<p><strong>ಎಡಪಂಥೀಯ ಶಕ್ತಿಗಳ ಮೈತ್ರಿಗೆ ಇದು ಸಕಾಲ</strong></p>.<p>ಬೆಂಗಳೂರು, ಏ. 12– ದಕ್ಷಿಣ ಭಾರತದ ನಕ್ಸಲೀಯ ಹೋರಾಟದ ತ್ರಿವಿಕ್ರಮ ಕೊಂಡಪಲ್ಲಿ ಸೀತಾರಾಮಯ್ಯ ಸಶಸ್ತ್ರ– ಗೆರಿಲ್ಲಾ ಸಮರಕ್ಕೆ ಪುನಃ ಸಜ್ಜಾಗಿದ್ದಾರೆ. ಚದುರಿರುವ ‘ಕಾಮ್ರೇಡ್’ಗಳನ್ನು ಒಗ್ಗೂಡಿಸಿ, ದುರ್ಬಲಗೊಂಡಿರುವ ನಕ್ಸಲೀಯ ಚಳವಳಿಯನ್ನು 70ರ ದಶಕದ ‘ವೈಭವ’ಕ್ಕೆ ಮರಳಿಸಲು ನಡುಕಟ್ಟಿ ನಿಂತಿದ್ದಾರೆ.</p>.<p>‘ಶತ್ರು ಈಗ ಬಲಹೀನನಾಗಿದ್ದಾನೆ. ದಾಳಿಗೆ ಇದು ಪ್ರಶಸ್ತ ಸಮಯ. ವೈರಿಯನ್ನು ಮಣಿಸಲು ಸಶಸ್ತ್ರ ಸಮರದ ಜೊತೆಗೇ ಜನತಾಂತ್ರಿಕ ಹೋರಾಟವೂ ನಡೆಯಲಿ. ದೇಶದ ಎಲ್ಲ ಎಡಪಂಥೀಯ ಶಕ್ತಿಗಳು ಒಟ್ಟಾಗಿ ಎರಗಿದರೆ ಗೆಲುವು ಶತಃಸಿದ್ಧ’ ಎಂದು ಎಂಬತ್ತರ ಇಳಿವಯಸ್ಸಿನಲ್ಲೂ ಅವರ ವಿಪ್ಲವದ ಶಂಖ ಮೊಳಗುತ್ತದೆ.</p>.<p>ಆಂಧ್ರದ ಸಿರಿವಂತ ಜಮೀನ್ದಾರರು ಹಾಗೂ ಸರ್ಕಾರದ ಎದೆಯಲ್ಲಿ ಇಂದಿಗೂ ನಡುಕ ಹುಟ್ಟಿಸುವ ಸಿಪಿಐಎಂಎಲ್– ಪಿಡಬ್ಲ್ಯುಜಿ ಅನ್ನು ಕಟ್ಟಿ ಬೆಳೆಸಿದವರು ಸೀತಾರಾಮಯ್ಯ. ಸಂಘಟನೆಯ ಮುಖ್ಯ ಸಭೆಯೊಂದರಲ್ಲಿ ಪಾಲ್ಗೊಳ್ಳಲು ಈಚೆಗೆ ನಗರಕ್ಕೆ ಬಂದಿದ್ದ ಅವರು ತಮ್ಮ ಅಡಗುತಾಣದಲ್ಲಿ ‘ಪ್ರಜಾವಾಣಿ’ಗೆ ವಿಶೇಷ ಸಂದರ್ಶನ ನೀಡಿದರು.</p>.<p><strong>ಕಾಶ್ಮೀರ: ಮಧ್ಯಸ್ಥಿಕೆಗೆ ಅಮೆರಿಕ ನಿರಾಸಕ್ತಿ</strong></p>.<p>ವಾಷಿಂಗ್ಟನ್, ಏ. 12 (ಪಿಟಿಐ)– ಕಾಶ್ಮೀರ ಸಮಸ್ಯೆ ಪರಿಹಾರ ಹಾಗೂ ಪ್ರೆಸ್ಲರ್ ತಿದ್ದುಪಡಿ ಕಾಯ್ದೆ ರದ್ದುಗೊಳಿಸುವಂತೆ ಅಮೆರಿಕದಿಂದ ಖಚಿತ ಆಶ್ವಾಸನೆ ಪಡೆಯಲು ಪಾಕಿಸ್ತಾನದ ಪ್ರಧಾನಿ ಬೆನಜೀರ್ ಭುಟ್ಟೊ ಅವರು ನಡೆಸಿರುವ ಪ್ರಯತ್ನ ವಿಫಲವಾಗಿದೆ.</p>.<p>ಅಮೆರಿಕದ ಅಧ್ಯಕ್ಷರಿಂದ ನೈತಿಕ ಬೆಂಬಲ ಪಡೆಯುವಲ್ಲಿ ಬೆನಜೀರ್ ಅವರು ನಡೆಸಿರುವ ಮಾತುಕತೆಯು ಫಲಪ್ರದವಾಗಿದ್ದರೂ ಕಾಶ್ಮೀರದ ವಿಷಯದಲ್ಲಿ ಅಮೆರಿಕದ ಮಧ್ಯಸ್ಥಿಕೆಗೆ ಕ್ಲಿಂಟನ್ ಅವರು ನಿರಾಕರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಡಪಂಥೀಯ ಶಕ್ತಿಗಳ ಮೈತ್ರಿಗೆ ಇದು ಸಕಾಲ</strong></p>.<p>ಬೆಂಗಳೂರು, ಏ. 12– ದಕ್ಷಿಣ ಭಾರತದ ನಕ್ಸಲೀಯ ಹೋರಾಟದ ತ್ರಿವಿಕ್ರಮ ಕೊಂಡಪಲ್ಲಿ ಸೀತಾರಾಮಯ್ಯ ಸಶಸ್ತ್ರ– ಗೆರಿಲ್ಲಾ ಸಮರಕ್ಕೆ ಪುನಃ ಸಜ್ಜಾಗಿದ್ದಾರೆ. ಚದುರಿರುವ ‘ಕಾಮ್ರೇಡ್’ಗಳನ್ನು ಒಗ್ಗೂಡಿಸಿ, ದುರ್ಬಲಗೊಂಡಿರುವ ನಕ್ಸಲೀಯ ಚಳವಳಿಯನ್ನು 70ರ ದಶಕದ ‘ವೈಭವ’ಕ್ಕೆ ಮರಳಿಸಲು ನಡುಕಟ್ಟಿ ನಿಂತಿದ್ದಾರೆ.</p>.<p>‘ಶತ್ರು ಈಗ ಬಲಹೀನನಾಗಿದ್ದಾನೆ. ದಾಳಿಗೆ ಇದು ಪ್ರಶಸ್ತ ಸಮಯ. ವೈರಿಯನ್ನು ಮಣಿಸಲು ಸಶಸ್ತ್ರ ಸಮರದ ಜೊತೆಗೇ ಜನತಾಂತ್ರಿಕ ಹೋರಾಟವೂ ನಡೆಯಲಿ. ದೇಶದ ಎಲ್ಲ ಎಡಪಂಥೀಯ ಶಕ್ತಿಗಳು ಒಟ್ಟಾಗಿ ಎರಗಿದರೆ ಗೆಲುವು ಶತಃಸಿದ್ಧ’ ಎಂದು ಎಂಬತ್ತರ ಇಳಿವಯಸ್ಸಿನಲ್ಲೂ ಅವರ ವಿಪ್ಲವದ ಶಂಖ ಮೊಳಗುತ್ತದೆ.</p>.<p>ಆಂಧ್ರದ ಸಿರಿವಂತ ಜಮೀನ್ದಾರರು ಹಾಗೂ ಸರ್ಕಾರದ ಎದೆಯಲ್ಲಿ ಇಂದಿಗೂ ನಡುಕ ಹುಟ್ಟಿಸುವ ಸಿಪಿಐಎಂಎಲ್– ಪಿಡಬ್ಲ್ಯುಜಿ ಅನ್ನು ಕಟ್ಟಿ ಬೆಳೆಸಿದವರು ಸೀತಾರಾಮಯ್ಯ. ಸಂಘಟನೆಯ ಮುಖ್ಯ ಸಭೆಯೊಂದರಲ್ಲಿ ಪಾಲ್ಗೊಳ್ಳಲು ಈಚೆಗೆ ನಗರಕ್ಕೆ ಬಂದಿದ್ದ ಅವರು ತಮ್ಮ ಅಡಗುತಾಣದಲ್ಲಿ ‘ಪ್ರಜಾವಾಣಿ’ಗೆ ವಿಶೇಷ ಸಂದರ್ಶನ ನೀಡಿದರು.</p>.<p><strong>ಕಾಶ್ಮೀರ: ಮಧ್ಯಸ್ಥಿಕೆಗೆ ಅಮೆರಿಕ ನಿರಾಸಕ್ತಿ</strong></p>.<p>ವಾಷಿಂಗ್ಟನ್, ಏ. 12 (ಪಿಟಿಐ)– ಕಾಶ್ಮೀರ ಸಮಸ್ಯೆ ಪರಿಹಾರ ಹಾಗೂ ಪ್ರೆಸ್ಲರ್ ತಿದ್ದುಪಡಿ ಕಾಯ್ದೆ ರದ್ದುಗೊಳಿಸುವಂತೆ ಅಮೆರಿಕದಿಂದ ಖಚಿತ ಆಶ್ವಾಸನೆ ಪಡೆಯಲು ಪಾಕಿಸ್ತಾನದ ಪ್ರಧಾನಿ ಬೆನಜೀರ್ ಭುಟ್ಟೊ ಅವರು ನಡೆಸಿರುವ ಪ್ರಯತ್ನ ವಿಫಲವಾಗಿದೆ.</p>.<p>ಅಮೆರಿಕದ ಅಧ್ಯಕ್ಷರಿಂದ ನೈತಿಕ ಬೆಂಬಲ ಪಡೆಯುವಲ್ಲಿ ಬೆನಜೀರ್ ಅವರು ನಡೆಸಿರುವ ಮಾತುಕತೆಯು ಫಲಪ್ರದವಾಗಿದ್ದರೂ ಕಾಶ್ಮೀರದ ವಿಷಯದಲ್ಲಿ ಅಮೆರಿಕದ ಮಧ್ಯಸ್ಥಿಕೆಗೆ ಕ್ಲಿಂಟನ್ ಅವರು ನಿರಾಕರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>