ನವದೆಹಲಿ, ಮೇ 2– ಸಾಲ ವ್ಯವಸ್ಥೆ ಮತ್ತು ಸಾಲ ಮರುಪಾವತಿ ನೀತಿಯನ್ನು ದುರ್ಬಲಗೊಳಿಸುವ ಯಾವುದೇ ಕ್ರಮವನ್ನು ಸರ್ಕಾರ ಕೈಗೊಳ್ಳದು. ಈ ವ್ಯವಸ್ಥೆಯನ್ನು ಬದಿಗೊತ್ತಿ ಸಾಲ ಅಥವಾ ಬಡ್ಡಿ ಮನ್ನಾ ಮಾಡುವುದರಿಂದ ಕೃಷಿಕರ ಹಿತಕ್ಕೆ ಅಂತಿಮವಾಗಿ ಹಾನಿಯಾಗುವುದು ಎಂದು ಹಣಕಾಸು ಸಚಿವ ಡಾ.ಮನಮೋಹನ್ ಸಿಂಗ್ ಅವರು ಇಂದು ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದರು.