ನವದೆಹಲಿ, ಜುಲೈ 22 (ಪಿಟಿಐ)– ರಾಜತಂತ್ರಜ್ಞರನ್ನು ನೋಡಿಕೊಳ್ಳುವ ರೀತಿಯಲ್ಲಿ ಪಾಕಿಸ್ತಾನ ಪದೇಪದೇ ಸದಾಚಾರ ಸಂಹಿತೆಯನ್ನು ಉಲ್ಲಂಘಿಸುತ್ತಿರುವುದಕ್ಕೆ ಭಾರತ ಇಂದು ತೀವ್ರ ವಿಷಾದ ವ್ಯಕ್ತಪಡಿಸಿದೆ. ಈ ಸದಾಚಾರ ಸಂಹಿತೆಯ ಮರುಪರಿಶೀಲನೆಗೆ ಮಾಮೂಲಿ ಸಮಾಲೋಚನೆಗಳ ಬದಲು ರಚನಾತ್ಮಕ ಮಾತುಕತೆ ನಡೆಯಬೇಕೆಂದು ಬಯಸಿದೆ.