<p>ಮಹಾರಾಜರು ಆಸ್ಥಾನ ಪ್ರವೇಶಿಸಿದರು. ಬಹುಪರಾಕ್ಗಳು ಮೊಳಗಿದವು. ‘ರಾಜಾಧಿರಾಜ, ರಾಜ ಮಾರ್ತಾಂಡ, ಅನರ್ಹ ರಕ್ಷಕ, ಬೋಪರಾಕ್...’</p>.<p>ಮಹಾರಾಜರು ಎಲ್ಲರತ್ತ ಕೈ ಮುಗಿದು ಒಮ್ಮೆ ರಾಜಸಭೆಯತ್ತ ಕಣ್ಣಾಡಿಸಿದರು. ‘ಏನಿವತ್ತು ಸಾಧು ಸಂತರು, ಸನ್ಯಾಸಿಗಳೇ ಹೆಚ್ಚು ಕಾಣುತ್ತಿದ್ದೀರಿ’ ಎಂದು ಪ್ರಶ್ನಿಸಿದರು.</p>.<p>ಸನ್ಯಾಸಿಯೊಬ್ಬರು ಎದ್ದು ನಿಂತು ‘ಮಹಾರಾಜ, ನಮ್ಮ ಆಶ್ರಮದಲ್ಲಿ ‘ಸಕಲ ವಿದ್ಯಾ’ ಪಾರಂಗತರಾದ ಒಬ್ಬರಿದ್ದಾರೆ. ಅವರನ್ನು ತಾವು ಮಂತ್ರಿಯಾಗಿ ತೆಗೆದುಕೊಳ್ಳಬೇಕು. ಅದಕ್ಕಾಗಿ ಬಂದಿದ್ದೇವೆ. ಇದು ನಮ್ಮ ಅಪ್ಪಣೆ’ ಎಂದರು.</p>.<p>ಮತ್ತೊಬ್ಬ ಸನ್ಯಾಸಿ ‘ಹೌದು ಮಹಾರಾಜ, ನಿಮ್ಮನ್ನು ಪಟ್ಟಕ್ಕೆ ತರುವಲ್ಲಿ ನಮ್ಮ ಶ್ರಮವೂ ಇದೆ. ನಮ್ಮ ಆಶ್ರಮದ ಒಬ್ಬರಿಗೆ ಉಪಮಂತ್ರಿ ಸ್ಥಾನ ಕಲ್ಪಿಸಿದರೆ ನಮ್ಮ ಅನುಗ್ರಹ ಸದಾ ನಿಮ್ಮ ಮೇಲಿರುತ್ತದೆ. ಇಲ್ಲವಾದರೆ ನಿಮ್ಮ ಪಟ್ಟ ಉಳಿಯುವುದು ಕಷ್ಟವಾದೀತು’ ಎಂದು ಎಚ್ಚರಿಸಿದರು.</p>.<p>ಇನ್ನೊಬ್ಬ ಸ್ವಾಮಿಗಳಂತೂ ‘ರಾಜ ಸಿಂಹಾಸನವು ಮಠ ಮಾನ್ಯಗಳ ಮರ್ಜಿ. ನಮ್ಮ ಅನುಗ್ರಹ ಬೇಕೆಂದರೆ ನಮ್ಮ ಕೆಲಸಗಳನ್ನು ಮಾಡಿಕೊಡಿ, ಇಲ್ಲದಿದ್ದರೆ ಅನುಭವಿಸಿ’ ಎಂದರು.</p>.<p>ಸನ್ಯಾಸಿಗಳ ಮಾತು ಕೇಳುತ್ತಲೇ ಮಹಾರಾಜರು ಕಿಡಿಕಿಡಿಯಾದರು. ‘ಸಾಕು ನಿಲ್ಲಿಸಿ, ನೀವು ಧರ್ಮಬೋಧನೆ ಬಿಟ್ಟು ರಾಜಕಾರಣ ಯಾವಾಗ ಆರಂಭಿಸಿದಿರಿ? ಮಂತ್ರಿ ಸ್ಥಾನಗಳಿಗೆ ಪ್ರಭಾವ ಬೀರುವುದು ನಿಮಗೆ ಶೋಭೆ ತರದು. ನೀವು ಈ ಮಟ್ಟಕ್ಕೆ ಇಳಿಯುವುದಾದರೆ ನಾವು ಸಿಂಹಾಸನ ತ್ಯಾಗಕ್ಕೂ ಸಿದ್ಧ’ ಎಂದು ಗುಡುಗಿದರು.</p>.<p>‘ಸಿಂಹಾಸನ ತ್ಯಾಗ ಮಾಡಿ ಮುಂದೇನು ಮಾಡುತ್ತೀರಿ ಮಹಾರಾಜರೇ’ ರಾಜ ಪುರೋಹಿತರ ಪ್ರಶ್ನೆ.</p>.<p>‘ನಾನೂ ಸನ್ಯಾಸಿಯಾಗುತ್ತೇನೆ, ಆಶ್ರಮ ಕಟ್ಟುತ್ತೇನೆ. ರಾಜನಿಗಿಂತ ಸನ್ಯಾಸಿಗಳೇ ಪ್ರಭಾವಶಾಲಿಗಳು ಎಂಬುದು ನನಗೆ ಅರಿವಾಗಿದೆ...’ ಮಹಾರಾಜರ ಮಾತು ಕೇಳಿ ಇಡೀ ರಾಜಸಭೆ ಸ್ತಬ್ಧವಾಯಿತು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಹಾರಾಜರು ಆಸ್ಥಾನ ಪ್ರವೇಶಿಸಿದರು. ಬಹುಪರಾಕ್ಗಳು ಮೊಳಗಿದವು. ‘ರಾಜಾಧಿರಾಜ, ರಾಜ ಮಾರ್ತಾಂಡ, ಅನರ್ಹ ರಕ್ಷಕ, ಬೋಪರಾಕ್...’</p>.<p>ಮಹಾರಾಜರು ಎಲ್ಲರತ್ತ ಕೈ ಮುಗಿದು ಒಮ್ಮೆ ರಾಜಸಭೆಯತ್ತ ಕಣ್ಣಾಡಿಸಿದರು. ‘ಏನಿವತ್ತು ಸಾಧು ಸಂತರು, ಸನ್ಯಾಸಿಗಳೇ ಹೆಚ್ಚು ಕಾಣುತ್ತಿದ್ದೀರಿ’ ಎಂದು ಪ್ರಶ್ನಿಸಿದರು.</p>.<p>ಸನ್ಯಾಸಿಯೊಬ್ಬರು ಎದ್ದು ನಿಂತು ‘ಮಹಾರಾಜ, ನಮ್ಮ ಆಶ್ರಮದಲ್ಲಿ ‘ಸಕಲ ವಿದ್ಯಾ’ ಪಾರಂಗತರಾದ ಒಬ್ಬರಿದ್ದಾರೆ. ಅವರನ್ನು ತಾವು ಮಂತ್ರಿಯಾಗಿ ತೆಗೆದುಕೊಳ್ಳಬೇಕು. ಅದಕ್ಕಾಗಿ ಬಂದಿದ್ದೇವೆ. ಇದು ನಮ್ಮ ಅಪ್ಪಣೆ’ ಎಂದರು.</p>.<p>ಮತ್ತೊಬ್ಬ ಸನ್ಯಾಸಿ ‘ಹೌದು ಮಹಾರಾಜ, ನಿಮ್ಮನ್ನು ಪಟ್ಟಕ್ಕೆ ತರುವಲ್ಲಿ ನಮ್ಮ ಶ್ರಮವೂ ಇದೆ. ನಮ್ಮ ಆಶ್ರಮದ ಒಬ್ಬರಿಗೆ ಉಪಮಂತ್ರಿ ಸ್ಥಾನ ಕಲ್ಪಿಸಿದರೆ ನಮ್ಮ ಅನುಗ್ರಹ ಸದಾ ನಿಮ್ಮ ಮೇಲಿರುತ್ತದೆ. ಇಲ್ಲವಾದರೆ ನಿಮ್ಮ ಪಟ್ಟ ಉಳಿಯುವುದು ಕಷ್ಟವಾದೀತು’ ಎಂದು ಎಚ್ಚರಿಸಿದರು.</p>.<p>ಇನ್ನೊಬ್ಬ ಸ್ವಾಮಿಗಳಂತೂ ‘ರಾಜ ಸಿಂಹಾಸನವು ಮಠ ಮಾನ್ಯಗಳ ಮರ್ಜಿ. ನಮ್ಮ ಅನುಗ್ರಹ ಬೇಕೆಂದರೆ ನಮ್ಮ ಕೆಲಸಗಳನ್ನು ಮಾಡಿಕೊಡಿ, ಇಲ್ಲದಿದ್ದರೆ ಅನುಭವಿಸಿ’ ಎಂದರು.</p>.<p>ಸನ್ಯಾಸಿಗಳ ಮಾತು ಕೇಳುತ್ತಲೇ ಮಹಾರಾಜರು ಕಿಡಿಕಿಡಿಯಾದರು. ‘ಸಾಕು ನಿಲ್ಲಿಸಿ, ನೀವು ಧರ್ಮಬೋಧನೆ ಬಿಟ್ಟು ರಾಜಕಾರಣ ಯಾವಾಗ ಆರಂಭಿಸಿದಿರಿ? ಮಂತ್ರಿ ಸ್ಥಾನಗಳಿಗೆ ಪ್ರಭಾವ ಬೀರುವುದು ನಿಮಗೆ ಶೋಭೆ ತರದು. ನೀವು ಈ ಮಟ್ಟಕ್ಕೆ ಇಳಿಯುವುದಾದರೆ ನಾವು ಸಿಂಹಾಸನ ತ್ಯಾಗಕ್ಕೂ ಸಿದ್ಧ’ ಎಂದು ಗುಡುಗಿದರು.</p>.<p>‘ಸಿಂಹಾಸನ ತ್ಯಾಗ ಮಾಡಿ ಮುಂದೇನು ಮಾಡುತ್ತೀರಿ ಮಹಾರಾಜರೇ’ ರಾಜ ಪುರೋಹಿತರ ಪ್ರಶ್ನೆ.</p>.<p>‘ನಾನೂ ಸನ್ಯಾಸಿಯಾಗುತ್ತೇನೆ, ಆಶ್ರಮ ಕಟ್ಟುತ್ತೇನೆ. ರಾಜನಿಗಿಂತ ಸನ್ಯಾಸಿಗಳೇ ಪ್ರಭಾವಶಾಲಿಗಳು ಎಂಬುದು ನನಗೆ ಅರಿವಾಗಿದೆ...’ ಮಹಾರಾಜರ ಮಾತು ಕೇಳಿ ಇಡೀ ರಾಜಸಭೆ ಸ್ತಬ್ಧವಾಯಿತು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>