ಬೆಂಗಳೂರು, ಸೆ. 19–ಸದನಕ್ಕೆ ಬಹಿಷ್ಕಾರ ಹಾಕಿರುವ ಪ್ರಮುಖ ವಿರೋಧ ಪಕ್ಷಗಳದ್ದು ಹಟಮಾರಿ ಧೋರಣೆ ಎಂದು ಟೀಕಿಸಿದ ಸಿಪಿಎಂ, ಬಿಎಸ್ಪಿ, ಎಐಎಡಿಎಂಕೆ ಮತ್ತು ಪಕ್ಷೇತರ ಸದಸ್ಯರು ಜನತೆಯಿಂದ ಆಯ್ಕೆಯಾಗಿರುವ ತಮ್ಮ ಹಕ್ಕುಗಳನ್ನು ರಕ್ಷಿಸಲು ಸದನ ನಡೆಸುವಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ಇಂದು ಧರಣಿ ನಡೆಸಿದ ಅಪರೂಪದ ಘಟನೆ ನಡೆಯಿತು.