<p><strong>ಬೀಜಿಂಗ್, (ಪಿಟಿಐ): </strong>ಚೀನಾದ ವೈದ್ಯರೊಬ್ಬರ ಮೌಢ್ಯಕ್ಕೆ ನವಜಾತ ಶಿಶುವೊಂದು ಬಲಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. <br /> <br /> ಲೀ ಕ್ಜಿಯಾಕಿನ್ ಎಂಬ ತುಂಬು ಗರ್ಭಿಣಿ ಹೆರಿಗೆಗಾಗಿ ಯಾಂಗ್ಜಿಯಾಂಗ್ ನಗರದ ಪೀಪಲ್ಸ್ ಆಸ್ಪತ್ರೆಗೆ ಆಗಸ್ಟ್ 12ರಂದು ದಾಖಲಾಗಿದ್ದರು. ಅಂದು ಹೆರಿಗೆಯಾಗದ ಕಾರಣ ಆ.13ರಂದು ಶಸ್ತ್ರಚಿಕಿತ್ಸೆ ಮಾಡುವಂತೆ ವೈದ್ಯರನ್ನು ಕೋರಿದ್ದರು. ಅಂದು ಚೀನಾದಲ್ಲಿ `ಭೂತದ ಹಬ್ಬ~ ಇದ್ದಕಾರಣ ಶಸ್ತ್ರಚಿಕಿತ್ಸೆ ಮಾಡಲು ವೈದ್ಯ ಝೆಂಗ್ ಯುನ್ನಾ ನಿರಾಕರಿಸಿದರು. 13 ಸಂಖ್ಯೆ ಶುಭಸೂಚಕವಲ್ಲ ಮತ್ತು`ಭೂತದ ಹಬ್ಬ~ದ ದಿನ ಹುಟ್ಟುವ ಮಗು ಅಪಶಕುನ ಎಂಬುದು ಅವರ ನಂಬಿಕೆಯಾಗಿತ್ತು.<br /> <br /> ಹೀಗಾಗಿ ಮರು ದಿನ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ಮಗು ಮೂರು ದಿನಗಳ ನಂತರ ಸಾವನ್ನಪ್ಪಿತು. ಇದಕ್ಕೆ ವೈದ್ಯರ ಮೂಢನಂಬಿಕೆಯೇ ಕಾರಣ ಎಂದು ದೂರಿ ಮಹಿಳೆ ಮತ್ತು ಕುಟುಂಬದವರು ಭಾರಿ ಮೊತ್ತದ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. <br /> <br /> ಇದನ್ನು ನಿರಾಕರಿಸಿರುವ ವೈದ್ಯರು, ಗರ್ಭಿಣಿ ಕುಟುಂಬದ ಕೋರಿಕೆಯ ಮೇರೆಗೆ ತಾವು ಶಸ್ತ್ರಚಿಕಿತ್ಸೆಗೆ ವಿಳಂಬ ಮಾಡಿದ್ದಾಗಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀಜಿಂಗ್, (ಪಿಟಿಐ): </strong>ಚೀನಾದ ವೈದ್ಯರೊಬ್ಬರ ಮೌಢ್ಯಕ್ಕೆ ನವಜಾತ ಶಿಶುವೊಂದು ಬಲಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. <br /> <br /> ಲೀ ಕ್ಜಿಯಾಕಿನ್ ಎಂಬ ತುಂಬು ಗರ್ಭಿಣಿ ಹೆರಿಗೆಗಾಗಿ ಯಾಂಗ್ಜಿಯಾಂಗ್ ನಗರದ ಪೀಪಲ್ಸ್ ಆಸ್ಪತ್ರೆಗೆ ಆಗಸ್ಟ್ 12ರಂದು ದಾಖಲಾಗಿದ್ದರು. ಅಂದು ಹೆರಿಗೆಯಾಗದ ಕಾರಣ ಆ.13ರಂದು ಶಸ್ತ್ರಚಿಕಿತ್ಸೆ ಮಾಡುವಂತೆ ವೈದ್ಯರನ್ನು ಕೋರಿದ್ದರು. ಅಂದು ಚೀನಾದಲ್ಲಿ `ಭೂತದ ಹಬ್ಬ~ ಇದ್ದಕಾರಣ ಶಸ್ತ್ರಚಿಕಿತ್ಸೆ ಮಾಡಲು ವೈದ್ಯ ಝೆಂಗ್ ಯುನ್ನಾ ನಿರಾಕರಿಸಿದರು. 13 ಸಂಖ್ಯೆ ಶುಭಸೂಚಕವಲ್ಲ ಮತ್ತು`ಭೂತದ ಹಬ್ಬ~ದ ದಿನ ಹುಟ್ಟುವ ಮಗು ಅಪಶಕುನ ಎಂಬುದು ಅವರ ನಂಬಿಕೆಯಾಗಿತ್ತು.<br /> <br /> ಹೀಗಾಗಿ ಮರು ದಿನ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ಮಗು ಮೂರು ದಿನಗಳ ನಂತರ ಸಾವನ್ನಪ್ಪಿತು. ಇದಕ್ಕೆ ವೈದ್ಯರ ಮೂಢನಂಬಿಕೆಯೇ ಕಾರಣ ಎಂದು ದೂರಿ ಮಹಿಳೆ ಮತ್ತು ಕುಟುಂಬದವರು ಭಾರಿ ಮೊತ್ತದ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. <br /> <br /> ಇದನ್ನು ನಿರಾಕರಿಸಿರುವ ವೈದ್ಯರು, ಗರ್ಭಿಣಿ ಕುಟುಂಬದ ಕೋರಿಕೆಯ ಮೇರೆಗೆ ತಾವು ಶಸ್ತ್ರಚಿಕಿತ್ಸೆಗೆ ವಿಳಂಬ ಮಾಡಿದ್ದಾಗಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>