<p>ಸ್ವಾಮೀಜಿ ಘೋರ ತಪಸ್ಸು ಮಾಡಿದರು. ತಪಸ್ಸಿಗೆ ಒಲಿದು ಭಗವಂತ ಪ್ರತ್ಯಕ್ಷನಾಗಿ, ‘ನಿಮಗೆ ಏನು ಬೇಕು?’ ಎಂದು ಕೇಳಿದ.</p>.<p>‘ಬಲ ನೀಡು ಭಗವಂತ’ ಸ್ವಾಮೀಜಿ ಕೋರಿದರು.</p>.<p>‘ಬಲ...?! ಯಾಕೆ?’</p>.<p>‘ಉಳ್ಳವರು ಹೋರಾಟ ಮಾಡುವರು, ನಾನೇನು ಮಾಡಲಿ ಬಲಹೀನನಯ್ಯ...’ ಎಂದರು ಸ್ವಾಮೀಜಿ.</p>.<p>‘ಒಂದು ಸಮುದಾಯದ ಸ್ವಾಮೀಜಿಯಾದ ನೀವು ಬಲಹೀನರೇ?’ ಭಗವಂತನಿಗೆ ಅಚ್ಚರಿ.</p>.<p>‘ಹೌದು ಭಗವಂತ, ನಮ್ಮದು ಬಡ ಸಮುದಾಯ, ನಮ್ಮಲ್ಲಿ ಎಮ್ಮೆಲ್ಯೆ,<br />ಮಂತ್ರಿಗಳಿಲ್ಲ, ಉನ್ನತ ಅಧಿಕಾರಿಗಳಿಲ್ಲ, ಉದ್ಯಮಿಗಳಿಲ್ಲ, ಬಲಾಢ್ಯ ಭಕ್ತರಿಲ್ಲ, ಶಿಕ್ಷಣ ಸಂಸ್ಥೆಗಳಿಲ್ಲ, ಮುರುಕಲು ಮಠ, ಹರಕಲು ಪೀಠ. ಹೀಗಿರುವಾಗ ಬಲ ಹೇಗೆ ಬಂದೀತು...?’</p>.<p>‘ನೀವು ಯಾರ ಮೇಲೆ ಬಲ ಪ್ರಯೋಗ ಮಾಡಬೇಕು?’</p>.<p>‘ಸರ್ಕಾರದ ಮೇಲೆ ಒತ್ತಡ ಹಾಕಲು ಬಲ ಬೇಕು. ನಮ್ಮ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಹೆಚ್ಚಿಸಲು, ಅಭಿವೃದ್ಧಿ ನಿಗಮ ಸ್ಥಾಪಿಸಲು, ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಮುದಾಯವನ್ನು ಮೇಲೆ ತರಲು ಸರ್ಕಾರವನ್ನು ಒತ್ತಾಯ ಮಾಡಬೇಕು’.</p>.<p>‘ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ನಿಮ್ಮ ಸಮುದಾಯದ ಸಂಕಷ್ಟವನ್ನು ಮನವರಿಕೆ ಮಾಡಿಕೊಡಿ’.</p>.<p>‘ಅದು ಸುಲಭವಲ್ಲ ಭಗವಂತ, ಪ್ರಭಾವಿ ಸಮುದಾಯದವರು ಹೋರಾಟದ ಮುಂಚೂಣಿ ಯಲ್ಲಿದ್ದಾರೆ. ಅವರ ಗಲಾಟೆಯಲ್ಲಿ ನಮ್ಮ ಕೀರಲು ಧ್ವನಿ ಸರ್ಕಾರಕ್ಕೆ ಹೇಗೆ ಕೇಳಿಸುತ್ತೆ...?’</p>.<p>‘ನಿಮಗೆ ಧ್ವನಿವರ್ಧಕದ ಅಗತ್ಯವಿದೆ’.</p>.<p>‘ಹೌದು, ನಮ್ಮ ಸಮುದಾಯದಲ್ಲಿ ಸಂಘಟನೆ, ಪ್ರತಿಭಟನೆ, ಧ್ವನಿವರ್ಧನೆ ಇಲ್ಲ. ನಮ್ಮಂಥವರಿಗೆ ದೇವರೇ ದಿಕ್ಕು. ನೀನಾದರೂ ನಮ್ಮ ಸಮುದಾಯಕ್ಕೆ ಮೀಸಲಾತಿ ಸೌಕರ್ಯ ಹೆಚ್ಚು ಮಾಡಿ ಸಮುದಾಯವನ್ನು ಉದ್ಧಾರ ಮಾಡು ಭಗವಂತಾ...’</p>.<p>‘ಅಯ್ಯೋ...! ಬೇಕಾದ್ರೆ ಆಯುಷ್ಯ, ಆರೋಗ್ಯ ಕರುಣಿಸುತ್ತೇನೆ, ಮೀಸಲಾತಿ ಮಾತ್ರ ಕೇಳಬೇಡಿ. ನಿಮಗೆ ಕೊಟ್ಟರೆ ಉಳಿದವರು ಬೆನ್ನಿಗೆ ಬಿದ್ದು ನನ್ನ ನೆಮ್ಮದಿ ಹಾಳುಮಾಡುತ್ತಾರೆ...’ ಎನ್ನುತ್ತಾ ಭಗವಂತ ಮಾಯವಾದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸ್ವಾಮೀಜಿ ಘೋರ ತಪಸ್ಸು ಮಾಡಿದರು. ತಪಸ್ಸಿಗೆ ಒಲಿದು ಭಗವಂತ ಪ್ರತ್ಯಕ್ಷನಾಗಿ, ‘ನಿಮಗೆ ಏನು ಬೇಕು?’ ಎಂದು ಕೇಳಿದ.</p>.<p>‘ಬಲ ನೀಡು ಭಗವಂತ’ ಸ್ವಾಮೀಜಿ ಕೋರಿದರು.</p>.<p>‘ಬಲ...?! ಯಾಕೆ?’</p>.<p>‘ಉಳ್ಳವರು ಹೋರಾಟ ಮಾಡುವರು, ನಾನೇನು ಮಾಡಲಿ ಬಲಹೀನನಯ್ಯ...’ ಎಂದರು ಸ್ವಾಮೀಜಿ.</p>.<p>‘ಒಂದು ಸಮುದಾಯದ ಸ್ವಾಮೀಜಿಯಾದ ನೀವು ಬಲಹೀನರೇ?’ ಭಗವಂತನಿಗೆ ಅಚ್ಚರಿ.</p>.<p>‘ಹೌದು ಭಗವಂತ, ನಮ್ಮದು ಬಡ ಸಮುದಾಯ, ನಮ್ಮಲ್ಲಿ ಎಮ್ಮೆಲ್ಯೆ,<br />ಮಂತ್ರಿಗಳಿಲ್ಲ, ಉನ್ನತ ಅಧಿಕಾರಿಗಳಿಲ್ಲ, ಉದ್ಯಮಿಗಳಿಲ್ಲ, ಬಲಾಢ್ಯ ಭಕ್ತರಿಲ್ಲ, ಶಿಕ್ಷಣ ಸಂಸ್ಥೆಗಳಿಲ್ಲ, ಮುರುಕಲು ಮಠ, ಹರಕಲು ಪೀಠ. ಹೀಗಿರುವಾಗ ಬಲ ಹೇಗೆ ಬಂದೀತು...?’</p>.<p>‘ನೀವು ಯಾರ ಮೇಲೆ ಬಲ ಪ್ರಯೋಗ ಮಾಡಬೇಕು?’</p>.<p>‘ಸರ್ಕಾರದ ಮೇಲೆ ಒತ್ತಡ ಹಾಕಲು ಬಲ ಬೇಕು. ನಮ್ಮ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಹೆಚ್ಚಿಸಲು, ಅಭಿವೃದ್ಧಿ ನಿಗಮ ಸ್ಥಾಪಿಸಲು, ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಮುದಾಯವನ್ನು ಮೇಲೆ ತರಲು ಸರ್ಕಾರವನ್ನು ಒತ್ತಾಯ ಮಾಡಬೇಕು’.</p>.<p>‘ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ನಿಮ್ಮ ಸಮುದಾಯದ ಸಂಕಷ್ಟವನ್ನು ಮನವರಿಕೆ ಮಾಡಿಕೊಡಿ’.</p>.<p>‘ಅದು ಸುಲಭವಲ್ಲ ಭಗವಂತ, ಪ್ರಭಾವಿ ಸಮುದಾಯದವರು ಹೋರಾಟದ ಮುಂಚೂಣಿ ಯಲ್ಲಿದ್ದಾರೆ. ಅವರ ಗಲಾಟೆಯಲ್ಲಿ ನಮ್ಮ ಕೀರಲು ಧ್ವನಿ ಸರ್ಕಾರಕ್ಕೆ ಹೇಗೆ ಕೇಳಿಸುತ್ತೆ...?’</p>.<p>‘ನಿಮಗೆ ಧ್ವನಿವರ್ಧಕದ ಅಗತ್ಯವಿದೆ’.</p>.<p>‘ಹೌದು, ನಮ್ಮ ಸಮುದಾಯದಲ್ಲಿ ಸಂಘಟನೆ, ಪ್ರತಿಭಟನೆ, ಧ್ವನಿವರ್ಧನೆ ಇಲ್ಲ. ನಮ್ಮಂಥವರಿಗೆ ದೇವರೇ ದಿಕ್ಕು. ನೀನಾದರೂ ನಮ್ಮ ಸಮುದಾಯಕ್ಕೆ ಮೀಸಲಾತಿ ಸೌಕರ್ಯ ಹೆಚ್ಚು ಮಾಡಿ ಸಮುದಾಯವನ್ನು ಉದ್ಧಾರ ಮಾಡು ಭಗವಂತಾ...’</p>.<p>‘ಅಯ್ಯೋ...! ಬೇಕಾದ್ರೆ ಆಯುಷ್ಯ, ಆರೋಗ್ಯ ಕರುಣಿಸುತ್ತೇನೆ, ಮೀಸಲಾತಿ ಮಾತ್ರ ಕೇಳಬೇಡಿ. ನಿಮಗೆ ಕೊಟ್ಟರೆ ಉಳಿದವರು ಬೆನ್ನಿಗೆ ಬಿದ್ದು ನನ್ನ ನೆಮ್ಮದಿ ಹಾಳುಮಾಡುತ್ತಾರೆ...’ ಎನ್ನುತ್ತಾ ಭಗವಂತ ಮಾಯವಾದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>