ಟ್ರಂಪಣ್ಣ ‘ಹ್ಞೂಂ’ಗುಟ್ಟಿದ. ದ್ಯಾಮನಿಗೆ ಸ್ಪೀಕಿಂಗ್ ಇಂಗ್ಲಿಷ್ಕ್ರ್ಯಾಶ್ ಕೋರ್ಸ್ ಮಾಡಿಸಿ,ವಿಮಾನ ಹತ್ತಿಸಿದರು. ನಾಸಾಕ್ಕೆ ಬಂದಿಳಿದ ದ್ಯಾಮನನ್ನು ಕಂಡ ವಿಜ್ಞಾನಿಗಳು ಗಾಬರಿಗೊಂಡು ಟ್ರಂಪಣ್ಣನಿಗೆ ವಿಷಯ ಅರುಹಿದರು... ಅಂವ ಮೋದಣ್ಣನಿಗೆ ಫೋನಾಯಿಸಿದ. ‘ಚಂದ್ರನ ಮ್ಯಾಗೆ ವೆದರ್ ಭಾಳ ಖರಾಬ್ ಇರತೈತಿ,ಅದಕ್ಕ ಗಗನಯಾತ್ರಿಗಳು ಎಲ್ಡಮೂರು ವರ್ಸ ಟ್ರೇನಿಂಗ್ ತಗಬೇಕಾಗ್ತದ,ನಾಸಾದವ್ರು ಹೇಳ್ಯಾರ ದ್ಯಾಮ ಆಗಂಗಿಲ್ಲ...’ ಮೋದಣ್ಣ ನಡುವೆಯೇ ಬಾಯಿಹಾಕಿದರು, ‘ಹೇ... ಅಂವಾ ಮತ್ತು ಅಂವನ ಮಂದಿ ಬರಿಮೈಯಾಗ30-40ಅಡಿ ಮಲದ ಗುಂಡ್ಯಾಗ ಇಳಿದು ಕಸಪಸ ತೆಗೆದು ಸ್ವಚ್ಛ ಮಾಡತಾರ... ಅಷ್ಟ್ ವಿಷದ ಗಾಳಿನೇ ಕುಡೀತಾರಂತ.. ಇನ್ ಚಂದ್ರನ ಖರಾಬ್ ವೆದರ್ ಯಾವ ಲೆಕ್ಕ’ ಫೋನಿಟ್ಟ ಮೋದಣ್ಣ, ‘ಶಾ’ಣ್ಯಾಚುನಾವಣಾಪ್ರಣಾಳಿಕೆಯಲ್ಲಿ ಹೊಸ ಅಂಶ ಸೇರಿಸಿದರು. ‘ಮೋದಣ್ಣನ ಆಧಿಪತ್ಯದಲ್ಲಿ ‘ದ್ಯಾಮ’ನಂಥವರಿಗೆ ಚಂದ್ರಯಾನಕ್ಕೆ ಅವಕಾಶ’.