‘ನೋಡಪ್ಪಾ ಸಿದ್ದರಾಮಣ್ಣೋರು ಕರೀಕನ್ನಡಕ ಹಾಕ್ಯಂಡು ಬೈಕಂಡೋಯ್ತಾವರೆ. ಕುಮಾರಣ್ಣ ಮಲೇಷಿಯಾಕ್ಕೋಗಿ ಮನಗವ್ರೆ, ಅನರ್ಹರು ಸುಪ್ರೀಂ ಕೋರ್ಟ್ ಮುಂದೆ ‘ನ್ಯಾಯಾ ಎಲ್ಲಿದೇ’ ಅಂತ ಹಾಡೇಳಿಕಂಡು ಕೂತವರೆ. ಡಿಕೆಶಿಗೆ ಎಡೆ ಇಕ್ಕಕೂ ಬುಡದೆ ಇ.ಡಿ.ಯವರು ಗುಮ್ಮತಾವರೆ. ಯಡುರಪ್ಪಾರ ಬಾಲಕರು ಮನೆತಕ್ಕೋಗಿ ಮಂತ್ರಿಯಾಗ್ನಿಲ್ಲ ಅಂತ ಕಣ್ಣಿರಾಕ್ತಾವರೆ. ಪಾಪ ಅವರು ತಾನೆ ಏನು ಮಾಡಕ್ಕಾದದು ‘ಎಲ್ಲಾ ಟೈಟಾಗದೆ ಕನ್ರೋ’ ಅಂತ ಒಟ್ಟಿಗೆ ಅತ್ತು ಸಮಾಧಾನ ಮಾಡಿ ಕತಾವರೆ’ ಅಂತ ನಿಜಸ್ಥಿತಿ ಬಿಚ್ಚಿಟ್ಟರು ತುರೇಮಣೆ.