‘ಅಲ್ಲ ಕನ್ರೋ, ದೇಸದೇಲಿ ದಿನಕ್ಕೆ 145 ರೂಪಾಯಿಗಿಂತ ಕಡಮೆ ಆದಾಯ ಇರೋರು ಕಡು ಬಡವರು ನೂರಕ್ಕೆ ಹನ್ನೆರಡು ಜನ ಇನ್ನೂ ಅವ್ರಂತೆ! ಶಾಸಕರೆಲ್ಲಾ ಅವರವರ ಕ್ಷೇತ್ರಕ್ಕೋಗಿ ಬಡವರು, ರೈತರು, ನೆರೆ ಸಂತ್ರಸ್ತರ ಕಷ್ಟ ಪರಿಹಾರ ಮಾಡದು ಬುಟ್ಟು ಎಲ್ಲಾರೂ ಪಾದಯಾತ್ರೆ ಮಾಡಿಕ್ಕೆ ಹೊಂಟ್ರೆ ಅಚ್ಚೆ ದಿನ್ ಬಂದದಾ?’ ಯಂಟಪ್ಪಣ್ಣ ಗುರುಗುಟ್ಟಿತು.