<p><strong>ಮಾಜಿ ರಾಷ್ಟ್ರಪತಿ ಜೇಲ್ಸಿಂಗ್ ನಿಧನ</strong></p>.<p><strong>ಚಂಡೀಗಡ, ಡಿ. 25 (ಪಿಟಿಐ)– </strong>ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್ಸಿಂಗ್ ಅವರು ಇಂದು ಬೆಳಿಗ್ಗೆ ಏಳು ಗಂಟೆಗೆ ಇಲ್ಲಿ ನಿಧನ<br />ರಾದರು. ಕಳೆದ ಇಪ್ಪತ್ತೇಳು ದಿನಗಳಿಂದ ಅವರು ಇಲ್ಲಿನ ನೆಹರೂ ಆಸ್ಪತ್ರೆಯಲ್ಲಿ ಮೃತ್ಯುವಿನೊಂದಿಗೆ ಹೋರಾಡುತ್ತಿದ್ದರು.</p>.<p>ಮಂಗಳವಾರ ಸಕಲ ರಾಷ್ಟ್ರಗೌರವದೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದ್ದು, ಕೇಂದ್ರ ಸರ್ಕಾರ ಏಳು ದಿನಗಳ ಶೋಕಾಚರಣೆ ಘೋಷಿಸಿದೆ.</p>.<p>78 ವರ್ಷದ ಜೇಲ್ ಸಿಂಗ್ ಅವರು ನ.29ರಂದು ಪಂಜಾಬ್ನ ರೋಪುರ ಜಿಲ್ಲೆ<br />ಯಲ್ಲಿ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಇಲ್ಲಿನ ಸ್ನಾತಕೋತ್ತರ ಕೇಂದ್ರ ನೆಹರೂ ಆಸ್ಪತ್ರೆ ಸೇರಿದ್ದರು. ತೋಳು ಮತ್ತು ಪಕ್ಕೆಲುಬುಗಳ ಮೂಳೆ ಮುರಿತದಿಂದ ನರಳುತ್ತಿದ್ದ ಅವರ ಆರೋಗ್ಯ ಹದಗೆಡುತ್ತಾ ಹೋಯಿತು.</p>.<p><strong>ಕಾಂಗೈ ಶಾಸಕ ಪಕ್ಷಗಳ ನಾಯಕರಾಗಿ ಖರ್ಗೆ, ಎಚ್.ಕೆ. ಪಾಟೀಲ್ ಆಯ್ಕೆ</strong></p>.<p><strong>ಬೆಂಗಳೂರು, ಡಿ. 25–</strong> ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಸಚಿವರುಗಳಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಎಚ್.ಕೆ. ಪಾಟೀಲ್ ಅವರು ಇಂದು ಇಲ್ಲಿ ಅವಿರೋಧವಾಗಿ ಆಯ್ಕೆಯಾದರು.</p>.<p>ಪಕ್ಷದ ಕಚೇರಿಯಲ್ಲಿ ಸಂಜೆ ಸೇರಿದ್ದ ಎರಡೂ ಸದನಗಳ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಈ ಆಯ್ಕೆ ನಡೆಯಿತು.</p>.<p><strong>ಬಸ್ ಹಳ್ಳಕ್ಕೆ ಉರುಳಿ ಏಳು ಸಾವು</strong></p>.<p><strong>ರಾಯಚೂರು, ಡಿ. 25</strong>– ಇಲ್ಲಿಂದ 50 ಕಿ.ಮೀ. ದೂರದ ನಸಲಾಪುರ ಹಳ್ಳದ ಸೇತುವೆ ಮೇಲಿಂದ ಸಾರಿಗೆ ಸಂಸ್ಥೆಯ ರಾಯಚೂರು– ಚಿತ್ರದುರ್ಗ ಎಕ್ಸ್ಪ್ರೆಸ್ ಬಸ್ ಕೆಳಕ್ಕೆ ಉರುಳಿದಾಗ ಅದರಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಏಳು ಮಂದಿ ಅಸು<br />ನೀಗಿದ ಘಟನೆ ಇಂದು ಬೆಳಿಗ್ಗೆಸಂಭವಿಸಿದೆ.</p>.<p>ಎರಡು ತಿಂಗಳ ಹಿಂದೆ ಕುಷ್ಟಗಿ ತಾಲ್ಲೂಕಿನ ಹಳ್ಳಿಯೊಂದರ ಬಳಿ ಲಾರಿಯೊಂದು ಹಳ್ಳಕ್ಕೆ ಮಗುಚಿ ಬಿದ್ದು ಅದರಲ್ಲಿ ಪ್ರಯಾಣ ಮಾಡುತ್ತಿದ್ದವರಲ್ಲಿ22 ಜನ ಸಾವನ್ನಪ್ಪಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಜಿ ರಾಷ್ಟ್ರಪತಿ ಜೇಲ್ಸಿಂಗ್ ನಿಧನ</strong></p>.<p><strong>ಚಂಡೀಗಡ, ಡಿ. 25 (ಪಿಟಿಐ)– </strong>ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್ಸಿಂಗ್ ಅವರು ಇಂದು ಬೆಳಿಗ್ಗೆ ಏಳು ಗಂಟೆಗೆ ಇಲ್ಲಿ ನಿಧನ<br />ರಾದರು. ಕಳೆದ ಇಪ್ಪತ್ತೇಳು ದಿನಗಳಿಂದ ಅವರು ಇಲ್ಲಿನ ನೆಹರೂ ಆಸ್ಪತ್ರೆಯಲ್ಲಿ ಮೃತ್ಯುವಿನೊಂದಿಗೆ ಹೋರಾಡುತ್ತಿದ್ದರು.</p>.<p>ಮಂಗಳವಾರ ಸಕಲ ರಾಷ್ಟ್ರಗೌರವದೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದ್ದು, ಕೇಂದ್ರ ಸರ್ಕಾರ ಏಳು ದಿನಗಳ ಶೋಕಾಚರಣೆ ಘೋಷಿಸಿದೆ.</p>.<p>78 ವರ್ಷದ ಜೇಲ್ ಸಿಂಗ್ ಅವರು ನ.29ರಂದು ಪಂಜಾಬ್ನ ರೋಪುರ ಜಿಲ್ಲೆ<br />ಯಲ್ಲಿ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಇಲ್ಲಿನ ಸ್ನಾತಕೋತ್ತರ ಕೇಂದ್ರ ನೆಹರೂ ಆಸ್ಪತ್ರೆ ಸೇರಿದ್ದರು. ತೋಳು ಮತ್ತು ಪಕ್ಕೆಲುಬುಗಳ ಮೂಳೆ ಮುರಿತದಿಂದ ನರಳುತ್ತಿದ್ದ ಅವರ ಆರೋಗ್ಯ ಹದಗೆಡುತ್ತಾ ಹೋಯಿತು.</p>.<p><strong>ಕಾಂಗೈ ಶಾಸಕ ಪಕ್ಷಗಳ ನಾಯಕರಾಗಿ ಖರ್ಗೆ, ಎಚ್.ಕೆ. ಪಾಟೀಲ್ ಆಯ್ಕೆ</strong></p>.<p><strong>ಬೆಂಗಳೂರು, ಡಿ. 25–</strong> ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಸಚಿವರುಗಳಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಎಚ್.ಕೆ. ಪಾಟೀಲ್ ಅವರು ಇಂದು ಇಲ್ಲಿ ಅವಿರೋಧವಾಗಿ ಆಯ್ಕೆಯಾದರು.</p>.<p>ಪಕ್ಷದ ಕಚೇರಿಯಲ್ಲಿ ಸಂಜೆ ಸೇರಿದ್ದ ಎರಡೂ ಸದನಗಳ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಈ ಆಯ್ಕೆ ನಡೆಯಿತು.</p>.<p><strong>ಬಸ್ ಹಳ್ಳಕ್ಕೆ ಉರುಳಿ ಏಳು ಸಾವು</strong></p>.<p><strong>ರಾಯಚೂರು, ಡಿ. 25</strong>– ಇಲ್ಲಿಂದ 50 ಕಿ.ಮೀ. ದೂರದ ನಸಲಾಪುರ ಹಳ್ಳದ ಸೇತುವೆ ಮೇಲಿಂದ ಸಾರಿಗೆ ಸಂಸ್ಥೆಯ ರಾಯಚೂರು– ಚಿತ್ರದುರ್ಗ ಎಕ್ಸ್ಪ್ರೆಸ್ ಬಸ್ ಕೆಳಕ್ಕೆ ಉರುಳಿದಾಗ ಅದರಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಏಳು ಮಂದಿ ಅಸು<br />ನೀಗಿದ ಘಟನೆ ಇಂದು ಬೆಳಿಗ್ಗೆಸಂಭವಿಸಿದೆ.</p>.<p>ಎರಡು ತಿಂಗಳ ಹಿಂದೆ ಕುಷ್ಟಗಿ ತಾಲ್ಲೂಕಿನ ಹಳ್ಳಿಯೊಂದರ ಬಳಿ ಲಾರಿಯೊಂದು ಹಳ್ಳಕ್ಕೆ ಮಗುಚಿ ಬಿದ್ದು ಅದರಲ್ಲಿ ಪ್ರಯಾಣ ಮಾಡುತ್ತಿದ್ದವರಲ್ಲಿ22 ಜನ ಸಾವನ್ನಪ್ಪಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>