‘ಶಾಸಕರಾದ ಮೇಲೆ ತಾನೆ ಪ್ರಮಾಣವಚನ ಸ್ವೀಕಾರ ಮಾಡೋದು’ ಎಂದು ಕೇಳಿದಳು.
‘ಆಯ್ಕೆಯಾದ ಮೇಲೆ ಪಕ್ಷವನ್ನು ತೊರೆಯೊಲ್ಲ ಅಂತ ಪ್ರಮಾಣ ಮಾಡಿಸೋದಿಕ್ಕೆ’.
‘ಓ! ಆ್ಯಂಟಿಸಿಪೇಟರಿ ಬೇಲ್ ತರಹ. ಇದು ಮುಂದುವರಿದರೆ ನಾಳೆ ಕರ್ನಾಟಕದಲ್ಲಿ ಗೆದ್ದವರನ್ನೆಲ್ಲ ರೆಸಾರ್ಟಿಗೆ ಕರೆದುಕೊಂಡು ಹೋಗೋಕೆ ಮುಂಚೆ ದೇವಸ್ಥಾನಕ್ಕೆ ಕರೆದೊಯ್ಯುತ್ತಾರೇನೋ?’
‘ದೇವರಿಗೇನು ಕೆಲಸ?’
‘ನನ್ನನ್ನು ಮಂತ್ರಿ ಮಾಡಿ ಅಂತ ಹಟ ಮಾಡೊಲ್ಲ, ಚಳವಳಿ ಮಾಡಿಸೊಲ್ಲ, ಸ್ವಾಮೀಜಿ ಗಳಿಂದ ಒತ್ತಡ ಹಾಕ್ಸಲ್ಲ ಅಂತ ಪ್ರಮಾಣ ಮಾಡಿಸೋದಿಕ್ಕೆ’.
‘ಹಾಗೆಯೇ, ಮಂತ್ರಿ ಮಾಡಿದರೂ ಇಂತಹುದೇ ಖಾತೆ ಕೊಡಬೇಕು ಅಂತ ಕ್ಯಾತೆ ತೆಗೆಯೊಲ್ಲ ಅಂತ ಪ್ರಮಾಣ ಮಾಡಿಸೋಕೂ ದೇವರ ಮುಂದೆ ಕರೆದೊಯ್ಯಬಹುದು. ಈ ಪ್ರಮಾಣ ಮಾಡೋದಿಕ್ಕೆ ಬೇರೆ ಬೇರೆ ದೇವರುಗಳ ಮೊರೆ ಹೋಗಬೇಕೊ, ಸಿಂಗಲ್ ದೇವರು ಸಾಕೊ?’
‘ಅಂದರೆ?’
‘ಪಕ್ಷಾಂತರ ಮಾಡೊಲ್ಲ ಅನ್ನೋದಿಕ್ಕೆ ಒಬ್ಬ ದೇವರ ಮುಂದೆ, ಮಂತ್ರಿ ಮಾಡಿ ಅಂತ ಕೇಳಲ್ಲ ಅನ್ನೋದಿಕ್ಕೆ ಮತ್ತೊಬ್ಬ ದೇವರು, ಮಂತ್ರಿಯಾದ ಮೇಲೆ ನಿರ್ದಿಷ್ಟ ಖಾತೇನೇ ಬೇಕು ಅಂತ ಕೇಳದಿರೋಕ್ಕೆ ಇನ್ನೊಬ್ಬ ದೇವರು...’