<p>ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಭೇಟಿಗಾಗಿ ಫೆಬ್ರವರಿ 25 ಮತ್ತು 26ರಂದು ಇಸ್ರೇಲ್ಗೆ ತೆರಳುತ್ತಿದ್ದು, ಈ ಭೇಟಿಯನ್ನು ಜಗತ್ತಿನಾದ್ಯಂತ ರಕ್ಷಣಾ ತಜ್ಞರು ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲಿನ ಸಂಸತ್ತಾದ ನೆಸ್ಸೆಟ್ ಅನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಗಳಿವೆ. ಅದರೊಡನೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಡನೆ ಪ್ರಮುಖ ವಿಚಾರಗಳನ್ನು ಚರ್ಚಿಸುವ ಸಾಧ್ಯತೆಗಳಿವೆ. ಆದರೆ, ಕೇವಲ ಕೈಕುಲುಕುವಿಕೆ ಮತ್ತು ಭಾಷಣಗಳಿಗೆ ಸೀಮಿತವಾಗದೆ, ಈ ಭೇಟಿಯ ಹಿನ್ನಲೆಯಲ್ಲಿ ಒಂದಷ್ಟು ದೊಡ್ಡ ಬೆಳವಣಿಗೆಗಳು ಮೌನವಾಗಿಯೇ ರೂಪು ತಳೆಯುತ್ತಿವೆ. ಇದು ಮುಂದಿನ ವರ್ಷಗಳಲ್ಲಿ ಭಾರತ ಹೇಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲಿದೆ ಎನ್ನುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ.</p><p>ಭಾರತ ಮತ್ತು ಇಸ್ರೇಲ್ಗಳು ಹಿಂದೆಂದಿಗಿಂತಲೂ ಭಿನ್ನವಾಗಿ ತಮ್ಮ ರಕ್ಷಣಾ ಸಹಯೋಗವನ್ನು ಆಳವಾಗಿಸುವ ಯೋಜನೆ ರೂಪಿಸುತ್ತಿವೆ. ಯಾವಾಗಲೂ ಪರಸ್ಪರರ ಮೇಲೆ ನಂಬಿಕೆ ಇರಿಸಿದ್ದ ಇಬ್ಬರು ಆತ್ಮೀಯ ಸ್ನೇಹಿತರು ಈಗ ತಮ್ಮ ಪ್ರಮುಖ ರಹಸ್ಯಗಳನ್ನು ಹಂಚಿಕೊಳ್ಳುವುದಕ್ಕೆ ಇದನ್ನು ಹೋಲಿಸಬಹುದು. ಇಸ್ರೇಲ್ ತನ್ನ ಲೇಸರ್ ಆಧಾರಿತ ಆಯುಧಗಳು, ದೀರ್ಘ ವ್ಯಾಪ್ತಿಯ ಕ್ಷಿಪಣಿಗಳು, ಮತ್ತು ಅತ್ಯಾಧುನಿಕ ಡ್ರೋನ್ಗಳು ಸೇರಿದಂತೆ ವಿವಿಧ ಆಧುನಿಕ ರಕ್ಷಣಾ ತಂತ್ರಜ್ಞಾನಗಳನ್ನು ಭಾರತದೊಡನೆ ಹಂಚಿಕೊಳ್ಳಲು ಒಪ್ಪಿಗೆ ಸೂಚಿಸಿದೆ. ಉಭಯ ದೇಶಗಳೂ ಒಂದು ಭದ್ರತಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಗಳಿದ್ದು, ಮುಂದಿನ ವರ್ಷಗಳಲ್ಲಿ ಉಭಯ ದೇಶಗಳ ಒಟ್ಟಾರೆ ಭದ್ರತಾ ಸಹಯೋಗ 10 ಬಿಲಿಯನ್ ಡಾಲರ್ ಮೌಲ್ಯಕ್ಕೆ ಏರಿಕೆ ಕಾಣುವ ನಿರೀಕ್ಷೆಗಳಿವೆ. ಇದೊಂದು ಬೃಹತ್ ಸಂಖ್ಯೆಯಾಗಿದ್ದು, ಉಭಯ ದೇಶಗಳು ಈ ವಿಚಾರದಲ್ಲಿ ಎಷ್ಟು ಗಂಭೀರವಾಗಿವೆ ಎನ್ನುವುದನ್ನು ಸೂಚಿಸುತ್ತದೆ.</p><p>ಈ ಸಹಭಾಗಿತ್ವದ ಅತ್ಯಂತ ಮುಖ್ಯ ಭಾಗಗಳಲ್ಲಿ ಒಂದೆಂದರೆ, ಅದು ಮಿಷನ್ ಸುದರ್ಶನ್. ಸರಳವಾಗಿ ಹೇಳುವುದಾದರೆ, ಭಾರತಕ್ಕೆ ತನ್ನ ನಗರಗಳು ಮತ್ತು ಪ್ರಮುಖ ಪ್ರದೇಶಗಳ ಮೇಲೆ ಒಂದು ರಕ್ಷಣಾ ಕವಚ ನಿರ್ಮಿಸುವ ಗುರಿ ಇದೆ. ಈ ಮೂಲಕ, ಯಾರಾದರೂ ಶತ್ರುಗಳು ಭಾರತದ ಮೇಲೆ ಕ್ಷಿಪಣಿ ಪ್ರಯೋಗಿಸಿದರೆ, ಅದು ನೆಲಕ್ಕೆ ಇಳಿಯುವ ಮುನ್ನವೇ ಆಗಸದಲ್ಲಿ ನಾಶವಾಗಲಿದೆ. ಇಂತಹ ಯೋಜನೆ ರೂಪಿಸುವಲ್ಲಿ, ಇಸ್ರೇಲ್ ಜಗತ್ತಿನಲ್ಲೇ ಅತ್ಯುತ್ತಮ ಸಾಧನೆ ತೋರಿರುವ ದೇಶಗಳಲ್ಲಿ ಪ್ರಮುಖವಾಗಿದೆ. ಇಸ್ರೇಲ್ ದೀರ್ಘ ವ್ಯಾಪ್ತಿಯ ಅಪಾಯಗಳಿಗೆ ಆ್ಯರೋ ವ್ಯವಸ್ಥೆ, ಮಧ್ಯಮ ವ್ಯಾಪ್ತಿಯ ಅಪಾಯಗಳಿಗೆ ಡೇವಿಡ್ಸ್ ಸ್ಲಿಂಗ್, ಮತ್ತು ಸಣ್ಣ ವ್ಯಾಪ್ತಿಯ ಅಪಾಯಗಳನ್ನು ಎದುರಿಸಲು ಜಗತ್ ವಿಖ್ಯಾತವಾದ ಐರನ್ ಡೋಮ್ ರಕ್ಷಣಾ ವ್ಯವಸ್ಥೆಗಳನ್ನು ಹೊಂದಿದೆ. ಕಳೆದ ಜೂನ್ ತಿಂಗಳಲ್ಲಿ, ಇರಾನ್ ಅಪಾರ ಸಂಖ್ಯೆಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇಸ್ರೇಲ್ ಮೇಲೆ ಪ್ರಯೋಗಿಸಿತ್ತು. ಆದರೆ, ಪ್ರಯೋಗಿಸಿದ ಪ್ರತಿ 100 ಕ್ಷಿಪಣಿಗಳ ಪೈಕಿ 98 ಕ್ಷಿಪಣಿಗಳನ್ನು ಆಗಸದಲ್ಲೇ ಹೊಡೆದುರುಳಿಸಲಾಯಿತು. ಇಸ್ರೇಲಿನ ರಕ್ಷಣಾ ಕವಚ ಇಷ್ಟು ಪರಿಣಾಮಕಾರಿಯಾಗಿದೆ. ಭಾರತ ತನ್ನ ಜನರಿಗಾಗಿ ಇದೇ ರೀತಿಯ ರಕ್ಷಣಾ ವ್ಯವಸ್ಥೆಯನ್ನು ಹೊಂದಲು ಬಯಸಿದೆ.</p>.<p>ಭಾರತ ಇದರೊಡನೆ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳು ಮತ್ತು ಲಾಯ್ಟರಿಂಗ್ ಡ್ರೋನ್ಗಳನ್ನು ಖರೀದಿಸುವ ಉದ್ದೇಶವನ್ನೂ ಹೊಂದಿದೆ. ಲಾಯ್ಟರಿಂಗ್ ಡ್ರೋನ್ ಎನ್ನುವುದು ಹಾರಾಡುವ ಬೇಟೆಗಾರನ ರೀತಿಯ ಆಯುಧ. ಇದು ಆಗಸಕ್ಕೆ ಹಾರಿ, ತಾಳ್ಮೆಯಿಂದ ಆಕಾಶದಲ್ಲಿ ಸುತ್ತುಹಾಕುತ್ತಾ, ತನ್ನ ಗುರಿಯನ್ನು ಹುಡುಕುತ್ತದೆ. ಬಳಿಕ, ಸರಿಯಾದ ಸಮಯದಲ್ಲಿ ಗುರಿಯ ಮೇಲೆ ದಾಳಿ ನಡೆಸುತ್ತದೆ. ಈ ಆಯುಧಗಳನ್ನು ಯುದ್ಧ ವಿಮಾನಗಳು, ನೌಕೆಗಳು, ಅಥವಾ ಭೂಮಿಯಿಂದಲೂ ಪ್ರಯೋಗಿಸಬಹುದು. ಆಪರೇಷನ್ ಸಿಂದೂರದ ಸಂದರ್ಭದಲ್ಲಿ, ಭಾರತ ಇಸ್ರೇಲಿ ನಿರ್ಮಿತ ರಾಂಪೇಜ್ ಕ್ಷಿಪಣಿಗಳು, ಪಾಮ್ 400 ಕ್ಷಿಪಣಿಗಳು, ಹಾರೊಪ್ ಮತ್ತು ಹರ್ಪಿ ಕ್ಯಾಮಿಕೇಜ಼್ ಡ್ರೋನ್ಗಳನ್ನು ಬಳಸಿಕೊಂಡು, ಶತ್ರು ಪ್ರದೇಶಗಳ ಒಳಗೆ ದಾಳಿ ನಡೆಸಿದೆ. ಈ ಮೂಲಕ ಇಸ್ಲಾಮಾಬಾದ್ ಬಳಿಯ ಗುರಿಗಳನ್ನೂ ನಾಶಪಡಿಸಿ, ಪಾಕಿಸ್ತಾನ ಬಳಸುತ್ತಿದ್ದ ಚೀನೀ ನಿರ್ಮಿತ ವಾಯು ರಕ್ಷಣಾ ವ್ಯವಸ್ಥೆಗಳನ್ನು ಬಹುತೇಕ ಹಾನಿಪಡಿಸಿತ್ತು. ಆ ಕಾರ್ಯಾಚರಣೆ ಈಗ ಭಾರತದ ಸಾಮರ್ಥ್ಯವೇನು ಎನ್ನುವುದನ್ನು ಜಗತ್ತಿಗೆ ಪ್ರದರ್ಶಿಸಿತ್ತು. ಈಗ ಭಾರತ ಖರೀದಿಸಲು ಬಯಸುತ್ತಿರುವ ಸ್ಪೈಸ್ 1000 ನಿರ್ದೇಶಿತ ಬಾಂಬ್ಗಳು, ಏರ್ ಲೋರಾ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಮತ್ತು ದೀರ್ಘ ವ್ಯಾಪ್ತಿಯ ಐಸ್ ಬ್ರೇಕರ್ ಕ್ಷಿಪಣಿಗಳು ಭಾರತದ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸಲಿವೆ. ಭಾರತೀಯ ನೌಕಾಪಡೆ ಸಮುದ್ರದಲ್ಲಿರುವ ತನ್ನ ನೌಕೆಗಳನ್ನು ರಕ್ಷಿಸುವ ಸಲುವಾಗಿ ದೀರ್ಘ ವ್ಯಾಪ್ತಿಯ ಬರಾಕ್ ಕ್ಷಿಪಣಿಗಳ ಖರೀದಿ ನಡೆಸುತ್ತಿದೆ.</p><p>ಮೋದಿಯವರ ಭೇಟಿಯಲ್ಲಿ ಅತ್ಯಂತ ಆಸಕ್ತಿಕರ ಮತ್ತು ಎಲ್ಲರೂ ಗಮನಿಸುತ್ತಿರುವ ಅಂಶವೆಂದರೆ - ಗೋಲ್ಡನ್ ಹಾರಿಜಾನ್ ಕ್ಷಿಪಣಿ.</p><p>ಪ್ರಧಾನಿ ನರೇಂದ್ರ ಮೋದಿಯವರು ತನ್ನ ಇಸ್ರೇಲ್ ಪ್ರವಾಸಕ್ಕೆ ಸಿದ್ಧರಾಗುತ್ತಿದ್ದು, ಇಸ್ರೇಲ್ ಭಾರತಕ್ಕೆ ತನ್ನ ಗೋಲ್ಡನ್ ಹಾರಿಜಾನ್ ಆಗಸದಿಂದ ಉಡಾವಣೆಗೊಳಿಸುವ ಕ್ಷಿಪಣಿ ಒದಗಿಸಲು ಮುಂದೆ ಬಂದಿದೆ ಎನ್ನಲಾಗಿದೆ. ಉಭಯ ದೇಶಗಳೂ ಇದನ್ನು ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ. ಆದರೆ, ಒಂದು ವೇಳೆ ಇದು ನಿಜವಾದರೆ, ಇದು ನಿಜಕ್ಕೂ ಗೇಮ್ ಚೇಂಜರ್ ಆಗಿದೆ.</p><p>ಈ ಕ್ಷಿಪಣಿ ಹೇಗೆ ಕಾರ್ಯಾಚರಿಸುತ್ತದೆ ಎನ್ನುವುದನ್ನು ಸರಳವಾಗಿ ಗಮನಿಸೋಣ. ಒಂದು ಯುದ್ಧ ವಿಮಾನ ಟೇಕಾಫ್ ಆಗಿ, ಆಗಸದಲ್ಲಿ ಮೇಲೆ ಮೇಲಕ್ಕೆ ಸಾಗುತ್ತದೆ. ಬಳಿಕ, ಪೈಲಟ್ ಗೋಲ್ಡನ್ ಹಾರಿಜಾನ್ ಕ್ಷಿಪಣಿಯನ್ನು ಪ್ರಯೋಗಿಸುತ್ತಾನೆ. ಕ್ಷಿಪಣಿ ಬಹುತೇಕ ಆಗಸದ ಅಂಚನ್ನು ಮುಟ್ಟುವಂತೆ ಮೇಲೆ ಮೇಲಕ್ಕೆ ಸಾಗಿ, ಅಲ್ಲಿಂದ ಮ್ಯಾಕ್ 5ಗಿಂತಲೂ ಹೆಚ್ಚಿನ ವೇಗದಲ್ಲಿ ತನ್ನ ಗುರಿಯೆಡೆಗೆ ನುಗ್ಗಿ ಬರುತ್ತದೆ. ಮ್ಯಾಕ್ 5 ವೇಗ ಎಂದರೆ, ಶಬ್ದದ ವೇಗಕ್ಕಿಂತ ಐದು ಪಟ್ಟು ಹೆಚ್ಚಿನ ವೇಗವಾಗಿದೆ. ಈ ವೇಗದಲ್ಲಿ ಕ್ಷಿಪಣಿ ಬರುವಾಗ, ಶತ್ರುಗಳ ಬಹುತೇಕ ರಕ್ಷಣಾ ವ್ಯವಸ್ಥೆಗಳು ಸರಿಯಾದ ಸಮಯದಲ್ಲಿ ಪ್ರತಿಕ್ರಿಯೆ ನೀಡಲು ಸಾಧ್ಯವೇ ಆಗುವುದಿಲ್ಲ. ಈ ಕ್ಷಿಪಣಿಯನ್ನು ಅತ್ಯಂತ ಹೆಚ್ಚಿನ ರಕ್ಷಣೆ ಹೊಂದಿರುವ ಶತ್ರುಗಳ ಬಂಕರ್ಗಳು, ರಹಸ್ಯ ಕಮಾಂಡ್ ಕೇಂದ್ರಗಳು, ಮತ್ತು ನೆಲದಾಳದಲ್ಲಿರುವ ಮಿಲಿಟರಿ ನೆಲೆಗಳನ್ನು ನಾಶಪಡಿಸಲು ವಿನ್ಯಾಸಗೊಳಿಸಲಾಗಿದೆ. ಇಂತಹ ಬಲವಾದ ಗುರಿಗಳನ್ನು ಸಾಂಪ್ರದಾಯಿಕ ಆಯುಧಗಳ ಮೂಲಕ ತಲುಪಲು ಸಾಧ್ಯವೇ ಇಲ್ಲ.</p><p>ಈ ಕ್ಷಿಪಣಿ ಅಂದಾಜು 1,500 ರಿಂದ 2,000 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ ಎನ್ನಲಾಗಿದೆ. ಆದರೆ, ಇದನ್ನು ಯುದ್ಧ ವಿಮಾನದಿಂದ ಪ್ರಯೋಗಿಸಿದಾಗ, ಇದರ ಪರಿಣಾಮಕಾರಿ ವ್ಯಾಪ್ತಿ ಅಂದಾಜು 800 ಕಿಲೋಮೀಟರ್ ಇರಬಹುದು. ಜಗತ್ತಿನಲ್ಲಿ ಕೆಲವು ದೇಶಗಳ ಬಳಿ ಮಾತ್ರವೇ ಇಂತಹ ಆಯುಧವಿದೆ. ಕೇವಲ ರಷ್ಯಾ, ಚೀನಾ ಮತ್ತು ಇಸ್ರೇಲ್ ಬಳಿ ಮಾತ್ರವೇ ಆಗಸದಿಂದ ಉಡಾವಣೆಗೊಳಿಸುವ ಇಂತಹ ಬ್ಯಾಲಿಸ್ಟಿಕ್ ಕ್ಷಿಪಣಿಗಳಿವೆ. ಒಂದು ವೇಳೆ ಭಾರತ ಗೋಲ್ಡನ್ ಹಾರಿಜಾನ್ ಕ್ಷಿಪಣಿಯನ್ನು ಪಡೆದುಕೊಂಡು, ಅದನ್ನು ತನ್ನ ಸು-30ಎಂಕೆಐ ಯುದ್ಧ ವಿಮಾನಗಳಿಗೆ ಅಳವಡಿಸಿದರೆ, ಆಗ ಭಾರತೀಯ ವಾಯುಪಡೆಗೆ ಸಾಕಷ್ಟು ದೂರದಲ್ಲಿರುವ, ಅತ್ಯಂತ ಹೆಚ್ಚಿನ ರಕ್ಷಣೆ ಹೊಂದಿರುವ ಗುರಿಗಳ ಮೇಲೆ ಕ್ಷಿಪ್ರವಾಗಿ, ಸುರಕ್ಷಿತವಾಗಿ, ಮತ್ತು ಶತ್ರುಗಳಿಗೆ ಯಾವುದೇ ಮುನ್ನೆಚ್ಚರಿಕೆ ನೀಡದಂತೆ ದಾಳಿ ನಡೆಸಲು ಸಾಧ್ಯವಾಗುತ್ತದೆ.</p><p>ಇದನ್ನು ಭಾರತದ ಸ್ವಂತ ಬ್ರಹ್ಮೋಸ್ ಕ್ಷಿಪಣಿಯೊಡನೆ ಹೋಲಿಸಿ ನೋಡಿ. ಬ್ರಹ್ಮೋಸ್ ಕ್ಷಿಪಣಿ ಅಂದಾಜು ಮ್ಯಾಕ್ 2.8ರಿಂದ ಮ್ಯಾಕ್ 3 ವೇಗದಲ್ಲಿ ಸಾಗುತ್ತದೆ. ಆದರೆ, ಗೋಲ್ಡನ್ ಹಾರಿಜಾನ್ ಮ್ಯಾಕ್ 5 ಅಥವಾ ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಹಾರುತ್ತದೆ. ಇದು ಅತ್ಯಂತ ಹೆಚ್ಚು ಎತ್ತರ ಮತ್ತು ವೇಗವಾಗಿ ಸಾಗುವುದರಿಂದ, ಇದನ್ನು ತಡೆಗಟ್ಟುವುದು ಬಹಳಷ್ಟು ಕಷ್ಟಕರವಾಗುತ್ತದೆ. ಇದು ಒಂದು ರೀತಿ ಅತ್ಯಂತ ವೇಗದ ಕಾರ್ ಮತ್ತು ರಾಕೆಟ್ಗಳನ್ನು ಹೋಲಿಸಿದಂತಾಗುತ್ತದೆ!</p><p>ಭಾರತದ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ವಾಸಿಸುವ ಸಾಮಾನ್ಯ ಕುಟುಂಬಗಳಿಗೆ ಈ ಸುದ್ದಿ ದೂರದ ವರ್ತಮಾನದಂತೆ, ತಾಂತ್ರಿಕ ಸಮಾಚಾರದಂತೆ ಭಾಸವಾಗಬಹುದು. ಆದರೆ, ಇದರ ನೈಜ ಪರಿಣಾಮವೆಂದರೆ, ಭಾರತ ಈಗ ಹೆಚ್ಚು ಬಲವಾದ, ಸ್ಮಾರ್ಟ್ ಆದ ಕವಚವನ್ನು ತಾನೇ ತನ್ನ ಸುತ್ತಲೂ ಅಳವಡಿಸುತ್ತಿದೆ. ಈ ಕವಚ ನಮ್ಮ ಯೋಧರಿಗೆ ಅಪಾಯದಿಂದ ಸಾಕಷ್ಟು ದೂರದಲ್ಲಿರುವ ಆಗಸದಿಂದ ಶತ್ರುಗಳ ಮೇಲೆ ದಾಳಿ ನಡೆಸಲು ಅವಕಾಶ ಮಾಡಿಕೊಡಲಿದ್ದು, ಅವರನ್ನು ಸುರಕ್ಷಿತವಾಗಿಡಲಿದೆ. ಇದು ಗೋಲ್ಡನ್ ಹಾರಿಜಾನ್ ಕ್ಷಿಪಣಿಯ ನೈಜ ಸಾಮರ್ಥ್ಯ. ಇದು ಕೇವಲ ಒಂದು ಕ್ಷಿಪಣಿಯಲ್ಲ. ಬದಲಿಗೆ, ಶತ್ರುಗಳಿಗೆ ಒಂದು ಸ್ಪಷ್ಟ ಸಂದೇಶವಾಗಿದೆ.</p><p>(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.</p><p>---</p><p><strong>-ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)</strong></p><p><strong>ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)</strong></p>.ಮನದ ಮಾತು: ಅಂಗಾಂಗ ದಾನದ ಉದಾತ್ತ ಕಾರ್ಯಕ್ಕೆ ಪ್ರಧಾನಿ ಮೋದಿ ಶ್ಲಾಘನೆ .ವಾಣಿಜ್ಯ ನಗರಿ ಮುಂಬೈಯಲ್ಲಿ ಬ್ರಿಟನ್ ಪ್ರಧಾನಿ ಜೊತೆ ಮೋದಿ ಮಾತುಕತೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಭೇಟಿಗಾಗಿ ಫೆಬ್ರವರಿ 25 ಮತ್ತು 26ರಂದು ಇಸ್ರೇಲ್ಗೆ ತೆರಳುತ್ತಿದ್ದು, ಈ ಭೇಟಿಯನ್ನು ಜಗತ್ತಿನಾದ್ಯಂತ ರಕ್ಷಣಾ ತಜ್ಞರು ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲಿನ ಸಂಸತ್ತಾದ ನೆಸ್ಸೆಟ್ ಅನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಗಳಿವೆ. ಅದರೊಡನೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಡನೆ ಪ್ರಮುಖ ವಿಚಾರಗಳನ್ನು ಚರ್ಚಿಸುವ ಸಾಧ್ಯತೆಗಳಿವೆ. ಆದರೆ, ಕೇವಲ ಕೈಕುಲುಕುವಿಕೆ ಮತ್ತು ಭಾಷಣಗಳಿಗೆ ಸೀಮಿತವಾಗದೆ, ಈ ಭೇಟಿಯ ಹಿನ್ನಲೆಯಲ್ಲಿ ಒಂದಷ್ಟು ದೊಡ್ಡ ಬೆಳವಣಿಗೆಗಳು ಮೌನವಾಗಿಯೇ ರೂಪು ತಳೆಯುತ್ತಿವೆ. ಇದು ಮುಂದಿನ ವರ್ಷಗಳಲ್ಲಿ ಭಾರತ ಹೇಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲಿದೆ ಎನ್ನುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ.</p><p>ಭಾರತ ಮತ್ತು ಇಸ್ರೇಲ್ಗಳು ಹಿಂದೆಂದಿಗಿಂತಲೂ ಭಿನ್ನವಾಗಿ ತಮ್ಮ ರಕ್ಷಣಾ ಸಹಯೋಗವನ್ನು ಆಳವಾಗಿಸುವ ಯೋಜನೆ ರೂಪಿಸುತ್ತಿವೆ. ಯಾವಾಗಲೂ ಪರಸ್ಪರರ ಮೇಲೆ ನಂಬಿಕೆ ಇರಿಸಿದ್ದ ಇಬ್ಬರು ಆತ್ಮೀಯ ಸ್ನೇಹಿತರು ಈಗ ತಮ್ಮ ಪ್ರಮುಖ ರಹಸ್ಯಗಳನ್ನು ಹಂಚಿಕೊಳ್ಳುವುದಕ್ಕೆ ಇದನ್ನು ಹೋಲಿಸಬಹುದು. ಇಸ್ರೇಲ್ ತನ್ನ ಲೇಸರ್ ಆಧಾರಿತ ಆಯುಧಗಳು, ದೀರ್ಘ ವ್ಯಾಪ್ತಿಯ ಕ್ಷಿಪಣಿಗಳು, ಮತ್ತು ಅತ್ಯಾಧುನಿಕ ಡ್ರೋನ್ಗಳು ಸೇರಿದಂತೆ ವಿವಿಧ ಆಧುನಿಕ ರಕ್ಷಣಾ ತಂತ್ರಜ್ಞಾನಗಳನ್ನು ಭಾರತದೊಡನೆ ಹಂಚಿಕೊಳ್ಳಲು ಒಪ್ಪಿಗೆ ಸೂಚಿಸಿದೆ. ಉಭಯ ದೇಶಗಳೂ ಒಂದು ಭದ್ರತಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಗಳಿದ್ದು, ಮುಂದಿನ ವರ್ಷಗಳಲ್ಲಿ ಉಭಯ ದೇಶಗಳ ಒಟ್ಟಾರೆ ಭದ್ರತಾ ಸಹಯೋಗ 10 ಬಿಲಿಯನ್ ಡಾಲರ್ ಮೌಲ್ಯಕ್ಕೆ ಏರಿಕೆ ಕಾಣುವ ನಿರೀಕ್ಷೆಗಳಿವೆ. ಇದೊಂದು ಬೃಹತ್ ಸಂಖ್ಯೆಯಾಗಿದ್ದು, ಉಭಯ ದೇಶಗಳು ಈ ವಿಚಾರದಲ್ಲಿ ಎಷ್ಟು ಗಂಭೀರವಾಗಿವೆ ಎನ್ನುವುದನ್ನು ಸೂಚಿಸುತ್ತದೆ.</p><p>ಈ ಸಹಭಾಗಿತ್ವದ ಅತ್ಯಂತ ಮುಖ್ಯ ಭಾಗಗಳಲ್ಲಿ ಒಂದೆಂದರೆ, ಅದು ಮಿಷನ್ ಸುದರ್ಶನ್. ಸರಳವಾಗಿ ಹೇಳುವುದಾದರೆ, ಭಾರತಕ್ಕೆ ತನ್ನ ನಗರಗಳು ಮತ್ತು ಪ್ರಮುಖ ಪ್ರದೇಶಗಳ ಮೇಲೆ ಒಂದು ರಕ್ಷಣಾ ಕವಚ ನಿರ್ಮಿಸುವ ಗುರಿ ಇದೆ. ಈ ಮೂಲಕ, ಯಾರಾದರೂ ಶತ್ರುಗಳು ಭಾರತದ ಮೇಲೆ ಕ್ಷಿಪಣಿ ಪ್ರಯೋಗಿಸಿದರೆ, ಅದು ನೆಲಕ್ಕೆ ಇಳಿಯುವ ಮುನ್ನವೇ ಆಗಸದಲ್ಲಿ ನಾಶವಾಗಲಿದೆ. ಇಂತಹ ಯೋಜನೆ ರೂಪಿಸುವಲ್ಲಿ, ಇಸ್ರೇಲ್ ಜಗತ್ತಿನಲ್ಲೇ ಅತ್ಯುತ್ತಮ ಸಾಧನೆ ತೋರಿರುವ ದೇಶಗಳಲ್ಲಿ ಪ್ರಮುಖವಾಗಿದೆ. ಇಸ್ರೇಲ್ ದೀರ್ಘ ವ್ಯಾಪ್ತಿಯ ಅಪಾಯಗಳಿಗೆ ಆ್ಯರೋ ವ್ಯವಸ್ಥೆ, ಮಧ್ಯಮ ವ್ಯಾಪ್ತಿಯ ಅಪಾಯಗಳಿಗೆ ಡೇವಿಡ್ಸ್ ಸ್ಲಿಂಗ್, ಮತ್ತು ಸಣ್ಣ ವ್ಯಾಪ್ತಿಯ ಅಪಾಯಗಳನ್ನು ಎದುರಿಸಲು ಜಗತ್ ವಿಖ್ಯಾತವಾದ ಐರನ್ ಡೋಮ್ ರಕ್ಷಣಾ ವ್ಯವಸ್ಥೆಗಳನ್ನು ಹೊಂದಿದೆ. ಕಳೆದ ಜೂನ್ ತಿಂಗಳಲ್ಲಿ, ಇರಾನ್ ಅಪಾರ ಸಂಖ್ಯೆಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇಸ್ರೇಲ್ ಮೇಲೆ ಪ್ರಯೋಗಿಸಿತ್ತು. ಆದರೆ, ಪ್ರಯೋಗಿಸಿದ ಪ್ರತಿ 100 ಕ್ಷಿಪಣಿಗಳ ಪೈಕಿ 98 ಕ್ಷಿಪಣಿಗಳನ್ನು ಆಗಸದಲ್ಲೇ ಹೊಡೆದುರುಳಿಸಲಾಯಿತು. ಇಸ್ರೇಲಿನ ರಕ್ಷಣಾ ಕವಚ ಇಷ್ಟು ಪರಿಣಾಮಕಾರಿಯಾಗಿದೆ. ಭಾರತ ತನ್ನ ಜನರಿಗಾಗಿ ಇದೇ ರೀತಿಯ ರಕ್ಷಣಾ ವ್ಯವಸ್ಥೆಯನ್ನು ಹೊಂದಲು ಬಯಸಿದೆ.</p>.<p>ಭಾರತ ಇದರೊಡನೆ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳು ಮತ್ತು ಲಾಯ್ಟರಿಂಗ್ ಡ್ರೋನ್ಗಳನ್ನು ಖರೀದಿಸುವ ಉದ್ದೇಶವನ್ನೂ ಹೊಂದಿದೆ. ಲಾಯ್ಟರಿಂಗ್ ಡ್ರೋನ್ ಎನ್ನುವುದು ಹಾರಾಡುವ ಬೇಟೆಗಾರನ ರೀತಿಯ ಆಯುಧ. ಇದು ಆಗಸಕ್ಕೆ ಹಾರಿ, ತಾಳ್ಮೆಯಿಂದ ಆಕಾಶದಲ್ಲಿ ಸುತ್ತುಹಾಕುತ್ತಾ, ತನ್ನ ಗುರಿಯನ್ನು ಹುಡುಕುತ್ತದೆ. ಬಳಿಕ, ಸರಿಯಾದ ಸಮಯದಲ್ಲಿ ಗುರಿಯ ಮೇಲೆ ದಾಳಿ ನಡೆಸುತ್ತದೆ. ಈ ಆಯುಧಗಳನ್ನು ಯುದ್ಧ ವಿಮಾನಗಳು, ನೌಕೆಗಳು, ಅಥವಾ ಭೂಮಿಯಿಂದಲೂ ಪ್ರಯೋಗಿಸಬಹುದು. ಆಪರೇಷನ್ ಸಿಂದೂರದ ಸಂದರ್ಭದಲ್ಲಿ, ಭಾರತ ಇಸ್ರೇಲಿ ನಿರ್ಮಿತ ರಾಂಪೇಜ್ ಕ್ಷಿಪಣಿಗಳು, ಪಾಮ್ 400 ಕ್ಷಿಪಣಿಗಳು, ಹಾರೊಪ್ ಮತ್ತು ಹರ್ಪಿ ಕ್ಯಾಮಿಕೇಜ಼್ ಡ್ರೋನ್ಗಳನ್ನು ಬಳಸಿಕೊಂಡು, ಶತ್ರು ಪ್ರದೇಶಗಳ ಒಳಗೆ ದಾಳಿ ನಡೆಸಿದೆ. ಈ ಮೂಲಕ ಇಸ್ಲಾಮಾಬಾದ್ ಬಳಿಯ ಗುರಿಗಳನ್ನೂ ನಾಶಪಡಿಸಿ, ಪಾಕಿಸ್ತಾನ ಬಳಸುತ್ತಿದ್ದ ಚೀನೀ ನಿರ್ಮಿತ ವಾಯು ರಕ್ಷಣಾ ವ್ಯವಸ್ಥೆಗಳನ್ನು ಬಹುತೇಕ ಹಾನಿಪಡಿಸಿತ್ತು. ಆ ಕಾರ್ಯಾಚರಣೆ ಈಗ ಭಾರತದ ಸಾಮರ್ಥ್ಯವೇನು ಎನ್ನುವುದನ್ನು ಜಗತ್ತಿಗೆ ಪ್ರದರ್ಶಿಸಿತ್ತು. ಈಗ ಭಾರತ ಖರೀದಿಸಲು ಬಯಸುತ್ತಿರುವ ಸ್ಪೈಸ್ 1000 ನಿರ್ದೇಶಿತ ಬಾಂಬ್ಗಳು, ಏರ್ ಲೋರಾ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಮತ್ತು ದೀರ್ಘ ವ್ಯಾಪ್ತಿಯ ಐಸ್ ಬ್ರೇಕರ್ ಕ್ಷಿಪಣಿಗಳು ಭಾರತದ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸಲಿವೆ. ಭಾರತೀಯ ನೌಕಾಪಡೆ ಸಮುದ್ರದಲ್ಲಿರುವ ತನ್ನ ನೌಕೆಗಳನ್ನು ರಕ್ಷಿಸುವ ಸಲುವಾಗಿ ದೀರ್ಘ ವ್ಯಾಪ್ತಿಯ ಬರಾಕ್ ಕ್ಷಿಪಣಿಗಳ ಖರೀದಿ ನಡೆಸುತ್ತಿದೆ.</p><p>ಮೋದಿಯವರ ಭೇಟಿಯಲ್ಲಿ ಅತ್ಯಂತ ಆಸಕ್ತಿಕರ ಮತ್ತು ಎಲ್ಲರೂ ಗಮನಿಸುತ್ತಿರುವ ಅಂಶವೆಂದರೆ - ಗೋಲ್ಡನ್ ಹಾರಿಜಾನ್ ಕ್ಷಿಪಣಿ.</p><p>ಪ್ರಧಾನಿ ನರೇಂದ್ರ ಮೋದಿಯವರು ತನ್ನ ಇಸ್ರೇಲ್ ಪ್ರವಾಸಕ್ಕೆ ಸಿದ್ಧರಾಗುತ್ತಿದ್ದು, ಇಸ್ರೇಲ್ ಭಾರತಕ್ಕೆ ತನ್ನ ಗೋಲ್ಡನ್ ಹಾರಿಜಾನ್ ಆಗಸದಿಂದ ಉಡಾವಣೆಗೊಳಿಸುವ ಕ್ಷಿಪಣಿ ಒದಗಿಸಲು ಮುಂದೆ ಬಂದಿದೆ ಎನ್ನಲಾಗಿದೆ. ಉಭಯ ದೇಶಗಳೂ ಇದನ್ನು ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ. ಆದರೆ, ಒಂದು ವೇಳೆ ಇದು ನಿಜವಾದರೆ, ಇದು ನಿಜಕ್ಕೂ ಗೇಮ್ ಚೇಂಜರ್ ಆಗಿದೆ.</p><p>ಈ ಕ್ಷಿಪಣಿ ಹೇಗೆ ಕಾರ್ಯಾಚರಿಸುತ್ತದೆ ಎನ್ನುವುದನ್ನು ಸರಳವಾಗಿ ಗಮನಿಸೋಣ. ಒಂದು ಯುದ್ಧ ವಿಮಾನ ಟೇಕಾಫ್ ಆಗಿ, ಆಗಸದಲ್ಲಿ ಮೇಲೆ ಮೇಲಕ್ಕೆ ಸಾಗುತ್ತದೆ. ಬಳಿಕ, ಪೈಲಟ್ ಗೋಲ್ಡನ್ ಹಾರಿಜಾನ್ ಕ್ಷಿಪಣಿಯನ್ನು ಪ್ರಯೋಗಿಸುತ್ತಾನೆ. ಕ್ಷಿಪಣಿ ಬಹುತೇಕ ಆಗಸದ ಅಂಚನ್ನು ಮುಟ್ಟುವಂತೆ ಮೇಲೆ ಮೇಲಕ್ಕೆ ಸಾಗಿ, ಅಲ್ಲಿಂದ ಮ್ಯಾಕ್ 5ಗಿಂತಲೂ ಹೆಚ್ಚಿನ ವೇಗದಲ್ಲಿ ತನ್ನ ಗುರಿಯೆಡೆಗೆ ನುಗ್ಗಿ ಬರುತ್ತದೆ. ಮ್ಯಾಕ್ 5 ವೇಗ ಎಂದರೆ, ಶಬ್ದದ ವೇಗಕ್ಕಿಂತ ಐದು ಪಟ್ಟು ಹೆಚ್ಚಿನ ವೇಗವಾಗಿದೆ. ಈ ವೇಗದಲ್ಲಿ ಕ್ಷಿಪಣಿ ಬರುವಾಗ, ಶತ್ರುಗಳ ಬಹುತೇಕ ರಕ್ಷಣಾ ವ್ಯವಸ್ಥೆಗಳು ಸರಿಯಾದ ಸಮಯದಲ್ಲಿ ಪ್ರತಿಕ್ರಿಯೆ ನೀಡಲು ಸಾಧ್ಯವೇ ಆಗುವುದಿಲ್ಲ. ಈ ಕ್ಷಿಪಣಿಯನ್ನು ಅತ್ಯಂತ ಹೆಚ್ಚಿನ ರಕ್ಷಣೆ ಹೊಂದಿರುವ ಶತ್ರುಗಳ ಬಂಕರ್ಗಳು, ರಹಸ್ಯ ಕಮಾಂಡ್ ಕೇಂದ್ರಗಳು, ಮತ್ತು ನೆಲದಾಳದಲ್ಲಿರುವ ಮಿಲಿಟರಿ ನೆಲೆಗಳನ್ನು ನಾಶಪಡಿಸಲು ವಿನ್ಯಾಸಗೊಳಿಸಲಾಗಿದೆ. ಇಂತಹ ಬಲವಾದ ಗುರಿಗಳನ್ನು ಸಾಂಪ್ರದಾಯಿಕ ಆಯುಧಗಳ ಮೂಲಕ ತಲುಪಲು ಸಾಧ್ಯವೇ ಇಲ್ಲ.</p><p>ಈ ಕ್ಷಿಪಣಿ ಅಂದಾಜು 1,500 ರಿಂದ 2,000 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ ಎನ್ನಲಾಗಿದೆ. ಆದರೆ, ಇದನ್ನು ಯುದ್ಧ ವಿಮಾನದಿಂದ ಪ್ರಯೋಗಿಸಿದಾಗ, ಇದರ ಪರಿಣಾಮಕಾರಿ ವ್ಯಾಪ್ತಿ ಅಂದಾಜು 800 ಕಿಲೋಮೀಟರ್ ಇರಬಹುದು. ಜಗತ್ತಿನಲ್ಲಿ ಕೆಲವು ದೇಶಗಳ ಬಳಿ ಮಾತ್ರವೇ ಇಂತಹ ಆಯುಧವಿದೆ. ಕೇವಲ ರಷ್ಯಾ, ಚೀನಾ ಮತ್ತು ಇಸ್ರೇಲ್ ಬಳಿ ಮಾತ್ರವೇ ಆಗಸದಿಂದ ಉಡಾವಣೆಗೊಳಿಸುವ ಇಂತಹ ಬ್ಯಾಲಿಸ್ಟಿಕ್ ಕ್ಷಿಪಣಿಗಳಿವೆ. ಒಂದು ವೇಳೆ ಭಾರತ ಗೋಲ್ಡನ್ ಹಾರಿಜಾನ್ ಕ್ಷಿಪಣಿಯನ್ನು ಪಡೆದುಕೊಂಡು, ಅದನ್ನು ತನ್ನ ಸು-30ಎಂಕೆಐ ಯುದ್ಧ ವಿಮಾನಗಳಿಗೆ ಅಳವಡಿಸಿದರೆ, ಆಗ ಭಾರತೀಯ ವಾಯುಪಡೆಗೆ ಸಾಕಷ್ಟು ದೂರದಲ್ಲಿರುವ, ಅತ್ಯಂತ ಹೆಚ್ಚಿನ ರಕ್ಷಣೆ ಹೊಂದಿರುವ ಗುರಿಗಳ ಮೇಲೆ ಕ್ಷಿಪ್ರವಾಗಿ, ಸುರಕ್ಷಿತವಾಗಿ, ಮತ್ತು ಶತ್ರುಗಳಿಗೆ ಯಾವುದೇ ಮುನ್ನೆಚ್ಚರಿಕೆ ನೀಡದಂತೆ ದಾಳಿ ನಡೆಸಲು ಸಾಧ್ಯವಾಗುತ್ತದೆ.</p><p>ಇದನ್ನು ಭಾರತದ ಸ್ವಂತ ಬ್ರಹ್ಮೋಸ್ ಕ್ಷಿಪಣಿಯೊಡನೆ ಹೋಲಿಸಿ ನೋಡಿ. ಬ್ರಹ್ಮೋಸ್ ಕ್ಷಿಪಣಿ ಅಂದಾಜು ಮ್ಯಾಕ್ 2.8ರಿಂದ ಮ್ಯಾಕ್ 3 ವೇಗದಲ್ಲಿ ಸಾಗುತ್ತದೆ. ಆದರೆ, ಗೋಲ್ಡನ್ ಹಾರಿಜಾನ್ ಮ್ಯಾಕ್ 5 ಅಥವಾ ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಹಾರುತ್ತದೆ. ಇದು ಅತ್ಯಂತ ಹೆಚ್ಚು ಎತ್ತರ ಮತ್ತು ವೇಗವಾಗಿ ಸಾಗುವುದರಿಂದ, ಇದನ್ನು ತಡೆಗಟ್ಟುವುದು ಬಹಳಷ್ಟು ಕಷ್ಟಕರವಾಗುತ್ತದೆ. ಇದು ಒಂದು ರೀತಿ ಅತ್ಯಂತ ವೇಗದ ಕಾರ್ ಮತ್ತು ರಾಕೆಟ್ಗಳನ್ನು ಹೋಲಿಸಿದಂತಾಗುತ್ತದೆ!</p><p>ಭಾರತದ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ವಾಸಿಸುವ ಸಾಮಾನ್ಯ ಕುಟುಂಬಗಳಿಗೆ ಈ ಸುದ್ದಿ ದೂರದ ವರ್ತಮಾನದಂತೆ, ತಾಂತ್ರಿಕ ಸಮಾಚಾರದಂತೆ ಭಾಸವಾಗಬಹುದು. ಆದರೆ, ಇದರ ನೈಜ ಪರಿಣಾಮವೆಂದರೆ, ಭಾರತ ಈಗ ಹೆಚ್ಚು ಬಲವಾದ, ಸ್ಮಾರ್ಟ್ ಆದ ಕವಚವನ್ನು ತಾನೇ ತನ್ನ ಸುತ್ತಲೂ ಅಳವಡಿಸುತ್ತಿದೆ. ಈ ಕವಚ ನಮ್ಮ ಯೋಧರಿಗೆ ಅಪಾಯದಿಂದ ಸಾಕಷ್ಟು ದೂರದಲ್ಲಿರುವ ಆಗಸದಿಂದ ಶತ್ರುಗಳ ಮೇಲೆ ದಾಳಿ ನಡೆಸಲು ಅವಕಾಶ ಮಾಡಿಕೊಡಲಿದ್ದು, ಅವರನ್ನು ಸುರಕ್ಷಿತವಾಗಿಡಲಿದೆ. ಇದು ಗೋಲ್ಡನ್ ಹಾರಿಜಾನ್ ಕ್ಷಿಪಣಿಯ ನೈಜ ಸಾಮರ್ಥ್ಯ. ಇದು ಕೇವಲ ಒಂದು ಕ್ಷಿಪಣಿಯಲ್ಲ. ಬದಲಿಗೆ, ಶತ್ರುಗಳಿಗೆ ಒಂದು ಸ್ಪಷ್ಟ ಸಂದೇಶವಾಗಿದೆ.</p><p>(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.</p><p>---</p><p><strong>-ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)</strong></p><p><strong>ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)</strong></p>.ಮನದ ಮಾತು: ಅಂಗಾಂಗ ದಾನದ ಉದಾತ್ತ ಕಾರ್ಯಕ್ಕೆ ಪ್ರಧಾನಿ ಮೋದಿ ಶ್ಲಾಘನೆ .ವಾಣಿಜ್ಯ ನಗರಿ ಮುಂಬೈಯಲ್ಲಿ ಬ್ರಿಟನ್ ಪ್ರಧಾನಿ ಜೊತೆ ಮೋದಿ ಮಾತುಕತೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>