<p><strong>ಎಲ್ಟಿಟಿಇ ಉಗ್ರಗಾಮಿಗಳ ಪರಾರಿ: ಸಂಸತ್ತಿನಲ್ಲಿ ಕಳವಳ</strong></p>.<p><strong>ನವದೆಹಲಿ, ಆ. 16 (ಪಿಟಿಐ)– </strong>ವೆಲ್ಲೂರಿನ ವಿಶೇಷ ಶಿಬಿರದಿಂದ 43 ಎಲ್ಟಿಟಿಇ ಉಗ್ರಗಾಮಿಗಳು ಪರಾರಿಯಾಗಿರುವ ಘಟನೆಗೆ ಲೋಕಸಭೆಯಲ್ಲಿ ಇಂದು ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದರು. ಈ ಘಟನೆಯ ನೈತಿಕ ಹೊಣೆ ಹೊತ್ತು ಜಯಲಲಿತಾ ನೇತೃತ್ವದ ಸರ್ಕಾರ ರಾಜೀನಾಮೆ ನೀಡಬೇಕು ಎಂದು ಕಾಂಗೈ ಸದಸ್ಯರು ಆಗ್ರಹಪಡಿಸಿದರು.</p>.<p>ಇದರಿಂದ ಕಾಂಗ್ರೆಸ್ (ಐ) ಮತ್ತು ಎಐಎಡಿಎಂಕೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕಾಂಗೈನ ಮಣಿಶಂಕರ ಅಯ್ಯರ್ ಅವರು, ಜಯಲಲಿತಾ ಅವರು ರಾಜೀನಾಮೆ ನೀಡಬೇಕು, ಅದಕ್ಕೆ ಅವರು ಒಪ್ಪದಿದ್ದರೆ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಪಡಿಸಿದರು. ಈ ಬೇಡಿಕೆಯನ್ನು ಎಐಎಡಿಎಂಕೆ ಸದಸ್ಯರು ತೀವ್ರವಾಗಿ ಪ್ರತಿಭಟಿಸಿದರು. </p>.<p><strong>ಹೊಸ ವೃತ್ತಿ ಶಿಕ್ಷಣ ಕಾಲೇಜು ಬೇಡ– ಶಿಫಾರಸು</strong></p>.<p><strong>ಹುಬ್ಬಳ್ಳಿ, ಆ. 16–</strong> ರಾಜ್ಯದಲ್ಲಿ ಹೊಸದಾಗಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಅನುಮತಿ ನೀಡಬಾರದೆಂದು ರಾಜ್ಯ ವಿಧಾನ ಮಂಡಳದ ಶಿಕ್ಷಣ ಇಲಾಖೆಯ ವಿಷಯ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.</p>.<p>ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ, ರಾಜ್ಯದಲ್ಲಿ ಹೊಸ ಎಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆ ಮೇಲೆ ಇಲ್ಲಿಯವರೆಗೆ ವಿಧಿಸಲಾಗಿದ್ದ ನಿಷೇಧ ಹಿಂತೆಗೆದುಕೊಳ್ಳಲು ತೀರ್ಮಾನಿಸಿರುವುದು ಇಲ್ಲಿ ಗಮನಾರ್ಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಲ್ಟಿಟಿಇ ಉಗ್ರಗಾಮಿಗಳ ಪರಾರಿ: ಸಂಸತ್ತಿನಲ್ಲಿ ಕಳವಳ</strong></p>.<p><strong>ನವದೆಹಲಿ, ಆ. 16 (ಪಿಟಿಐ)– </strong>ವೆಲ್ಲೂರಿನ ವಿಶೇಷ ಶಿಬಿರದಿಂದ 43 ಎಲ್ಟಿಟಿಇ ಉಗ್ರಗಾಮಿಗಳು ಪರಾರಿಯಾಗಿರುವ ಘಟನೆಗೆ ಲೋಕಸಭೆಯಲ್ಲಿ ಇಂದು ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದರು. ಈ ಘಟನೆಯ ನೈತಿಕ ಹೊಣೆ ಹೊತ್ತು ಜಯಲಲಿತಾ ನೇತೃತ್ವದ ಸರ್ಕಾರ ರಾಜೀನಾಮೆ ನೀಡಬೇಕು ಎಂದು ಕಾಂಗೈ ಸದಸ್ಯರು ಆಗ್ರಹಪಡಿಸಿದರು.</p>.<p>ಇದರಿಂದ ಕಾಂಗ್ರೆಸ್ (ಐ) ಮತ್ತು ಎಐಎಡಿಎಂಕೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕಾಂಗೈನ ಮಣಿಶಂಕರ ಅಯ್ಯರ್ ಅವರು, ಜಯಲಲಿತಾ ಅವರು ರಾಜೀನಾಮೆ ನೀಡಬೇಕು, ಅದಕ್ಕೆ ಅವರು ಒಪ್ಪದಿದ್ದರೆ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಪಡಿಸಿದರು. ಈ ಬೇಡಿಕೆಯನ್ನು ಎಐಎಡಿಎಂಕೆ ಸದಸ್ಯರು ತೀವ್ರವಾಗಿ ಪ್ರತಿಭಟಿಸಿದರು. </p>.<p><strong>ಹೊಸ ವೃತ್ತಿ ಶಿಕ್ಷಣ ಕಾಲೇಜು ಬೇಡ– ಶಿಫಾರಸು</strong></p>.<p><strong>ಹುಬ್ಬಳ್ಳಿ, ಆ. 16–</strong> ರಾಜ್ಯದಲ್ಲಿ ಹೊಸದಾಗಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಅನುಮತಿ ನೀಡಬಾರದೆಂದು ರಾಜ್ಯ ವಿಧಾನ ಮಂಡಳದ ಶಿಕ್ಷಣ ಇಲಾಖೆಯ ವಿಷಯ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.</p>.<p>ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ, ರಾಜ್ಯದಲ್ಲಿ ಹೊಸ ಎಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆ ಮೇಲೆ ಇಲ್ಲಿಯವರೆಗೆ ವಿಧಿಸಲಾಗಿದ್ದ ನಿಷೇಧ ಹಿಂತೆಗೆದುಕೊಳ್ಳಲು ತೀರ್ಮಾನಿಸಿರುವುದು ಇಲ್ಲಿ ಗಮನಾರ್ಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>