<p><strong>ಷರೀಫ್ ಕೈ ತಪ್ಪಿದ ರೈಲ್ವೆ ಖಾತೆ</strong></p>.<p><strong>ನವದೆಹಲಿ, ಅ. 13–</strong> ಲಂಡನ್ನಲ್ಲಿ ಹೃದಯದ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ನಿನ್ನೆ ತಾನೆ ಬೆಂಗಳೂರಿನಿಂದ ಇಲ್ಲಿಗೆ ಆಗಮಿಸಿದ್ದ ಸಿ.ಕೆ. ಜಾಫರ್ ಷರೀಫ್ ಅವರಿಂದ ಇಂದು ರೈಲ್ವೆ ಖಾತೆಯನ್ನು ವಾಪಸ್ ಪಡೆಯಲಾಗಿದೆ. ಆದರೆ, ಖಾತೆರಹಿತ ಸಚಿವರಾಗಿ ಷರೀಫ್ ಮುಂದುವರಿಯುವರು.</p>.<p>ಇದರಿಂದಾಗಿ ಕೇಂದ್ರ ಸಚಿವ ಸಂಪುಟದಲ್ಲಿನ ಖಾತೆರಹಿತ ಸಚಿವರ ಸಂಖ್ಯೆ ಎರಡಕ್ಕೆ ಏರಿದೆ. ವಿದೇಶಾಂಗ ಸಚಿವರಾಗಿದ್ದ ದಿನೇಶ್ ಸಿಂಗ್ ಪಾರ್ಶ್ವವಾಯು ಪೀಡಿತರಾದ ಬಳಿಕ ಖಾತಾರಹಿತ ಸಚಿವರಾಗಿ ಮುಂದುವರಿದಿದ್ದಾರೆ.</p>.<p><strong>ಚಿತ್ರರಂಗಕ್ಕೆ ಕೈಗಾರಿಕೆಯ ಸ್ಥಾನಮಾನ: ಶೀಘ್ರ ಆದೇಶ</strong></p>.<p><strong>ಬೆಂಗಳೂರು, ಅ. 13– </strong>ಕರ್ನಾಟಕ ಚಿತ್ರೋದ್ಯಮವನ್ನು ಕೈಗಾರಿಕೆ ಎಂದು ಘೋಷಿಸುವ ಆಜ್ಞೆಯನ್ನು ಸರ್ಕಾರ ಇನ್ನು ಒಂದೆರಡು ದಿನಗಳಲ್ಲಿಯೇ ಹೊರಡಿಸಲಿದೆ ಎಂದು ವಾರ್ತಾಮತ್ತು ಪ್ರಸಾರ ಖಾತೆ ಸಚಿವ ಎಂ.ಸಿ. ನಾಣಯ್ಯ ಇಂದು ಇಲ್ಲಿ ಭರವಸೆ ನೀಡಿದರು.</p>.<p>ಈ ಉದ್ಯಮವನ್ನು ಕೈಗಾರಿಕೆ ಎಂದು ಈ ಹಿಂದೆ ಸರ್ಕಾರವೇ ಘೋಷಿಸಿದೆ. ಆದರೆ ಅದಕ್ಕೆ ಅಗತ್ಯವಾಗಿರುವ ಸರ್ಕಾರಿ ಆಜ್ಞೆ ಮಾತ್ರ ಇನ್ನೂ ಜಾರಿಗೆ ಬಾರದೇ ಇರುವುದರಿಂದಾಗಿ ಉದ್ಯಮಿಗಳಿಗೆ ದೊರೆಯಬೇಕಾದ ಸೌಲಭ್ಯ ಸಿಗದಂತಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಷರೀಫ್ ಕೈ ತಪ್ಪಿದ ರೈಲ್ವೆ ಖಾತೆ</strong></p>.<p><strong>ನವದೆಹಲಿ, ಅ. 13–</strong> ಲಂಡನ್ನಲ್ಲಿ ಹೃದಯದ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ನಿನ್ನೆ ತಾನೆ ಬೆಂಗಳೂರಿನಿಂದ ಇಲ್ಲಿಗೆ ಆಗಮಿಸಿದ್ದ ಸಿ.ಕೆ. ಜಾಫರ್ ಷರೀಫ್ ಅವರಿಂದ ಇಂದು ರೈಲ್ವೆ ಖಾತೆಯನ್ನು ವಾಪಸ್ ಪಡೆಯಲಾಗಿದೆ. ಆದರೆ, ಖಾತೆರಹಿತ ಸಚಿವರಾಗಿ ಷರೀಫ್ ಮುಂದುವರಿಯುವರು.</p>.<p>ಇದರಿಂದಾಗಿ ಕೇಂದ್ರ ಸಚಿವ ಸಂಪುಟದಲ್ಲಿನ ಖಾತೆರಹಿತ ಸಚಿವರ ಸಂಖ್ಯೆ ಎರಡಕ್ಕೆ ಏರಿದೆ. ವಿದೇಶಾಂಗ ಸಚಿವರಾಗಿದ್ದ ದಿನೇಶ್ ಸಿಂಗ್ ಪಾರ್ಶ್ವವಾಯು ಪೀಡಿತರಾದ ಬಳಿಕ ಖಾತಾರಹಿತ ಸಚಿವರಾಗಿ ಮುಂದುವರಿದಿದ್ದಾರೆ.</p>.<p><strong>ಚಿತ್ರರಂಗಕ್ಕೆ ಕೈಗಾರಿಕೆಯ ಸ್ಥಾನಮಾನ: ಶೀಘ್ರ ಆದೇಶ</strong></p>.<p><strong>ಬೆಂಗಳೂರು, ಅ. 13– </strong>ಕರ್ನಾಟಕ ಚಿತ್ರೋದ್ಯಮವನ್ನು ಕೈಗಾರಿಕೆ ಎಂದು ಘೋಷಿಸುವ ಆಜ್ಞೆಯನ್ನು ಸರ್ಕಾರ ಇನ್ನು ಒಂದೆರಡು ದಿನಗಳಲ್ಲಿಯೇ ಹೊರಡಿಸಲಿದೆ ಎಂದು ವಾರ್ತಾಮತ್ತು ಪ್ರಸಾರ ಖಾತೆ ಸಚಿವ ಎಂ.ಸಿ. ನಾಣಯ್ಯ ಇಂದು ಇಲ್ಲಿ ಭರವಸೆ ನೀಡಿದರು.</p>.<p>ಈ ಉದ್ಯಮವನ್ನು ಕೈಗಾರಿಕೆ ಎಂದು ಈ ಹಿಂದೆ ಸರ್ಕಾರವೇ ಘೋಷಿಸಿದೆ. ಆದರೆ ಅದಕ್ಕೆ ಅಗತ್ಯವಾಗಿರುವ ಸರ್ಕಾರಿ ಆಜ್ಞೆ ಮಾತ್ರ ಇನ್ನೂ ಜಾರಿಗೆ ಬಾರದೇ ಇರುವುದರಿಂದಾಗಿ ಉದ್ಯಮಿಗಳಿಗೆ ದೊರೆಯಬೇಕಾದ ಸೌಲಭ್ಯ ಸಿಗದಂತಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>