ಮೀಸಲಾತಿ ಧಮಕಿಗಳೂ ಮರಾಠ ಮಸಾಲೆ, ನಿಗಮಗಳ ತಲ್ಲಣಗಳ ಜೊತೆಗೆ ಮೂಲವ್ಯಾಧಿ, ವಲಸೆ ವಾದ್ಯಗಳು ಹಾಗೂ ಸ್ಥಾನಪಲ್ಲಟ ಯತ್ನಗಳೂ ರಾಜಾಹುಲಿಗೆ ಹಿಂಸತೂಲಿಕಾತಲ್ಪದ ಅನುಭವ ಉಂಟು ಮಾಡುತ್ತಿದ್ದವು. ವಿಸ್ತರಣಾ ಯೋಗಕ್ಕೆ ತ್ರಿಮೂರ್ತಿಗಳ ದರ್ಶನ ಭಾಗ್ಯ ಲಭಿಸದೇ ಪಕ್ಷವಾತ ಉಂಟಾಗತೊಡಗಿತು. ‘ಹ್ಞಾಂ ವಿಧಿಯೇ! ಸಂಧಿಮಾರ್ಗದಲ್ಲೂ ಸೋಲಾಯಮಾನವೇ? ನಂಬಿದ ಶುಕ-ಪಿಕಗಳಿಗೆ ನಾಶಕವಿತೆಯೇ?’ ಎಂದು ಖಿನ್ನನಾದ ರಾಜಾಹುಲಿಯು ಕುಲದೇವತೆಯ ಚರಣಾಗತನಾದನು.