ಶಾರ್ವರಿ ನಾಮ ಸಂವತ್ಸರದಲ್ಲಿ ಭಾರತಕ್ಕೆ ಕೊರೊನಾ ಎಂಬ ಕಾಲಪುರುಷನು ಕಿರೀಟಧಾರಿಯಾಗಿ, ಮೂತಿಗೆ ಕಪ್ಪು ಮುಸುಕನ್ನು ಹಾಕಿ, ಚೀನಾದ ಕಡೆಯಿಂದ ವಕ್ಕರಿಸಿ ಮುಂಬೈ ಕಡೆಯಿಂದ ತೆರಳುವನು. ಈತನು ಕಿರೀಟ ಧರಿಸಿ ಹಂದಿಯ ಮೇಲೆ ಕುಳಿತು, ಕೈಯ್ಯಲ್ಲಿ ಹಕ್ಕಿ, ಬೇಳೆ-ಕಾಳು, ಪೆಟ್ರೋಲ್-ಡೀಸೆಲ್, ಚಿನ್ನವನ್ನು ಹಿಡಿದಿರುವನು. ಈತನು ಸದಾ ಕೆಮ್ಮುತ್ತಾ, ನಡುಗುತ್ತಾ, ಸೀನುತ್ತಿರುವುದರಿಂದ ದೇಶದ ಜನರಿಗೆ ಉಚಿತ ಕೊರೊನಾ ಭಾಗ್ಯ! ಲಾಕ್ ಡೌನ್, ಕಡ್ಡಾಯ ಗೃಹಬಂಧನವು. ಅಲ್ಲದೆ ಕಾಲಪುರುಷನು ಕೈಯ್ಯಲ್ಲಿ ಹಿಡಿದ ಎಲ್ಲ ವಸ್ತುಗಳೂ ತುಟ್ಟಿಯಾಗುವುವು.