<p>‘ನಮ್ ಅಕಾಡೆಮಿ ಅಧ್ಯಕ್ಷ ಮುಕುಂದಣ್ಣ ಕನ್ನಡ ಸಾಹಿತ್ಯನ ಜೈಲ್ಗಂಟ ತಗಂಡೋಗೋ ಒಳ್ಳೇ ಪ್ರಯತ್ನ ಮಾಡವ್ರಲ್ಲಪ್ಪ’ ಎಂದ <br />ಗುದ್ಲಿಂಗ.</p>.<p>‘ಊ ಕಣ್ಲಾ, ಆದ್ರೆ ಇದ್ರ ಪರಿಣಾಮ ಯೋಚ್ನೆ ಮಾಡ್ಬೇಕಾಯ್ತದೆ’ ಎಂದ ಮಾಲಿಂಗ.</p>.<p>‘ಇದ್ರಾಗೆ ಯೋಚ್ನೆ ಮಾಡೋದು ಏನೈತ್ಲಾ? ಮನ್ಸುಗಳ ಪರಿವರ್ತನೆ ಮಾಡಿ ಜೈಲಿನ ಪರಿಸರ ಸಾಹಿತ್ಯಮಯವಾಗಿಸೋದು’.</p>.<p>‘ಜೈಲಲ್ಲಿ ಕಲ್ ಒಡೆದು ಮುದ್ದೆ ಕಟ್ಟೋ ಕೆಲಸ ಬಿಟ್ಟು ಎಲ್ಲಾ ಕವಿತೆ ಕಟ್ಟೋ ಕೆಲಸ ಶುರು ಮಾಡ್ಕಂಡ್ರೆ ಎಂಗ್ಲಾ?’</p>.<p>‘ಅದೂ ನಿಜನೇಯ, ‘ನಮಗೂ ಸ್ವಾತಂತ್ರ್ಯ ಬೇಕು, ಸಾಕು ಗೋಡೆ ಮಧ್ಯೆ ಬದುಕು. ಬಿಡಿಸಬೇಕು ಬಿರುಕು, ಅಕಾಡೆಮಿಗೆ ಬಹುಪರಾಕು’ ಅಂತ ಎಲ್ಲ ಕವನ ಕೊರೆದು ಓದುದ್ರೆ ಜೈಲರ್ ಕಿವಿ ಗತಿ ಏನ್ಲಾ ಆಗ್ಬೇಕು?’</p>.<p>‘ಅವರು ಎಂಗೋ ತಡ್ಕೊತಾರೆ ಬಿಡು. ಆದ್ರೆ ಬರೀ ಕವನ ಬರ್ಕಂಡಿದ್ರೆ ಓಕೆ. ಆದ್ರೆ ಈ ಜೈಲಲ್ ನಡ್ಯೋ ತಾರಾತಿಗಡಿನೆಲ್ಲಾ ಪತ್ತೇದಾರಿ ಅಂತ ಗೋಡೆ ಮೇಲೆ ಕೆತ್ಬುಟ್ರೆ ಸರ್ಕಾರದ ಬುಡಕ್ಕೆ ಬತ್ತದಲ್ಲಪ್ಪ’.</p>.<p>‘ಜೊತೆಗೆ ಜೈಲ್ನಾಗೆ ಸಾಹಿತಿಗಳು ಜಾಸ್ತಿ ಆಗೋದ್ರೆ ಅಲ್ಲೂ ಶ್ರೇಷ್ಠತೆಯ ವ್ಯಸನ ಕಾಡುತ್ತೆ. ಜುಗಲ್ಬಂದಿ ಶುರುವಾಗಿ ಕಾಲ್ ಎಳೆಯಕ್ ಶುರು ಮಾಡ್ಕಂಡ್ರೆ ಪರಿವರ್ತನೆ ಎಲ್ ಬಂತು?’</p>.<p>‘ಇಂತ ಪರಿವರ್ತನೇನ ಉಗ್ರರ ಬಂಕರ್ಗೂ ಓಗಿ ಮಾಡ್ಬೇಕು ಕಣ್ಲಾ’.</p>.<p>‘ಹೂ ಕಣ್ಲಾ! ಹೇಳಿದ್ದನ್ನೇ ಹೇಳೋ ಟಿ.ವಿ. ಆ್ಯಂಕರ್ಗಳ ತರ ಕವಿತೆ ಮೇಲ್ ಕವಿತೆ ಕೊರುದ್ರೆ ಒಳಗಿರಕ್ಕಾಗ್ದೆ ಉಗ್ರರು ಈಚೆ ಬತ್ತಾರೆ. ಅವಾಗ ಸುಲಭವಾಗಿ ಹೊಡೆದುಹಾಕ್ಬಹುದು’.</p>.<p>‘ಅಯ್ಯೋ ಅಲ್ಲಿಗಂಟ ಓದೆ ನೀನು. ಮನೆ ಮನೆನೂ ಎಷ್ಟೋ ಗಂಡಸರ ಪಾಲಿಗೆ ‘ಜಗಳ್’ಬಂದಿ ‘ಕಾರಾ’ಗೃಹಗಳಾಗಿವೆ. ನಮ್ ಹೆಂಡ್ತೀರನ್ನೂ ಹೀಗೆ ಕವನ ಬರೆಸಿ ಪರಿವರ್ತನೆ ಮಾಡ್ಬೇಕಲ್ವಾ?’</p>.<p>‘ಈಗ ಕೆಲವು ಹೆಂಡ್ತೀರು ಕಿವಿ ಊದೇ ಸಾಕಾಗಿದೆ, ಇನ್ನು ಕವನ ಓದಿ ಕಿವಿನೂ ಕೊರುದ್ರೆ ಇರಕ್ಕಾಗುತ್ತೇನೋ?’ ಎಂದ ಪರ್ಮೇಶಿ.</p>.<p>ಎಲ್ಲಾ ಗೊಳ್ಳನೆ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನಮ್ ಅಕಾಡೆಮಿ ಅಧ್ಯಕ್ಷ ಮುಕುಂದಣ್ಣ ಕನ್ನಡ ಸಾಹಿತ್ಯನ ಜೈಲ್ಗಂಟ ತಗಂಡೋಗೋ ಒಳ್ಳೇ ಪ್ರಯತ್ನ ಮಾಡವ್ರಲ್ಲಪ್ಪ’ ಎಂದ <br />ಗುದ್ಲಿಂಗ.</p>.<p>‘ಊ ಕಣ್ಲಾ, ಆದ್ರೆ ಇದ್ರ ಪರಿಣಾಮ ಯೋಚ್ನೆ ಮಾಡ್ಬೇಕಾಯ್ತದೆ’ ಎಂದ ಮಾಲಿಂಗ.</p>.<p>‘ಇದ್ರಾಗೆ ಯೋಚ್ನೆ ಮಾಡೋದು ಏನೈತ್ಲಾ? ಮನ್ಸುಗಳ ಪರಿವರ್ತನೆ ಮಾಡಿ ಜೈಲಿನ ಪರಿಸರ ಸಾಹಿತ್ಯಮಯವಾಗಿಸೋದು’.</p>.<p>‘ಜೈಲಲ್ಲಿ ಕಲ್ ಒಡೆದು ಮುದ್ದೆ ಕಟ್ಟೋ ಕೆಲಸ ಬಿಟ್ಟು ಎಲ್ಲಾ ಕವಿತೆ ಕಟ್ಟೋ ಕೆಲಸ ಶುರು ಮಾಡ್ಕಂಡ್ರೆ ಎಂಗ್ಲಾ?’</p>.<p>‘ಅದೂ ನಿಜನೇಯ, ‘ನಮಗೂ ಸ್ವಾತಂತ್ರ್ಯ ಬೇಕು, ಸಾಕು ಗೋಡೆ ಮಧ್ಯೆ ಬದುಕು. ಬಿಡಿಸಬೇಕು ಬಿರುಕು, ಅಕಾಡೆಮಿಗೆ ಬಹುಪರಾಕು’ ಅಂತ ಎಲ್ಲ ಕವನ ಕೊರೆದು ಓದುದ್ರೆ ಜೈಲರ್ ಕಿವಿ ಗತಿ ಏನ್ಲಾ ಆಗ್ಬೇಕು?’</p>.<p>‘ಅವರು ಎಂಗೋ ತಡ್ಕೊತಾರೆ ಬಿಡು. ಆದ್ರೆ ಬರೀ ಕವನ ಬರ್ಕಂಡಿದ್ರೆ ಓಕೆ. ಆದ್ರೆ ಈ ಜೈಲಲ್ ನಡ್ಯೋ ತಾರಾತಿಗಡಿನೆಲ್ಲಾ ಪತ್ತೇದಾರಿ ಅಂತ ಗೋಡೆ ಮೇಲೆ ಕೆತ್ಬುಟ್ರೆ ಸರ್ಕಾರದ ಬುಡಕ್ಕೆ ಬತ್ತದಲ್ಲಪ್ಪ’.</p>.<p>‘ಜೊತೆಗೆ ಜೈಲ್ನಾಗೆ ಸಾಹಿತಿಗಳು ಜಾಸ್ತಿ ಆಗೋದ್ರೆ ಅಲ್ಲೂ ಶ್ರೇಷ್ಠತೆಯ ವ್ಯಸನ ಕಾಡುತ್ತೆ. ಜುಗಲ್ಬಂದಿ ಶುರುವಾಗಿ ಕಾಲ್ ಎಳೆಯಕ್ ಶುರು ಮಾಡ್ಕಂಡ್ರೆ ಪರಿವರ್ತನೆ ಎಲ್ ಬಂತು?’</p>.<p>‘ಇಂತ ಪರಿವರ್ತನೇನ ಉಗ್ರರ ಬಂಕರ್ಗೂ ಓಗಿ ಮಾಡ್ಬೇಕು ಕಣ್ಲಾ’.</p>.<p>‘ಹೂ ಕಣ್ಲಾ! ಹೇಳಿದ್ದನ್ನೇ ಹೇಳೋ ಟಿ.ವಿ. ಆ್ಯಂಕರ್ಗಳ ತರ ಕವಿತೆ ಮೇಲ್ ಕವಿತೆ ಕೊರುದ್ರೆ ಒಳಗಿರಕ್ಕಾಗ್ದೆ ಉಗ್ರರು ಈಚೆ ಬತ್ತಾರೆ. ಅವಾಗ ಸುಲಭವಾಗಿ ಹೊಡೆದುಹಾಕ್ಬಹುದು’.</p>.<p>‘ಅಯ್ಯೋ ಅಲ್ಲಿಗಂಟ ಓದೆ ನೀನು. ಮನೆ ಮನೆನೂ ಎಷ್ಟೋ ಗಂಡಸರ ಪಾಲಿಗೆ ‘ಜಗಳ್’ಬಂದಿ ‘ಕಾರಾ’ಗೃಹಗಳಾಗಿವೆ. ನಮ್ ಹೆಂಡ್ತೀರನ್ನೂ ಹೀಗೆ ಕವನ ಬರೆಸಿ ಪರಿವರ್ತನೆ ಮಾಡ್ಬೇಕಲ್ವಾ?’</p>.<p>‘ಈಗ ಕೆಲವು ಹೆಂಡ್ತೀರು ಕಿವಿ ಊದೇ ಸಾಕಾಗಿದೆ, ಇನ್ನು ಕವನ ಓದಿ ಕಿವಿನೂ ಕೊರುದ್ರೆ ಇರಕ್ಕಾಗುತ್ತೇನೋ?’ ಎಂದ ಪರ್ಮೇಶಿ.</p>.<p>ಎಲ್ಲಾ ಗೊಳ್ಳನೆ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>