<p>ತಿಂಡಿ ಕೊಟ್ಟು ಬಹಳ ಹೊತ್ತಾದರೂ ಮುಖ ಸೊಟ್ಟಗೆ ಮಾಡಿಕೊಂಡು ತಿನ್ನಲು ಒದ್ದಾಡುತ್ತಿದ್ದ ತೆಪರೇಸಿಯನ್ನು ಕಂಡು ಪಮ್ಮಿ ಕವಿ ಡುಂಡಿರಾಜರ ಸ್ಟೈಲಲ್ಲಿ ಕೇಳಿದಳು ‘ಪ್ರಿಯ, ನಿಮ್ಮ ಮುಖವೇಕೆ ಕಪ್ಪಿಟ್ಟಿದೆ?’</p>.<p>ಅದಕ್ಕೆ ತೆಪರೇಸಿ, ‘ನೀ ಮಾಡಿದ ಉಪ್ಪಿಟ್ಟಲ್ಲಿ ಎಣ್ಣೆಯೇ ಇಲ್ಲವಲ್ಲ ಪ್ರಿಯೆ, ನುಂಗಲು ಕಷ್ಟವಾಗುತ್ತಿದೆ’ ಎಂದ.</p>.<p>ಮಧ್ಯಾಹ್ನವೂ ಅದೇ ಕತೆ. ‘ಬೇಳೆ ಸಾರಲ್ಲಿ ಬೇಳೆ, ತರಕಾರಿ ಪಲ್ಯದಲ್ಲಿ ತರಕಾರಿಯೇ ಇಲ್ಲವಲ್ಲ ಪ್ರಿಯೆ’ ಎಂದು ರಾಗ ಎಳೆದ ತೆಪರೇಸಿ ಮೇಲೆ ಪಮ್ಮಿಗೆ ಸಿಟ್ಟು ಬಂತು.</p>.<p>‘ಸುಮ್ನೆ ಕೊಟ್ಟಿದ್ದು ತಿಂದೋಗೋಕಾಗಲ್ವ? ಎಣ್ಣೆ, ತರಕಾರಿ, ಬೇಳೆ ಎಲ್ಲ ಎಷ್ಟು ರೇಟಾಗಿದೆ ಗೊತ್ತಾ? ನೀವು ತರೋ ಸಂಬಳದಲ್ಲಿ ಇಷ್ಟೇ ಮಾಡೋಕಾಗೋದು’ ಎಂದು ರೇಗಿದಳು.</p>.<p>‘ಪದ್ಯಂ ವದ್ಯಂ, ಗದ್ಯಂ ಹೃದ್ಯಂ’ ಅಂತ ಕೇಳಿದ್ದೆ. ಇಲ್ಲಿ ‘ಗದ್ಯಂ ಯುದ್ಧಂ’ ತರ ಆಯ್ತಲ್ಲಪ್ಪ ಇದು ಎಂದುಕೊಂಡ ತೆಪರೇಸಿ ‘ನಾನೇನ್ ಮಾಡ್ಲಿ? ಪೆಟ್ರೋಲು, ಗ್ಯಾಸು ಎಲ್ಲ ರಾಕೆಟ್ ತರ ಏರ್ತಾ ಇವೆ. ಸಂಬಳ ಮಾತ್ರ ಅಷ್ಟೇ ಇದೆ’ ಎಂದು ತಿರುಗೇಟು ಕೊಟ್ಟ.</p>.<p>ಸಂಜೆ ಟೀ ಬರಲಿಲ್ಲ. ಅಡುಗೆ ಮನೆಯಲ್ಲಿ ಪಾತ್ರೆಗಳು ತಾಲಿಬಾನೀಯರ ಥರ ಸದ್ದು ಮಾಡತೊಡಗಿದವು. ಅದೇ ವೇಳೆಗೆ ‘ಏನ್ ಮಾಡ್ತಿದೀಯೋ ದೋಸ್ತಾ’ ಎನ್ನುತ್ತ ಗುಡ್ಡೆ ವಕ್ಕರಿಸಿದ.</p>.<p>‘ವಿಷಯ ಗೊತ್ತಾತ, ಶ್ರೀಲಂಕಾದಲ್ಲಿ ಆಹಾರ ತುರ್ತು ಪರಿಸ್ಥಿತಿಯಂತೆ. ಪಾಪ ಅಲ್ವ? ಎಲ್ಲಿ ಪಮ್ಮಕ್ಕ ಕಾಣ್ತಿಲ್ಲ? ಜಲ್ದಿ ಚಾ ಮಾಡೋಕೇಳು’ ಎಂದ.</p>.<p>ತಾಲಿಬಾನ್ ಮಧ್ಯ ಇವನೊಬ್ಬ ತೆಲಿಬ್ಯಾನಿ ಎಂದು ಗೊಣಗಿದ ತೆಪರೇಸಿ, ‘ಜಾಸ್ತಿ ಅವಾಜ್ ಮಾಡ್ಬೇಡ, ಶ್ರೀಲಂಕಾದಲ್ಲಿ ಆಹಾರ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ರೆ ನಮ್ಮನೆ ಅಡುಗೆ ಮನೇಲಿ ತುರ್ತುಪರಿಸ್ಥಿತಿ ಜಾರಿಯಲ್ಲಿದೆ, ಹುಷಾರು’ ಎಂದ. ಗುಡ್ಡೆಗೆ ಅರ್ಥವಾಯಿತು.</p>.<p>ಪಿಟಿಕ್ಕೆನ್ನದೆ ಅಫ್ಗಾನಿಸ್ತಾನದಿಂದ ಅಮೆರಿಕ ಕಾಲ್ಕಿತ್ತ ಹಾಗೆ ಮನೆಯಿಂದ ತೆಪರೇಸಿ ಮೆಲ್ಲಗೆ ಜಾಗ ಖಾಲಿ ಮಾಡಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿಂಡಿ ಕೊಟ್ಟು ಬಹಳ ಹೊತ್ತಾದರೂ ಮುಖ ಸೊಟ್ಟಗೆ ಮಾಡಿಕೊಂಡು ತಿನ್ನಲು ಒದ್ದಾಡುತ್ತಿದ್ದ ತೆಪರೇಸಿಯನ್ನು ಕಂಡು ಪಮ್ಮಿ ಕವಿ ಡುಂಡಿರಾಜರ ಸ್ಟೈಲಲ್ಲಿ ಕೇಳಿದಳು ‘ಪ್ರಿಯ, ನಿಮ್ಮ ಮುಖವೇಕೆ ಕಪ್ಪಿಟ್ಟಿದೆ?’</p>.<p>ಅದಕ್ಕೆ ತೆಪರೇಸಿ, ‘ನೀ ಮಾಡಿದ ಉಪ್ಪಿಟ್ಟಲ್ಲಿ ಎಣ್ಣೆಯೇ ಇಲ್ಲವಲ್ಲ ಪ್ರಿಯೆ, ನುಂಗಲು ಕಷ್ಟವಾಗುತ್ತಿದೆ’ ಎಂದ.</p>.<p>ಮಧ್ಯಾಹ್ನವೂ ಅದೇ ಕತೆ. ‘ಬೇಳೆ ಸಾರಲ್ಲಿ ಬೇಳೆ, ತರಕಾರಿ ಪಲ್ಯದಲ್ಲಿ ತರಕಾರಿಯೇ ಇಲ್ಲವಲ್ಲ ಪ್ರಿಯೆ’ ಎಂದು ರಾಗ ಎಳೆದ ತೆಪರೇಸಿ ಮೇಲೆ ಪಮ್ಮಿಗೆ ಸಿಟ್ಟು ಬಂತು.</p>.<p>‘ಸುಮ್ನೆ ಕೊಟ್ಟಿದ್ದು ತಿಂದೋಗೋಕಾಗಲ್ವ? ಎಣ್ಣೆ, ತರಕಾರಿ, ಬೇಳೆ ಎಲ್ಲ ಎಷ್ಟು ರೇಟಾಗಿದೆ ಗೊತ್ತಾ? ನೀವು ತರೋ ಸಂಬಳದಲ್ಲಿ ಇಷ್ಟೇ ಮಾಡೋಕಾಗೋದು’ ಎಂದು ರೇಗಿದಳು.</p>.<p>‘ಪದ್ಯಂ ವದ್ಯಂ, ಗದ್ಯಂ ಹೃದ್ಯಂ’ ಅಂತ ಕೇಳಿದ್ದೆ. ಇಲ್ಲಿ ‘ಗದ್ಯಂ ಯುದ್ಧಂ’ ತರ ಆಯ್ತಲ್ಲಪ್ಪ ಇದು ಎಂದುಕೊಂಡ ತೆಪರೇಸಿ ‘ನಾನೇನ್ ಮಾಡ್ಲಿ? ಪೆಟ್ರೋಲು, ಗ್ಯಾಸು ಎಲ್ಲ ರಾಕೆಟ್ ತರ ಏರ್ತಾ ಇವೆ. ಸಂಬಳ ಮಾತ್ರ ಅಷ್ಟೇ ಇದೆ’ ಎಂದು ತಿರುಗೇಟು ಕೊಟ್ಟ.</p>.<p>ಸಂಜೆ ಟೀ ಬರಲಿಲ್ಲ. ಅಡುಗೆ ಮನೆಯಲ್ಲಿ ಪಾತ್ರೆಗಳು ತಾಲಿಬಾನೀಯರ ಥರ ಸದ್ದು ಮಾಡತೊಡಗಿದವು. ಅದೇ ವೇಳೆಗೆ ‘ಏನ್ ಮಾಡ್ತಿದೀಯೋ ದೋಸ್ತಾ’ ಎನ್ನುತ್ತ ಗುಡ್ಡೆ ವಕ್ಕರಿಸಿದ.</p>.<p>‘ವಿಷಯ ಗೊತ್ತಾತ, ಶ್ರೀಲಂಕಾದಲ್ಲಿ ಆಹಾರ ತುರ್ತು ಪರಿಸ್ಥಿತಿಯಂತೆ. ಪಾಪ ಅಲ್ವ? ಎಲ್ಲಿ ಪಮ್ಮಕ್ಕ ಕಾಣ್ತಿಲ್ಲ? ಜಲ್ದಿ ಚಾ ಮಾಡೋಕೇಳು’ ಎಂದ.</p>.<p>ತಾಲಿಬಾನ್ ಮಧ್ಯ ಇವನೊಬ್ಬ ತೆಲಿಬ್ಯಾನಿ ಎಂದು ಗೊಣಗಿದ ತೆಪರೇಸಿ, ‘ಜಾಸ್ತಿ ಅವಾಜ್ ಮಾಡ್ಬೇಡ, ಶ್ರೀಲಂಕಾದಲ್ಲಿ ಆಹಾರ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ರೆ ನಮ್ಮನೆ ಅಡುಗೆ ಮನೇಲಿ ತುರ್ತುಪರಿಸ್ಥಿತಿ ಜಾರಿಯಲ್ಲಿದೆ, ಹುಷಾರು’ ಎಂದ. ಗುಡ್ಡೆಗೆ ಅರ್ಥವಾಯಿತು.</p>.<p>ಪಿಟಿಕ್ಕೆನ್ನದೆ ಅಫ್ಗಾನಿಸ್ತಾನದಿಂದ ಅಮೆರಿಕ ಕಾಲ್ಕಿತ್ತ ಹಾಗೆ ಮನೆಯಿಂದ ತೆಪರೇಸಿ ಮೆಲ್ಲಗೆ ಜಾಗ ಖಾಲಿ ಮಾಡಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>