ಶತಾಬ್ದಿ: ಜಾಗತಿಕ ದರ್ಜೆ ಲಕ್ಷುರಿ ರೈಲು
ಹುಬ್ಬಳ್ಳಿ, ಜೂನ್ 11– ದೀರ್ಘ ಕಾಲದಿಂದ ನಿರೀಕ್ಷಿಸಲಾಗಿದ್ದ ಶತಾಬ್ದಿ ಎಕ್ಸ್ಪ್ರೆಸ್ ರೈಲುಗಾಡಿಗೆ ಹೊಸದಾಗಿಪರಿವರ್ತಿತವಾದ ಬ್ರಾಡ್ಗೇಜ್ ಮಾರ್ಗದಲ್ಲಿ ಹುಬ್ಬಳ್ಳಿ– ಬೆಂಗಳೂರುಮಧ್ಯೆ ಸಂಚರಿಸಲು ಮಾಜಿ ಮುಖ್ಯಮಂತ್ರಿ, ಹಿರಿಯ ಮುತ್ಸದ್ದಿ ಎಸ್. ನಿಜಲಿಂಗಪ್ಪ ಅವರು ಜೂನ್ 12ರಂದು ಹಸಿರುನಿಶಾನೆ ತೋರುವುದರೊಂದಿಗೆ ಕರ್ನಾಟಕದ ರಾಜಧಾನಿ ಮತ್ತು ಎರಡನೇ ರಾಜಧಾನಿ ಮಧ್ಯೆ ಜಾಗತಿಕ ದರ್ಜೆಯ ಲಕ್ಷುರಿ ರೈಲು ಸೇವೆಯ ಹೊಸ ಯುಗ ಆರಂಭವಾಗಲಿದೆ.