ಸಂಕ್ರಾಂತಿ ಪುರುಷನು ಆಯುಧಗಳನ್ನು ಹಿಡಿದಿದ್ದು, ದೇಶಗಳ ನಡುವಿನ ಯುದ್ಧವು ದೇಶದ ಜನರ ಬದುಕಿನ ಮೇಲೆ ತೀವ್ರ ಪ್ರಭಾವ ಬೀರಲಿದೆ. ಉತ್ತರ ದಿಕ್ಕಿಗೆ ಶುಭ ಫಲ, ದಕ್ಷಿಣಕ್ಕೆ ಅನುದಾನ ಖೋತಾ, ಗಳಿಕೆ ಮಧ್ಯಮ. ಸಂಕ್ರಾಂತಿ ಪುರುಷನಿಗೆ ನವಕರವಿದ್ದು ಕಳ್ಳ-ಸುಳ್ಳ ಅಧಿಕಾರಿಗಳಿಗೆ ಅನುಕೂಲವು. ಲೋಕ ಸೆಣಸಾಟದಲ್ಲಿ ಗಾಂಧಿ ಮಂತ್ರ, ರಾಮ ಜಪ ಶುಭ ಫಲ ತಂದಾವು. ಮಣಿಪುರದಲ್ಲಿ ಗೊಂದಲಗಳು ಮುಂದುವರಿಯುವುವು. ಅರುಣಾಚಲದಲ್ಲಿ ಡ್ರಾಗನ್ ಕಾಟವು. ಉಗ್ರವಾದಿ ಗಳಿಗೆ ತೀವ್ರ ಹಿನ್ನಡೆಯಾಗಲಿದೆ. ದೇಶದ ಕುಸ್ತಿಪಟುಗಳು ಅಕಾರಣವಾಗಿ ಚಿತ್ತಾಗುವರು. ವಿರೋಧ ಪಕ್ಷಗಳ ಮುಸುಕಿನ ಗುದ್ದಾಟದಿಂದ ದಿಲ್ಲಿ ಮಹಾರಾಜರಿಗೆ ಪಕ್ಷ ಸೌಖ್ಯ ಹೆಚ್ಚಲಿದೆ.