<p><strong>ದೂತಾವಾಸ ಸಿಬ್ಬಂದಿಗೆ ಹಿಂಸೆ: ಪಾಕ್ ನಿಲುವಿಗೆ ಭಾರತ ಆಕ್ಷೇಪ</strong></p>.<p><strong>ನವದೆಹಲಿ, ಜುಲೈ 22 (ಪಿಟಿಐ)–</strong> ರಾಜತಂತ್ರಜ್ಞರನ್ನು ನೋಡಿಕೊಳ್ಳುವ ರೀತಿಯಲ್ಲಿ ಪಾಕಿಸ್ತಾನ ಪದೇಪದೇ ಸದಾಚಾರ ಸಂಹಿತೆಯನ್ನು ಉಲ್ಲಂಘಿಸುತ್ತಿರುವುದಕ್ಕೆ ಭಾರತ ಇಂದು ತೀವ್ರ ವಿಷಾದ ವ್ಯಕ್ತಪಡಿಸಿದೆ. ಈ ಸದಾಚಾರ ಸಂಹಿತೆಯ ಮರುಪರಿಶೀಲನೆಗೆ ಮಾಮೂಲಿ ಸಮಾಲೋಚನೆಗಳ ಬದಲು ರಚನಾತ್ಮಕ ಮಾತುಕತೆ ನಡೆಯಬೇಕೆಂದು ಬಯಸಿದೆ.</p>.<p>ಪಾಕಿಸ್ತಾನ ಸದ್ವರ್ತನೆಯ ರೀತಿ ನೀತಿಗಳನ್ನು ಕಡೆಗಣಿಸಿ ಕೈಗೊಂಡಿರುವ ಕ್ರಮಗಳ ಹಿನ್ನೆಲೆಯಲ್ಲಿ, ಸದಾಚಾರ ಸಂಹಿತೆಯ ಅನುಷ್ಠಾನ ಕುರಿತು ಮಾಮೂಲಿನಂತೆ ಚರ್ಚೆಗಾಗಿಕರೆದಿದ್ದ ಸಭೆಯಲ್ಲಿ ಪಾಕಿಸ್ತಾನಿ ಹೈಕಮಿಷನ್ಗೆ ಭಾರತದ ನಿಯೋಗವೊಂದು ಈ ಅಭಿಪ್ರಾಯವನ್ನು ತಿಳಿಸಿತು.</p>.<p><strong>ರ್ಯಾಲಿ: ಸರ್ವ ಪಕ್ಷ ಒಕ್ಕಲಿಗರಿಗೆ ಕರೆ</strong></p>.<p><strong>ಬೆಂಗಳೂರು, ಜುಲೈ 22– </strong>ಒಕ್ಕಲಿಗ ಜನಾಂಗಕ್ಕೆ ಮಾರಕವಾಗಿರುವ ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ವರದಿ ಆಧಾರಿತ ಸರ್ಕಾರಿ ಆದೇಶವನ್ನು ಹಿಂತೆಗೆದುಕೊಳ್ಳದೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘ ಸ್ಪಷ್ಟಪಡಿಸಿದೆ.</p>.<p>ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಜುಲೈ 25ರಂದು ನಗರದಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನಾಸಭೆ ಮುಂದಿನ ಹೋರಾಟದ ರೂಪುರೇಷೆಯನ್ನು ನಿರ್ಣಯಿಸಲಿದೆ ಎಂದು ಸಂಘದ ಅಧ್ಯಕ್ಷ ಗುತ್ತಲಗೌಡ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಸರ್ಕಾರ ಈ ಬಗ್ಗೆ ನೀಡುವ ಯಾವುದೇ ಪೊಳ್ಳು ಭರವಸೆಗೆ ಮರುಳಾಗದಿರಿ ಎಂದು ಕರೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೂತಾವಾಸ ಸಿಬ್ಬಂದಿಗೆ ಹಿಂಸೆ: ಪಾಕ್ ನಿಲುವಿಗೆ ಭಾರತ ಆಕ್ಷೇಪ</strong></p>.<p><strong>ನವದೆಹಲಿ, ಜುಲೈ 22 (ಪಿಟಿಐ)–</strong> ರಾಜತಂತ್ರಜ್ಞರನ್ನು ನೋಡಿಕೊಳ್ಳುವ ರೀತಿಯಲ್ಲಿ ಪಾಕಿಸ್ತಾನ ಪದೇಪದೇ ಸದಾಚಾರ ಸಂಹಿತೆಯನ್ನು ಉಲ್ಲಂಘಿಸುತ್ತಿರುವುದಕ್ಕೆ ಭಾರತ ಇಂದು ತೀವ್ರ ವಿಷಾದ ವ್ಯಕ್ತಪಡಿಸಿದೆ. ಈ ಸದಾಚಾರ ಸಂಹಿತೆಯ ಮರುಪರಿಶೀಲನೆಗೆ ಮಾಮೂಲಿ ಸಮಾಲೋಚನೆಗಳ ಬದಲು ರಚನಾತ್ಮಕ ಮಾತುಕತೆ ನಡೆಯಬೇಕೆಂದು ಬಯಸಿದೆ.</p>.<p>ಪಾಕಿಸ್ತಾನ ಸದ್ವರ್ತನೆಯ ರೀತಿ ನೀತಿಗಳನ್ನು ಕಡೆಗಣಿಸಿ ಕೈಗೊಂಡಿರುವ ಕ್ರಮಗಳ ಹಿನ್ನೆಲೆಯಲ್ಲಿ, ಸದಾಚಾರ ಸಂಹಿತೆಯ ಅನುಷ್ಠಾನ ಕುರಿತು ಮಾಮೂಲಿನಂತೆ ಚರ್ಚೆಗಾಗಿಕರೆದಿದ್ದ ಸಭೆಯಲ್ಲಿ ಪಾಕಿಸ್ತಾನಿ ಹೈಕಮಿಷನ್ಗೆ ಭಾರತದ ನಿಯೋಗವೊಂದು ಈ ಅಭಿಪ್ರಾಯವನ್ನು ತಿಳಿಸಿತು.</p>.<p><strong>ರ್ಯಾಲಿ: ಸರ್ವ ಪಕ್ಷ ಒಕ್ಕಲಿಗರಿಗೆ ಕರೆ</strong></p>.<p><strong>ಬೆಂಗಳೂರು, ಜುಲೈ 22– </strong>ಒಕ್ಕಲಿಗ ಜನಾಂಗಕ್ಕೆ ಮಾರಕವಾಗಿರುವ ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ವರದಿ ಆಧಾರಿತ ಸರ್ಕಾರಿ ಆದೇಶವನ್ನು ಹಿಂತೆಗೆದುಕೊಳ್ಳದೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘ ಸ್ಪಷ್ಟಪಡಿಸಿದೆ.</p>.<p>ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಜುಲೈ 25ರಂದು ನಗರದಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನಾಸಭೆ ಮುಂದಿನ ಹೋರಾಟದ ರೂಪುರೇಷೆಯನ್ನು ನಿರ್ಣಯಿಸಲಿದೆ ಎಂದು ಸಂಘದ ಅಧ್ಯಕ್ಷ ಗುತ್ತಲಗೌಡ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಸರ್ಕಾರ ಈ ಬಗ್ಗೆ ನೀಡುವ ಯಾವುದೇ ಪೊಳ್ಳು ಭರವಸೆಗೆ ಮರುಳಾಗದಿರಿ ಎಂದು ಕರೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>