ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ | ಗುರುವಾರ 14, ಸೆಪ್ಟೆಂಬರ್‌, 1995

Last Updated 13 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಕೇಂದ್ರ ಸಂಪುಟಕ್ಕೆ ಮೂರ್ತಿ ಸೇರಿ 16 ಹೊಸ ಸಚಿವರು

ನವದೆಹಲಿ, ಸೆ. 13– ಕರ್ನಾಟಕದ ಎಂ. ರಾಜಶೇಖರ ಮೂರ್ತಿ ಸೇರಿದಂತೆ ಹದಿಮೂರು ಹೊಸ ಸ್ಟೇಟ್‌ ದರ್ಜೆ ಸಚಿವರ ಸೇರ್ಪಡೆಯೊಡನೆ ಕೇಂದ್ರ ಸಂಪುಟವನ್ನು ಇಂದು ವಿಸ್ತರಿಸಲಾಯಿತು.

ಸಂಪುಟ ಸೇರಲಿರುವವರ ಪಟ್ಟಿಯಲ್ಲಿ ಹದಿನಾರು ಮಂದಿಯ ಹೆಸರುಗಳಿತ್ತು. ಆದರೆ, ಕರ್ನಾಟಕದ ಜಿ.ವೈ. ಕೃಷ್ಣನ್‌, ಪಿ.ಜೆ. ಕುರಿಯನ್‌ ಮತ್ತು ಸುರೇಶ್‌ ಪಚೋರಿಯಾ ಅವರಿಗೆ ಸಕಾಲಕ್ಕೆ ಸಂದೇಶ ತಲುಪದ ಕಾರಣ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಇವರು ನಾಳೆ ಪ್ರಮಾಣ ವಚನ ಸ್ವೀಕಾರ ಮಾಡುವರೆಂದು ಗೊತ್ತಾಗಿದೆ.

ರಾಜಶೇಖರ ಮೂರ್ತಿ ಮತ್ತು ಆರ್.ಕೆ. ಧವನ್‌ ಅವರು ರಾಜ್ಯ ಸಚಿವರಾದರೂ ಸ್ವತಂತ್ರ ಖಾತೆಗಳನ್ನು ಹೊಂದುವರು.

ಶರಣಾದ ವಾಸುದೇವನ್‌ ಜೈಲಿಗೆ

ಬೆಂಗಳೂರು, ಸೆ. 13– ನ್ಯಾಯಾಲಯ ನಿಂದನೆಗಾಗಿ ಒಂದು ತಿಂಗಳ ಸಾದಾ ಜೈಲು ಶಿಕ್ಷೆಗೆ ಒಳಗಾಗಿರುವ ಹಿರಿಯ ಐಎಎಸ್‌ ಅಧಿಕಾರಿ, ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಕೆ.ವಾಸುದೇವನ್‌ ಇಂದು ಬೆಳಿಗ್ಗೆ ಬೆಂಗಳೂರಿನ ಪೊಲೀಸ್‌ ಕಮಿಷನರ್‌ ಟಿ. ಶ್ರೀನಿವಾಸಲು ಮುಂದೆ ಶರಣಾದರು. ತಕ್ಷಣವೇ ಅವರನ್ನು ಬಂಧಿಸಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.

ದೆಹಲಿಯಿಂದ ಬೆಳಿಗ್ಗೆ 10.10ಕ್ಕೆ ವಿಮಾನದಲ್ಲಿ ಬಂದಿಳಿದ ವಾಸುದೇವನ್‌ ನಿಲ್ದಾಣದಿಂದ ನೇರವಾಗಿ ಪೊಲೀಸ್‌ ಕಮಿಷನರ್‌ ಕಚೇರಿಗೆ ಬಂದು ಶರಣಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT