<p>‘ಬೀದಿನಾಯಿಗಳ ಉಪಟಳ ನಿವಾರಿಸಿ...’ ಎಂದು ಒತ್ತಾಯಿಸಿ ನಾಯಿಭಯ ಸಂಘದವರು ಪ್ರತಿಭಟನೆ ಆರಂಭಿಸಿದ್ದರು. ‘ಬೀದಿನಾಯಿಗಳಿಗೆ ರಕ್ಷಣೆ ನೀಡಿ...’ ಎಂದು ನಾಯಿ ದಯಾ ಸಂಘದವರು ಹೋರಾಟಕ್ಕೆ ಬಂದರು.</p>.<p>‘ದಿನನಿತ್ಯ ನಾಯಿ ಕಚ್ಚುವ ಪ್ರಕರಣಗಳು ಹೆಚ್ಚಾಗುತ್ತಿವೆ...’ ಅಧಿಕಾರಿ ವರದಿ ಓದಿದರು.</p>.<p>‘ಹಾಗೇ, ಜನರು ನಾಯಿಗಳನ್ನು ಚಚ್ಚುವ ಪ್ರಕರಣಗಳನ್ನೂ ದಾಖಲು ಮಾಡಿ’ ಎಂದರು ದಯಾ ಸಂಘದವರು. ಎರಡೂ ಕಡೆಯವರು ವಾದಕ್ಕಿಳಿದರು.</p>.<p>‘ಬೀದಿನಾಯಿಗಳ ಬೊಗಳಾಟದಿಂದ ನಮಗೆ ರಾತ್ರಿ ನಿದ್ರೆ ಬರುತ್ತಿಲ್ಲ’.</p>.<p>‘ನಾಯಿ ಬೊಗಳಾಡಿದರೆ ಕಳ್ಳರು ಬರುವುದಿಲ್ಲ’.</p>.<p>‘ಗೋಶಾಲೆಯಂತೆ ಸರ್ಕಾರ ಊರ ಹೊರಗೆ ನಾಯಿಶಾಲೆ ತೆರೆದು ನಾಯಿಗಳಿಗೆ ನೆಲೆ ನೀಡಲಿ’.</p>.<p>‘ನೆಲೆ ಬೇಡ, ಉದ್ಯೋಗ ಕೊಟ್ಟರೆ ನಾಯಿಗಳು ತಮ್ಮ ಕಾಲ ಮೇಲೆ ತಾವು ನಿಂತುಕೊಂಡು <br>ಸ್ವಾವಲಂಬಿಗಳಾಗಿ ಬಾಳುತ್ತವೆ’.</p>.<p>‘ಎಜುಕೇಷನ್ ಇಲ್ಲದ ನಾಯಿಗಳು ಏನು ಉದ್ಯೋಗ ಮಾಡ್ತವೆ?!’</p>.<p>‘ಮನೆ, ಕಚೇರಿ ಕಾವಲಿಗೆ ನಾಯಿಗಳನ್ನು ನೇಮಿಸಿಕೊಳ್ಳಲಿ. ಸಂಬಳ ಬೇಡ, ಊಟ ಕೊಟ್ಟರೆ ಸಾಕು. ನೀವೂ ಬೀದಿನಾಯಿಗಳನ್ನು ಸಾಕಿರಿ’.</p>.<p>‘ಹಸುಗಳನ್ನು ಸಾಕಿದರೆ ಹಾಲು ಕೊಡುತ್ತವೆ, ನಾಯಿಗಳು ಏನು ಕೊಡುತ್ತವೆ?’</p>.<p>‘ಜೀವ ಕೊಡುತ್ತವೆ, ಮೊನ್ನೆ ಊರಿಗೆ ನುಗ್ಗಿದ್ದ ಚಿರತೆಯನ್ನು ಬೀದಿನಾಯಿಗಳು ಓಡಿಸಿ ಎಲ್ಲರನ್ನೂ ರಕ್ಷಿಸಿದ್ದವು... ನಾನು ಬೀದಿನಾಯಿ ಸಾಕಿದ್ದೇನೆ, ಅದು ನನ್ನ ಮಗಳನ್ನು ಕರೆದುಕೊಂಡು ಹೋಗಿ ಸ್ಕೂಲ್ ಬಸ್ ಹತ್ತಿಸುತ್ತದೆ, ಸಂಜೆ ಕರೆದುಕೊಂಡು ಬರುತ್ತದೆ’ ಎಂದ ಒಬ್ಬ.</p>.<p>‘ನಮ್ಮ ನಾಯಿ ಕೊರಳಿಗೆ ಬ್ಯಾಗ್ ನೇತುಹಾಕಿದರೆ ಸಾಕು, ಅಂಗಡಿಗೆ ಹೋಗಿ ಹಾಲು, ತರಕಾರಿ ತರುತ್ತದೆ’ ಎಂದ ಇನ್ನೊಬ್ಬ.</p>.<p>ಎರಡೂ ಸಂಘಗಳವರ ಮನವಿಪತ್ರ ಸ್ವೀಕರಿಸಿದ ಅಧಿಕಾರಿ, ‘ಸರ್ಕಾರಕ್ಕೆ ಕಳುಹಿಸುತ್ತೇನೆ, ನಾಯಿಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ, ಸರ್ಕಾರ ನ್ಯಾಯಯುತ ತೀರ್ಮಾನ <br>ತೆಗೆದುಕೊಳ್ಳುತ್ತದೆ...’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಬೀದಿನಾಯಿಗಳ ಉಪಟಳ ನಿವಾರಿಸಿ...’ ಎಂದು ಒತ್ತಾಯಿಸಿ ನಾಯಿಭಯ ಸಂಘದವರು ಪ್ರತಿಭಟನೆ ಆರಂಭಿಸಿದ್ದರು. ‘ಬೀದಿನಾಯಿಗಳಿಗೆ ರಕ್ಷಣೆ ನೀಡಿ...’ ಎಂದು ನಾಯಿ ದಯಾ ಸಂಘದವರು ಹೋರಾಟಕ್ಕೆ ಬಂದರು.</p>.<p>‘ದಿನನಿತ್ಯ ನಾಯಿ ಕಚ್ಚುವ ಪ್ರಕರಣಗಳು ಹೆಚ್ಚಾಗುತ್ತಿವೆ...’ ಅಧಿಕಾರಿ ವರದಿ ಓದಿದರು.</p>.<p>‘ಹಾಗೇ, ಜನರು ನಾಯಿಗಳನ್ನು ಚಚ್ಚುವ ಪ್ರಕರಣಗಳನ್ನೂ ದಾಖಲು ಮಾಡಿ’ ಎಂದರು ದಯಾ ಸಂಘದವರು. ಎರಡೂ ಕಡೆಯವರು ವಾದಕ್ಕಿಳಿದರು.</p>.<p>‘ಬೀದಿನಾಯಿಗಳ ಬೊಗಳಾಟದಿಂದ ನಮಗೆ ರಾತ್ರಿ ನಿದ್ರೆ ಬರುತ್ತಿಲ್ಲ’.</p>.<p>‘ನಾಯಿ ಬೊಗಳಾಡಿದರೆ ಕಳ್ಳರು ಬರುವುದಿಲ್ಲ’.</p>.<p>‘ಗೋಶಾಲೆಯಂತೆ ಸರ್ಕಾರ ಊರ ಹೊರಗೆ ನಾಯಿಶಾಲೆ ತೆರೆದು ನಾಯಿಗಳಿಗೆ ನೆಲೆ ನೀಡಲಿ’.</p>.<p>‘ನೆಲೆ ಬೇಡ, ಉದ್ಯೋಗ ಕೊಟ್ಟರೆ ನಾಯಿಗಳು ತಮ್ಮ ಕಾಲ ಮೇಲೆ ತಾವು ನಿಂತುಕೊಂಡು <br>ಸ್ವಾವಲಂಬಿಗಳಾಗಿ ಬಾಳುತ್ತವೆ’.</p>.<p>‘ಎಜುಕೇಷನ್ ಇಲ್ಲದ ನಾಯಿಗಳು ಏನು ಉದ್ಯೋಗ ಮಾಡ್ತವೆ?!’</p>.<p>‘ಮನೆ, ಕಚೇರಿ ಕಾವಲಿಗೆ ನಾಯಿಗಳನ್ನು ನೇಮಿಸಿಕೊಳ್ಳಲಿ. ಸಂಬಳ ಬೇಡ, ಊಟ ಕೊಟ್ಟರೆ ಸಾಕು. ನೀವೂ ಬೀದಿನಾಯಿಗಳನ್ನು ಸಾಕಿರಿ’.</p>.<p>‘ಹಸುಗಳನ್ನು ಸಾಕಿದರೆ ಹಾಲು ಕೊಡುತ್ತವೆ, ನಾಯಿಗಳು ಏನು ಕೊಡುತ್ತವೆ?’</p>.<p>‘ಜೀವ ಕೊಡುತ್ತವೆ, ಮೊನ್ನೆ ಊರಿಗೆ ನುಗ್ಗಿದ್ದ ಚಿರತೆಯನ್ನು ಬೀದಿನಾಯಿಗಳು ಓಡಿಸಿ ಎಲ್ಲರನ್ನೂ ರಕ್ಷಿಸಿದ್ದವು... ನಾನು ಬೀದಿನಾಯಿ ಸಾಕಿದ್ದೇನೆ, ಅದು ನನ್ನ ಮಗಳನ್ನು ಕರೆದುಕೊಂಡು ಹೋಗಿ ಸ್ಕೂಲ್ ಬಸ್ ಹತ್ತಿಸುತ್ತದೆ, ಸಂಜೆ ಕರೆದುಕೊಂಡು ಬರುತ್ತದೆ’ ಎಂದ ಒಬ್ಬ.</p>.<p>‘ನಮ್ಮ ನಾಯಿ ಕೊರಳಿಗೆ ಬ್ಯಾಗ್ ನೇತುಹಾಕಿದರೆ ಸಾಕು, ಅಂಗಡಿಗೆ ಹೋಗಿ ಹಾಲು, ತರಕಾರಿ ತರುತ್ತದೆ’ ಎಂದ ಇನ್ನೊಬ್ಬ.</p>.<p>ಎರಡೂ ಸಂಘಗಳವರ ಮನವಿಪತ್ರ ಸ್ವೀಕರಿಸಿದ ಅಧಿಕಾರಿ, ‘ಸರ್ಕಾರಕ್ಕೆ ಕಳುಹಿಸುತ್ತೇನೆ, ನಾಯಿಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ, ಸರ್ಕಾರ ನ್ಯಾಯಯುತ ತೀರ್ಮಾನ <br>ತೆಗೆದುಕೊಳ್ಳುತ್ತದೆ...’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>