ಹುಬ್ಬಳ್ಳಿ, ಮೇ 4– ಇಲ್ಲಿಗೆ ಸಮೀಪದ ಕಲಘಟಗಿಯ ದೇವಿಕೊಪ್ಪದ ಜುಂಜನಬೈಲು ಬಳಿ ಮುಂಬೈಯಿಂದ ಹುಬ್ಬಳ್ಳಿ ಮೂಲಕವಾಗಿ ಮಂಗಳೂರಿಗೆ ಹೊರಟಿದ್ದ ಖಾಸಗಿ ಲಕ್ಷುರಿ ಬಸ್ಸು ಮತ್ತು ಆರು ಲಾರಿಗಳ ಮೇಲೆ ಬುಧವಾರ ರಾತ್ರಿ ಮಾರಕ ಆಯುಧಗಳೊಂದಿಗೆ ದಾಳಿ ನಡೆಸಿದ ದರೋಡೆಕೋರರು, ಕೇರಳದ ಒಬ್ಬ ಟ್ರಕ್ ಚಾಲಕನನ್ನು ಸ್ಥಳದಲ್ಲೇ ಕೊಂದು, ಸುಮಾರು 13ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿ, ಭಾರೀ ಮೊತ್ತದ ಚಿನ್ನಾಭರಣ, ನಗದು ಮತ್ತಿತರ ಸೊತ್ತುಗಳನ್ನು ಲೂಟಿ ಮಾಡಿದ್ದಾರೆ.