<p>‘ನೋಡಿ ಸಾ, ಯಡುರಪ್ಪಾರು ಮಕ್ಕಳ ಬಜೆಟ್ ಮಾಡಾರಂತೆ ಈ ವರ್ಸ. ಮಕ್ಕಳ ಬಜೆಟ್ ಅಂದ್ರೇನ್ಸಾ’ ಅಂದೆ.</p>.<p>‘ನೋಡ್ಲಾ ಯಡುರಪ್ಪಾರ ಇಜಯಣ್ಣ ರಾಜಕೀಯದ ಒಳಪಟ್ಟುಗಳ ಕಲಿತು ಪೈಲ್ವಾನ ಆಗ್ಯವುನಂತೆ. ಹಂಗೀಯೇ ಎಲ್ಲಾ ಮಕ್ಕಳೂ ಆಗಲಿ ಅಂತ ಮಕ್ಕಳ ಪುನರ್ವಸತಿಗೆ ಮಾಡೋ ಏರ್ಪಾಡು ಕನೋ ಇದು. ದೇವಜ್ಜ, ಕುಮಾರಣ್ಣ ಮಾಡಲಿಲ್ವೇ’ ಅಂದ್ರು. ನನಗೊಂದು ಅನುಮಾನ ಬಂತು. ಅದುನ್ನ ಕೇಳಿದೆ-</p>.<p>‘ಹಿಂದೆ ರೈತ ಬಜೆಟ್ ಮಾಡಿದ್ರಲ್ಲ ಸಾ. ಸರ್ಕಾರಕ್ಕೆ ತುಪ್ಪ, ರೈತರಿಗೆ ಬವನಾಸಿ ಸಿಕ್ತಲ್ಲಾ! ಮುಂದ್ಲೊರ್ಸಕ್ಕೆ ಮುದುಕರ ಬಜೆಟ್ಟು, ಹೆಣ್ಣೈಕ್ಳ ಬಜೆಟ್ಟು, ಖಾತೆರಹಿತ ಮಂತ್ರಿಗಳ ಬಜೆಟ್ಟು, ಆಪರೇಷನ್ ಕಮಲ ಬಜೆಟ್ಟು ಹಿಂಗೆ ಸುಮಾರಾಯ್ತವೇನೋ?’ ಅಂದೆ.</p>.<p>‘ಆಗಬೌದು ಕನೋ ಬಡ್ಡಿಹೈದ್ನೆ. ನನಗೊಂದು ಆಸೆ ಅದೆ ಕಲಾ’ ಅಂದ್ರು ತುರೇಮಣೆ.</p>.<p>‘ಅದೇನು ಹೇಳುವಂಥವರಾಗಿ ಪಿತಾಮಹಾ’ ಅಂತ ಪ್ರೋತ್ಸಾಹಿಸಿದೆ.</p>.<p>‘ಮುಂದ್ಲ ಜಲುಮದಲ್ಲಾದ್ರೂ ನಾನು ಶಾಸಕನಾಗಬೇಕು ಅಂತ ಆಸೆ ಆಗದೆ!’ ಅಂತ ಬಾಯಿಬಿಟ್ಟರು. ನನಗೆ ಆಶ್ಚರ್ಯ ಆಯ್ತು.</p>.<p>‘ಅಲ್ಲಾ ಸಾ, ರಾಜೀನಾಮೆ ಕೊಟ್ಟ 10 ಜನ ತಾರಾತಿಕಡಿ ಬಾರಾಬಂಕಿ ಬಿದ್ದು ಮಂತ್ರಿಯಾಗವೆ! ಹಕ್ಕಿ ಕತೆ ಏನಾಯ್ತು ನೋಡಿ, ನಿಗಮ, ಮಂಡಲಿ ಬ್ಯಾಡವಂತೆ! ಮೂಲ ಬಿಜೆಪಿಗಳಿಗೆ ಸ್ಥಾನ-ಮಾನ ಇಲ್ಲ! ನಿಮಗ್ಯಾಕೆ ಈ ನರಿಷಡ್ವರ್ಗ?’ ಅಂತಂದೆ.</p>.<p>‘ಜಲ-ಮಲ ಖಾತೆ ಸಿಕ್ತದೆ ಬುಡು! ಪುಗಸಟ್ಟೆ ದೇಸದೇಸ ನೋಡಬೌದಲ್ಲೋ ಹೈವಾನ್’ ಅಂದ್ರು. ಸರಿ ಈವಯ್ಯ ಎಕ್ಕುಟ್ಟೋದ ಅಂತ ವಿಷಯ ಬದಲಾಯಿಸಿದೆ.</p>.<p>‘ಅಲ್ಲಾ ಕಣ್ಸಾ, ಡೆಲ್ಲಿ ರಾಜಕೀಯದಲ್ಲಿ ಕ್ರೇಜಿವಾಲ್, ಮೋದಿ– ಶಾಣಾಕ್ಯರಿಗೆ ಆಪ್ ಇಟ್ಟು ಸಿಮ್ಮಾಸನ ಕಬ್ಜಾ ಮಾಡಿಕ್ಯತಾವನಂತೆ? ಮೋದಿ ಸುಮ್ಮನಿರದು ಹೆಚ್ಚಲ್ವಾ?’ ಅಂದೆ.</p>.<p>‘ಡೆಲ್ಲಿ ಆಳಿದೋರು ಯಾರು ಬರ್ಕತ್ತಾಗವರೋ. ಅದಕ್ಕೇ ದಿಲ್ಲಿ ದೊರೆಸಾನಿ ಅಂತರೆ. ದೊರೆಸಾನಿ ಸವಾಸಕ್ಕೆ ಬಿದ್ದು ಕಾಂಗ್ರೇಸಿನೋರು ನಿರ್ವಾಕಿಲ್ಲದಂಗಾದ್ರಲ್ಲೋ. ಮೋದಿ ಅಖಂಡ ಬ್ರಹ್ಮಚಾರಿ ಅಲ್ಲವುಲಾ. ದೊರೆಸಾನಿ ಸವಾಸ ಬ್ರಹ್ಮಚಾರಿಗ್ಯಾಕೆ ಬೇಕು ಅಂತ ಕೈಬುಟ್ಟವ್ರೆ ಅಷ್ಟೀಯೆ!’ ಅಂದ್ರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನೋಡಿ ಸಾ, ಯಡುರಪ್ಪಾರು ಮಕ್ಕಳ ಬಜೆಟ್ ಮಾಡಾರಂತೆ ಈ ವರ್ಸ. ಮಕ್ಕಳ ಬಜೆಟ್ ಅಂದ್ರೇನ್ಸಾ’ ಅಂದೆ.</p>.<p>‘ನೋಡ್ಲಾ ಯಡುರಪ್ಪಾರ ಇಜಯಣ್ಣ ರಾಜಕೀಯದ ಒಳಪಟ್ಟುಗಳ ಕಲಿತು ಪೈಲ್ವಾನ ಆಗ್ಯವುನಂತೆ. ಹಂಗೀಯೇ ಎಲ್ಲಾ ಮಕ್ಕಳೂ ಆಗಲಿ ಅಂತ ಮಕ್ಕಳ ಪುನರ್ವಸತಿಗೆ ಮಾಡೋ ಏರ್ಪಾಡು ಕನೋ ಇದು. ದೇವಜ್ಜ, ಕುಮಾರಣ್ಣ ಮಾಡಲಿಲ್ವೇ’ ಅಂದ್ರು. ನನಗೊಂದು ಅನುಮಾನ ಬಂತು. ಅದುನ್ನ ಕೇಳಿದೆ-</p>.<p>‘ಹಿಂದೆ ರೈತ ಬಜೆಟ್ ಮಾಡಿದ್ರಲ್ಲ ಸಾ. ಸರ್ಕಾರಕ್ಕೆ ತುಪ್ಪ, ರೈತರಿಗೆ ಬವನಾಸಿ ಸಿಕ್ತಲ್ಲಾ! ಮುಂದ್ಲೊರ್ಸಕ್ಕೆ ಮುದುಕರ ಬಜೆಟ್ಟು, ಹೆಣ್ಣೈಕ್ಳ ಬಜೆಟ್ಟು, ಖಾತೆರಹಿತ ಮಂತ್ರಿಗಳ ಬಜೆಟ್ಟು, ಆಪರೇಷನ್ ಕಮಲ ಬಜೆಟ್ಟು ಹಿಂಗೆ ಸುಮಾರಾಯ್ತವೇನೋ?’ ಅಂದೆ.</p>.<p>‘ಆಗಬೌದು ಕನೋ ಬಡ್ಡಿಹೈದ್ನೆ. ನನಗೊಂದು ಆಸೆ ಅದೆ ಕಲಾ’ ಅಂದ್ರು ತುರೇಮಣೆ.</p>.<p>‘ಅದೇನು ಹೇಳುವಂಥವರಾಗಿ ಪಿತಾಮಹಾ’ ಅಂತ ಪ್ರೋತ್ಸಾಹಿಸಿದೆ.</p>.<p>‘ಮುಂದ್ಲ ಜಲುಮದಲ್ಲಾದ್ರೂ ನಾನು ಶಾಸಕನಾಗಬೇಕು ಅಂತ ಆಸೆ ಆಗದೆ!’ ಅಂತ ಬಾಯಿಬಿಟ್ಟರು. ನನಗೆ ಆಶ್ಚರ್ಯ ಆಯ್ತು.</p>.<p>‘ಅಲ್ಲಾ ಸಾ, ರಾಜೀನಾಮೆ ಕೊಟ್ಟ 10 ಜನ ತಾರಾತಿಕಡಿ ಬಾರಾಬಂಕಿ ಬಿದ್ದು ಮಂತ್ರಿಯಾಗವೆ! ಹಕ್ಕಿ ಕತೆ ಏನಾಯ್ತು ನೋಡಿ, ನಿಗಮ, ಮಂಡಲಿ ಬ್ಯಾಡವಂತೆ! ಮೂಲ ಬಿಜೆಪಿಗಳಿಗೆ ಸ್ಥಾನ-ಮಾನ ಇಲ್ಲ! ನಿಮಗ್ಯಾಕೆ ಈ ನರಿಷಡ್ವರ್ಗ?’ ಅಂತಂದೆ.</p>.<p>‘ಜಲ-ಮಲ ಖಾತೆ ಸಿಕ್ತದೆ ಬುಡು! ಪುಗಸಟ್ಟೆ ದೇಸದೇಸ ನೋಡಬೌದಲ್ಲೋ ಹೈವಾನ್’ ಅಂದ್ರು. ಸರಿ ಈವಯ್ಯ ಎಕ್ಕುಟ್ಟೋದ ಅಂತ ವಿಷಯ ಬದಲಾಯಿಸಿದೆ.</p>.<p>‘ಅಲ್ಲಾ ಕಣ್ಸಾ, ಡೆಲ್ಲಿ ರಾಜಕೀಯದಲ್ಲಿ ಕ್ರೇಜಿವಾಲ್, ಮೋದಿ– ಶಾಣಾಕ್ಯರಿಗೆ ಆಪ್ ಇಟ್ಟು ಸಿಮ್ಮಾಸನ ಕಬ್ಜಾ ಮಾಡಿಕ್ಯತಾವನಂತೆ? ಮೋದಿ ಸುಮ್ಮನಿರದು ಹೆಚ್ಚಲ್ವಾ?’ ಅಂದೆ.</p>.<p>‘ಡೆಲ್ಲಿ ಆಳಿದೋರು ಯಾರು ಬರ್ಕತ್ತಾಗವರೋ. ಅದಕ್ಕೇ ದಿಲ್ಲಿ ದೊರೆಸಾನಿ ಅಂತರೆ. ದೊರೆಸಾನಿ ಸವಾಸಕ್ಕೆ ಬಿದ್ದು ಕಾಂಗ್ರೇಸಿನೋರು ನಿರ್ವಾಕಿಲ್ಲದಂಗಾದ್ರಲ್ಲೋ. ಮೋದಿ ಅಖಂಡ ಬ್ರಹ್ಮಚಾರಿ ಅಲ್ಲವುಲಾ. ದೊರೆಸಾನಿ ಸವಾಸ ಬ್ರಹ್ಮಚಾರಿಗ್ಯಾಕೆ ಬೇಕು ಅಂತ ಕೈಬುಟ್ಟವ್ರೆ ಅಷ್ಟೀಯೆ!’ ಅಂದ್ರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>