‘ಮುಂದ್ಲ ಜಲುಮದಲ್ಲಾದ್ರೂ ನಾನು ಶಾಸಕನಾಗಬೇಕು ಅಂತ ಆಸೆ ಆಗದೆ!’ ಅಂತ ಬಾಯಿಬಿಟ್ಟರು. ನನಗೆ ಆಶ್ಚರ್ಯ ಆಯ್ತು.
‘ಅಲ್ಲಾ ಸಾ, ರಾಜೀನಾಮೆ ಕೊಟ್ಟ 10 ಜನ ತಾರಾತಿಕಡಿ ಬಾರಾಬಂಕಿ ಬಿದ್ದು ಮಂತ್ರಿಯಾಗವೆ! ಹಕ್ಕಿ ಕತೆ ಏನಾಯ್ತು ನೋಡಿ, ನಿಗಮ, ಮಂಡಲಿ ಬ್ಯಾಡವಂತೆ! ಮೂಲ ಬಿಜೆಪಿಗಳಿಗೆ ಸ್ಥಾನ-ಮಾನ ಇಲ್ಲ! ನಿಮಗ್ಯಾಕೆ ಈ ನರಿಷಡ್ವರ್ಗ?’ ಅಂತಂದೆ.
‘ಜಲ-ಮಲ ಖಾತೆ ಸಿಕ್ತದೆ ಬುಡು! ಪುಗಸಟ್ಟೆ ದೇಸದೇಸ ನೋಡಬೌದಲ್ಲೋ ಹೈವಾನ್’ ಅಂದ್ರು. ಸರಿ ಈವಯ್ಯ ಎಕ್ಕುಟ್ಟೋದ ಅಂತ ವಿಷಯ ಬದಲಾಯಿಸಿದೆ.