<p>‘ನಾನು ನಂಬಿದವರೇ ನನ್ನ ಬೆನ್ನಿಗೆ ಚೂರಿ ಹಾಕಿದರು’ ಗೊಣಗತೊಡಗಿದ ಮುದ್ದಣ್ಣ. </p>.<p>‘ಯಾಕೋ, ಏನಾಯ್ತು?’ ಆತಂಕದಿಂದ ಕೇಳಿದ ಸ್ನೇಹಿತ ವಿಜಿ. </p>.<p>‘ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ನಾನಿವತ್ತು ಎಮ್ಮೆಲ್ಲೆ ಆಗಿರ್ತಿದ್ದೆ’. </p>.<p>‘ನೀನು ಮತದಾರರಿಗೆ ‘ಎಲ್ಲ’ ವ್ಯವಸ್ಥೆ ಮಾಡಿರಲಿಲ್ಲ ಅನಿಸುತ್ತೆ, ಅದಕ್ಕೇ ಸೋತಿದ್ದೀಯ’. </p>.<p>‘ನನ್ನ ಕ್ಷೇತ್ರದಲ್ಲಿ ಒಂದೊಂದು ಕುಟುಂಬಕ್ಕೆ ಇಂತಿಷ್ಟು ಅಂತ ದುಡ್ಡು ಕೊಡೋಕೆ ನಿರ್ಧರಿಸಿ, ಆಪ್ತರ ಕೈಯಲ್ಲಿ ಕೊಟ್ಟು ಹಂಚೋಕೆ ಹೇಳಿದ್ದೆ’. </p>.<p>‘ಹಾಗಿದ್ದರೆ ಗೆಲ್ಲಬೇಕಿತ್ತಲ್ಲ...’ </p>.<p>‘ಆ ದುಡ್ಡು ಜನರಿಗೆ ತಲುಪಿದ್ದರೆ ತಾನೆ?’</p>.<p>‘ಮತ್ತೆ ಏನಾಯ್ತು?’ </p>.<p>‘ನಾನು ಹೇಗೆ ಸಂಪಾದನೆ ಮಾಡಿದ್ದೆನೋ ಅದು ಹಾಗೇ ಸೋರಿಹೋಯಿತು. ಸೋಲು ನನ್ನದಾಯಿತು’ ತಲೆ ಮೇಲೆ ಕೈ ಹೊತ್ತ ಮುದ್ದಣ್ಣ.</p>.<p>‘ದುಡ್ಡು ತೆಗೆದುಕೊಂಡೋರಿಗಾದರೂ ಉಪಕಾರ ಸ್ಮರಣೆ ಇರಬೇಡ್ವಾ? ಕ್ರೂರ ಜಗತ್ತು ಮುದ್ದಣ್ಣ ಇದು’ ಗಾಯದ ಮೇಲೆ ಉಪ್ಪು ಸವರುವ ಮಾತನಾಡಿದ ವಿಜಿ. </p>.<p>‘ನಾನು ಸೋಲು ಒಪ್ಪಿಕೊಳ್ಳುವುದಿಲ್ಲ. ಫೀನಿಕ್ಸ್ನಂತೆ ಮತ್ತೆ ಎದ್ದು ಬರ್ತೀನಿ. ಲೋಕಸಭಾ ಎಲೆಕ್ಷನ್ಗೆ ನಿಲ್ತೀನಿ ಮತ್ತು ಈ ಹಿಂದೆ ಮಾಡಿದ ತಪ್ಪನ್ನು ಮಾಡಲ್ಲ’ .</p>.<p>‘ಅಂದ್ರೆ, ಈ ಬಾರಿ ದುಡ್ಡು ಹಂಚಲ್ವಾ?’ </p>.<p>‘ಹಂಚುತ್ತೇನೆ. ಆದ್ರೆ, ನನ್ನ ಆಪ್ತರ ಕೈಗೆ ದುಡ್ಡು ಕೊಡಲ್ಲ. ನೇರವಾಗಿ ಮತದಾರರ ಕೈಗೆ ಹಣ ಸಿಗುವ ಹಾಗೆ ಮಾಡ್ತೀನಿ. ನನ್ನ ಕ್ಷೇತ್ರದ ಒಂದೊಂದು ಏರಿಯಾದ ಪ್ರಮುಖ ಮನೆಯಲ್ಲಿ ಒಂದೊಂದು ಫಂಕ್ಷನ್ ಮಾಡಿಸ್ತೀನಿ. ಅದಕ್ಕೆಲ್ಲ ನಾನೇ ದುಡ್ಡು ಕೊಡ್ತೀನಿ. ಬರ್ತ್ಡೇ, ಮದುವೆ, ಮುಂಜಿ, ನಾಮಕರಣ ಹೀಗೆ, ಆ ಫಂಕ್ಷನ್ಗೆ ಹೋದವರಿಗೆ ಆ ಮನೆಯವರೇ ಗಿಫ್ಟ್ ಕೊಡೋ ರೀತಿ ವ್ಯವಸ್ಥೆ ಮಾಡ್ತೀನಿ’. </p>.<p>‘ಗುಡ್ ಐಡಿಯಾ. ಆದರೆ, ಗಿಫ್ಟ್ ತಗೊಂಡ ನಂತರವೂ ಜನ ನಿನಗೆ ವೋಟ್ ಹಾಕದಿದ್ರೆ?’ </p>.<p>‘ಏನ್ ಮಾಡೋದು, ಇದು ಕ್ರೂರ ಜಗತ್ತು ಎಂದುಕೊಂಡು ಸುಮ್ಮನಾಗೋದು’ ಎನ್ನುತ್ತಾ ಆಕಾಶ ನೋಡತೊಡಗಿದ ಮುದ್ದಣ್ಣ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನಾನು ನಂಬಿದವರೇ ನನ್ನ ಬೆನ್ನಿಗೆ ಚೂರಿ ಹಾಕಿದರು’ ಗೊಣಗತೊಡಗಿದ ಮುದ್ದಣ್ಣ. </p>.<p>‘ಯಾಕೋ, ಏನಾಯ್ತು?’ ಆತಂಕದಿಂದ ಕೇಳಿದ ಸ್ನೇಹಿತ ವಿಜಿ. </p>.<p>‘ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ನಾನಿವತ್ತು ಎಮ್ಮೆಲ್ಲೆ ಆಗಿರ್ತಿದ್ದೆ’. </p>.<p>‘ನೀನು ಮತದಾರರಿಗೆ ‘ಎಲ್ಲ’ ವ್ಯವಸ್ಥೆ ಮಾಡಿರಲಿಲ್ಲ ಅನಿಸುತ್ತೆ, ಅದಕ್ಕೇ ಸೋತಿದ್ದೀಯ’. </p>.<p>‘ನನ್ನ ಕ್ಷೇತ್ರದಲ್ಲಿ ಒಂದೊಂದು ಕುಟುಂಬಕ್ಕೆ ಇಂತಿಷ್ಟು ಅಂತ ದುಡ್ಡು ಕೊಡೋಕೆ ನಿರ್ಧರಿಸಿ, ಆಪ್ತರ ಕೈಯಲ್ಲಿ ಕೊಟ್ಟು ಹಂಚೋಕೆ ಹೇಳಿದ್ದೆ’. </p>.<p>‘ಹಾಗಿದ್ದರೆ ಗೆಲ್ಲಬೇಕಿತ್ತಲ್ಲ...’ </p>.<p>‘ಆ ದುಡ್ಡು ಜನರಿಗೆ ತಲುಪಿದ್ದರೆ ತಾನೆ?’</p>.<p>‘ಮತ್ತೆ ಏನಾಯ್ತು?’ </p>.<p>‘ನಾನು ಹೇಗೆ ಸಂಪಾದನೆ ಮಾಡಿದ್ದೆನೋ ಅದು ಹಾಗೇ ಸೋರಿಹೋಯಿತು. ಸೋಲು ನನ್ನದಾಯಿತು’ ತಲೆ ಮೇಲೆ ಕೈ ಹೊತ್ತ ಮುದ್ದಣ್ಣ.</p>.<p>‘ದುಡ್ಡು ತೆಗೆದುಕೊಂಡೋರಿಗಾದರೂ ಉಪಕಾರ ಸ್ಮರಣೆ ಇರಬೇಡ್ವಾ? ಕ್ರೂರ ಜಗತ್ತು ಮುದ್ದಣ್ಣ ಇದು’ ಗಾಯದ ಮೇಲೆ ಉಪ್ಪು ಸವರುವ ಮಾತನಾಡಿದ ವಿಜಿ. </p>.<p>‘ನಾನು ಸೋಲು ಒಪ್ಪಿಕೊಳ್ಳುವುದಿಲ್ಲ. ಫೀನಿಕ್ಸ್ನಂತೆ ಮತ್ತೆ ಎದ್ದು ಬರ್ತೀನಿ. ಲೋಕಸಭಾ ಎಲೆಕ್ಷನ್ಗೆ ನಿಲ್ತೀನಿ ಮತ್ತು ಈ ಹಿಂದೆ ಮಾಡಿದ ತಪ್ಪನ್ನು ಮಾಡಲ್ಲ’ .</p>.<p>‘ಅಂದ್ರೆ, ಈ ಬಾರಿ ದುಡ್ಡು ಹಂಚಲ್ವಾ?’ </p>.<p>‘ಹಂಚುತ್ತೇನೆ. ಆದ್ರೆ, ನನ್ನ ಆಪ್ತರ ಕೈಗೆ ದುಡ್ಡು ಕೊಡಲ್ಲ. ನೇರವಾಗಿ ಮತದಾರರ ಕೈಗೆ ಹಣ ಸಿಗುವ ಹಾಗೆ ಮಾಡ್ತೀನಿ. ನನ್ನ ಕ್ಷೇತ್ರದ ಒಂದೊಂದು ಏರಿಯಾದ ಪ್ರಮುಖ ಮನೆಯಲ್ಲಿ ಒಂದೊಂದು ಫಂಕ್ಷನ್ ಮಾಡಿಸ್ತೀನಿ. ಅದಕ್ಕೆಲ್ಲ ನಾನೇ ದುಡ್ಡು ಕೊಡ್ತೀನಿ. ಬರ್ತ್ಡೇ, ಮದುವೆ, ಮುಂಜಿ, ನಾಮಕರಣ ಹೀಗೆ, ಆ ಫಂಕ್ಷನ್ಗೆ ಹೋದವರಿಗೆ ಆ ಮನೆಯವರೇ ಗಿಫ್ಟ್ ಕೊಡೋ ರೀತಿ ವ್ಯವಸ್ಥೆ ಮಾಡ್ತೀನಿ’. </p>.<p>‘ಗುಡ್ ಐಡಿಯಾ. ಆದರೆ, ಗಿಫ್ಟ್ ತಗೊಂಡ ನಂತರವೂ ಜನ ನಿನಗೆ ವೋಟ್ ಹಾಕದಿದ್ರೆ?’ </p>.<p>‘ಏನ್ ಮಾಡೋದು, ಇದು ಕ್ರೂರ ಜಗತ್ತು ಎಂದುಕೊಂಡು ಸುಮ್ಮನಾಗೋದು’ ಎನ್ನುತ್ತಾ ಆಕಾಶ ನೋಡತೊಡಗಿದ ಮುದ್ದಣ್ಣ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>