ಇದರಿಂದ ಕಾಂಗ್ರೆಸ್ (ಐ) ಮತ್ತು ಎಐಎಡಿಎಂಕೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕಾಂಗೈನ ಮಣಿಶಂಕರ ಅಯ್ಯರ್ ಅವರು, ಜಯಲಲಿತಾ ಅವರು ರಾಜೀನಾಮೆ ನೀಡಬೇಕು, ಅದಕ್ಕೆ ಅವರು ಒಪ್ಪದಿದ್ದರೆ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಪಡಿಸಿದರು. ಈ ಬೇಡಿಕೆಯನ್ನು ಎಐಎಡಿಎಂಕೆ ಸದಸ್ಯರು ತೀವ್ರವಾಗಿ ಪ್ರತಿಭಟಿಸಿದರು.