<p>ಗುಡ್ಡೆ ಚಾದಂಗಡಿ ಮುಂದೆ ದುಬ್ಬೀರ- ತೆಪರೇಸಿ ನಡುವೆ ನಾನಾ-ನೀನಾ ವಾಗ್ಯುದ್ಧ ತಾರಕಕ್ಕೇರಿತ್ತು. ‘ನಾನು ರಾಜಾಹುಲಿ’ ಎಂದ ದುಬ್ಬೀರ. ‘ನಾನು ಪರಮಶಿವ’ ಎಂದ ತೆಪರೇಸಿ.</p>.<p>ಗುಡ್ಡೆಗೆ ಕೋಪ. ‘ಲೇಯ್ ಪರಮಶಿವ ತೆಪರಾನಂದ, ರಾಜಾಹುಲಿ ದುಬ್ಬೀರ ಇಬ್ರೂ ಎದ್ದು ನಡೀರಿ ಅತ್ಲಾಗೆ. ಇಲ್ಲಿ ಗಿರಾಕಿಗಳಿಗೆ ತೊಂದ್ರೆ ಆಗ್ತತಿ’ ಎಂದ.</p>.<p>‘ಲೇ ಗುಡ್ಡೆ, ನಾವೂ ಗಿರಾಕಿಗಳೇ. ಬೈಟೂ ಚಾ ಹಾಕು’ ಎಂದ ದುಬ್ಬೀರ ‘ನಾನೇ ರಾಜಾಹುಲಿ, ಮೂರೂವರೆ ವರ್ಷ ನಂದೇ ರಾಜ್ಯಭಾರ’ ಎಂದ.</p>.<p>ತೆಪರೇಸಿ ಏನ್ ಕಮ್ಮಿ? ‘ಈ ರಾಜ್ಯ ನಿನ್ನದಿರಬಹುದು. ಆದ್ರೆ ನಾನು ಒಂದು ದೇಶಾನೇ ಖರೀದಿಸಿದೀನಿ, ಅದಕ್ಕೆ ನಾನೇ ಅಧಿಪತಿ’ ಎಂದ.</p>.<p>‘ಇಲ್ಲಿ ನಾನು ಹೇಳಿದೋರೇ ಮಂತ್ರಿ. ಹೈಕಮಾಂಡ್ ಅಪ್ಪಣೆ ಬೇಕಿಲ್ಲ’ ರಾಜಾಹುಲಿ ದುಬ್ಬೀರನ ವಾದ. ‘ನನಗೆ ಹೈಕಮಾಂಡೇ ಇಲ್ಲ. ನೀನು 34 ಜನರನ್ನು ಮಾತ್ರ ಮಂತ್ರಿ ಮಾಡಬಹುದು, ನನಗೆ ಆ ಮಿತಿ ಇಲ್ಲ’ ತೆಪರಾನಂದನ ಪ್ರತಿವಾದ. ಗುಡ್ಡೆಗೆ ನಗು ಬಂತು. ‘ಲೇ ತೆಪರಾನಂದ, ಹೋದ ವರ್ಷ ನಾನೇ ಶ್ರೀಕೃಷ್ಣ ಅಂತಿದ್ದೆ. ಈಗ ಪರಮಶಿವಾನಾ?</p>.<p>‘ಸುಮ್ಕಿರಲೆ, ಮುಂದಿನ ವರ್ಷ ನಾನೇ ಶ್ರೀರಾಮ ಅಂತೀನಪ ನಿಂಗೇನು?’ ತೆಪರೇಸಿ ಗುರ್ ಅಂದ. ‘ನನ್ನ ಕಂಡ್ರೆ ಪ್ರಧಾನಿನೇ ಎದ್ದು ನಿಲ್ತಾರೆ ಗೊತ್ತಾ?’ ದುಬ್ಬೀರನ ವಾದ. ‘ನಾನು ಕೈ ತೋರಿಸಿದ್ರೆ ಸೂರ್ಯನೇ ತಡವಾಗಿ ಉದಯಿಸ್ತಾನೆ ಗೊತ್ತಾ?’ ತೆಪರೇಸಿ ಉತ್ತರ.</p>.<p>‘ನಾನು ರಾಜಾಹುಲಿ ಅಷ್ಟೇ ಅಲ್ಲ, ಪುಣ್ಯಕೋಟಿನೂ ಹೌದು. ಕೊಟ್ಟ ಭಾಷೆಗೆ ತಪ್ಪೋನಲ್ಲ, ನಂಬಿದವರ ಕೈ ಬಿಡೋದಿಲ್ಲ’.</p>.<p>‘ನಾನು ಸರ್ವಶಕ್ತ, ಈ ಜಗತ್ತೇ ನನ್ನ ನಿಯಂತ್ರಣದಲ್ಲಿದೆ. ನಾನು ಯಾರಿಗೂ ಹೆದರೋದಿಲ್ಲ...’</p>.<p>ಇವರ ತರ್ಲೆ ಮಾತು ಹೇಗೆ ನಿಲ್ಲಿಸೋದು ಅಂತ ಯೋಚಿಸಿದ ಗುಡ್ಡೆ ಇಬ್ಬರನ್ನೂ ಕೂಗಿ ‘ಲೇಯ್ ನಿಮ್ ಹೆಂಡ್ತೀರು ನನ್ ಮೊಬೈಲ್ಗೆ ಕಾಲ್ ಮಾಡ್ತಾವ್ರೆ’ ಎಂದ.</p>.<p>‘ಅಯ್ಯಪ್ಪ, ಏನಂತೆ?’</p>.<p>‘ಮನೇಲಿ ಮುಸುರೆ ಪಾತ್ರೆ ರಾಶಿ ಬಿದ್ದಿದಾವಂತೆ, ತೊಳಿಯೋಕೆ ಹೋಗಬೇಕಂತೆ!’ ಇಬ್ಬರೂ ತೆಪ್ಪಗಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಡ್ಡೆ ಚಾದಂಗಡಿ ಮುಂದೆ ದುಬ್ಬೀರ- ತೆಪರೇಸಿ ನಡುವೆ ನಾನಾ-ನೀನಾ ವಾಗ್ಯುದ್ಧ ತಾರಕಕ್ಕೇರಿತ್ತು. ‘ನಾನು ರಾಜಾಹುಲಿ’ ಎಂದ ದುಬ್ಬೀರ. ‘ನಾನು ಪರಮಶಿವ’ ಎಂದ ತೆಪರೇಸಿ.</p>.<p>ಗುಡ್ಡೆಗೆ ಕೋಪ. ‘ಲೇಯ್ ಪರಮಶಿವ ತೆಪರಾನಂದ, ರಾಜಾಹುಲಿ ದುಬ್ಬೀರ ಇಬ್ರೂ ಎದ್ದು ನಡೀರಿ ಅತ್ಲಾಗೆ. ಇಲ್ಲಿ ಗಿರಾಕಿಗಳಿಗೆ ತೊಂದ್ರೆ ಆಗ್ತತಿ’ ಎಂದ.</p>.<p>‘ಲೇ ಗುಡ್ಡೆ, ನಾವೂ ಗಿರಾಕಿಗಳೇ. ಬೈಟೂ ಚಾ ಹಾಕು’ ಎಂದ ದುಬ್ಬೀರ ‘ನಾನೇ ರಾಜಾಹುಲಿ, ಮೂರೂವರೆ ವರ್ಷ ನಂದೇ ರಾಜ್ಯಭಾರ’ ಎಂದ.</p>.<p>ತೆಪರೇಸಿ ಏನ್ ಕಮ್ಮಿ? ‘ಈ ರಾಜ್ಯ ನಿನ್ನದಿರಬಹುದು. ಆದ್ರೆ ನಾನು ಒಂದು ದೇಶಾನೇ ಖರೀದಿಸಿದೀನಿ, ಅದಕ್ಕೆ ನಾನೇ ಅಧಿಪತಿ’ ಎಂದ.</p>.<p>‘ಇಲ್ಲಿ ನಾನು ಹೇಳಿದೋರೇ ಮಂತ್ರಿ. ಹೈಕಮಾಂಡ್ ಅಪ್ಪಣೆ ಬೇಕಿಲ್ಲ’ ರಾಜಾಹುಲಿ ದುಬ್ಬೀರನ ವಾದ. ‘ನನಗೆ ಹೈಕಮಾಂಡೇ ಇಲ್ಲ. ನೀನು 34 ಜನರನ್ನು ಮಾತ್ರ ಮಂತ್ರಿ ಮಾಡಬಹುದು, ನನಗೆ ಆ ಮಿತಿ ಇಲ್ಲ’ ತೆಪರಾನಂದನ ಪ್ರತಿವಾದ. ಗುಡ್ಡೆಗೆ ನಗು ಬಂತು. ‘ಲೇ ತೆಪರಾನಂದ, ಹೋದ ವರ್ಷ ನಾನೇ ಶ್ರೀಕೃಷ್ಣ ಅಂತಿದ್ದೆ. ಈಗ ಪರಮಶಿವಾನಾ?</p>.<p>‘ಸುಮ್ಕಿರಲೆ, ಮುಂದಿನ ವರ್ಷ ನಾನೇ ಶ್ರೀರಾಮ ಅಂತೀನಪ ನಿಂಗೇನು?’ ತೆಪರೇಸಿ ಗುರ್ ಅಂದ. ‘ನನ್ನ ಕಂಡ್ರೆ ಪ್ರಧಾನಿನೇ ಎದ್ದು ನಿಲ್ತಾರೆ ಗೊತ್ತಾ?’ ದುಬ್ಬೀರನ ವಾದ. ‘ನಾನು ಕೈ ತೋರಿಸಿದ್ರೆ ಸೂರ್ಯನೇ ತಡವಾಗಿ ಉದಯಿಸ್ತಾನೆ ಗೊತ್ತಾ?’ ತೆಪರೇಸಿ ಉತ್ತರ.</p>.<p>‘ನಾನು ರಾಜಾಹುಲಿ ಅಷ್ಟೇ ಅಲ್ಲ, ಪುಣ್ಯಕೋಟಿನೂ ಹೌದು. ಕೊಟ್ಟ ಭಾಷೆಗೆ ತಪ್ಪೋನಲ್ಲ, ನಂಬಿದವರ ಕೈ ಬಿಡೋದಿಲ್ಲ’.</p>.<p>‘ನಾನು ಸರ್ವಶಕ್ತ, ಈ ಜಗತ್ತೇ ನನ್ನ ನಿಯಂತ್ರಣದಲ್ಲಿದೆ. ನಾನು ಯಾರಿಗೂ ಹೆದರೋದಿಲ್ಲ...’</p>.<p>ಇವರ ತರ್ಲೆ ಮಾತು ಹೇಗೆ ನಿಲ್ಲಿಸೋದು ಅಂತ ಯೋಚಿಸಿದ ಗುಡ್ಡೆ ಇಬ್ಬರನ್ನೂ ಕೂಗಿ ‘ಲೇಯ್ ನಿಮ್ ಹೆಂಡ್ತೀರು ನನ್ ಮೊಬೈಲ್ಗೆ ಕಾಲ್ ಮಾಡ್ತಾವ್ರೆ’ ಎಂದ.</p>.<p>‘ಅಯ್ಯಪ್ಪ, ಏನಂತೆ?’</p>.<p>‘ಮನೇಲಿ ಮುಸುರೆ ಪಾತ್ರೆ ರಾಶಿ ಬಿದ್ದಿದಾವಂತೆ, ತೊಳಿಯೋಕೆ ಹೋಗಬೇಕಂತೆ!’ ಇಬ್ಬರೂ ತೆಪ್ಪಗಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>