<p><strong>ಕೇಂದ್ರ– ರಾಜ್ಯ ಬಾಂಧವ್ಯ ಮರು ಪರಿಶೀಲನೆ ಅಗತ್ಯ– ಸಚಿವ ಶುಕ್ಲ ಒಪ್ಪಿಗೆ<br />ನವದೆಹಲಿ, ಮೇ 9–</strong> ಕೇಂದ್ರ ಮತ್ತು ರಾಜ್ಯಗಳ ನಡುವಣ ಬಾಂಧವ್ಯಗಳ ಬಗ್ಗೆ ‘ಮರು ಪರಿಶೀಲನೆ’ ಅಗತ್ಯವಿದೆ ಎಂದು ರಾಜ್ಯಸಭೆಯಲ್ಲಿ ಗೃಹ ವ್ಯವಹಾರಗಳ ಸ್ಟೇಟ್ ಸಚಿವ ವಿದ್ಯಾಚರಣ್ ಶುಕ್ಲ ಅವರು ಇಂದು ಒಪ್ಪಿಕೊಂಡರು.</p>.<p>ಆದರೆ ನಿರ್ದಿಷ್ಟ ಪರಿಹಾರ ಕಾಣುವತನಕ ಈಗಿರುವ ಸಂವಿಧಾನಾತ್ಮಕ ವ್ಯವಸ್ಥೆಗೇ ಬದ್ಧವಾಗಿರಬೇಕು, ಅದರಲ್ಲಿರುವ ನಿಯಮಗಳಂತೆಯೇ ಕೇಂದ್ರ ಮತ್ತು ರಾಜ್ಯಗಳು ವರ್ತಿಸಬೇಕು, ರಾಜಕೀಯ ಪರಿಗಣನೆಗಳನ್ನು ತರುವಂತಿಲ್ಲ ಎಂದು ಅವರು ಹೇಳಿದರು.</p>.<p><strong>ಬಿರ್ಲಾ ವ್ಯವಹಾರಗಳ ತನಿಖಾ ಆಯೋಗಕ್ಕೆ ಲೋಕಸಭೆ ನಕಾರ<br />ನವದೆಹಲಿ, ಮೇ 9–</strong> ‘ಸಂಸತ್ ಸದಸ್ಯರೂ ಸೇರಿ, ತುಂಬಾ ಜವಾಬ್ದಾರಿಯುತ ವ್ಯಕ್ತಿಗಳು’ ಬಿರ್ಲಾ ಸಂಸ್ಥೆಗಳ ವಿರುದ್ಧ ಮಾಡಿದ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ಉನ್ನತ ಅಧಿಕಾರದ ಆಯೋಗವೊಂದನ್ನು ನೇಮಿಸಬೇಕೆಂದು ಕೇಳುವ ಖಾಸಗಿ ನಿರ್ಣಯವೊಂದನ್ನು ಲೋಕಸಭೆ ಧ್ವನಿಮತದಿಂದ ತಿರಸ್ಕರಿಸಿತು.</p>.<p>ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸುತ್ತಿರುವ ದತ್ತಾ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ ನಂತರ, ಬಿರ್ಲಾ ಸಂಸ್ಥೆಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದೆಂಬುದನ್ನು ಸರ್ಕಾರ ಹೇಳಬಲ್ಲುದು ಎಂದು ಕೈಗಾರಿಕಾ ಅಭಿವೃದ್ಧಿ ಸಚಿವ ಫಕ್ರುದ್ದೀನ್ ಆಲಿ ಅಹಮ್ಮದ್ ತಿಳಿಸಿದರು.</p>.<p><strong>ರಾಜಧನ ರದ್ದಿಗೆ ಎಂ.ಪಿ.ಗಳ ಒತ್ತಾಯ<br />ನವದೆಹಲಿ, ಮೇ 9–</strong> ಮಾಜಿ ರಾಜರಿಗೆ ನೀಡುತ್ತಿರುವ ರಾಜಧನ ಹಾಗೂ ವಿಶೇಷ ಹಕ್ಕುಬಾಧ್ಯತೆಗಳನ್ನು ಈ ವರ್ಷದ ಅಕ್ಟೋಬರ್ 2ರ ಹೊತ್ತಿಗೆ ರದ್ದುಗೊಳಿಸಬೇಕೆಂಬ ಖಾಸಗಿ ನಿರ್ಣಯಕ್ಕೆ ಇಂದು ಲೋಕಸಭೆಯಲ್ಲಿ ಭಾರಿ ಬೆಂಬಲ ದೊರೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೇಂದ್ರ– ರಾಜ್ಯ ಬಾಂಧವ್ಯ ಮರು ಪರಿಶೀಲನೆ ಅಗತ್ಯ– ಸಚಿವ ಶುಕ್ಲ ಒಪ್ಪಿಗೆ<br />ನವದೆಹಲಿ, ಮೇ 9–</strong> ಕೇಂದ್ರ ಮತ್ತು ರಾಜ್ಯಗಳ ನಡುವಣ ಬಾಂಧವ್ಯಗಳ ಬಗ್ಗೆ ‘ಮರು ಪರಿಶೀಲನೆ’ ಅಗತ್ಯವಿದೆ ಎಂದು ರಾಜ್ಯಸಭೆಯಲ್ಲಿ ಗೃಹ ವ್ಯವಹಾರಗಳ ಸ್ಟೇಟ್ ಸಚಿವ ವಿದ್ಯಾಚರಣ್ ಶುಕ್ಲ ಅವರು ಇಂದು ಒಪ್ಪಿಕೊಂಡರು.</p>.<p>ಆದರೆ ನಿರ್ದಿಷ್ಟ ಪರಿಹಾರ ಕಾಣುವತನಕ ಈಗಿರುವ ಸಂವಿಧಾನಾತ್ಮಕ ವ್ಯವಸ್ಥೆಗೇ ಬದ್ಧವಾಗಿರಬೇಕು, ಅದರಲ್ಲಿರುವ ನಿಯಮಗಳಂತೆಯೇ ಕೇಂದ್ರ ಮತ್ತು ರಾಜ್ಯಗಳು ವರ್ತಿಸಬೇಕು, ರಾಜಕೀಯ ಪರಿಗಣನೆಗಳನ್ನು ತರುವಂತಿಲ್ಲ ಎಂದು ಅವರು ಹೇಳಿದರು.</p>.<p><strong>ಬಿರ್ಲಾ ವ್ಯವಹಾರಗಳ ತನಿಖಾ ಆಯೋಗಕ್ಕೆ ಲೋಕಸಭೆ ನಕಾರ<br />ನವದೆಹಲಿ, ಮೇ 9–</strong> ‘ಸಂಸತ್ ಸದಸ್ಯರೂ ಸೇರಿ, ತುಂಬಾ ಜವಾಬ್ದಾರಿಯುತ ವ್ಯಕ್ತಿಗಳು’ ಬಿರ್ಲಾ ಸಂಸ್ಥೆಗಳ ವಿರುದ್ಧ ಮಾಡಿದ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ಉನ್ನತ ಅಧಿಕಾರದ ಆಯೋಗವೊಂದನ್ನು ನೇಮಿಸಬೇಕೆಂದು ಕೇಳುವ ಖಾಸಗಿ ನಿರ್ಣಯವೊಂದನ್ನು ಲೋಕಸಭೆ ಧ್ವನಿಮತದಿಂದ ತಿರಸ್ಕರಿಸಿತು.</p>.<p>ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸುತ್ತಿರುವ ದತ್ತಾ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ ನಂತರ, ಬಿರ್ಲಾ ಸಂಸ್ಥೆಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದೆಂಬುದನ್ನು ಸರ್ಕಾರ ಹೇಳಬಲ್ಲುದು ಎಂದು ಕೈಗಾರಿಕಾ ಅಭಿವೃದ್ಧಿ ಸಚಿವ ಫಕ್ರುದ್ದೀನ್ ಆಲಿ ಅಹಮ್ಮದ್ ತಿಳಿಸಿದರು.</p>.<p><strong>ರಾಜಧನ ರದ್ದಿಗೆ ಎಂ.ಪಿ.ಗಳ ಒತ್ತಾಯ<br />ನವದೆಹಲಿ, ಮೇ 9–</strong> ಮಾಜಿ ರಾಜರಿಗೆ ನೀಡುತ್ತಿರುವ ರಾಜಧನ ಹಾಗೂ ವಿಶೇಷ ಹಕ್ಕುಬಾಧ್ಯತೆಗಳನ್ನು ಈ ವರ್ಷದ ಅಕ್ಟೋಬರ್ 2ರ ಹೊತ್ತಿಗೆ ರದ್ದುಗೊಳಿಸಬೇಕೆಂಬ ಖಾಸಗಿ ನಿರ್ಣಯಕ್ಕೆ ಇಂದು ಲೋಕಸಭೆಯಲ್ಲಿ ಭಾರಿ ಬೆಂಬಲ ದೊರೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>