ಪುಣ್ಯಕೋಟಿಯ ಕಥೆಯನ್ನು ಈಗ ಬದಲಿಸಬೇಕಾಗಿದೆ. ಹಬ್ಬಿದಾ ಮಲೆ ಮಧ್ಯದೊಳಗಿನ ವ್ಯಾಘ್ರಗಳಿಗೆ ಹಸಿವಿದೆಯೇ ಹೊರತು, ಸ್ವಾರ್ಥವಿಲ್ಲ. ಇತ್ತೀಚೆಗೆ ವಿಷಪ್ರಾಶನಕ್ಕೆ ತುತ್ತಾದ ಐದು ಹುಲಿಗಳು– ಮನುಷ್ಯರ ಸ್ವಾರ್ಥ, ಸಣ್ಣತನ ಹಾಗೂ ಕ್ರೌರ್ಯದ ಕಥೆ ಹೇಳುವಂತಿವೆ ಹಾಗೂ ಮನುಷ್ಯರ ಎದುರು ಹುಲಿಗಳೇ ಪುಣ್ಯಕೋಟಿಗಳಂತೆ ಕಾಣಿಸುತ್ತಿವೆ.