ಬೆಂಗಳೂರು, ಡಿ. 24– ಅಪಘಾತಕ್ಕೆ ತುತ್ತಾಗಿ ವೆಲ್ಲೂರಿನ ಆಸ್ಪತ್ರೆಯಲ್ಲಿರುವ ಹಿರಿಯ ಚಲನಚಿತ್ರ ನಟಿ ಪಂಢರೀಬಾಯಿ ಅವರಿಗೆ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ನೀಡಲು ಹಾಗೂ ಅದಕ್ಕೆ ಆಗುವ ವೆಚ್ಚವನ್ನು ಭರಿಸಲು ರಾಜ್ಯ ಸಚಿವ ಸಂಪುಟ ಇಂದು ತೀರ್ಮಾನಿಸಿದೆ.
ಅವರಿಗೆ ಉತ್ತಮ ವೈದ್ಯಕೀಯ ನೆರವನ್ನು ನೀಡುವುದು ರಾಜ್ಯ ಸರ್ಕಾರದ ಕರ್ತವ್ಯ. ಜತೆಗೆ ಗಂಟಲು ಕ್ಯಾನ್ಸರ್ನಿಂದ ಬಳಲುತ್ತಿರುವ ಗಾಯಕ ಮೈಸೂರು ಅನಂತಸ್ವಾಮಿ ಅವರ ಚಿಕಿತ್ಸೆಯ ಖರ್ಚನ್ನೂ ಸರ್ಕಾರ ಭರಿಸಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಂ.ಸಿ. ನಾಣಯ್ಯ ತಿಳಿಸಿದರು.
ರಾವ್ ವೈಖರಿ ಟೀಕೆ–ಅರ್ಜುನ್ ಪದತ್ಯಾಗ
ನವದೆಹಲಿ, ಡಿ. 24 (ಪಿಟಿಐ, ಯುಎನ್ಐ)– ಕಾಂಗೈ ಅಧ್ಯಕ್ಷ ಮತ್ತು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್ಸಿಂಗ್ ಅವರು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಇದರಿಂದಾಗಿ ಮೂರೂವರೆ ವರ್ಷಗಳ ಪಿವಿಎನ್ ಸರ್ಕಾರದ ಭವಿಷ್ಯ ಡೋಲಾಯಮಾನವಾಗುವ ಜತೆಗೆ ಕಾಂಗೈ ಪಕ್ಷದೊಳಗಿನ ಬಿಕ್ಕಟ್ಟು ಉಲ್ಬಣಿಸಿದೆ.