<p><strong>ಬಿಹಾರ: ಜನತಾದಳ ಒಕ್ಕೂಟಕ್ಕೆ ಬಹುಮತ<br />ಪಟ್ನಾ, ಏ. 2 (ಪಿಟಿಐ)–</strong> ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜನತಾದಳ ಮತ್ತು ಅದರ ಮಿತ್ರಪಕ್ಷಗಳು ಈಗಾಗಲೇ 172 ಸ್ಥಾನ ಪಡೆದು ನಿಚ್ಚಳ ಬಹುಮತ ಗಳಿಸಿವೆ.</p>.<p>ಜನತಾದಳ ಶಾಸಕಾಂಗ ಪಕ್ಷದ (ಜೆಡಿಎಲ್ಪಿ) ಹೊಸ ನಾಯಕರಾಗಿ ನಾಳೆ ಮರು ಆಯ್ಕೆಯಾಗುವುದರೊಂದಿಗೆ ಲಲ್ಲೂ ಪ್ರಸಾದ್ ಯಾದವ್ ಅವರು ಎರಡನೇ ಬಾರಿಗೆ ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ.</p>.<p><strong>ರಜೆ ದಿನ ಕೆಲಸ– ಹೆಚ್ಚು ವೇತನ<br />ಬೆಂಗಳೂರು, ಏ. 2–</strong> ಸಾರ್ವತ್ರಿಕ ರಜಾ ದಿನಗಳಲ್ಲಿ ಕೆಲಸ ಮಾಡುವ ಪೊಲೀಸರಿಗೆ ನೀಡುತ್ತಿರುವ ವಾರ್ಷಿಕ 15 ದಿನಗಳ ಸಂಬಳವನ್ನು 30 ದಿನಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಪ್ರಕಟಿಸಿದರು.</p>.<p><strong>ಕಂಪ್ಯೂಟರ್ಪ್ರಿಯ ನರಸಿಂಹ ರಾವ್<br />ನವದೆಹಲಿ, ಏ. 2 (ಪಿಟಿಐ)–</strong> ಪ್ರಧಾನಿ ನರಸಿಂಹರಾವ್ ಅವರ ಉಡುಗೆ ತೊಡುಗೆಯಿಂದ ಅವರೊಬ್ಬ ಹಳೆ ಕಾಲದ ಮನುಷ್ಯ ಎಂದು ಯಾರಾದರೂ ತಿಳಿದಿದ್ದರೆ ಖಂಡಿತವಾಗಿಯೂ ಅದು ಅವರ ಭ್ರಮೆ!</p>.<p>ಪಂಚೆ, ಧೋತಿ, ಅಂಗವಸ್ತ್ರ ಮತ್ತು ಆಧುನಿಕತೆಯ ಸಂಕೇತವಾದ ಕಂಪ್ಯೂಟರ್ ಸಮ್ಮಿಲನವನ್ನು ಸಾರುವ ಸಂಕೇತ– ಪಿ.ವಿ.ನರಸಿಂಹ ರಾವ್. ಅವರು ತಮ್ಮ ಪುಟ್ಟ ಕಂಪ್ಯೂಟರ್ ಸಹಾಯದಿಂದ 1980ರಿಂದಲೂ ಪಕ್ಷದ ಚುನಾವಣಾ ಪ್ರಣಾಳಿಕೆ ಸಿದ್ಧಗೊಳಿಸುತ್ತಿದ್ದಾರೆ ಎಂಬ ವಿಷಯ ಅನೇಕರಿಗೆ ತಿಳಿದಿರಲಿಕ್ಕಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಹಾರ: ಜನತಾದಳ ಒಕ್ಕೂಟಕ್ಕೆ ಬಹುಮತ<br />ಪಟ್ನಾ, ಏ. 2 (ಪಿಟಿಐ)–</strong> ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜನತಾದಳ ಮತ್ತು ಅದರ ಮಿತ್ರಪಕ್ಷಗಳು ಈಗಾಗಲೇ 172 ಸ್ಥಾನ ಪಡೆದು ನಿಚ್ಚಳ ಬಹುಮತ ಗಳಿಸಿವೆ.</p>.<p>ಜನತಾದಳ ಶಾಸಕಾಂಗ ಪಕ್ಷದ (ಜೆಡಿಎಲ್ಪಿ) ಹೊಸ ನಾಯಕರಾಗಿ ನಾಳೆ ಮರು ಆಯ್ಕೆಯಾಗುವುದರೊಂದಿಗೆ ಲಲ್ಲೂ ಪ್ರಸಾದ್ ಯಾದವ್ ಅವರು ಎರಡನೇ ಬಾರಿಗೆ ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ.</p>.<p><strong>ರಜೆ ದಿನ ಕೆಲಸ– ಹೆಚ್ಚು ವೇತನ<br />ಬೆಂಗಳೂರು, ಏ. 2–</strong> ಸಾರ್ವತ್ರಿಕ ರಜಾ ದಿನಗಳಲ್ಲಿ ಕೆಲಸ ಮಾಡುವ ಪೊಲೀಸರಿಗೆ ನೀಡುತ್ತಿರುವ ವಾರ್ಷಿಕ 15 ದಿನಗಳ ಸಂಬಳವನ್ನು 30 ದಿನಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಪ್ರಕಟಿಸಿದರು.</p>.<p><strong>ಕಂಪ್ಯೂಟರ್ಪ್ರಿಯ ನರಸಿಂಹ ರಾವ್<br />ನವದೆಹಲಿ, ಏ. 2 (ಪಿಟಿಐ)–</strong> ಪ್ರಧಾನಿ ನರಸಿಂಹರಾವ್ ಅವರ ಉಡುಗೆ ತೊಡುಗೆಯಿಂದ ಅವರೊಬ್ಬ ಹಳೆ ಕಾಲದ ಮನುಷ್ಯ ಎಂದು ಯಾರಾದರೂ ತಿಳಿದಿದ್ದರೆ ಖಂಡಿತವಾಗಿಯೂ ಅದು ಅವರ ಭ್ರಮೆ!</p>.<p>ಪಂಚೆ, ಧೋತಿ, ಅಂಗವಸ್ತ್ರ ಮತ್ತು ಆಧುನಿಕತೆಯ ಸಂಕೇತವಾದ ಕಂಪ್ಯೂಟರ್ ಸಮ್ಮಿಲನವನ್ನು ಸಾರುವ ಸಂಕೇತ– ಪಿ.ವಿ.ನರಸಿಂಹ ರಾವ್. ಅವರು ತಮ್ಮ ಪುಟ್ಟ ಕಂಪ್ಯೂಟರ್ ಸಹಾಯದಿಂದ 1980ರಿಂದಲೂ ಪಕ್ಷದ ಚುನಾವಣಾ ಪ್ರಣಾಳಿಕೆ ಸಿದ್ಧಗೊಳಿಸುತ್ತಿದ್ದಾರೆ ಎಂಬ ವಿಷಯ ಅನೇಕರಿಗೆ ತಿಳಿದಿರಲಿಕ್ಕಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>