<p>‘ಹಲೋ... ರೀ, ಪಾದಯಾತ್ರೆ ಪ್ರಯಾಣ ಸುಖಕರವಾಗಿ ಸಾಗ್ತಿದೆಯಾ?’ ಯಾತ್ರೆಯಲ್ಲಿರುವ ಶಾಸಕರಿಗೆ ಪತ್ನಿ ಫೋನ್ ಮಾಡಿದರು.</p>.<p>‘ಮೈಸೂರು ತಲುಪಿಬಿಟ್ಟರೆ ಸಾಕಪ್ಪಾ ಅನಿಸಿಬಿಟ್ಟಿದೆ’ ಶಾಸಕರು ಏದುಸಿರುಬಿಟ್ಟರು.</p>.<p>‘ಹುಯ್ಯೋ ಮಳೆಯಲ್ಲಿ ಪಾದಯಾತ್ರೆ ಹೊರಟಿದ್ದೀರಿ. ರೇನ್ ಕೋಟ್ ಬಿಚ್ಚಬೇಡಿ, ಛತ್ರಿ ಮುಚ್ಚಬೇಡಿ, ಮಳೆಯಲ್ಲಿ ನೆನೆದು ಶೀತ, ನೆಗಡಿಯಾಗಿ ಜ್ವರ ಬಂದು ಮಲಗಿಬಿಟ್ಟರೆ ಆಡಳಿತ ಪಕ್ಷದವರು ಆಡಿಕೊಂಡು ನಗ್ತಾರೆ’.</p>.<p>‘ಹಾಗೇನೂ ಆಗೋದಿಲ್ಲ. ಡಾಕ್ಟರ್, ಆಂಬುಲೆನ್ಸ್, ಮೊಬೈಲ್ ಆಸ್ಪತ್ರೆ ನಮ್ಮ ಜೊತೆಗಿವೆ’.</p>.<p>‘ಬೆಳಿಗ್ಗೆ ಏನು ತಿಂಡಿ ತಿಂದ್ರಿ? ಎಣ್ಣೆ ಐಟಂ ತಿಂದು ಆರೋಗ್ಯ ಕೆಡಿಸಿಕೊಳ್ಳಬೇಡಿ. ಜೇಬಿನಲ್ಲಿ ಡ್ರೈಫ್ರೂಟ್ಸ್ ಇಟ್ಟುಕೊಂಡು ದಾರಿಯುದ್ದಕ್ಕೂ ಬಾಯಿಗೆ ಎಸೆದುಕೊಂಡು ನೀರು ಕುಡಿಯಿರಿ’.</p>.<p>‘ಸರಿ’.</p>.<p>‘ಪಾದಯಾತ್ರೆಗೆ ಪೊಲೀಸರು ಅಡ್ಡಿ ಮಾಡ್ತಿಲ್ವಾ?’</p>.<p>‘ಇಲ್ಲ, ಅವರೂ ನಮ್ಮ ಜೊತೆ ನಡೆದು ಬರ್ತಿದ್ದಾರೆ’.</p>.<p>‘ಹೋಗ್ಲಿಬಿಡಿ, ಪಾದಯಾತ್ರೆ ಪುಣ್ಯದಿಂದ ಆ ಪೊಲೀಸರಿಗೆ ಪ್ರಮೋಷನ್ ಭಾಗ್ಯ ಸಿಗಲಿ. ರೀ, ಪಾದಯಾತ್ರೆ ನಿರ್ವಿಘ್ನವಾಗಿ ಸಾಗಲಿ ಅಂತ ನಿಮ್ಮ ಬೆಂಬಲಿಗರು ವಿಶೇಷ ಪೂಜೆ ಮಾಡಿಸಿ ಪ್ರಸಾದ ತಂದುಕೊಟ್ಟರು’. ಶಾಸಕರು ಖುಷಿಯಾದರು.</p>.<p>‘ನೀವು ಕ್ಷೇತ್ರದ ಕಡೆ ತಲೆ ಹಾಕಿ ತಿಂಗಳುಗಳಾಗಿವೆಯಂತೆ. ಮಳೆ ಸುರಿದು ರಸ್ತೆ, ಸೇತುವೆ ಹಾಳಾಗಿದ್ದರೂ ರಿಪೇರಿ ಮಾಡಿಸಿಲ್ಲ, ಹಾನಿ ಸಂತ್ರಸ್ತರ ಸಂಕಷ್ಟ ಕೇಳಲಿಲ್ಲ ಅಂತ ಜನ ನಿಮ್ಮ ಮೇಲೆ ಸಿಟ್ಟಾಗಿದ್ದಾರಂತೆ. ಹೀಗಾದ್ರೆ ಮುಂದೆ ಎಲೆಕ್ಷನ್ ಗೆಲ್ಲೋದು ಕಷ್ಟ ಆಗುವುದಂತೆ’. ಶಾಸಕರಿಗೆ ಆತಂಕ.</p>.<p>‘ಮೈಸೂರು ಯಾತ್ರೆ ಮುಗಿಸಿಬಂದು ಕಾಲುನೋವು, ಮಂಡಿನೋವು ಅಂತ ರೆಸ್ಟ್ ಮಾಡಬೇಡಿ’.</p>.<p>‘ಮತ್ತೇನು ಮಾಡಲಿ?’</p>.<p>‘ಕ್ಷೇತ್ರದಲ್ಲಿ ನಡಿಗೆ ಯಾತ್ರೆ ಆರಂಭಿಸಿ ಜನರ ಸಿಟ್ಟು ಶಮನಗೊಳಿಸಿ. ಈ ಯಾತ್ರೆಯಿಂದ ಆರೋಗ್ಯ ವೃದ್ಧಿ, ಅಧಿಕಾರ ಸಿದ್ಧಿ ಪ್ರಾಪ್ತಿಯಾಗುತ್ತವೆ...’ ಎಂದು ಹೇಳಿ ಪತ್ನಿ ಫೋನ್ ಕಟ್ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಹಲೋ... ರೀ, ಪಾದಯಾತ್ರೆ ಪ್ರಯಾಣ ಸುಖಕರವಾಗಿ ಸಾಗ್ತಿದೆಯಾ?’ ಯಾತ್ರೆಯಲ್ಲಿರುವ ಶಾಸಕರಿಗೆ ಪತ್ನಿ ಫೋನ್ ಮಾಡಿದರು.</p>.<p>‘ಮೈಸೂರು ತಲುಪಿಬಿಟ್ಟರೆ ಸಾಕಪ್ಪಾ ಅನಿಸಿಬಿಟ್ಟಿದೆ’ ಶಾಸಕರು ಏದುಸಿರುಬಿಟ್ಟರು.</p>.<p>‘ಹುಯ್ಯೋ ಮಳೆಯಲ್ಲಿ ಪಾದಯಾತ್ರೆ ಹೊರಟಿದ್ದೀರಿ. ರೇನ್ ಕೋಟ್ ಬಿಚ್ಚಬೇಡಿ, ಛತ್ರಿ ಮುಚ್ಚಬೇಡಿ, ಮಳೆಯಲ್ಲಿ ನೆನೆದು ಶೀತ, ನೆಗಡಿಯಾಗಿ ಜ್ವರ ಬಂದು ಮಲಗಿಬಿಟ್ಟರೆ ಆಡಳಿತ ಪಕ್ಷದವರು ಆಡಿಕೊಂಡು ನಗ್ತಾರೆ’.</p>.<p>‘ಹಾಗೇನೂ ಆಗೋದಿಲ್ಲ. ಡಾಕ್ಟರ್, ಆಂಬುಲೆನ್ಸ್, ಮೊಬೈಲ್ ಆಸ್ಪತ್ರೆ ನಮ್ಮ ಜೊತೆಗಿವೆ’.</p>.<p>‘ಬೆಳಿಗ್ಗೆ ಏನು ತಿಂಡಿ ತಿಂದ್ರಿ? ಎಣ್ಣೆ ಐಟಂ ತಿಂದು ಆರೋಗ್ಯ ಕೆಡಿಸಿಕೊಳ್ಳಬೇಡಿ. ಜೇಬಿನಲ್ಲಿ ಡ್ರೈಫ್ರೂಟ್ಸ್ ಇಟ್ಟುಕೊಂಡು ದಾರಿಯುದ್ದಕ್ಕೂ ಬಾಯಿಗೆ ಎಸೆದುಕೊಂಡು ನೀರು ಕುಡಿಯಿರಿ’.</p>.<p>‘ಸರಿ’.</p>.<p>‘ಪಾದಯಾತ್ರೆಗೆ ಪೊಲೀಸರು ಅಡ್ಡಿ ಮಾಡ್ತಿಲ್ವಾ?’</p>.<p>‘ಇಲ್ಲ, ಅವರೂ ನಮ್ಮ ಜೊತೆ ನಡೆದು ಬರ್ತಿದ್ದಾರೆ’.</p>.<p>‘ಹೋಗ್ಲಿಬಿಡಿ, ಪಾದಯಾತ್ರೆ ಪುಣ್ಯದಿಂದ ಆ ಪೊಲೀಸರಿಗೆ ಪ್ರಮೋಷನ್ ಭಾಗ್ಯ ಸಿಗಲಿ. ರೀ, ಪಾದಯಾತ್ರೆ ನಿರ್ವಿಘ್ನವಾಗಿ ಸಾಗಲಿ ಅಂತ ನಿಮ್ಮ ಬೆಂಬಲಿಗರು ವಿಶೇಷ ಪೂಜೆ ಮಾಡಿಸಿ ಪ್ರಸಾದ ತಂದುಕೊಟ್ಟರು’. ಶಾಸಕರು ಖುಷಿಯಾದರು.</p>.<p>‘ನೀವು ಕ್ಷೇತ್ರದ ಕಡೆ ತಲೆ ಹಾಕಿ ತಿಂಗಳುಗಳಾಗಿವೆಯಂತೆ. ಮಳೆ ಸುರಿದು ರಸ್ತೆ, ಸೇತುವೆ ಹಾಳಾಗಿದ್ದರೂ ರಿಪೇರಿ ಮಾಡಿಸಿಲ್ಲ, ಹಾನಿ ಸಂತ್ರಸ್ತರ ಸಂಕಷ್ಟ ಕೇಳಲಿಲ್ಲ ಅಂತ ಜನ ನಿಮ್ಮ ಮೇಲೆ ಸಿಟ್ಟಾಗಿದ್ದಾರಂತೆ. ಹೀಗಾದ್ರೆ ಮುಂದೆ ಎಲೆಕ್ಷನ್ ಗೆಲ್ಲೋದು ಕಷ್ಟ ಆಗುವುದಂತೆ’. ಶಾಸಕರಿಗೆ ಆತಂಕ.</p>.<p>‘ಮೈಸೂರು ಯಾತ್ರೆ ಮುಗಿಸಿಬಂದು ಕಾಲುನೋವು, ಮಂಡಿನೋವು ಅಂತ ರೆಸ್ಟ್ ಮಾಡಬೇಡಿ’.</p>.<p>‘ಮತ್ತೇನು ಮಾಡಲಿ?’</p>.<p>‘ಕ್ಷೇತ್ರದಲ್ಲಿ ನಡಿಗೆ ಯಾತ್ರೆ ಆರಂಭಿಸಿ ಜನರ ಸಿಟ್ಟು ಶಮನಗೊಳಿಸಿ. ಈ ಯಾತ್ರೆಯಿಂದ ಆರೋಗ್ಯ ವೃದ್ಧಿ, ಅಧಿಕಾರ ಸಿದ್ಧಿ ಪ್ರಾಪ್ತಿಯಾಗುತ್ತವೆ...’ ಎಂದು ಹೇಳಿ ಪತ್ನಿ ಫೋನ್ ಕಟ್ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>