ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ| ಬುಧವಾರ, 18–1–1995

Last Updated 17 ಜನವರಿ 2020, 20:15 IST
ಅಕ್ಷರ ಗಾತ್ರ

ಈದ್ಗಾ: ಯಥಾಸ್ಥಿತಿ ಪಾಲನೆ– ದೇವೇಗೌಡ

ಬೆಂಗಳೂರು, ಜ. 17– ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಅನುಗುಣವಾಗಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ‘ಯಥಾಸ್ಥಿತಿ’ ಕಾಪಾಡಲು ಸರ್ಕಾರ ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಅವರು ಇಂದು ಇಲ್ಲಿ ನುಡಿದರು.

ಗುರುತಿನ ಚೀಟಿ: ಚುನಾವಣೆ ಆಯೋಗದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ, ಜ. 17 (ಪಿಟಿಐ)– ಮತದಾರರಿಗೆ ಗುರುತಿನ ಚೀಟಿ ನೀಡದಿದ್ದರೆ ಬಿಹಾರ ಮತ್ತು ಒರಿಸ್ಸಾಗಳ ವಿಧಾನಸಭೆ ಚುನಾವಣೆಗಳನ್ನು ನಡೆಸದಿರುವ ಚುನಾವಣೆ ಆಯೋಗದ ನಿರ್ದೇಶನವು ಜಾರಿಗೆ ಬರದಂತೆ ಸುಪ್ರೀಂ ಕೋರ್ಟ್ ಇಂದು ತಡೆಯಿತು.

‌ಈಗ ನಿಗದಿಯಾಗಿರುವಂತೆಬಿಹಾರದಲ್ಲಿ ಚುನಾವಣೆಗಳನ್ನು ನಡೆಸುವುದು ತನಗೆ ಸಾಧ್ಯವಾಗಬೇಕಾದರೆ ಸೆಪ್ಟೆಂಬರ್ 30ರೊಳಗೆ ಗುರುತಿನ ಚೀಟಿಗಳನ್ನು ನೀಡಬೇಕು ಎಂದು ಚುನಾವಣೆ ಆಯೋಗ ವಿಧಿಸಿರುವ ಷರತ್ತನ್ನು ನ್ಯಾಯಾಲಯ ತಿರಸ್ಕರಿಸಿತು. ಬಿಹಾರ ಮತ್ತು ಒರಿಸ್ಸಾಗಳು ಗುರುತಿನ ಚೀಟಿ ನೀಡುವುದಕ್ಕೆ ಈ ಮುನ್ನ ವಿಧಿಸಿದ್ದ ಗಡುವನ್ನು ಪಾಲಿಸಿಲ್ಲ ಎಂಬ ಒಂದೇ ಕಾರಣಕ್ಕಾಗಿ ಅಲ್ಲಿ ಚುನಾವಣೆಗಳನ್ನು
ತಡೆಹಿಡಿಯುವುದಕ್ಕೆ ಆಯೋಗಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ಶ್ರೇಷ್ಠ ನ್ಯಾಯಾಧೀಶ ಎ.ಎಂ. ಅಹ್ಮದಿ ಅವರ ನೇತೃತ್ವದಲ್ಲಿನ ನ್ಯಾಯಪೀಠ ತೀರ್ಪಿತ್ತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT