೂಲಕ ಅವರನ್ನು ಸಂಪರ್ಕಿಸುವ ಮಾಧ್ಯಮಗಳ ಪ್ರಯತ್ನ ಯಶಸ್ವಿಯಾಗಿಲ್ಲ. ಇದೇ 20ರಿಂದ ಆರಂಭವಾಗಲಿರುವ ಐದು ದಿನಗಳ ಕಾರ್ಯಕ್ರಮದಲ್ಲಿ ಮೊದಲ ಮೂರು ದಿನದ ಗೋಷ್ಠಿಗಳಲ್ಲಿ ರಶ್ದಿ ಭಾಗವಹಿಸಲಿದ್ದಾರೆ ಎಂದು ಹಿಂದೆ ಘೋಷಿಸಲಾಗಿತ್ತು.<br /> <br /> 1988ರಲ್ಲಿ ಬರೆದ `ಸಟಾನಿಕ್ ವರ್ಸಸ್~ ವಿವಾದಿತ ಪುಸ್ತಕದಲ್ಲಿನ ಧರ್ಮ ನಿಂದನೆಗಾಗಿ ರಶ್ದಿ ಅವರ ಭಾರತ ಭೇಟಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಶ್ದಿ ಅವರ ಭೇಟಿಯಿಂದ ಭದ್ರತಾ ಸಮಸ್ಯೆ ಉಂಟಾಗಬಹುದು ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರಿಗೆ ತಿಳಿಸಿದ್ದಾರೆ.<br /> <br /> ರಶ್ದಿ ತಮ್ಮ ಬಳಿ `ಭಾರತ ಮೂಲದ ವ್ಯಕ್ತಿ~ (ಪಿಐಒ) ಕಾರ್ಡ್ ಹೊಂದಿರುವುದರಿಂದ ತಮಗೆ ಬೇಕಾದಾಗ ಅವರು ದೇಶಕ್ಕೆ ಬರಬಹುದಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>