<p>ವರ್ಷಗಳ ಹಿಂದೆ, ಉಸಿರಾಟ ತೊಂದರೆಗೆ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದೆ. ಅದೊಂದು ಬೆಳಿಗ್ಗೆ ದಿನಪತ್ರಿಕೆಯಲ್ಲಿ ಗಮನ ಸೆಳೆದಿದ್ದು ಮುಖಪುಟದ ಛಾಯಾಚಿತ್ರ. ನೀಳಕಾಯದ ಚೆಂದದ ಯುವಕನೊಂದಿಗೆ ವಾಮನರೂಪಿ.</p>.<p>ಅವರಿಬ್ಬರು ಮಾತನಾಡುತಿದ್ದ ನಿಂತಿದ್ದ ಕ್ಷಣ ಅದು. ಜೊತೆಗಿದ್ದ ನೀಳಕಾಯದ ಯುವಕ ಎದುರಿದ್ದ ಹಿರಿಯನತ್ತ ಗೌರವಪೂರ್ಣ ನೋಟ ಬೀರಿದ್ದ. ವಿಧೇಯತೆ ಆತ್ಮೀಯತೆ ತುಂಬಿದ್ದ ನೋಟವದು. ಆ ಯುವಕ ವಿಧೇಯತೆಯಿಂದ ಬಾಗಿ ಹಿರಿಯನ ಪಾದದ ಕಡೆಗೆ ಕಣ್ಣು ನೆಟ್ಟಿದ್ದ. <br /> ಆ ಚಿತ್ರದಲ್ಲಿ ಇದ್ದದ್ದು ರಾಹುಲ್ ದ್ರಾವಿಡ್ ಹಾಗೂ ಜಿ.ಆರ್.ವಿಶ್ವನಾಥ್. `ವಿಶಿ~ ನಾನು ಬಾಲ್ಯದಿಂದಲೇ ಆರಾಧಿಸಿದ ಹೀರೋ. ಸಭ್ಯ ವ್ಯಕ್ತಿತ್ವ ಹಾಗೂ ಸದ್ಗುಣವುಳ್ಳ ಮನುಷ್ಯ. ನನ್ನದೇ ರಾಜ್ಯವಾದ ಕರ್ನಾಟಕದ ಆಟಗಾರ. ನಾನು ಮೆಚ್ಚಿಕೊಂಡು ಹಸ್ತ ಲಾಘವ ಮಾಡಿದ ಮೊಟ್ಟಮೊದಲ ಕ್ರಿಕೆಟಿಗ. ಅದೇ ರೀತಿಯ ಗೌರವ `ವಿಶಿ~ ಅವರಿಗಿಂತ ಟೆಸ್ಟ್ ಕ್ರಿಕೆಟ್ನಲ್ಲಿ ಎರಡು ಪಟ್ಟು ಹೆಚ್ಚು ರನ್ ಗಳಿಸಿದ ಯುವಕನ ಮೇಲೆ. <br /> <br /> ಈ ಇಬ್ಬರೂ ಕ್ರಿಕೆಟಿಗರು ಒಟ್ಟಿಗೆ ಕಾಣಿಸಿಕೊಂಡಿದ್ದು ಅಂಡರ್ಪಾಸ್ವೊಂದರ ನಾಮಕರಣ ಸಂದರ್ಭದಲ್ಲಿ. ಆ ಅಂಡರ್ಪಾಸ್ಗೆ ನೀಡಿದ್ದು `ವಿಶಿ~ಯ ಹೆಸರನ್ನು. ಈ ನಾಮಕರಣದ ಕ್ಷಣವನ್ನು ವಿಶಿಷ್ಟವಾಗಿಸಿದ್ದು ರಾಹುಲ್. ಆ ಸಂದರ್ಭವೇ ಪತ್ರಿಕೆಯಲ್ಲಿ ಚಿತ್ರವಾಗಿ ಮೂಡಿತ್ತು.</p>.<p>ಅದನ್ನು ನೋಡಿದ ಮರುದಿನ ನಾನು ದ್ರಾವಿಡ್ಗೊಂದು ಇ ಮೇಲ್ ಸಂದೇಶ ಬರೆದೆ. ಅವನೊಂದಿಗೆ ತೀರ ನಿಕಟ ಸಂಪರ್ಕ ಇಲ್ಲದಿದ್ದರೂ ಸ್ವಲ್ಪ ಸಲಿಗೆಯಂತೂ ಇದೆ. ಅದೇ ವಿಶ್ವಾಸದೊಂದಿಗೆ ಬರೆದ ಸಾಲುಗಳಿಗೆ ರಾಹುಲ್ನಿಂದ ಬಂದ ಉತ್ತರ ನನ್ನ ಯೋಚನೆಗೆ ಸಮರ್ಪಕ ಸ್ಪಂದನೆ ಎನಿಸಿತ್ತು: `ಬಾಲ್ಯದಲ್ಲಿನ ಆ ದಿನಗಳು ಇನ್ನೂ ನೆನಪಿನಲ್ಲಿ ಹಸಿರಾಗಿವೆ. ಆಗ ಹೈದರಾಬಾದ್ ವಿರುದ್ಧ `ವಿಶಿ~ ಅವರು ರಣಜಿ ಪಂದ್ಯವನ್ನು (ಕ್ರಿಕೆಟ್ ಜೀವನದ ಕೊನೆಯಲ್ಲಿ) ಆಡುವುದನ್ನು ನೋಡಲು ದೌಡಾಯಿಸಿಕೊಂಡು ಹೋಗಿದ್ದೆ. ಆಗ ಕ್ರೀಡಾಂಗಣದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿದ್ದರು. ಅಂಥ ಪರಿಸ್ಥಿತಿ ಇಂದಿಲ್ಲವಾಗಿದ್ದು ಬೇಸರ~ ಎಂದು ಬರೆದಿದ್ದ.<br /> <br /> ರಾಹುಲ್ ಜೊತೆಗಿನ ಆ ಸಂದೇಶ ವಿನಿಮಯ ಹಾಗೂ ವರ್ಷದ ಹಿಂದೆ ನೋಡಿದ್ದ ಚಿತ್ರ ನೆನಪಾಗಿದ್ದು ತೀರ ಇತ್ತೀಚೆಗೆ. ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಪ್ರಕಟಿಸಿದ ರಾಹುಲ್ ದ್ರಾವಿಡ್ಗೆ ಗ್ರೇಗ್ ಚಾಪೆಲ್ ತಮ್ಮ ಬರಹದ ಮೂಲಕ ಗೌರವ ಅರ್ಪಿಸಿದ್ದ ಅಂಕಣ ಓದಿದಾಗ.</p>.<p>2006ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ನೆನಪುಗಳು ಅಲ್ಲಿ ತೆರೆದುಕೊಂಡಿದ್ದವು. ಆಸ್ಟ್ರೇಲಿಯಾದವನೊಬ್ಬ ಆಗ ಭಾರತ ತಂಡದ ಮಾರ್ಗದರ್ಶಿ. ಇಪ್ಪತ್ತು ವರ್ಷಗಳ ನಂತರ ಉಪಖಂಡದ ಆಚೆಗೆ ಸರಣಿ ಗೆದ್ದ ಸಂಭ್ರಮವೂ ಸಿಕ್ಕಿತ್ತು. ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆ ತಂಡದ ಯಶಸ್ಸಿಗೆ ಆ ಸರಣಿಯಲ್ಲಿ ನೀಡಿದ ಕೊಡುಗೆ ಅಪಾರ. ಅದನ್ನೇ ಚಾಪೆಲ್ ಸ್ಮರಿಸಿದ್ದರು.</p>.<p>`ಯಾವೊಂದು ತಂಡವೂ ಸತ್ವವುಳ್ಳ, ಪುಟಿದೇಳುವ ಚೈತನ್ಯದ ಹಾಗೂ ಸ್ಪರ್ಧಾಗುಣದ ಇಂಥ ಇಬ್ಬರನ್ನು ಹೊಂದಿರಲಿಲ್ಲ. ಇವರಿಬ್ಬರಿಗೂ ತಂಡದ ಹಿತವೇ ಮೊದಲ ಆದ್ಯತೆ. ಇಂಥ ಒಳ್ಳೆಯ ಗುಣಕ್ಕೆ ಬೆಂಗಳೂರಿನ ನೀರು ಕಾರಣವಿದ್ದರೂ ಇರಬಹುದು!~ ಎಂದು ಬರೆದಿದ್ದರು ಚಾಪೆಲ್.<br /> <br /> ಹಾಗೆ ಇದ್ದರೂ ಇರಬಹುದು. ಏಕೆಂದರೆ ದ್ರಾವಿಡ್ಗೆ ಮುನ್ನ ಅದೇ ಗುಣದ ಜಿ.ಆರ್.ವಿಶ್ವನಾಥ್ ಇದ್ದರು. ಅನಿಲ್ ಕುಂಬ್ಳೆಗೂ ಹಿಂದೆ ಭಗವತ್ ಚಂದ್ರಶೇಖರ್ ತಂಡದಲ್ಲಿದ್ದರು. ಕರ್ನಾಟಕದವನಾದ ನಾನು ಇದೇ ಕಾರಣಕ್ಕೆ ಹೆಮ್ಮೆ ಪಡುತ್ತೇನೆ. <br /> <br /> ಇವರೆಲ್ಲರ ಆಟವನ್ನು ನೋಡುವ ಅದೃಷ್ಟವೂ ನನ್ನದಾಗಿತ್ತು. ಮುಂಬೈನವರಲ್ಲದ ಪ್ರಭಾವಿ ಬ್ಯಾಟ್ಸ್ಮನ್ ಒಬ್ಬರನ್ನು ಭಾರತ ತಂಡ ಮೊಟ್ಟ ಮೊದಲ ಬಾರಿಗೆ ಕಂಡಿದ್ದು `ವಿಶಿ~ ರೂಪದಲ್ಲಿ.</p>.<p>ಅವರ ಆಟವನ್ನು ನಾನು ಚಿಕ್ಕವನಿದ್ದಾಗಿನಿಂದ ನೋಡಿದ್ದೇನೆ. ಚಂದ್ರ ಅವರಂತೂ ದೇಶದ ಕ್ರಿಕೆಟ್ನಲ್ಲಿ ಕಾಣಿಸಿಕೊಂಡ ಅತ್ಯಂತ ಸಮರ್ಥ ಸ್ಪಿನ್ ಮೋಡಿಗಾರ. ನಮ್ಮೂರಿನ ಈ ಆಟಗಾರರ ಬಗ್ಗೆ ನನಗೆ ಹೆಮ್ಮೆ. ಏಕೆಂದರೆ ಅವರು ದೇಶಕ್ಕಾಗಿ ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟವರು. ಅಷ್ಟೇ ಅಲ್ಲ, ತಂಡವನ್ನು ಸೋಲಿನ ಅಪಾಯದಿಂದ ಅನೇಕ ಬಾರಿ ಪಾರು ಮಾಡಿದವರು.</p>.<p> `ವಿಶಿ~ ಮತ್ತು ಚಂದ್ರ ಅವರು ನನಗೆ ಹೃದಯಕ್ಕೆ ಹತ್ತಿರ ಎನಿಸುವುದು ಕೇವಲ ಅವರ ಆಟದ ತಂತ್ರದಿಂದ ಮಾತ್ರವಲ್ಲ, ಅವರ ಗುಣದಿಂದ ಕೂಡ. ಅವರೊಂದಿಗೆ ಆಡಿದವರು ಹಾಗೂ ಎದುರಾಳಿ ತಂಡದವರು ಕೂಡ ಈ ಇಬ್ಬರು ಕ್ರಿಕೆಟಿಗರನ್ನು ಅತ್ಯಂತ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿಗಳೆಂದು ಮೆಚ್ಚಿಕೊಂಡಿದ್ದರು. ಇವರಿಬ್ಬರೂ ನನಗೆ ಬಾಲ್ಯದಲ್ಲಿ ಆದರ್ಶವಾಗಿ ಕಂಡವರು.<br /> <br /> ಈಗ ನಾನು ಮಧ್ಯವಯಸ್ಕ. ಈ ಕಾಲದಲ್ಲಿ ಅದೇ ಭಾವದೊಂದಿಗೆ ಸ್ವೀಕರಿಸಿದ್ದು ದ್ರಾವಿಡ್ ಹಾಗೂ ಕುಂಬ್ಳೆಯನ್ನು. ಒಬ್ಬ ದೇಶದ ಅತ್ಯುತ್ತಮ ಬ್ಯಾಟ್ಸ್ಮನ್. ಅನಿಲ್ ಭಾರತ ಕಂಡ ಅತ್ಯಂತ ಯಶಸ್ವಿ ಬೌಲರ್. `ವಿಶಿ~ ಮತ್ತು ಚಂದ್ರ ನಂತರ ಅದೇ ಗುಣಮಟ್ಟದೊಂದಿಗೆ ಬೆಂಗಳೂರಿನಿಂದ ಮೂಡಿ ಬಂದ ಕ್ರಿಕೆಟ್ ತಾರೆಗಳಾಗಿದ್ದಾರೆ ಇವರಿಬ್ಬರು. <br /> <br /> `ವಿಶಿ~ ಮತ್ತು ಚಂದ್ರ ಅವರನ್ನು ಕ್ರಿಕೆಟ್ ಸಾಮರ್ಥ್ಯದಿಂದ ಹೇಗೆ ಗೌರವಿಸುತ್ತೇವೊ ಅದೇ ರೀತಿಯಲ್ಲಿ ದ್ರಾವಿಡ್ ಹಾಗೂ ಕುಂಬ್ಳೆಯನ್ನೂ ಒಪ್ಪಿಕೊಳ್ಳುತ್ತೇವೆ. ಆದರೆ ಕಾಲಕ್ಕೆ ತಕ್ಕಂತೆ ಅವರ ವ್ಯಕ್ತಿತ್ವವನ್ನು ಬಣ್ಣಿಸುವಾಗ ಜಿ.ಆರ್.ವಿಶ್ವನಾಥ್ ಮತ್ತು ಬಿ.ಎಸ್.ಚಂದ್ರಶೇಖರ್ ಅವರನ್ನು `ಆಕರ್ಷಕ~, `ಮೃದು~ ಹಾಗೂ `ಭರವಸೆಯ~ ಎಂದು ಹೇಳಲಾಗುತ್ತಿತ್ತು.</p>.<p>ರಾಹುಲ್ ಮತ್ತು ಅನಿಲ್ ವಿಷಯ ಬಂದಾಗ `ಛಲವುಳ್ಳ~ ಹಾಗೂ `ಶ್ರದ್ಧೆಯುಳ್ಳ~ ಎನ್ನುತ್ತೇವೆ. ಗ್ರೇಗ್ ಚಾಪೆಲ್ ಕೂಡ ಇದಕ್ಕೆ ಸಮನಾದ ಪದಗಳನ್ನೇ ಈ ಕ್ರಿಕೆಟಿಗರ ಕುರಿತು ಪ್ರಯೋಗ ಮಾಡಿದ್ದು.<br /> <br /> ಈ ಎಲ್ಲ ಮಾತುಗಳು ನಗರವೊಂದರ ಸಾಮಾಜಿಕ ವಾತಾವರಣ ಬದಲಾವಣೆಯನ್ನು ಬಿಂಬಿಸುವಂಥವೂ ಆಗಿವೆ. `ವಿಶಿ~ ಮತ್ತು ಚಂದ್ರ ಆಡುತ್ತಿದ್ದ ಕಾಲವು ಮಾವಳ್ಳಿ ಟಿಫಿನ್ ರೂಮ್ ಹಾಗೂ ಸುಂದರವಾಗಿದ್ದ ಕಬ್ಬನ್ ಉದ್ಯಾನವಿದ್ದ ಕಾಲದಲ್ಲಿ. ಆಗ ಬೆಂಗಳೂರಿನಲ್ಲಿ ಹೆಚ್ಚು ಹಸಿರಿತ್ತು. ಆಗ ಎಂ.ಜಿ.ರಸ್ತೆಯಲ್ಲಿ ಕಾರುಗಳಿಗಿಂತ ಅಧಿಕವಾಗಿ ಸಿನಿಮಾ ಹಾಲ್ ಇವೆ ಎಂದೆನಿಸುತಿತ್ತು.</p>.<p>ರಾಹುಲ್ ಹಾಗೂ ಅನಿಲ್ ಆಡುವ ಹೊತ್ತಿಗೆ ಇದೇ ನಗರವು ಇನ್ಫೋಸಿಸ್ನಂಥ ದೊಡ್ಡ ಸಾಫ್ಟ್ವೇರ್ ಕಂಪೆನಿಗಳ ತಾಣ. ಹಕ್ಕಿಗಳು ಕಾಣದಂಥ ಕಟ್ಟಡಗಳ ಕಾಡು. ಬಸ್, ಜಾಗ್ವಾರ್ ಮತ್ತು ಮೋಟಾರ್ ಬೈಕ್ಗಳ ದಟ್ಟಣೆಯಿಂದ ಇಕ್ಕಟ್ಟಾಗಿರುವ ಊರು.<br /> <br /> ಜಿಆರ್ವಿ ಮತ್ತು ಚಂದ್ರಶೇಖರ್ ಪದಾರ್ಪಣೆ ಮಾಡಿದ್ದಾಗ `ಕರ್ನಾಟಕ~ ಮೈಸೂರು ರಾಜ್ಯವಾಗಿತ್ತು. ಆಗ ಸೆಂಟ್ರಲ್ ಕಾಲೇಜ್ ಕ್ರಿಕೆಟ್ ಚಟುವಟಿಕೆಯ ಕೇಂದ್ರ. ಮೈದಾನದ ಸುತ್ತ ಮರಗಳ ಸಾಲು. ಪ್ರೇಕ್ಷಕರು ಮರದ ಹಲಗೆಯ ಅಟ್ಟಣಗೆಯಲ್ಲಿ ಕುಳಿತು ಆಟ ನೋಡುತ್ತಿದ್ದರು.</p>.<p>ದ್ರಾವಿಡ್ ಹಾಗೂ ಕುಂಬ್ಳೆಗೆ ಆಡಿ ಬೆಳೆಯಲು ವೇದಿಕೆಯಾಗಿದ್ದು ಚಿನ್ನಸ್ವಾಮಿ ಕ್ರೀಡಾಂಗಣ. ಅರವತ್ತು ಸಾವಿರ ಜನರು ಕುಳಿತುಕೊಂಡು ಹೊನಲು ಬೆಳಕಿನಲ್ಲಿ ಪಂದ್ಯ ನೋಡುವಷ್ಟು ವ್ಯವಸ್ಥಿತವಾದದ್ದು. ಆಟ ನಡೆಯುವಾಗ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯ ಕಾವಲು. <br /> <br /> ಟೆಸ್ಟ್ ಸರಣಿಗಳ ಜೊತೆಗೆ ವರ್ಷ ವರ್ಷವೂ ಕ್ಲಬ್ ಹಾಗೂ ರಣಜಿ ಕ್ರಿಕೆಟ್ನಲ್ಲಿ ಆಡಿದ `ವಿಶಿ~ಗೆ ಪ್ರಿಯವಾಗಿದ್ದು ಬಿಯರ್. ಅದೇ ಚಂದ್ರ ಅವರದ್ದು ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ ಸೊನ್ನೆ ಸುತ್ತಿದ ವಿಶೇಷ. ವರ್ಷಪೂರ್ತಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿದ, ತೆಳು ಮೈಕಟ್ಟು ಹೊಂದಿದ ದ್ರಾವಿಡ್ ಅತ್ಯಧಿಕ ಕ್ಯಾಚ್ ಪಡೆದ ಟೆಸ್ಟ್ ಕ್ರಿಕೆಟಿಗ. <br /> <br /> ಇಷ್ಟೆಲ್ಲ ಯೋಚಿಸಿದ ನಂತರ ಮತ್ತೆ ನೆನಪಾಗುವುದು ಮೊದಲು ಹೇಳಿದ ಆ ಛಾಯಾಚಿತ್ರ. ಅದೇನೋ ಗೊತ್ತಿಲ್ಲ; ಎಲ್ಲ ದೈಹಿಕ ಸಮಸ್ಯೆಗಳನ್ನು ಮರೆಸುವಂಥ ಶಕ್ತಿ ಆ ಚಿತ್ರದೊಳಗಿತ್ತು. ಅಂಥದೇ ಸಾಮರ್ಥ್ಯ ಜಿ.ಆರ್.ವಿಶ್ವನಾಥ್ ಅವರದ್ದು.</p>.<p>ರಾಹುಲ್ ದ್ರಾವಿಡ್ ಕೂಡ ಅದೇ ರೀತಿಯ ಒಳಿತುಗಳ ಆಗರ. ಬಸವನಗುಡಿಯ ಕಾಫಿ ಶಾಪ್ನಲ್ಲಿ ತೋರುವ ವರ್ತನೆಯನ್ನೇ `ವಿಶಿ~ ಕ್ರಿಕೆಟ್ ಅಂಗಳದಲ್ಲಿಯೂ ಉಳಿಸಿಕೊಂಡರು. <br /> <br /> ಆದರೆ ದ್ರಾವಿಡ್ ಇದೇ ವರ್ತನೆಯನ್ನು ಕಾಲಕ್ರಮೇಣ ಕಲಿತರು. ಜಿಆರ್ವಿ ಕಲಿಯದೆಯೇ ತನ್ನೊಳಗೆ ಬೆಳೆಸಿಕೊಂಡಿದ್ದ ಸಹಜ ವರ್ತನೆ ಅದಾಗಿತ್ತು. ಆ ವಿಷಯ ಏನೇ ಇರಲಿ. ಈಗ ಕ್ರಿಕೆಟ್ ಪ್ರೇಮಿಗಳ ಸಂಖ್ಯೆ ಅಪಾರ. ಅವರ ಬಯಕೆಗಳೂ ಹೆಚ್ಚು.</p>.<p>ಇನ್ನೊಂದೆಡೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಿಚಿತ್ರ ಆಡಳಿತ. ಹಿಂದೆ ಅಹಂ ಹೊಂದಿದ್ದ ಹವ್ಯಾಸಿ ಆಡಳಿತಗಾರರಿದ್ದರು. ಆದರೆ ಈಗ ವೃತ್ತಿಪರ ದುಷ್ಟರ ಕೂಟವಾಗಿ ಬಿಟ್ಟಿದೆ. ಅದು ಮಾಡರ್ನ್ ಕ್ರಿಕೆಟ್ ಯಶಸ್ಸಿನ ಬೆನ್ನು ಹತ್ತಿದೆ. ಅದರ ಕಾಳಜಿ ಕೇವಲ ಪ್ರಾಯೋಜಕರ ಹಿತದ ಕಡೆಗೆ.<br /> <br /> ಇಂಥ ಪರಿಸ್ಥಿತಿಯಲ್ಲಿ ದ್ರಾವಿಡ್ ತಮ್ಮನ್ನು ತಾವು ಬದಲಿಸಿಕೊಳ್ಳುವುದು ಅನಿವಾರ್ಯ ಎನಿಸಿತು. ಸಮತೋಲನ ಹಾಗೂ ಸ್ವಯಂ ನಿಯಂತ್ರಣದ ಮೂಲಕ ತಮ್ಮನ್ನು ತಾವೇ ವಿಭಿನ್ನವಾಗಿ ಪ್ರಸ್ತುತಪಡಿಸಿಕೊಂಡರು. ಅವರು ಸಭ್ಯ ಹಾಗೂ ಗೌರವಯುತ ವ್ಯಕ್ತಿ. ಆದರೆ ಎಂದೂ ತಕ್ಷಣವೇ ಪ್ರತಿಕ್ರಿಯೆ ನೀಡುವಂಥವರಾಗಿ ಕಾಣಿಸಿಕೊಳ್ಳಲಿಲ್ಲ.</p>.<p>`ವಿಶಿ~ ಉತ್ಸಾಹದಾಯಕ ಎನ್ನಿಸಬಹುದಾದ ನಿರ್ವಹಣೆ ಹಾಗೂ ಚುಂಬಕ ಎನ್ನಿಸುವ ದ್ರಾವಿಡ್ ವರ್ತನೆ; ಇವೆರಡೂ ವಿಭಿನ್ನ. ಆದ್ದರಿಂದಲೇ ಅವರಾಡಿದ ಕಾಲದಲ್ಲಿ ಒಬ್ಬರು `ಅತಿ ಪ್ರೀತಿಗೆ ಪಾತ್ರರು~ ಇನ್ನೊಬ್ಬರು `ಅಪಾರ ಗೌರವ ಗಳಿಸಿದವರು~.<br /> <br /> ಬಹುಶಃ ಜಿ.ಆರ್.ವಿಶ್ವನಾಥ್ಗಿಂತ ದ್ರಾವಿಡ್, ಬಾಗದ ಗುಣದ ಗಟ್ಟಿಗ ಆಗಿರಬಹುದು. ಇಲ್ಲವೇ ಕಾಲದ ಅಗತ್ಯಕ್ಕೆ ತಕ್ಕಂತೆ ಇಬ್ಬರೂ ಹೊಂದಿಕೊಂಡಿರಬಹುದು. ಅದೇನೇ ಇರಲಿ, ರಾಹುಲ್ ತಮ್ಮ ಹೀರೋ ಎನಿಸಿರುವ `ವಿಶಿ~ಯೊಂದಿಗೆ ಯಾವ ವಿಷಯ ಹಂಚಿಕೊಳ್ಳುತ್ತಾನೆ-ಹಂಚಿಕೊಳ್ಳುವುದಿಲ್ಲ ಎನ್ನುವುದನ್ನು ಸಂದೇಶ ವಿನಿಮಯದ ತುಣುಕೊಂದು ಅನಾವರಣಗೊಳಿಸುತ್ತದೆ.</p>.<p>ಒಂದರ ಹಿಂದೊಂದು ಏಕದಿನ ಸರಣಿ ನಡೆದ ಕಾಲ. ಟೆಲಿವಿಷನ್ನಲ್ಲಿ ಪಂದ್ಯಗಳನ್ನು ನೋಡುವಾಗ ನನ್ನ ಗಮನ ಸೆಳೆದಿದ್ದು ಭಾರತ ತಂಡದ ನಾಯಕ ಸ್ಲಿಪ್ ಬದಲು ಮಿಡ್ ಆಫ್ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ. ಈ ಕುರಿತು ಆಗ ನಾನು ನಾಯಕನಾಗಿದ್ದ ದ್ರಾವಿಡ್ಗೆ ಪತ್ರ ಬರೆದೆ:<br /> <br /> `ಪ್ರೀತಿಯ ರಾಹುಲ್,<br /> ಭಾರತ ಕ್ರಿಕೆಟ್ ಇತಿಹಾಸ ಕಂಡ ಅತ್ಯಂತ ಉತ್ತಮ ಟೆಸ್ಟ್ ಬ್ಯಾಟ್ಸ್ಮನ್. ಸ್ಲಿಪ್ನಲ್ಲಿ ಶ್ರೇಷ್ಠ ಕ್ಷೇತ್ರ ರಕ್ಷಕ ಎನ್ನುವುದರಲ್ಲಿಯಂತೂ ಅನುಮಾನವೇ ಇಲ್ಲ. ಸ್ಲಿಪ್ನಲ್ಲಿ ನಿಮ್ಮಂತೆ ಫೀಲ್ಡಿಂಗ್ ಮಾಡುವವರನ್ನು ದೇಶವು ಯಾವುದೇ ಪ್ರಕಾರದ ಕ್ರಿಕೆಟ್ನಲ್ಲಿಯೂ ಕಂಡಿಲ್ಲ. ಆದ್ದರಿಂದ ನೀವು ಅಲ್ಲಿಯೇ ಕ್ಷೇತ್ರ ರಕ್ಷಣೆ ಮಾಡಬೇಕು.</p>.<p>ಬೌಲರ್ಗಳಿಗೆ ಸಲಹೆ ನೀಡಲು ಅನುಕೂಲ ಆಗಲೆಂದು ನಿಮ್ಮ ಸ್ಥಾನ ಬದಲಿಸಿಕೊಂಡಿರಬಹುದು. ಆದರೆ ತಂಡದ ಹಿತಕ್ಕಾಗಿ ನಿಮಗೆ ಸ್ಲಿಪ್ ಒಳ್ಳೆಯದು. ನಿಮ್ಮಷ್ಟು ಚುರುಕಾಗಿ ಪ್ರತಿಕ್ರಿಯಿಸಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಆರಂಭದ ಕೆಲವು ಓವರುಗಳಲ್ಲಿ ಕ್ಯಾಚ್ ಪಡೆಯುವಲ್ಲಿ ನಿಮ್ಮ ಸ್ಥಾನದಲ್ಲಿ ನಿಂತವರು ವಿಫಲರಾಗುತ್ತಿದ್ದಾರೆ~<br /> <br /> ಇದಿಷ್ಟು ಅದರಲ್ಲಿನ ವಿಷಯ. ಎರಡು ಮೂರು ದಿನಗಳ ನಂತರ ಉತ್ತರ ಬಂತು. ಆದರೆ ಅದು ನನ್ನ ಕೋರಿಕೆ ಹಾಗೂ ಸಲಹೆಗಾಗಿ ನೀಡಿದ್ದ ಪ್ರತಿಕ್ರಿಯೆ ಅಲ್ಲ.</p>.<p>ಬದಲಿಗೆ ಕೆಲವು ದಿನಗಳ ಹಿಂದಷ್ಟೇ ಪ್ರಕಟವಾಗಿದ್ದ ನನ್ನ ಹೊಸ ಪುಸ್ತಕದ ಕುರಿತು. `ಭಾರತ ಕ್ರಿಕೆಟ್ ತಂಡದ ನಾಯಕನ ಬಗ್ಗೆ ನಿಮ್ಮ ವಿಶ್ಲೇಷಣೆ ಸರಿ. ನನಗೆ ಅನಿಸುತ್ತದೆ ನಮ್ಮ ದೇಶದ ಇತಿಹಾಸ ಗಾಂಧಿವರೆಗೆ ಬಂದು ನಿಂತುಬಿಡುತ್ತದೆ. ಆನಂತರದ 60 ವರ್ಷಗಳಲ್ಲಿ ಅದೆಷ್ಟೆಲ್ಲಾ ನಡೆದಿದೆ. ನಾನು 180 ಪುಟಗಳನ್ನು ಸರಾಗವಾಗಿ ಓದಿಕೊಂಡು ಸಾಗಿದೆ. ಆ ಕುರಿತು ಹಾಗೂ ಅದಕ್ಕಿಂತ ಹೆಚ್ಚಿನದನ್ನು ಮಾತನಾಡಲು ಇಷ್ಟಪಡುತ್ತೇನೆ~ ಎಂದು ಬರೆದ ಉತ್ತರ ನನ್ನಮುಂದೆ ಇತ್ತು.<br /> <br /> ನನ್ನ ಇ-ಮೇಲ್ ಸಂದೇಶ ಹಾಗೂ ಅದಕ್ಕೆ ಸಿಕ್ಕ ಪ್ರತಿಕ್ರಿಯೆಯನ್ನು ಕ್ರಿಕೆಟ್ ಭಾಷೆಯಲ್ಲಿ ಹೇಳುವುದಾದರೆ ಮಧ್ಯಮ ವೇಗಿಯ ಬೌನ್ಸರ್ ಅನ್ನು ಮುಂಗೈ ತಂತ್ರಗಾರಿಕೆಯಿಂದ ಫ್ಲಿಕ್ ಮಾಡಿ ಬೌಂಡರಿಗೆ ಅಟ್ಟಿದ ಹಾಗೆ. ಶುದ್ಧ ಸಭ್ಯತೆಯೊಂದಿಗೆ ನೀಡಿದ ಮಾತಿನ ಪೆಟ್ಟು. <br /> <br /> `ಕ್ರಿಕೆಟ್ ತಂತ್ರದ ಬಗ್ಗೆ ಮಾತಾಡದೇ ತೆಪ್ಪಗೆ ಇತಿಹಾಸ ಪುಸ್ತಕ ಬರೆಯುವತ್ತ ಗಮನ ಕೊಡು~ ಎಂದ ಹಾಗಿತ್ತು. ಹೌದು; ನಾನೀಗ ಅದನ್ನೇ ಮಾಡಬೇಕು.<br /> (ನಿಮ್ಮ ಅನಿಸಿಕೆ ತಿಳಿಸಿ: <a href="mailto:editpagefeedback@prajavani.co.in">editpagefeedback@prajavani.co.in</a> )</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವರ್ಷಗಳ ಹಿಂದೆ, ಉಸಿರಾಟ ತೊಂದರೆಗೆ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದೆ. ಅದೊಂದು ಬೆಳಿಗ್ಗೆ ದಿನಪತ್ರಿಕೆಯಲ್ಲಿ ಗಮನ ಸೆಳೆದಿದ್ದು ಮುಖಪುಟದ ಛಾಯಾಚಿತ್ರ. ನೀಳಕಾಯದ ಚೆಂದದ ಯುವಕನೊಂದಿಗೆ ವಾಮನರೂಪಿ.</p>.<p>ಅವರಿಬ್ಬರು ಮಾತನಾಡುತಿದ್ದ ನಿಂತಿದ್ದ ಕ್ಷಣ ಅದು. ಜೊತೆಗಿದ್ದ ನೀಳಕಾಯದ ಯುವಕ ಎದುರಿದ್ದ ಹಿರಿಯನತ್ತ ಗೌರವಪೂರ್ಣ ನೋಟ ಬೀರಿದ್ದ. ವಿಧೇಯತೆ ಆತ್ಮೀಯತೆ ತುಂಬಿದ್ದ ನೋಟವದು. ಆ ಯುವಕ ವಿಧೇಯತೆಯಿಂದ ಬಾಗಿ ಹಿರಿಯನ ಪಾದದ ಕಡೆಗೆ ಕಣ್ಣು ನೆಟ್ಟಿದ್ದ. <br /> ಆ ಚಿತ್ರದಲ್ಲಿ ಇದ್ದದ್ದು ರಾಹುಲ್ ದ್ರಾವಿಡ್ ಹಾಗೂ ಜಿ.ಆರ್.ವಿಶ್ವನಾಥ್. `ವಿಶಿ~ ನಾನು ಬಾಲ್ಯದಿಂದಲೇ ಆರಾಧಿಸಿದ ಹೀರೋ. ಸಭ್ಯ ವ್ಯಕ್ತಿತ್ವ ಹಾಗೂ ಸದ್ಗುಣವುಳ್ಳ ಮನುಷ್ಯ. ನನ್ನದೇ ರಾಜ್ಯವಾದ ಕರ್ನಾಟಕದ ಆಟಗಾರ. ನಾನು ಮೆಚ್ಚಿಕೊಂಡು ಹಸ್ತ ಲಾಘವ ಮಾಡಿದ ಮೊಟ್ಟಮೊದಲ ಕ್ರಿಕೆಟಿಗ. ಅದೇ ರೀತಿಯ ಗೌರವ `ವಿಶಿ~ ಅವರಿಗಿಂತ ಟೆಸ್ಟ್ ಕ್ರಿಕೆಟ್ನಲ್ಲಿ ಎರಡು ಪಟ್ಟು ಹೆಚ್ಚು ರನ್ ಗಳಿಸಿದ ಯುವಕನ ಮೇಲೆ. <br /> <br /> ಈ ಇಬ್ಬರೂ ಕ್ರಿಕೆಟಿಗರು ಒಟ್ಟಿಗೆ ಕಾಣಿಸಿಕೊಂಡಿದ್ದು ಅಂಡರ್ಪಾಸ್ವೊಂದರ ನಾಮಕರಣ ಸಂದರ್ಭದಲ್ಲಿ. ಆ ಅಂಡರ್ಪಾಸ್ಗೆ ನೀಡಿದ್ದು `ವಿಶಿ~ಯ ಹೆಸರನ್ನು. ಈ ನಾಮಕರಣದ ಕ್ಷಣವನ್ನು ವಿಶಿಷ್ಟವಾಗಿಸಿದ್ದು ರಾಹುಲ್. ಆ ಸಂದರ್ಭವೇ ಪತ್ರಿಕೆಯಲ್ಲಿ ಚಿತ್ರವಾಗಿ ಮೂಡಿತ್ತು.</p>.<p>ಅದನ್ನು ನೋಡಿದ ಮರುದಿನ ನಾನು ದ್ರಾವಿಡ್ಗೊಂದು ಇ ಮೇಲ್ ಸಂದೇಶ ಬರೆದೆ. ಅವನೊಂದಿಗೆ ತೀರ ನಿಕಟ ಸಂಪರ್ಕ ಇಲ್ಲದಿದ್ದರೂ ಸ್ವಲ್ಪ ಸಲಿಗೆಯಂತೂ ಇದೆ. ಅದೇ ವಿಶ್ವಾಸದೊಂದಿಗೆ ಬರೆದ ಸಾಲುಗಳಿಗೆ ರಾಹುಲ್ನಿಂದ ಬಂದ ಉತ್ತರ ನನ್ನ ಯೋಚನೆಗೆ ಸಮರ್ಪಕ ಸ್ಪಂದನೆ ಎನಿಸಿತ್ತು: `ಬಾಲ್ಯದಲ್ಲಿನ ಆ ದಿನಗಳು ಇನ್ನೂ ನೆನಪಿನಲ್ಲಿ ಹಸಿರಾಗಿವೆ. ಆಗ ಹೈದರಾಬಾದ್ ವಿರುದ್ಧ `ವಿಶಿ~ ಅವರು ರಣಜಿ ಪಂದ್ಯವನ್ನು (ಕ್ರಿಕೆಟ್ ಜೀವನದ ಕೊನೆಯಲ್ಲಿ) ಆಡುವುದನ್ನು ನೋಡಲು ದೌಡಾಯಿಸಿಕೊಂಡು ಹೋಗಿದ್ದೆ. ಆಗ ಕ್ರೀಡಾಂಗಣದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿದ್ದರು. ಅಂಥ ಪರಿಸ್ಥಿತಿ ಇಂದಿಲ್ಲವಾಗಿದ್ದು ಬೇಸರ~ ಎಂದು ಬರೆದಿದ್ದ.<br /> <br /> ರಾಹುಲ್ ಜೊತೆಗಿನ ಆ ಸಂದೇಶ ವಿನಿಮಯ ಹಾಗೂ ವರ್ಷದ ಹಿಂದೆ ನೋಡಿದ್ದ ಚಿತ್ರ ನೆನಪಾಗಿದ್ದು ತೀರ ಇತ್ತೀಚೆಗೆ. ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಪ್ರಕಟಿಸಿದ ರಾಹುಲ್ ದ್ರಾವಿಡ್ಗೆ ಗ್ರೇಗ್ ಚಾಪೆಲ್ ತಮ್ಮ ಬರಹದ ಮೂಲಕ ಗೌರವ ಅರ್ಪಿಸಿದ್ದ ಅಂಕಣ ಓದಿದಾಗ.</p>.<p>2006ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ನೆನಪುಗಳು ಅಲ್ಲಿ ತೆರೆದುಕೊಂಡಿದ್ದವು. ಆಸ್ಟ್ರೇಲಿಯಾದವನೊಬ್ಬ ಆಗ ಭಾರತ ತಂಡದ ಮಾರ್ಗದರ್ಶಿ. ಇಪ್ಪತ್ತು ವರ್ಷಗಳ ನಂತರ ಉಪಖಂಡದ ಆಚೆಗೆ ಸರಣಿ ಗೆದ್ದ ಸಂಭ್ರಮವೂ ಸಿಕ್ಕಿತ್ತು. ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆ ತಂಡದ ಯಶಸ್ಸಿಗೆ ಆ ಸರಣಿಯಲ್ಲಿ ನೀಡಿದ ಕೊಡುಗೆ ಅಪಾರ. ಅದನ್ನೇ ಚಾಪೆಲ್ ಸ್ಮರಿಸಿದ್ದರು.</p>.<p>`ಯಾವೊಂದು ತಂಡವೂ ಸತ್ವವುಳ್ಳ, ಪುಟಿದೇಳುವ ಚೈತನ್ಯದ ಹಾಗೂ ಸ್ಪರ್ಧಾಗುಣದ ಇಂಥ ಇಬ್ಬರನ್ನು ಹೊಂದಿರಲಿಲ್ಲ. ಇವರಿಬ್ಬರಿಗೂ ತಂಡದ ಹಿತವೇ ಮೊದಲ ಆದ್ಯತೆ. ಇಂಥ ಒಳ್ಳೆಯ ಗುಣಕ್ಕೆ ಬೆಂಗಳೂರಿನ ನೀರು ಕಾರಣವಿದ್ದರೂ ಇರಬಹುದು!~ ಎಂದು ಬರೆದಿದ್ದರು ಚಾಪೆಲ್.<br /> <br /> ಹಾಗೆ ಇದ್ದರೂ ಇರಬಹುದು. ಏಕೆಂದರೆ ದ್ರಾವಿಡ್ಗೆ ಮುನ್ನ ಅದೇ ಗುಣದ ಜಿ.ಆರ್.ವಿಶ್ವನಾಥ್ ಇದ್ದರು. ಅನಿಲ್ ಕುಂಬ್ಳೆಗೂ ಹಿಂದೆ ಭಗವತ್ ಚಂದ್ರಶೇಖರ್ ತಂಡದಲ್ಲಿದ್ದರು. ಕರ್ನಾಟಕದವನಾದ ನಾನು ಇದೇ ಕಾರಣಕ್ಕೆ ಹೆಮ್ಮೆ ಪಡುತ್ತೇನೆ. <br /> <br /> ಇವರೆಲ್ಲರ ಆಟವನ್ನು ನೋಡುವ ಅದೃಷ್ಟವೂ ನನ್ನದಾಗಿತ್ತು. ಮುಂಬೈನವರಲ್ಲದ ಪ್ರಭಾವಿ ಬ್ಯಾಟ್ಸ್ಮನ್ ಒಬ್ಬರನ್ನು ಭಾರತ ತಂಡ ಮೊಟ್ಟ ಮೊದಲ ಬಾರಿಗೆ ಕಂಡಿದ್ದು `ವಿಶಿ~ ರೂಪದಲ್ಲಿ.</p>.<p>ಅವರ ಆಟವನ್ನು ನಾನು ಚಿಕ್ಕವನಿದ್ದಾಗಿನಿಂದ ನೋಡಿದ್ದೇನೆ. ಚಂದ್ರ ಅವರಂತೂ ದೇಶದ ಕ್ರಿಕೆಟ್ನಲ್ಲಿ ಕಾಣಿಸಿಕೊಂಡ ಅತ್ಯಂತ ಸಮರ್ಥ ಸ್ಪಿನ್ ಮೋಡಿಗಾರ. ನಮ್ಮೂರಿನ ಈ ಆಟಗಾರರ ಬಗ್ಗೆ ನನಗೆ ಹೆಮ್ಮೆ. ಏಕೆಂದರೆ ಅವರು ದೇಶಕ್ಕಾಗಿ ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟವರು. ಅಷ್ಟೇ ಅಲ್ಲ, ತಂಡವನ್ನು ಸೋಲಿನ ಅಪಾಯದಿಂದ ಅನೇಕ ಬಾರಿ ಪಾರು ಮಾಡಿದವರು.</p>.<p> `ವಿಶಿ~ ಮತ್ತು ಚಂದ್ರ ಅವರು ನನಗೆ ಹೃದಯಕ್ಕೆ ಹತ್ತಿರ ಎನಿಸುವುದು ಕೇವಲ ಅವರ ಆಟದ ತಂತ್ರದಿಂದ ಮಾತ್ರವಲ್ಲ, ಅವರ ಗುಣದಿಂದ ಕೂಡ. ಅವರೊಂದಿಗೆ ಆಡಿದವರು ಹಾಗೂ ಎದುರಾಳಿ ತಂಡದವರು ಕೂಡ ಈ ಇಬ್ಬರು ಕ್ರಿಕೆಟಿಗರನ್ನು ಅತ್ಯಂತ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿಗಳೆಂದು ಮೆಚ್ಚಿಕೊಂಡಿದ್ದರು. ಇವರಿಬ್ಬರೂ ನನಗೆ ಬಾಲ್ಯದಲ್ಲಿ ಆದರ್ಶವಾಗಿ ಕಂಡವರು.<br /> <br /> ಈಗ ನಾನು ಮಧ್ಯವಯಸ್ಕ. ಈ ಕಾಲದಲ್ಲಿ ಅದೇ ಭಾವದೊಂದಿಗೆ ಸ್ವೀಕರಿಸಿದ್ದು ದ್ರಾವಿಡ್ ಹಾಗೂ ಕುಂಬ್ಳೆಯನ್ನು. ಒಬ್ಬ ದೇಶದ ಅತ್ಯುತ್ತಮ ಬ್ಯಾಟ್ಸ್ಮನ್. ಅನಿಲ್ ಭಾರತ ಕಂಡ ಅತ್ಯಂತ ಯಶಸ್ವಿ ಬೌಲರ್. `ವಿಶಿ~ ಮತ್ತು ಚಂದ್ರ ನಂತರ ಅದೇ ಗುಣಮಟ್ಟದೊಂದಿಗೆ ಬೆಂಗಳೂರಿನಿಂದ ಮೂಡಿ ಬಂದ ಕ್ರಿಕೆಟ್ ತಾರೆಗಳಾಗಿದ್ದಾರೆ ಇವರಿಬ್ಬರು. <br /> <br /> `ವಿಶಿ~ ಮತ್ತು ಚಂದ್ರ ಅವರನ್ನು ಕ್ರಿಕೆಟ್ ಸಾಮರ್ಥ್ಯದಿಂದ ಹೇಗೆ ಗೌರವಿಸುತ್ತೇವೊ ಅದೇ ರೀತಿಯಲ್ಲಿ ದ್ರಾವಿಡ್ ಹಾಗೂ ಕುಂಬ್ಳೆಯನ್ನೂ ಒಪ್ಪಿಕೊಳ್ಳುತ್ತೇವೆ. ಆದರೆ ಕಾಲಕ್ಕೆ ತಕ್ಕಂತೆ ಅವರ ವ್ಯಕ್ತಿತ್ವವನ್ನು ಬಣ್ಣಿಸುವಾಗ ಜಿ.ಆರ್.ವಿಶ್ವನಾಥ್ ಮತ್ತು ಬಿ.ಎಸ್.ಚಂದ್ರಶೇಖರ್ ಅವರನ್ನು `ಆಕರ್ಷಕ~, `ಮೃದು~ ಹಾಗೂ `ಭರವಸೆಯ~ ಎಂದು ಹೇಳಲಾಗುತ್ತಿತ್ತು.</p>.<p>ರಾಹುಲ್ ಮತ್ತು ಅನಿಲ್ ವಿಷಯ ಬಂದಾಗ `ಛಲವುಳ್ಳ~ ಹಾಗೂ `ಶ್ರದ್ಧೆಯುಳ್ಳ~ ಎನ್ನುತ್ತೇವೆ. ಗ್ರೇಗ್ ಚಾಪೆಲ್ ಕೂಡ ಇದಕ್ಕೆ ಸಮನಾದ ಪದಗಳನ್ನೇ ಈ ಕ್ರಿಕೆಟಿಗರ ಕುರಿತು ಪ್ರಯೋಗ ಮಾಡಿದ್ದು.<br /> <br /> ಈ ಎಲ್ಲ ಮಾತುಗಳು ನಗರವೊಂದರ ಸಾಮಾಜಿಕ ವಾತಾವರಣ ಬದಲಾವಣೆಯನ್ನು ಬಿಂಬಿಸುವಂಥವೂ ಆಗಿವೆ. `ವಿಶಿ~ ಮತ್ತು ಚಂದ್ರ ಆಡುತ್ತಿದ್ದ ಕಾಲವು ಮಾವಳ್ಳಿ ಟಿಫಿನ್ ರೂಮ್ ಹಾಗೂ ಸುಂದರವಾಗಿದ್ದ ಕಬ್ಬನ್ ಉದ್ಯಾನವಿದ್ದ ಕಾಲದಲ್ಲಿ. ಆಗ ಬೆಂಗಳೂರಿನಲ್ಲಿ ಹೆಚ್ಚು ಹಸಿರಿತ್ತು. ಆಗ ಎಂ.ಜಿ.ರಸ್ತೆಯಲ್ಲಿ ಕಾರುಗಳಿಗಿಂತ ಅಧಿಕವಾಗಿ ಸಿನಿಮಾ ಹಾಲ್ ಇವೆ ಎಂದೆನಿಸುತಿತ್ತು.</p>.<p>ರಾಹುಲ್ ಹಾಗೂ ಅನಿಲ್ ಆಡುವ ಹೊತ್ತಿಗೆ ಇದೇ ನಗರವು ಇನ್ಫೋಸಿಸ್ನಂಥ ದೊಡ್ಡ ಸಾಫ್ಟ್ವೇರ್ ಕಂಪೆನಿಗಳ ತಾಣ. ಹಕ್ಕಿಗಳು ಕಾಣದಂಥ ಕಟ್ಟಡಗಳ ಕಾಡು. ಬಸ್, ಜಾಗ್ವಾರ್ ಮತ್ತು ಮೋಟಾರ್ ಬೈಕ್ಗಳ ದಟ್ಟಣೆಯಿಂದ ಇಕ್ಕಟ್ಟಾಗಿರುವ ಊರು.<br /> <br /> ಜಿಆರ್ವಿ ಮತ್ತು ಚಂದ್ರಶೇಖರ್ ಪದಾರ್ಪಣೆ ಮಾಡಿದ್ದಾಗ `ಕರ್ನಾಟಕ~ ಮೈಸೂರು ರಾಜ್ಯವಾಗಿತ್ತು. ಆಗ ಸೆಂಟ್ರಲ್ ಕಾಲೇಜ್ ಕ್ರಿಕೆಟ್ ಚಟುವಟಿಕೆಯ ಕೇಂದ್ರ. ಮೈದಾನದ ಸುತ್ತ ಮರಗಳ ಸಾಲು. ಪ್ರೇಕ್ಷಕರು ಮರದ ಹಲಗೆಯ ಅಟ್ಟಣಗೆಯಲ್ಲಿ ಕುಳಿತು ಆಟ ನೋಡುತ್ತಿದ್ದರು.</p>.<p>ದ್ರಾವಿಡ್ ಹಾಗೂ ಕುಂಬ್ಳೆಗೆ ಆಡಿ ಬೆಳೆಯಲು ವೇದಿಕೆಯಾಗಿದ್ದು ಚಿನ್ನಸ್ವಾಮಿ ಕ್ರೀಡಾಂಗಣ. ಅರವತ್ತು ಸಾವಿರ ಜನರು ಕುಳಿತುಕೊಂಡು ಹೊನಲು ಬೆಳಕಿನಲ್ಲಿ ಪಂದ್ಯ ನೋಡುವಷ್ಟು ವ್ಯವಸ್ಥಿತವಾದದ್ದು. ಆಟ ನಡೆಯುವಾಗ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯ ಕಾವಲು. <br /> <br /> ಟೆಸ್ಟ್ ಸರಣಿಗಳ ಜೊತೆಗೆ ವರ್ಷ ವರ್ಷವೂ ಕ್ಲಬ್ ಹಾಗೂ ರಣಜಿ ಕ್ರಿಕೆಟ್ನಲ್ಲಿ ಆಡಿದ `ವಿಶಿ~ಗೆ ಪ್ರಿಯವಾಗಿದ್ದು ಬಿಯರ್. ಅದೇ ಚಂದ್ರ ಅವರದ್ದು ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ ಸೊನ್ನೆ ಸುತ್ತಿದ ವಿಶೇಷ. ವರ್ಷಪೂರ್ತಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿದ, ತೆಳು ಮೈಕಟ್ಟು ಹೊಂದಿದ ದ್ರಾವಿಡ್ ಅತ್ಯಧಿಕ ಕ್ಯಾಚ್ ಪಡೆದ ಟೆಸ್ಟ್ ಕ್ರಿಕೆಟಿಗ. <br /> <br /> ಇಷ್ಟೆಲ್ಲ ಯೋಚಿಸಿದ ನಂತರ ಮತ್ತೆ ನೆನಪಾಗುವುದು ಮೊದಲು ಹೇಳಿದ ಆ ಛಾಯಾಚಿತ್ರ. ಅದೇನೋ ಗೊತ್ತಿಲ್ಲ; ಎಲ್ಲ ದೈಹಿಕ ಸಮಸ್ಯೆಗಳನ್ನು ಮರೆಸುವಂಥ ಶಕ್ತಿ ಆ ಚಿತ್ರದೊಳಗಿತ್ತು. ಅಂಥದೇ ಸಾಮರ್ಥ್ಯ ಜಿ.ಆರ್.ವಿಶ್ವನಾಥ್ ಅವರದ್ದು.</p>.<p>ರಾಹುಲ್ ದ್ರಾವಿಡ್ ಕೂಡ ಅದೇ ರೀತಿಯ ಒಳಿತುಗಳ ಆಗರ. ಬಸವನಗುಡಿಯ ಕಾಫಿ ಶಾಪ್ನಲ್ಲಿ ತೋರುವ ವರ್ತನೆಯನ್ನೇ `ವಿಶಿ~ ಕ್ರಿಕೆಟ್ ಅಂಗಳದಲ್ಲಿಯೂ ಉಳಿಸಿಕೊಂಡರು. <br /> <br /> ಆದರೆ ದ್ರಾವಿಡ್ ಇದೇ ವರ್ತನೆಯನ್ನು ಕಾಲಕ್ರಮೇಣ ಕಲಿತರು. ಜಿಆರ್ವಿ ಕಲಿಯದೆಯೇ ತನ್ನೊಳಗೆ ಬೆಳೆಸಿಕೊಂಡಿದ್ದ ಸಹಜ ವರ್ತನೆ ಅದಾಗಿತ್ತು. ಆ ವಿಷಯ ಏನೇ ಇರಲಿ. ಈಗ ಕ್ರಿಕೆಟ್ ಪ್ರೇಮಿಗಳ ಸಂಖ್ಯೆ ಅಪಾರ. ಅವರ ಬಯಕೆಗಳೂ ಹೆಚ್ಚು.</p>.<p>ಇನ್ನೊಂದೆಡೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಿಚಿತ್ರ ಆಡಳಿತ. ಹಿಂದೆ ಅಹಂ ಹೊಂದಿದ್ದ ಹವ್ಯಾಸಿ ಆಡಳಿತಗಾರರಿದ್ದರು. ಆದರೆ ಈಗ ವೃತ್ತಿಪರ ದುಷ್ಟರ ಕೂಟವಾಗಿ ಬಿಟ್ಟಿದೆ. ಅದು ಮಾಡರ್ನ್ ಕ್ರಿಕೆಟ್ ಯಶಸ್ಸಿನ ಬೆನ್ನು ಹತ್ತಿದೆ. ಅದರ ಕಾಳಜಿ ಕೇವಲ ಪ್ರಾಯೋಜಕರ ಹಿತದ ಕಡೆಗೆ.<br /> <br /> ಇಂಥ ಪರಿಸ್ಥಿತಿಯಲ್ಲಿ ದ್ರಾವಿಡ್ ತಮ್ಮನ್ನು ತಾವು ಬದಲಿಸಿಕೊಳ್ಳುವುದು ಅನಿವಾರ್ಯ ಎನಿಸಿತು. ಸಮತೋಲನ ಹಾಗೂ ಸ್ವಯಂ ನಿಯಂತ್ರಣದ ಮೂಲಕ ತಮ್ಮನ್ನು ತಾವೇ ವಿಭಿನ್ನವಾಗಿ ಪ್ರಸ್ತುತಪಡಿಸಿಕೊಂಡರು. ಅವರು ಸಭ್ಯ ಹಾಗೂ ಗೌರವಯುತ ವ್ಯಕ್ತಿ. ಆದರೆ ಎಂದೂ ತಕ್ಷಣವೇ ಪ್ರತಿಕ್ರಿಯೆ ನೀಡುವಂಥವರಾಗಿ ಕಾಣಿಸಿಕೊಳ್ಳಲಿಲ್ಲ.</p>.<p>`ವಿಶಿ~ ಉತ್ಸಾಹದಾಯಕ ಎನ್ನಿಸಬಹುದಾದ ನಿರ್ವಹಣೆ ಹಾಗೂ ಚುಂಬಕ ಎನ್ನಿಸುವ ದ್ರಾವಿಡ್ ವರ್ತನೆ; ಇವೆರಡೂ ವಿಭಿನ್ನ. ಆದ್ದರಿಂದಲೇ ಅವರಾಡಿದ ಕಾಲದಲ್ಲಿ ಒಬ್ಬರು `ಅತಿ ಪ್ರೀತಿಗೆ ಪಾತ್ರರು~ ಇನ್ನೊಬ್ಬರು `ಅಪಾರ ಗೌರವ ಗಳಿಸಿದವರು~.<br /> <br /> ಬಹುಶಃ ಜಿ.ಆರ್.ವಿಶ್ವನಾಥ್ಗಿಂತ ದ್ರಾವಿಡ್, ಬಾಗದ ಗುಣದ ಗಟ್ಟಿಗ ಆಗಿರಬಹುದು. ಇಲ್ಲವೇ ಕಾಲದ ಅಗತ್ಯಕ್ಕೆ ತಕ್ಕಂತೆ ಇಬ್ಬರೂ ಹೊಂದಿಕೊಂಡಿರಬಹುದು. ಅದೇನೇ ಇರಲಿ, ರಾಹುಲ್ ತಮ್ಮ ಹೀರೋ ಎನಿಸಿರುವ `ವಿಶಿ~ಯೊಂದಿಗೆ ಯಾವ ವಿಷಯ ಹಂಚಿಕೊಳ್ಳುತ್ತಾನೆ-ಹಂಚಿಕೊಳ್ಳುವುದಿಲ್ಲ ಎನ್ನುವುದನ್ನು ಸಂದೇಶ ವಿನಿಮಯದ ತುಣುಕೊಂದು ಅನಾವರಣಗೊಳಿಸುತ್ತದೆ.</p>.<p>ಒಂದರ ಹಿಂದೊಂದು ಏಕದಿನ ಸರಣಿ ನಡೆದ ಕಾಲ. ಟೆಲಿವಿಷನ್ನಲ್ಲಿ ಪಂದ್ಯಗಳನ್ನು ನೋಡುವಾಗ ನನ್ನ ಗಮನ ಸೆಳೆದಿದ್ದು ಭಾರತ ತಂಡದ ನಾಯಕ ಸ್ಲಿಪ್ ಬದಲು ಮಿಡ್ ಆಫ್ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ. ಈ ಕುರಿತು ಆಗ ನಾನು ನಾಯಕನಾಗಿದ್ದ ದ್ರಾವಿಡ್ಗೆ ಪತ್ರ ಬರೆದೆ:<br /> <br /> `ಪ್ರೀತಿಯ ರಾಹುಲ್,<br /> ಭಾರತ ಕ್ರಿಕೆಟ್ ಇತಿಹಾಸ ಕಂಡ ಅತ್ಯಂತ ಉತ್ತಮ ಟೆಸ್ಟ್ ಬ್ಯಾಟ್ಸ್ಮನ್. ಸ್ಲಿಪ್ನಲ್ಲಿ ಶ್ರೇಷ್ಠ ಕ್ಷೇತ್ರ ರಕ್ಷಕ ಎನ್ನುವುದರಲ್ಲಿಯಂತೂ ಅನುಮಾನವೇ ಇಲ್ಲ. ಸ್ಲಿಪ್ನಲ್ಲಿ ನಿಮ್ಮಂತೆ ಫೀಲ್ಡಿಂಗ್ ಮಾಡುವವರನ್ನು ದೇಶವು ಯಾವುದೇ ಪ್ರಕಾರದ ಕ್ರಿಕೆಟ್ನಲ್ಲಿಯೂ ಕಂಡಿಲ್ಲ. ಆದ್ದರಿಂದ ನೀವು ಅಲ್ಲಿಯೇ ಕ್ಷೇತ್ರ ರಕ್ಷಣೆ ಮಾಡಬೇಕು.</p>.<p>ಬೌಲರ್ಗಳಿಗೆ ಸಲಹೆ ನೀಡಲು ಅನುಕೂಲ ಆಗಲೆಂದು ನಿಮ್ಮ ಸ್ಥಾನ ಬದಲಿಸಿಕೊಂಡಿರಬಹುದು. ಆದರೆ ತಂಡದ ಹಿತಕ್ಕಾಗಿ ನಿಮಗೆ ಸ್ಲಿಪ್ ಒಳ್ಳೆಯದು. ನಿಮ್ಮಷ್ಟು ಚುರುಕಾಗಿ ಪ್ರತಿಕ್ರಿಯಿಸಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಆರಂಭದ ಕೆಲವು ಓವರುಗಳಲ್ಲಿ ಕ್ಯಾಚ್ ಪಡೆಯುವಲ್ಲಿ ನಿಮ್ಮ ಸ್ಥಾನದಲ್ಲಿ ನಿಂತವರು ವಿಫಲರಾಗುತ್ತಿದ್ದಾರೆ~<br /> <br /> ಇದಿಷ್ಟು ಅದರಲ್ಲಿನ ವಿಷಯ. ಎರಡು ಮೂರು ದಿನಗಳ ನಂತರ ಉತ್ತರ ಬಂತು. ಆದರೆ ಅದು ನನ್ನ ಕೋರಿಕೆ ಹಾಗೂ ಸಲಹೆಗಾಗಿ ನೀಡಿದ್ದ ಪ್ರತಿಕ್ರಿಯೆ ಅಲ್ಲ.</p>.<p>ಬದಲಿಗೆ ಕೆಲವು ದಿನಗಳ ಹಿಂದಷ್ಟೇ ಪ್ರಕಟವಾಗಿದ್ದ ನನ್ನ ಹೊಸ ಪುಸ್ತಕದ ಕುರಿತು. `ಭಾರತ ಕ್ರಿಕೆಟ್ ತಂಡದ ನಾಯಕನ ಬಗ್ಗೆ ನಿಮ್ಮ ವಿಶ್ಲೇಷಣೆ ಸರಿ. ನನಗೆ ಅನಿಸುತ್ತದೆ ನಮ್ಮ ದೇಶದ ಇತಿಹಾಸ ಗಾಂಧಿವರೆಗೆ ಬಂದು ನಿಂತುಬಿಡುತ್ತದೆ. ಆನಂತರದ 60 ವರ್ಷಗಳಲ್ಲಿ ಅದೆಷ್ಟೆಲ್ಲಾ ನಡೆದಿದೆ. ನಾನು 180 ಪುಟಗಳನ್ನು ಸರಾಗವಾಗಿ ಓದಿಕೊಂಡು ಸಾಗಿದೆ. ಆ ಕುರಿತು ಹಾಗೂ ಅದಕ್ಕಿಂತ ಹೆಚ್ಚಿನದನ್ನು ಮಾತನಾಡಲು ಇಷ್ಟಪಡುತ್ತೇನೆ~ ಎಂದು ಬರೆದ ಉತ್ತರ ನನ್ನಮುಂದೆ ಇತ್ತು.<br /> <br /> ನನ್ನ ಇ-ಮೇಲ್ ಸಂದೇಶ ಹಾಗೂ ಅದಕ್ಕೆ ಸಿಕ್ಕ ಪ್ರತಿಕ್ರಿಯೆಯನ್ನು ಕ್ರಿಕೆಟ್ ಭಾಷೆಯಲ್ಲಿ ಹೇಳುವುದಾದರೆ ಮಧ್ಯಮ ವೇಗಿಯ ಬೌನ್ಸರ್ ಅನ್ನು ಮುಂಗೈ ತಂತ್ರಗಾರಿಕೆಯಿಂದ ಫ್ಲಿಕ್ ಮಾಡಿ ಬೌಂಡರಿಗೆ ಅಟ್ಟಿದ ಹಾಗೆ. ಶುದ್ಧ ಸಭ್ಯತೆಯೊಂದಿಗೆ ನೀಡಿದ ಮಾತಿನ ಪೆಟ್ಟು. <br /> <br /> `ಕ್ರಿಕೆಟ್ ತಂತ್ರದ ಬಗ್ಗೆ ಮಾತಾಡದೇ ತೆಪ್ಪಗೆ ಇತಿಹಾಸ ಪುಸ್ತಕ ಬರೆಯುವತ್ತ ಗಮನ ಕೊಡು~ ಎಂದ ಹಾಗಿತ್ತು. ಹೌದು; ನಾನೀಗ ಅದನ್ನೇ ಮಾಡಬೇಕು.<br /> (ನಿಮ್ಮ ಅನಿಸಿಕೆ ತಿಳಿಸಿ: <a href="mailto:editpagefeedback@prajavani.co.in">editpagefeedback@prajavani.co.in</a> )</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>