<p>‘ಗುರೂ... ಈ ಮೊಬೈಲ್ ಯಾಕೋ ಮೊನ್ನಿಂದ ಕೆಮ್ಮೋಕೆ ಶುರು ಮಾಡೇತಿ. ಯಾರಿಗೆ ಫೋನ್ ಮಾಡಿದ್ರೂ ಬರೀ ಕೆಮ್ಮಿನ ಸೌಂಡು... ಮೊಬೈಲ್ಗೂ ಕೊರೊನಾ ಏನರ ಬಂತಾ ಅಂತ...’ ದುಬ್ಬೀರ ಪ್ರಶ್ನಿಸಿದ.</p>.<p>‘ನಿನ್ತೆಲಿ, ನಿಂದೊಬ್ಬುಂದೇ ಅಲ್ಲ. ಎಲ್ಲರ ಮೊಬೈಲೂ ಈಗ ಕೆಮ್ಮೋಕೆ ಶುರು ಮಾಡಿದಾವೆ. ಕೊರೊನಾ ಬಗ್ಗೆ ಜನ ಹುಷಾರಾಗಿರ್ಲಿ ಅಂತ ಹೇಳೋಕೆ ಸರ್ಕಾರದ ಕೆಮ್ಮು ಇದು...’ ತೆಪರೇಸಿ ಸ್ಪಷ್ಟನೆ ನೀಡಿದ.</p>.<p>‘ಅಲ್ಲಲೆ, ಇಡೀ ದಿನ ಇದು ಕೆಮ್ತಾ ಇದ್ರೆ ಹೆಂಗೆ? ತೆಲಿ ಕೆಡಲ್ವ?’</p>.<p>‘ಕೆಮ್ಮು ಬ್ಯಾಡ ಅಂದ್ರೆ ಸರ್ಕಾರಕ್ಕೆ ಡುಂಡಿರಾಜ್ ಸ್ಟೈಲಲ್ಲಿ ಹೇಳಬೇಕು ‘ಅರೇ... ಫೋನ್ ಕರ್ನೇ ದೋ ಹಮ್ಕೋ... ಆಮೇಲ್ ಬೇಕಾದ್ರೆ ಕೆಮ್ಕೋ ಅಂತ...’ ಗುಡ್ಡೆ ನಕ್ಕ.</p>.<p>‘ಮೊಬೈಲ್ ಒಂದೇ ಅಲ್ಲ ಬಿಡ್ರಲೆ, ಈಗ ಎಲ್ಲ ಕಡೆ ಕೆಮ್ಮೋ ಸುದ್ದಿಗಳೇ ಪೇಪರ್ನಲ್ಲಿ. ವಿಧಾನ<br />ಸೌಧದಲ್ಲಿ ಸುಧಾಕರ್ ಮೇಲೆ ರಮೇಶ್ಕುಮಾರು, ರಮೇಶ್ಕುಮಾರ್ ಮೇಲೆ ಈಶ್ವರಪ್ಪ, ಈಶ್ವರಪ್ಪ ಮೇಲೆ ಸಿದ್ದರಾಮಯ್ಯ ಕೆಮ್ಮಿದ್ದೇ ಕೆಮ್ಮಿದ್ದು... ಇವರನ್ನೆಲ್ಲ ಕೊರೊನಾ ವಾರ್ಡ್ಗೆ ಸೇರಿಸಿದ್ರೆ ಹೆಂಗೆ?’</p>.<p>‘ಹೋಗ್ಲಿಬಿಡ್ರಪ್ಪ, ನಮಗೆ ರಾಜಕೀಯ ಬ್ಯಾಡ. ಆದ್ರೂ ಈ ಕೆಮ್ಮೋದು ಇದೆಯಲ್ಲ ಬಹಳ ಡೇಂಜರು. ಬಸ್ನಲ್ಲೋ, ಹೋಟ್ಲಲ್ಲೋ, ಮಾಲ್ನಲ್ಲೋ ಸ್ವಲ್ಪ ಕೆಮ್ಮಿದ್ರೆ ಸಾಕು, ಎಲ್ರೂ ಒಳ್ಳೆ ಕಳ್ಳನ ತರ ನೋಡ್ತಾರೆ...’ ದುಬ್ಬೀರ ಬೇಸರ ವ್ಯಕ್ತಪಡಿಸಿದ.</p>.<p>‘ಕೆಮ್ಮೋದ್ರಿಂದ ಲಾಭನೂ ಐತೆ ಕಣಲೆ, ರಜೆ ಕೇಳಿದ್ರೆ ಉರಿದು ಬೀಳ್ತಿದ್ದ ನಮ್ಮ ಪರ್ಮೇಶಿ ಬಾಸು ಮೊನ್ನೆ ಆಫೀಸ್ನಲ್ಲಿ ಸುಮ್ನೆ ಕೆಮ್ಮಿದ್ದಕ್ಕೆ ಪರ್ಮೇಶಿಗೆ ರಜೆ ಕೊಟ್ಟು ಮನೆಗೆ ಕಳಿಸಿದ್ನಂತೆ ಗೊತ್ತಾ?’ ಎಂದ ಗುಡ್ಡೆ.</p>.<p>‘ಏನ್ ಲಾಭ, ನಿನ್ ತಲೆ, ನಿನ್ನೆ ರಾತ್ರಿ ಬೆಡ್ರೂಮಲ್ಲಿ ನಮ್ ತೆಪರೇಸಿಗೆ ಯಾತಕ್ಕೋ ಕೆಮ್ಮು ಬಂತಂತೆ. ಅಷ್ಟಕ್ಕೇ ಅವನ ಹೆಂಡ್ತಿ ಚಾಪೆ- ದಿಂಬು ಹೊರಗಾಕಿ ಬೆಡ್ರೂಂ ಬಾಗಿಲು ಹಾಕ್ಕಂಡ್ಲಂತೆ. ಇದಕ್ಕೇನೇಳ್ತೀಯ?’</p>.<p>ದುಬ್ಬೀರನ ಮಾತಿಗೆ ಹರಟೆ ಕಟ್ಟೆಯಲ್ಲಿ ನಗೆಯ ಅಲೆ ತೇಲಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಗುರೂ... ಈ ಮೊಬೈಲ್ ಯಾಕೋ ಮೊನ್ನಿಂದ ಕೆಮ್ಮೋಕೆ ಶುರು ಮಾಡೇತಿ. ಯಾರಿಗೆ ಫೋನ್ ಮಾಡಿದ್ರೂ ಬರೀ ಕೆಮ್ಮಿನ ಸೌಂಡು... ಮೊಬೈಲ್ಗೂ ಕೊರೊನಾ ಏನರ ಬಂತಾ ಅಂತ...’ ದುಬ್ಬೀರ ಪ್ರಶ್ನಿಸಿದ.</p>.<p>‘ನಿನ್ತೆಲಿ, ನಿಂದೊಬ್ಬುಂದೇ ಅಲ್ಲ. ಎಲ್ಲರ ಮೊಬೈಲೂ ಈಗ ಕೆಮ್ಮೋಕೆ ಶುರು ಮಾಡಿದಾವೆ. ಕೊರೊನಾ ಬಗ್ಗೆ ಜನ ಹುಷಾರಾಗಿರ್ಲಿ ಅಂತ ಹೇಳೋಕೆ ಸರ್ಕಾರದ ಕೆಮ್ಮು ಇದು...’ ತೆಪರೇಸಿ ಸ್ಪಷ್ಟನೆ ನೀಡಿದ.</p>.<p>‘ಅಲ್ಲಲೆ, ಇಡೀ ದಿನ ಇದು ಕೆಮ್ತಾ ಇದ್ರೆ ಹೆಂಗೆ? ತೆಲಿ ಕೆಡಲ್ವ?’</p>.<p>‘ಕೆಮ್ಮು ಬ್ಯಾಡ ಅಂದ್ರೆ ಸರ್ಕಾರಕ್ಕೆ ಡುಂಡಿರಾಜ್ ಸ್ಟೈಲಲ್ಲಿ ಹೇಳಬೇಕು ‘ಅರೇ... ಫೋನ್ ಕರ್ನೇ ದೋ ಹಮ್ಕೋ... ಆಮೇಲ್ ಬೇಕಾದ್ರೆ ಕೆಮ್ಕೋ ಅಂತ...’ ಗುಡ್ಡೆ ನಕ್ಕ.</p>.<p>‘ಮೊಬೈಲ್ ಒಂದೇ ಅಲ್ಲ ಬಿಡ್ರಲೆ, ಈಗ ಎಲ್ಲ ಕಡೆ ಕೆಮ್ಮೋ ಸುದ್ದಿಗಳೇ ಪೇಪರ್ನಲ್ಲಿ. ವಿಧಾನ<br />ಸೌಧದಲ್ಲಿ ಸುಧಾಕರ್ ಮೇಲೆ ರಮೇಶ್ಕುಮಾರು, ರಮೇಶ್ಕುಮಾರ್ ಮೇಲೆ ಈಶ್ವರಪ್ಪ, ಈಶ್ವರಪ್ಪ ಮೇಲೆ ಸಿದ್ದರಾಮಯ್ಯ ಕೆಮ್ಮಿದ್ದೇ ಕೆಮ್ಮಿದ್ದು... ಇವರನ್ನೆಲ್ಲ ಕೊರೊನಾ ವಾರ್ಡ್ಗೆ ಸೇರಿಸಿದ್ರೆ ಹೆಂಗೆ?’</p>.<p>‘ಹೋಗ್ಲಿಬಿಡ್ರಪ್ಪ, ನಮಗೆ ರಾಜಕೀಯ ಬ್ಯಾಡ. ಆದ್ರೂ ಈ ಕೆಮ್ಮೋದು ಇದೆಯಲ್ಲ ಬಹಳ ಡೇಂಜರು. ಬಸ್ನಲ್ಲೋ, ಹೋಟ್ಲಲ್ಲೋ, ಮಾಲ್ನಲ್ಲೋ ಸ್ವಲ್ಪ ಕೆಮ್ಮಿದ್ರೆ ಸಾಕು, ಎಲ್ರೂ ಒಳ್ಳೆ ಕಳ್ಳನ ತರ ನೋಡ್ತಾರೆ...’ ದುಬ್ಬೀರ ಬೇಸರ ವ್ಯಕ್ತಪಡಿಸಿದ.</p>.<p>‘ಕೆಮ್ಮೋದ್ರಿಂದ ಲಾಭನೂ ಐತೆ ಕಣಲೆ, ರಜೆ ಕೇಳಿದ್ರೆ ಉರಿದು ಬೀಳ್ತಿದ್ದ ನಮ್ಮ ಪರ್ಮೇಶಿ ಬಾಸು ಮೊನ್ನೆ ಆಫೀಸ್ನಲ್ಲಿ ಸುಮ್ನೆ ಕೆಮ್ಮಿದ್ದಕ್ಕೆ ಪರ್ಮೇಶಿಗೆ ರಜೆ ಕೊಟ್ಟು ಮನೆಗೆ ಕಳಿಸಿದ್ನಂತೆ ಗೊತ್ತಾ?’ ಎಂದ ಗುಡ್ಡೆ.</p>.<p>‘ಏನ್ ಲಾಭ, ನಿನ್ ತಲೆ, ನಿನ್ನೆ ರಾತ್ರಿ ಬೆಡ್ರೂಮಲ್ಲಿ ನಮ್ ತೆಪರೇಸಿಗೆ ಯಾತಕ್ಕೋ ಕೆಮ್ಮು ಬಂತಂತೆ. ಅಷ್ಟಕ್ಕೇ ಅವನ ಹೆಂಡ್ತಿ ಚಾಪೆ- ದಿಂಬು ಹೊರಗಾಕಿ ಬೆಡ್ರೂಂ ಬಾಗಿಲು ಹಾಕ್ಕಂಡ್ಲಂತೆ. ಇದಕ್ಕೇನೇಳ್ತೀಯ?’</p>.<p>ದುಬ್ಬೀರನ ಮಾತಿಗೆ ಹರಟೆ ಕಟ್ಟೆಯಲ್ಲಿ ನಗೆಯ ಅಲೆ ತೇಲಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>