ಬೆಂಗಳೂರು, ಸೆ. 30– ಅರ್ಜುನನ್ ಸೇರಿದಂತೆ ಕಾಡುಗಳ್ಳ ವೀರಪ್ಪನ್ ಸಹಚರರ ನಿಗೂಢ ಸಾವಿನ ನ್ಯಾಯಾಂಗ ತನಿಖೆ, ಗ್ರಾಮೀಣ ನಿರುದ್ಯೋಗಿಗಳಿಗೆ 15 ಕೃಪಾಂಕ ನೀಡಿಕೆ, ವಿಧಾನಸಭೆ– ಲೋಕಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇಕಡ 25 ಮೀಸಲಾತಿಗಾಗಿ ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಕೋರಿಕೆ– ಇವು ಇಂದು ಸೇರಿದ್ದ ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡ ಪ್ರಮುಖ ತೀರ್ಮಾನಗಳಾಗಿವೆ.