<p>ಪ್ರೆಸಿಲ್ಲಾಗೆ ಅಂದು ತುಂಬ ಕೆಲಸ, ಬಿಡುವೇ ಇಲ್ಲ. ಆಕೆ ನಗರದ ಅತ್ಯಂತ ಪ್ರತಿಷ್ಠಿತವಾದ ಶಾಲೆಯ ಪ್ರಿನ್ಸಿಪಾಲ್. ಪಕ್ಕದಲ್ಲಿದ್ದ ಫೋನ್ ಬರ್ ಎಂದು ಸದ್ದು ಮಾಡಿತು. ಇದೊಂದು ಶನಿ ಎಂದುಕೊಂಡು ಮುಖ ಗಂಟಿಕ್ಕಿ ಫೋನ್ ತೆಗೆದುಕೊಂಡರು. ಆ ಕಡೆಯಿಂದ ಪ್ರೆಸಿಲ್ಲಾರ ಸೆಕ್ರೆಟರಿ ಮಾತನಾಡುತ್ತಿದ್ದಳು, `ಮ್ಯೋಡಂ, ದಯವಿಟ್ಟು ಕ್ಷಮಿಸಿ, ನೀವು ಯಾವ ಪೋನ್ನ್ನೂ ಕೊಡಬೇಡ ಎಂದು ಹೇಳಿದ್ದಿರಿ. <br /> <br /> ಆದರೆ ಮ್ಯೋಡಂ ಮೇರಿ ನಿಮ್ಮ ಹತ್ತಿರ ಮಾತನಾಡಬೇಕಂತೆ, ಕನೆಕ್ಷನ್ ಕೊಡಲೇ?~ ಅದನ್ನು ಕೇಳಿದೊಡನೆ ಪ್ರೆಸಿಲ್ಲಾರ ಮುಖದ ನೆರಿಗೆಗಳು ಕರಗಿದವು. ಮಂದಹಾಸ ತೇಲಿತು. `ಆಯ್ತು ಕನೆಕ್ಷನ್ ಕೊಡು~ ಎಂದರು. <br /> <br /> ಆ ಕಡೆಯಿಂದ ಜೋರಾದ ನಗೆಯ ಅಲೆಗಳು ತೇಲಿಬಂದವು, `ಯಾಕೆ ಪ್ರೆಸಿಲ್ಲಾ, ಕೆಲಸದ ಸುನಾಮಿಯಲ್ಲಿ ಕೊಚ್ಚಿಕೊಂಡು ಹೋಗಿ ಬಿಟ್ಟೆಯಾ?~ ಎಂದರು ಮೇರಿ. `ಹೌದು ಮ್ಯೋಡಂ ನಿಮಗೇ ಗೊತ್ತಲ್ಲ, ಎಷ್ಟು ಮಾಡಿದರೂ ಈ ಕೆಲಸ ಮುಗಿಯುವುದೇ ಇಲ್ಲ~ ಎಂದು ಮುಗುಳ್ನಕ್ಕರು ಪ್ರೆಸಿಲ್ಲಾ. `ಹಾಗಲ್ಲ ಪ್ರೆಸಿಲ್ಲಾ, ಕೆಲಸ ನಿನ್ನನ್ನು ನಿಗ್ರಹಿಸಬಾರದು, ನೀನು ಕೆಲಸವನ್ನು ನಿಗ್ರಹಿಸಬೇಕು. <br /> <br /> ಆಗ ನಿನಗೆ ಕೆಲಸ ಭಾರವಾಗುವುದಿಲ್ಲ~ ಎಂದು ಮತ್ತೆ ನಕ್ಕರು ಮೇರಿ. `ನಿಮ್ಮಿಂದ ಕಲಿಯುವುದು ತುಂಬಾ ಇದೆ ಮ್ಯೋಡಂ~ ಎಂದರು ಪ್ರೆಸಿಲ್ಲಾ. `ಪ್ರೆಸಿಲ್ಲಾ, ನಾನು ಫೋನ್ ಮಾಡಿದ್ದು ಯಾಕೆ ಗೊತ್ತೇ? ಇಂದು ಸಂಜೆ ನೀನು ನಮ್ಮ ಮನೆಗೆ ಬಾ. ಬೆಳಿಗ್ಗೆ ನಾನು ವೈದ್ಯರ ಕಡೆಗೆ ಹೋಗಿದ್ದೆ.<br /> <br /> ಆತ ಕಣ್ಣು ಪರೀಕ್ಷೆ ಮಾಡಿ ಎಡಗಣ್ಣಿನ ಶಕ್ತಿ ಪ್ರತಿಶತ ಹದಿನೈದು ಮತ್ತು ಬಲಗಣ್ಣಿನ ಶಕ್ತಿ ಪ್ರತಿಶತ ಇಪ್ಪತ್ತೈದರಷ್ಟು ಕಡಿಮೆಯಾಗಿದೆಯಂತೆ. ಇನ್ನು ಕೆಲವೇ ವರ್ಷಗಳಲ್ಲಿ ಕಣ್ಣು ಪೂರ್ತಿ ಕಾಣದೇ ಹೋಗಬಹುದಂತೆ. <br /> <br /> ಅದಕ್ಕೇ ಕಣ್ಣು ಪೂರ್ತಿ ಕುರುಡಾಗುವುದಕ್ಕಿಂತ ಮೊದಲೇ ಮನಃಪೂರ್ತಿ, ತೃಪ್ತಿಯಾಗುವಷ್ಟು ಓದಿಬಿಡಬೇಕು. ಸಂಜೆಗೆ ಬಾ ಪುಸ್ತಕದ ಅಂಗಡಿಗೆ ಹೋಗಿ ಒಂದಷ್ಟು ಪುಸ್ತಕ ಖರೀದಿಸೋಣ~ ಎಂದರು ಮೇರಿ. `ಆಯ್ತು ಮ್ಯೋಡಂ. ಐದೂವರೆಗೆ ಬರುತ್ತೇನೆ~ ಎಂದು ಫೋನಿಟ್ಟರು ಪ್ರೆಸಿಲ್ಲಾ.<br /> <br /> ಪ್ರೆಸಿಲ್ಲಾ ಕ್ಷಣಕಾಲ ಯೋಚಿಸಿದರು. ಮೇರಿ ಮೆನೆಜಸ್ಗೆ ಈಗ ಎಂಬತ್ತೆಂಟು ವರ್ಷ! ಆರೋಗ್ಯ ಅಷ್ಟು ಚೆನ್ನಾಗಿಲ್ಲ. ಅವರು ಮೊದಲು ಅನೇಕ ವರ್ಷಗಳ ಕಾಲ ಈ ಶಾಲೆಯ ಪ್ರಿನ್ಸಿಪಾಲರಾಗಿ ಬಹುದೊಡ್ಡ ಹೆಸರು ಮಾಡಿದ್ದವರು.<br /> <br /> ಇಂದಿಗೂ ಅವರ ಬಗ್ಗೆ ಎಲ್ಲರಿಗೂ ಗೌರವ. ಪ್ರೆಸಿಲ್ಲಾ ಆಕೆಯ ವಿದ್ಯಾರ್ಥಿಯಾಗಿದ್ದವರು. ಆಕೆಯ ಜೀವನದ ಪ್ರತಿಯೊಂದು ಹೆಜ್ಜೆಯಲ್ಲಿ ಮೇರಿಯವರ ಮಾರ್ಗದರ್ಶನವಿರುತ್ತಿತ್ತು. <br /> <br /> ಸಂಜೆ ಮೇರಿ ಮ್ಯೋಡಂ, ಮನೆಯ ಮುಂದೆ ಸಿದ್ಧರಾಗಿಯೇ ನಿಂತಿದ್ದರು. ಚೆಂದವಾದ ಬಟ್ಟೆ ತೊಟ್ಟು, ಮೇಕಪ್ ಮಾಡಿಕೊಂಡು ನಗುನಗುತ್ತಾ ನಿಂತಿದ್ದಾರೆ! ಈ ವಯಸ್ಸಿಗೆ ಅದೆಷ್ಟು ಸಂಭ್ರಮ! ಆಕೆಯನ್ನು ಗಮನಿಸಿದರೆ ತಾನೇ ಪೀಚು ಎನ್ನಿಸಿತು ಪ್ರೆಸಿಲ್ಲಾರಿಗೆ. ಇಬ್ಬರೂ ಕಾರಿನಲ್ಲಿ ಕುಳಿತು ಪುಸ್ತಕದ ಅಂಗಡಿಗೆ ಹೋದರು.<br /> <br /> ಅಂಗಡಿಯ ಮಾಲೀಕ ಕೂಡ ಇವರನ್ನು ಗೌರವದಿಂದ ಕರೆದು ಕುಳ್ಳಿರಿಸಿ ಸತ್ಕರಿಸಿದ. ಮೇರಿ ಒಂದು ಹೊರೆ ಪುಸ್ತಕಗಳನ್ನು ಕೊಂಡರು, `ಇವನ್ನೆಲ್ಲ ಬೇಗ ಓದಿ ಬಿಡಬೇಕು~ ಎಂದರು. ಆಗ ಪ್ರೆಸಿಲ್ಲಾ ಆಶ್ಚರ್ಯದಿಂದ ಕೇಳಿದರು. `ಮ್ಯೋಡಂ, ತಪ್ಪು ತಿಳಿಯಬೇಡಿ. <br /> <br /> ನಾನು ತಮಗಿಂತ ಮೂವತ್ತೈದು ವರ್ಷ ಚಿಕ್ಕವಳು. ನನಗೆ ಸುಸ್ತಾಗುತ್ತಿದೆ, ಸಾಕು ಎನ್ನಿಸುತ್ತದೆ, ಓದಲಾಗುವುದಿಲ್ಲ, ನಿಮ್ಮ ಹಾಗೆ ಮನಬಿಚ್ಚಿ ನಗಲಾರೆ, ಆತಂಕವಾಗುತ್ತದೆ. ಈ ಇಳಿವಯಸ್ಸಿನಲ್ಲೂ ಹೀಗಿರಲು ನಿಮಗೆ ಹೇಗೆ ಸಾಧ್ಯವಾಯಿತು?~<br /> <br /> ಮೇರಿ ಗಂಭೀರರಾಗಿ, `ಪ್ರೆಸಿಲ್ಲಾ, ಮುಪ್ಪು ಮತ್ತು ಸಾವು ನಾವು ಅಪೇಕ್ಷಿಸಿದ್ದಲ್ಲ. ಅವು ಬೇಡವೆಂದರೂ ಬರುತ್ತವೆ. ಬಂದೇ ಬರುವುದನ್ನು ತಡೆಯಲು ಸಾಧ್ಯವೇ? ತಪ್ಪದೇ ಬರುವ ಸಾವಿಗೆ ಕಾಯುತ್ತ ಖಾಲಿ ಕೂಡ್ರುವುದು ಏಕೆ? ಅದು ಯಾವಾಗ ಬರುತ್ತದೋ ಗೊತ್ತಿಲ್ಲದ್ದರಿಂದ ನಾನು ಆದಷ್ಟು ಬೇಗ ಬೇಗ ಕಲಿಯಬೇಕು, ಪಕ್ವವಾಗಬೇಕು. <br /> <br /> ಕಾಯಿ ಹಣ್ಣಾಗದೇ ಉದುರಿದರೆ ವಿಫಲವಾದಂತೆ. ಉದುರುವುದಂತೂ ಖಚಿತವೆಂದಾಗ ಹಣ್ಣಾಗಿಯೇ ಉದುರಿದರೆ ಮತ್ತೊಬ್ಬರಿಗೆ ಪ್ರಯೋಜನವಾದೀತು.<br /> <br /> ವಯಸ್ಸಾದಂತೆ ನಮಗೆ ಉಳಿದ ಸಮಯ ಕಡಿಮೆಯಾಗುತ್ತದೆ. ಅದಕ್ಕೇ ಹೆಚ್ಚು ಕೆಲಸ ಮಾಡಬೇಕು, ಸುಸ್ತಾಗುವುದಕ್ಕೆ ಬೇಜಾರಾಗುವುದಕ್ಕೆ ಸಮಯವೆಲ್ಲಿದೆ? ಬೇಗ ನಡೆ, ಮನೆಗೆ ಹೋಗಿ ಯಾವಾಗ ಪುಸ್ತಕ ಓದಲು ಶುರು ಮಾಡಿಯೇನು ಎಂಬ ಉತ್ಸಾಹ ಹೆಚ್ಚಾಗುತ್ತದೆ~ ಎಂದರು. <br /> <br /> ಮೇರಿ ಮೆನೆಜಿಸ್ರ ಜೀವನ ನಮಗೊಂದು ಪಾಠ. ವಯಸ್ಸಾದಂತೆ `ಉಶ್~ ಎಂದು ಕುಳಿತುಕೊಳ್ಳುವುದಕ್ಕಿಂತ ಬೇಗ ಬೇಗ ಹೆಚ್ಚು ಹೆಚ್ಚು ಕೆಲಸ ಮಾಡಿ, ಸದಾ ಚಟುವಟಿಕೆಯಿಂದಿದ್ದು ಜೀವನವನ್ನು ಪಕ್ವಮಾಡಿಕೊಳ್ಳಬೇಕು. ಹಣ್ಣಾಗದೇ ಉದುರಿದ ಕಿರುಗಾಯಿಯಿಂದ ಪ್ರಪಂಚಕ್ಕೆ ಏನು ಪ್ರಯೋಜನ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರೆಸಿಲ್ಲಾಗೆ ಅಂದು ತುಂಬ ಕೆಲಸ, ಬಿಡುವೇ ಇಲ್ಲ. ಆಕೆ ನಗರದ ಅತ್ಯಂತ ಪ್ರತಿಷ್ಠಿತವಾದ ಶಾಲೆಯ ಪ್ರಿನ್ಸಿಪಾಲ್. ಪಕ್ಕದಲ್ಲಿದ್ದ ಫೋನ್ ಬರ್ ಎಂದು ಸದ್ದು ಮಾಡಿತು. ಇದೊಂದು ಶನಿ ಎಂದುಕೊಂಡು ಮುಖ ಗಂಟಿಕ್ಕಿ ಫೋನ್ ತೆಗೆದುಕೊಂಡರು. ಆ ಕಡೆಯಿಂದ ಪ್ರೆಸಿಲ್ಲಾರ ಸೆಕ್ರೆಟರಿ ಮಾತನಾಡುತ್ತಿದ್ದಳು, `ಮ್ಯೋಡಂ, ದಯವಿಟ್ಟು ಕ್ಷಮಿಸಿ, ನೀವು ಯಾವ ಪೋನ್ನ್ನೂ ಕೊಡಬೇಡ ಎಂದು ಹೇಳಿದ್ದಿರಿ. <br /> <br /> ಆದರೆ ಮ್ಯೋಡಂ ಮೇರಿ ನಿಮ್ಮ ಹತ್ತಿರ ಮಾತನಾಡಬೇಕಂತೆ, ಕನೆಕ್ಷನ್ ಕೊಡಲೇ?~ ಅದನ್ನು ಕೇಳಿದೊಡನೆ ಪ್ರೆಸಿಲ್ಲಾರ ಮುಖದ ನೆರಿಗೆಗಳು ಕರಗಿದವು. ಮಂದಹಾಸ ತೇಲಿತು. `ಆಯ್ತು ಕನೆಕ್ಷನ್ ಕೊಡು~ ಎಂದರು. <br /> <br /> ಆ ಕಡೆಯಿಂದ ಜೋರಾದ ನಗೆಯ ಅಲೆಗಳು ತೇಲಿಬಂದವು, `ಯಾಕೆ ಪ್ರೆಸಿಲ್ಲಾ, ಕೆಲಸದ ಸುನಾಮಿಯಲ್ಲಿ ಕೊಚ್ಚಿಕೊಂಡು ಹೋಗಿ ಬಿಟ್ಟೆಯಾ?~ ಎಂದರು ಮೇರಿ. `ಹೌದು ಮ್ಯೋಡಂ ನಿಮಗೇ ಗೊತ್ತಲ್ಲ, ಎಷ್ಟು ಮಾಡಿದರೂ ಈ ಕೆಲಸ ಮುಗಿಯುವುದೇ ಇಲ್ಲ~ ಎಂದು ಮುಗುಳ್ನಕ್ಕರು ಪ್ರೆಸಿಲ್ಲಾ. `ಹಾಗಲ್ಲ ಪ್ರೆಸಿಲ್ಲಾ, ಕೆಲಸ ನಿನ್ನನ್ನು ನಿಗ್ರಹಿಸಬಾರದು, ನೀನು ಕೆಲಸವನ್ನು ನಿಗ್ರಹಿಸಬೇಕು. <br /> <br /> ಆಗ ನಿನಗೆ ಕೆಲಸ ಭಾರವಾಗುವುದಿಲ್ಲ~ ಎಂದು ಮತ್ತೆ ನಕ್ಕರು ಮೇರಿ. `ನಿಮ್ಮಿಂದ ಕಲಿಯುವುದು ತುಂಬಾ ಇದೆ ಮ್ಯೋಡಂ~ ಎಂದರು ಪ್ರೆಸಿಲ್ಲಾ. `ಪ್ರೆಸಿಲ್ಲಾ, ನಾನು ಫೋನ್ ಮಾಡಿದ್ದು ಯಾಕೆ ಗೊತ್ತೇ? ಇಂದು ಸಂಜೆ ನೀನು ನಮ್ಮ ಮನೆಗೆ ಬಾ. ಬೆಳಿಗ್ಗೆ ನಾನು ವೈದ್ಯರ ಕಡೆಗೆ ಹೋಗಿದ್ದೆ.<br /> <br /> ಆತ ಕಣ್ಣು ಪರೀಕ್ಷೆ ಮಾಡಿ ಎಡಗಣ್ಣಿನ ಶಕ್ತಿ ಪ್ರತಿಶತ ಹದಿನೈದು ಮತ್ತು ಬಲಗಣ್ಣಿನ ಶಕ್ತಿ ಪ್ರತಿಶತ ಇಪ್ಪತ್ತೈದರಷ್ಟು ಕಡಿಮೆಯಾಗಿದೆಯಂತೆ. ಇನ್ನು ಕೆಲವೇ ವರ್ಷಗಳಲ್ಲಿ ಕಣ್ಣು ಪೂರ್ತಿ ಕಾಣದೇ ಹೋಗಬಹುದಂತೆ. <br /> <br /> ಅದಕ್ಕೇ ಕಣ್ಣು ಪೂರ್ತಿ ಕುರುಡಾಗುವುದಕ್ಕಿಂತ ಮೊದಲೇ ಮನಃಪೂರ್ತಿ, ತೃಪ್ತಿಯಾಗುವಷ್ಟು ಓದಿಬಿಡಬೇಕು. ಸಂಜೆಗೆ ಬಾ ಪುಸ್ತಕದ ಅಂಗಡಿಗೆ ಹೋಗಿ ಒಂದಷ್ಟು ಪುಸ್ತಕ ಖರೀದಿಸೋಣ~ ಎಂದರು ಮೇರಿ. `ಆಯ್ತು ಮ್ಯೋಡಂ. ಐದೂವರೆಗೆ ಬರುತ್ತೇನೆ~ ಎಂದು ಫೋನಿಟ್ಟರು ಪ್ರೆಸಿಲ್ಲಾ.<br /> <br /> ಪ್ರೆಸಿಲ್ಲಾ ಕ್ಷಣಕಾಲ ಯೋಚಿಸಿದರು. ಮೇರಿ ಮೆನೆಜಸ್ಗೆ ಈಗ ಎಂಬತ್ತೆಂಟು ವರ್ಷ! ಆರೋಗ್ಯ ಅಷ್ಟು ಚೆನ್ನಾಗಿಲ್ಲ. ಅವರು ಮೊದಲು ಅನೇಕ ವರ್ಷಗಳ ಕಾಲ ಈ ಶಾಲೆಯ ಪ್ರಿನ್ಸಿಪಾಲರಾಗಿ ಬಹುದೊಡ್ಡ ಹೆಸರು ಮಾಡಿದ್ದವರು.<br /> <br /> ಇಂದಿಗೂ ಅವರ ಬಗ್ಗೆ ಎಲ್ಲರಿಗೂ ಗೌರವ. ಪ್ರೆಸಿಲ್ಲಾ ಆಕೆಯ ವಿದ್ಯಾರ್ಥಿಯಾಗಿದ್ದವರು. ಆಕೆಯ ಜೀವನದ ಪ್ರತಿಯೊಂದು ಹೆಜ್ಜೆಯಲ್ಲಿ ಮೇರಿಯವರ ಮಾರ್ಗದರ್ಶನವಿರುತ್ತಿತ್ತು. <br /> <br /> ಸಂಜೆ ಮೇರಿ ಮ್ಯೋಡಂ, ಮನೆಯ ಮುಂದೆ ಸಿದ್ಧರಾಗಿಯೇ ನಿಂತಿದ್ದರು. ಚೆಂದವಾದ ಬಟ್ಟೆ ತೊಟ್ಟು, ಮೇಕಪ್ ಮಾಡಿಕೊಂಡು ನಗುನಗುತ್ತಾ ನಿಂತಿದ್ದಾರೆ! ಈ ವಯಸ್ಸಿಗೆ ಅದೆಷ್ಟು ಸಂಭ್ರಮ! ಆಕೆಯನ್ನು ಗಮನಿಸಿದರೆ ತಾನೇ ಪೀಚು ಎನ್ನಿಸಿತು ಪ್ರೆಸಿಲ್ಲಾರಿಗೆ. ಇಬ್ಬರೂ ಕಾರಿನಲ್ಲಿ ಕುಳಿತು ಪುಸ್ತಕದ ಅಂಗಡಿಗೆ ಹೋದರು.<br /> <br /> ಅಂಗಡಿಯ ಮಾಲೀಕ ಕೂಡ ಇವರನ್ನು ಗೌರವದಿಂದ ಕರೆದು ಕುಳ್ಳಿರಿಸಿ ಸತ್ಕರಿಸಿದ. ಮೇರಿ ಒಂದು ಹೊರೆ ಪುಸ್ತಕಗಳನ್ನು ಕೊಂಡರು, `ಇವನ್ನೆಲ್ಲ ಬೇಗ ಓದಿ ಬಿಡಬೇಕು~ ಎಂದರು. ಆಗ ಪ್ರೆಸಿಲ್ಲಾ ಆಶ್ಚರ್ಯದಿಂದ ಕೇಳಿದರು. `ಮ್ಯೋಡಂ, ತಪ್ಪು ತಿಳಿಯಬೇಡಿ. <br /> <br /> ನಾನು ತಮಗಿಂತ ಮೂವತ್ತೈದು ವರ್ಷ ಚಿಕ್ಕವಳು. ನನಗೆ ಸುಸ್ತಾಗುತ್ತಿದೆ, ಸಾಕು ಎನ್ನಿಸುತ್ತದೆ, ಓದಲಾಗುವುದಿಲ್ಲ, ನಿಮ್ಮ ಹಾಗೆ ಮನಬಿಚ್ಚಿ ನಗಲಾರೆ, ಆತಂಕವಾಗುತ್ತದೆ. ಈ ಇಳಿವಯಸ್ಸಿನಲ್ಲೂ ಹೀಗಿರಲು ನಿಮಗೆ ಹೇಗೆ ಸಾಧ್ಯವಾಯಿತು?~<br /> <br /> ಮೇರಿ ಗಂಭೀರರಾಗಿ, `ಪ್ರೆಸಿಲ್ಲಾ, ಮುಪ್ಪು ಮತ್ತು ಸಾವು ನಾವು ಅಪೇಕ್ಷಿಸಿದ್ದಲ್ಲ. ಅವು ಬೇಡವೆಂದರೂ ಬರುತ್ತವೆ. ಬಂದೇ ಬರುವುದನ್ನು ತಡೆಯಲು ಸಾಧ್ಯವೇ? ತಪ್ಪದೇ ಬರುವ ಸಾವಿಗೆ ಕಾಯುತ್ತ ಖಾಲಿ ಕೂಡ್ರುವುದು ಏಕೆ? ಅದು ಯಾವಾಗ ಬರುತ್ತದೋ ಗೊತ್ತಿಲ್ಲದ್ದರಿಂದ ನಾನು ಆದಷ್ಟು ಬೇಗ ಬೇಗ ಕಲಿಯಬೇಕು, ಪಕ್ವವಾಗಬೇಕು. <br /> <br /> ಕಾಯಿ ಹಣ್ಣಾಗದೇ ಉದುರಿದರೆ ವಿಫಲವಾದಂತೆ. ಉದುರುವುದಂತೂ ಖಚಿತವೆಂದಾಗ ಹಣ್ಣಾಗಿಯೇ ಉದುರಿದರೆ ಮತ್ತೊಬ್ಬರಿಗೆ ಪ್ರಯೋಜನವಾದೀತು.<br /> <br /> ವಯಸ್ಸಾದಂತೆ ನಮಗೆ ಉಳಿದ ಸಮಯ ಕಡಿಮೆಯಾಗುತ್ತದೆ. ಅದಕ್ಕೇ ಹೆಚ್ಚು ಕೆಲಸ ಮಾಡಬೇಕು, ಸುಸ್ತಾಗುವುದಕ್ಕೆ ಬೇಜಾರಾಗುವುದಕ್ಕೆ ಸಮಯವೆಲ್ಲಿದೆ? ಬೇಗ ನಡೆ, ಮನೆಗೆ ಹೋಗಿ ಯಾವಾಗ ಪುಸ್ತಕ ಓದಲು ಶುರು ಮಾಡಿಯೇನು ಎಂಬ ಉತ್ಸಾಹ ಹೆಚ್ಚಾಗುತ್ತದೆ~ ಎಂದರು. <br /> <br /> ಮೇರಿ ಮೆನೆಜಿಸ್ರ ಜೀವನ ನಮಗೊಂದು ಪಾಠ. ವಯಸ್ಸಾದಂತೆ `ಉಶ್~ ಎಂದು ಕುಳಿತುಕೊಳ್ಳುವುದಕ್ಕಿಂತ ಬೇಗ ಬೇಗ ಹೆಚ್ಚು ಹೆಚ್ಚು ಕೆಲಸ ಮಾಡಿ, ಸದಾ ಚಟುವಟಿಕೆಯಿಂದಿದ್ದು ಜೀವನವನ್ನು ಪಕ್ವಮಾಡಿಕೊಳ್ಳಬೇಕು. ಹಣ್ಣಾಗದೇ ಉದುರಿದ ಕಿರುಗಾಯಿಯಿಂದ ಪ್ರಪಂಚಕ್ಕೆ ಏನು ಪ್ರಯೋಜನ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>