ಭಿನ್ನಮತೀಯರ ಸವಾಲು ಎದುರಿಸಲು ರಾವ್ ಕ್ರಮ
ನವದೆಹಲಿ, ಏ. 13 (ಯುಎನ್ಐ)– ಕಾಂಗೈ ಅಧ್ಯಕ್ಷ ಹಾಗೂ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಏಪ್ರಿಲ್ 24ರಂದು ಸಂಸತ್ತಿನ ಬಜೆಟ್ ಅಧಿವೇಶನ ಪುನರಾರಂಭವಾಗುವ ಮೊದಲು, ತಮ್ಮ ನಾಯಕತ್ವಕ್ಕೆ ಸವಾಲು ಹಾಕುತ್ತಿರುವ ಭಿನ್ನಮತೀಯರ ಯತ್ನಗಳನ್ನು ವಿಫಲಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ.