‘ಕುಮಾರೂ... ಆಪರೇಶನ್ ಕಮಲ ಬ್ಯಾರೆ, ಆಪರೇಶನ್ ಕೋವಿಡ್ ಬ್ಯಾರೆ. ನಿಂಗೂ ಅರವತ್ತಾತಪಾ, ಆರೋಗ್ಯ ಮುಖ್ಯ. ನಾಳೆ ಲಗೂನೆ ಮೂರೂ ಮಂದಿ ಹೋಗೂಣು’ ಎಂದರು. ಮರುದಿನ ಹೀಗೆ ಮೂವರೂ ಜೊತೆಯಾಗಿ ಹೋಗಿ, ಅಕ್ಕಪಕ್ಕ ಕುಂತು ವ್ಯಾಕ್ಸಿನ್ ಹಾಕಿಸಿಕೊಳ್ಳುವ ಸ್ನೇಹಮಯ ದೃಶ್ಯವನ್ನು ನೋಡುತ್ತ... ಕರುನಾಡಿನಲ್ಲಿ ರಾಮರಾಜ್ಯ ಶುರುವಾಯಿತೆಂದು ಸಂತಸಪಡುವಷ್ಟರಲ್ಲಿ...