ಬೆಂಗಳೂರು, ಜುಲೈ 21– ರಾಜ್ಯದಲ್ಲಿ ನೆರೆ ಹಾವಳಿಯಿಂದ ಕೋಟ್ಯಂತರ ರೂಪಾಯಿಗಳ ನಷ್ಟ ಸಂಭವಿಸಿರುವ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳಿಗಾಗಿ ನೈಸರ್ಗಿಕ ವಿಕೋಪ ಸಂಬಂಧದ ನಿಗದಿತ ನೆರವಿನ ಜತೆಗೆ ಇತರ ಮೂಲಗಳಿಂದಲೂ ಅಧಿಕ ಆರ್ಥಿಕ ಸಹಾಯ ನೀಡುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸಲಿದೆ. ಈ ಮಧ್ಯೆ ರಾಜ್ಯ ಸರ್ಕಾರ 93.46 ಕೋಟಿ ರೂಪಾಯಿ ತಾತ್ಕಾಲಿಕ ನೆರವು ಕೋರಿ ಕೇಂದ್ರಕ್ಕೆ ಕೋರಿಕೆ ಸಲ್ಲಿಸಿದೆ.