ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಶನಿವಾರ, 14-10-1995

Last Updated 13 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಷರೀಫ್ ಕೈ ತಪ್ಪಿದ ರೈಲ್ವೆ ಖಾತೆ

ನವದೆಹಲಿ, ಅ. 13– ಲಂಡನ್‌ನಲ್ಲಿ ಹೃದಯದ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ನಿನ್ನೆ ತಾನೆ ಬೆಂಗಳೂರಿನಿಂದ ಇಲ್ಲಿಗೆ ಆಗಮಿಸಿದ್ದ ಸಿ.ಕೆ. ಜಾಫರ್ ಷರೀಫ್ ಅವರಿಂದ ಇಂದು ರೈಲ್ವೆ ಖಾತೆಯನ್ನು ವಾಪಸ್ ಪಡೆಯಲಾಗಿದೆ. ಆದರೆ, ಖಾತೆರಹಿತ ಸಚಿವರಾಗಿ ಷರೀಫ್ ಮುಂದುವರಿಯುವರು.

ಇದರಿಂದಾಗಿ ಕೇಂದ್ರ ಸಚಿವ ಸಂಪುಟದಲ್ಲಿನ ಖಾತೆರಹಿತ ಸಚಿವರ ಸಂಖ್ಯೆ ಎರಡಕ್ಕೆ ಏರಿದೆ. ವಿದೇಶಾಂಗ ಸಚಿವರಾಗಿದ್ದ ದಿನೇಶ್ ಸಿಂಗ್ ಪಾರ್ಶ್ವವಾಯು ಪೀಡಿತರಾದ ಬಳಿಕ ಖಾತಾರಹಿತ ಸಚಿವರಾಗಿ ಮುಂದುವರಿದಿದ್ದಾರೆ.

ಚಿತ್ರರಂಗಕ್ಕೆ ಕೈಗಾರಿಕೆಯ ಸ್ಥಾನಮಾನ: ಶೀಘ್ರ ಆದೇಶ

ಬೆಂಗಳೂರು, ಅ. 13– ಕರ್ನಾಟಕ ಚಿತ್ರೋದ್ಯಮವನ್ನು ಕೈಗಾರಿಕೆ ಎಂದು ಘೋಷಿಸುವ ಆಜ್ಞೆಯನ್ನು ಸರ್ಕಾರ ಇನ್ನು ಒಂದೆರಡು ದಿನಗಳಲ್ಲಿಯೇ ಹೊರಡಿಸಲಿದೆ ಎಂದು ವಾರ್ತಾಮತ್ತು ಪ್ರಸಾರ ಖಾತೆ ಸಚಿವ ಎಂ.ಸಿ. ನಾಣಯ್ಯ ಇಂದು ಇಲ್ಲಿ ಭರವಸೆ ನೀಡಿದರು.

ಈ ಉದ್ಯಮವನ್ನು ಕೈಗಾರಿಕೆ ಎಂದು ಈ ಹಿಂದೆ ಸರ್ಕಾರವೇ ಘೋಷಿಸಿದೆ. ಆದರೆ ಅದಕ್ಕೆ ಅಗತ್ಯವಾಗಿರುವ ಸರ್ಕಾರಿ ಆಜ್ಞೆ ಮಾತ್ರ ಇನ್ನೂ ಜಾರಿಗೆ ಬಾರದೇ ಇರುವುದರಿಂದಾಗಿ ಉದ್ಯಮಿಗಳಿಗೆ ದೊರೆಯಬೇಕಾದ ಸೌಲಭ್ಯ ಸಿಗದಂತಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT