<p>ತೆಪರೇಸಿ ಹೊಸ ನ್ಯೂಸ್ ಚಾನೆಲ್ ಒಂದಕ್ಕೆ ರಾಜಕೀಯ ವರದಿಗಾರನಾಗಿ ಸೇರಲು ಸಂದರ್ಶನಕ್ಕೆ ಹೋಗಿದ್ದ. ಸಂಪಾದಕರು ಸಂದರ್ಶನ ಶುರು ಮಾಡಿದರು.</p>.<p>‘ನೀವು ರಾಜಕೀಯ ವರದಿಗಾರನಾಗಬೇಕೆಂದು ಏಕೆ ಇಷ್ಟಪಟ್ಟಿದ್ದೀರಿ?’</p>.<p>‘ಸದ್ಯ ಅದ್ರಲ್ಲಿ ಇರೋ ಮಜ ಬೇರೆ ಯಾವುದ್ರಲ್ಲಿ ಐತೆ ಸಾ... ಮನಸ್ಸು ಮಾಡಿದ್ರೆ ಒಂದು ಸರ್ಕಾರ ಉರುಳಿಸಬಹುದು. ನಿಮಗೆ ಆಗದೇ ಇರೋರ್ನ ಗುಡಿಸಿ ಗುಂಡಾಂತರ ಮಾಡಿಬಿಡಬಹುದು’.</p>.<p>‘ಪರವಾಗಿಲ್ಲ, ಟ್ರ್ಯಾಕ್ನಲ್ಲಿದ್ದೀರಿ. ‘ನಮ್ಮ ಸರ್ಕಾರ ಸುಭದ್ರವಾಗಿದೆ. ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ’ ಅಂದ್ರೆ ಏನರ್ಥ?’</p>.<p>‘ಸರ್ಕಾರ ಅಲುಗಾಡ್ತಾ ಐತೆ, ಭಿನ್ನಮತ ರಿಪೇರಿ ಮಾಡಾಕೆ ಟ್ರೈ ಮಾಡ್ತಾ ಅದಾರೆ ಅಂತ ಅರ್ಥ ಸಾ...’</p>.<p>‘ಗುಡ್, ರಾಜಕಾರಣಿಗಳು ಇದೇ ನನ್ನ ಕೊನೆಯ ಚುನಾವಣೆ ಅಂತಿರ್ತಾರಲ್ಲ, ಹಂಗಂದ್ರೆ ಏನು?’</p>.<p>‘ಈ ಸಲ ಗೆಲ್ಲಿಸಿಬಿಡಿ, ಐದು ವರ್ಷ ಆಗೋವರೆಗೆ ಮತ್ತೆ ಆ ಡೈಲಾಗ್ ಹೊಡೆಯಲ್ಲ ಅಂತ ಅರ್ಥ’.</p>.<p>‘ಕರೆಕ್ಟ್, ನನ್ನ ಮೇಲಿರೋ ಆಪಾದನೆ ಸಾಬೀತು ಮಾಡಿಬಿಟ್ರೆ ನಾನು ರಾಜಕೀಯದಿಂದಲೇ ನಿವೃತ್ತಿ ಆಗಿಬಿಡ್ತೀನಿ ಅಂತಿರ್ತಾರಲ್ಲ, ಹಂಗಂದ್ರೆ ಏನರ್ಥ?’</p>.<p>‘ತಪ್ಪು ಮಾಡಿರೋದು ನಿಜ. ಆದ್ರೆ ಸಾಬೀತು ಮಾಡೋಕೆ ಸಾಕ್ಷ್ಯಗಳಿಲ್ಲ ಅನ್ನೋ ಧೈರ್ಯ!’</p>.<p>‘ವೆರಿಗುಡ್, ಎಲ್ಲ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಟ್ಟಿದ್ದೀರಿ. ಕೊನೇ ಪ್ರಶ್ನೆ, ಮಂಡ್ಯ ರಾಜಕೀಯವನ್ನ ಒಂದೇ ಮಾತಿನಲ್ಲಿ ಹೇಳಿ ನೋಡೋಣ’.</p>.<p>‘ನನ್ನಂಥ ಕಚಡಾ ನನ್ಮಗ ಯಾರೂ ಇಲ್ಲ ಸಾ... ಈಗೇನು ಕೆಲ್ಸ ಕೊಡ್ತಿರೋ ಇಲ್ವೊ?’</p>.<p>ತೆಪರೇಸಿ ಮಾತು ಕೇಳಿ ಸಂಪಾದಕರು ಕೂತಲ್ಲೇ ಕಕ್ಕಾಬಿಕ್ಕಿಯಾದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ತೆಪರೇಸಿ ಹೊಸ ನ್ಯೂಸ್ ಚಾನೆಲ್ ಒಂದಕ್ಕೆ ರಾಜಕೀಯ ವರದಿಗಾರನಾಗಿ ಸೇರಲು ಸಂದರ್ಶನಕ್ಕೆ ಹೋಗಿದ್ದ. ಸಂಪಾದಕರು ಸಂದರ್ಶನ ಶುರು ಮಾಡಿದರು.</p>.<p>‘ನೀವು ರಾಜಕೀಯ ವರದಿಗಾರನಾಗಬೇಕೆಂದು ಏಕೆ ಇಷ್ಟಪಟ್ಟಿದ್ದೀರಿ?’</p>.<p>‘ಸದ್ಯ ಅದ್ರಲ್ಲಿ ಇರೋ ಮಜ ಬೇರೆ ಯಾವುದ್ರಲ್ಲಿ ಐತೆ ಸಾ... ಮನಸ್ಸು ಮಾಡಿದ್ರೆ ಒಂದು ಸರ್ಕಾರ ಉರುಳಿಸಬಹುದು. ನಿಮಗೆ ಆಗದೇ ಇರೋರ್ನ ಗುಡಿಸಿ ಗುಂಡಾಂತರ ಮಾಡಿಬಿಡಬಹುದು’.</p>.<p>‘ಪರವಾಗಿಲ್ಲ, ಟ್ರ್ಯಾಕ್ನಲ್ಲಿದ್ದೀರಿ. ‘ನಮ್ಮ ಸರ್ಕಾರ ಸುಭದ್ರವಾಗಿದೆ. ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ’ ಅಂದ್ರೆ ಏನರ್ಥ?’</p>.<p>‘ಸರ್ಕಾರ ಅಲುಗಾಡ್ತಾ ಐತೆ, ಭಿನ್ನಮತ ರಿಪೇರಿ ಮಾಡಾಕೆ ಟ್ರೈ ಮಾಡ್ತಾ ಅದಾರೆ ಅಂತ ಅರ್ಥ ಸಾ...’</p>.<p>‘ಗುಡ್, ರಾಜಕಾರಣಿಗಳು ಇದೇ ನನ್ನ ಕೊನೆಯ ಚುನಾವಣೆ ಅಂತಿರ್ತಾರಲ್ಲ, ಹಂಗಂದ್ರೆ ಏನು?’</p>.<p>‘ಈ ಸಲ ಗೆಲ್ಲಿಸಿಬಿಡಿ, ಐದು ವರ್ಷ ಆಗೋವರೆಗೆ ಮತ್ತೆ ಆ ಡೈಲಾಗ್ ಹೊಡೆಯಲ್ಲ ಅಂತ ಅರ್ಥ’.</p>.<p>‘ಕರೆಕ್ಟ್, ನನ್ನ ಮೇಲಿರೋ ಆಪಾದನೆ ಸಾಬೀತು ಮಾಡಿಬಿಟ್ರೆ ನಾನು ರಾಜಕೀಯದಿಂದಲೇ ನಿವೃತ್ತಿ ಆಗಿಬಿಡ್ತೀನಿ ಅಂತಿರ್ತಾರಲ್ಲ, ಹಂಗಂದ್ರೆ ಏನರ್ಥ?’</p>.<p>‘ತಪ್ಪು ಮಾಡಿರೋದು ನಿಜ. ಆದ್ರೆ ಸಾಬೀತು ಮಾಡೋಕೆ ಸಾಕ್ಷ್ಯಗಳಿಲ್ಲ ಅನ್ನೋ ಧೈರ್ಯ!’</p>.<p>‘ವೆರಿಗುಡ್, ಎಲ್ಲ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಟ್ಟಿದ್ದೀರಿ. ಕೊನೇ ಪ್ರಶ್ನೆ, ಮಂಡ್ಯ ರಾಜಕೀಯವನ್ನ ಒಂದೇ ಮಾತಿನಲ್ಲಿ ಹೇಳಿ ನೋಡೋಣ’.</p>.<p>‘ನನ್ನಂಥ ಕಚಡಾ ನನ್ಮಗ ಯಾರೂ ಇಲ್ಲ ಸಾ... ಈಗೇನು ಕೆಲ್ಸ ಕೊಡ್ತಿರೋ ಇಲ್ವೊ?’</p>.<p>ತೆಪರೇಸಿ ಮಾತು ಕೇಳಿ ಸಂಪಾದಕರು ಕೂತಲ್ಲೇ ಕಕ್ಕಾಬಿಕ್ಕಿಯಾದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>