ಬೆಂಗಳೂರು, ಸೆ. 3– ಅಂತರರಾಜ್ಯ ಜಲ ನೀತಿ ರೂಪಿಸುವವರೆಗೆ ಕಾವೇರಿ ನ್ಯಾಯಮಂಡಲಿಯ ಕಲಾಪ ಬಹಿಷ್ಕರಿಸಬೇಕೆಂಬ ತಮ್ಮ ಬೇಡಿಕೆಗೆ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರು ಒಪ್ಪಲಿಲ್ಲವಾದ್ದರಿಂದ, ಕಾವೇರಿ ಹೋರಾಟ ಮುಂದುವರಿಸಲು ಕನ್ನಡ ಚಳವಳಿಗಾರರು ನಿರ್ಧರಿಸಿದ್ದಾರೆ.
‘ದ್ರೋಣ’ನಿಗೆ ಸ್ವಾಗತ ನಾಡಹಬ್ಬಕ್ಕೆ ನಾಂದಿ
ಮೈಸೂರು, ಸೆ. 3– ಅರಮನೆಯ ಜಯ ಮಾರ್ತಾಂಡ ಮಹಾದ್ವಾರದ ಮೂಲಕ ಸಾಂಪ್ರದಾಯಿಕವಾಗಿ ಆನೆಗಳಿಗೆ ಸ್ವಾಗತ ಕೋರುವುದರ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾ ನಾಡಹಬ್ಬಕ್ಕೆ ನಾಂದಿ ಹಾಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಸಿದ್ದರಾಮಯ್ಯ, ಅಂಬಾರಿ ಹೊರುವ ದ್ರೋಣನಿಗೆ ಪೂರ್ವ ದಿಕ್ಕಿಗಿರುವ ದ್ವಾರದ ಬಳಿ ಹಾರ ಹಾಕಿ ಸ್ವಾಗತಿಸಿದರು.
ಗಜ ಗಾಂಭೀರ್ಯಕ್ಕೆ ಪ್ರಸಿದ್ಧನಾದ ದ್ರೋಣ, ಸಚಿವರು ನೀಡಿದ ಪ್ರೀತಿಪಾತ್ರ ತಿನಿಸಾದ ಕಬ್ಬು–ಬೆಲ್ಲವನ್ನು ರಾಜಠೀವಿಯಿಂದ ಸ್ವೀಕರಿಸಿ ಮುಂದಕ್ಕೆ ಹೆಜ್ಜೆ ಹಾಕಿದ.