<p>ಚಂದ್ರು ಏನೋ ಹೇಳಕೆ ಬಲೇ ಆತುರದಗಿದ್ದ. ‘ಸಾ, ಸಾ ರಾಜಾವುಲಿ ಆಪ್ತಬಣದೋರು ಸಚಿವ ಸಂಪುಟದ ವಿಸ್ತರಣೆಗೆ ಒತ್ತಡ ಹಾಕ್ತಾವರಂತೆ!’</p>.<p>‘ಅದೀಯೆ! ಕೆ.ಆರ್.ಪೇಟೆ, ಶಿರಾ ಗೆದ್ದುಕ್ಯಂಡು ಬಂದಿರಾ ದಾಸತ್ತುಗಾರ ಇಜಿಯಣ್ಣನಿಗೆ ಯುವರಾಜಾವುಲಿ ರಾಜ್ಯಾಭಿಸೇಕ ಮಾಡಿ ಅಂತ ಗುಮ್ಮನ್ನ ಬುಟ್ಟವರಂತೆ. ಕಮಲೇ ಕಮಲೋತ್ಪತ್ತಿಃ?’ ಯಂಟಪ್ಪಣ್ಣ ಒಗ್ರಣೆ ಹಾಕಿದರು.</p>.<p>‘ಮತ್ತಿನ್ನೇನ್ಲಾ, ನೆನ್ನೆ ಮೊನ್ನೆ ಬಂದೋರು ಎರಡು ಹಲ್ಲಿನ ಕರಾ ಆಡಿದಂಗೆ ಆಡ್ತಾವರೆ. ತರಗು ಗುಡ್ಸಿ ಪಕ್ಸ ಕಟ್ಟಿದ ಮೂಲನಿವಾಸಿಗಳು ಎಲ್ಲೋಗಬೇಕು?’ ತೇಟಾದ ಉತ್ತರ ಕೊಟ್ಟರು ತುರೇಮಣೆ.</p>.<p>‘ಥೋ, ಬರೀ ಬಂಡಾಟದ್ದೇ ಹೇಳತಾ ಕುಂತಿರತೀರಾ! ಅದಕ್ಕಿಂತಾ ಹೆಚ್ಚುಗಟ್ಲೆ ಸಮಾಚಾರ ಅದೆ. ಮೋದಿ ಮಾರಾಜ್ರು ವಿಸ್ತರಣಾವಾದ ಮಾನಸಿಕ ರೋಗ ಅಂದವ್ರೆ. ಇದ್ಯಾಕೆ ಹಿಂಗಂದ್ರು ಅಂತಾ!’ ಎಲ್ಲರಿಗೂ<br />ಆಶ್ಚರ್ಯವಾಯ್ತು.</p>.<p>‘ಅಲ್ಲುವರಾ ಮತ್ತೆ, ಸಂಪುಟ ವಿಸ್ತರಣೇನೆ ಕಷ್ಟಾಗ್ಯದೆ ಇನ್ನು ಮರಾಠರ ಅಭಿವೃದ್ಧಿಗೆ 50 ಕೋಟಿ ನಮ್ಮದಲ್ಲ ಅಂತ ಕೊಟ್ಟಿರದು ಗುಲ್ಲಾಗ್ಯದೆ! ಅದಕೆ ಮೋದಿ ಮಾರಾಜ್ರು ಹಂಗಂದಿರಬೇಕು ಸಾ’ ನನ್ನ ಮಾತು ಹಾಕಿದೆ.</p>.<p>‘ಮೋದಿ ಮಾರಾಜ್ರು ವಡಪಲ್ಲೇ ಮಾತಾಡ್ತರೆ. ಇದೆಲ್ಲೀದೋ ಸುದ್ದಿ?’ ತುರೇಮಣೆ ಕೇಳಿದರು.</p>.<p>‘ವತ್ತರೇಗೆ ಚಿಕನ್ ಕೋಳಿ-ಮಟನ್ ಮಾಂಸ ತರುಮಾ ಅಂತ ವೋಗಿದ್ನಾ, ಅಲ್ಲಿ ಯಾರೋ ಮಾತಾಡಿಕ್ಯತಿದ್ರು’ ಅಂದ ಚಂದ್ರು.</p>.<p>‘ಅಯ್ಯೋ ಪಾಪ, ಮಂತ್ರಿಯಾಯ್ತಿವಿ ಅಂತ ಕಾವುಗೋಳಿ ಥರ ಕೊರಗುಟ್ಟಿಕ್ಯಂಡು ಕುಂತಿದ್ರಲ್ಲಾ ಅವರ ಕತೆ ಹ್ಯಂಗೆ!’ ತುರೇಮಣೆ ಶೋಕ ವ್ಯಕ್ತಪಡಿಸಿದರು. ನಾನು ಆ ವೇಳೆ ಈ ಸುದ್ದಿಯ ಮೂಲ ಹುಡಿಕ್ಕಂಬಂದೆ.</p>.<p>‘ಸಾ, ಮೋದಿ ಮಾರಾಜ್ರು ವಿಸ್ತರಣಾವಾದ ಮಾನಸಿಕ ರೋಗ ಅಂದಿರದು ದಿಟ. ಆದ್ರೆ ಅದು ಚೀನಕ್ಕೆ ಎಚ್ಚರಿಕೆ ಕೊಟ್ಟಿರದು’ ಅಂತ ಪೇಪರ್ ತೋರಿಸಿದೆ.</p>.<p>‘ಅಯ್ಯೋ ಬಡ್ಡಿಹೈದ್ನೆ, ಆಕಾಂಕ್ಷಿಗುಳ ಆಸೆಗೆ ಬಗನಿಗೂಟ ಮಡಗಿದ್ದಲ್ಲೋ’ ಅಂತ ಚಂದ್ರನ್ನ ಬೋದರೆ ಎಲ್ಲಾ ಗೊಳ್ಳೆನರ ಕಿತ್ಕಳಗಂಟಾ ನಗಕ್ಕೆ ಸುರು ಮಾಡಿದ್ರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಂದ್ರು ಏನೋ ಹೇಳಕೆ ಬಲೇ ಆತುರದಗಿದ್ದ. ‘ಸಾ, ಸಾ ರಾಜಾವುಲಿ ಆಪ್ತಬಣದೋರು ಸಚಿವ ಸಂಪುಟದ ವಿಸ್ತರಣೆಗೆ ಒತ್ತಡ ಹಾಕ್ತಾವರಂತೆ!’</p>.<p>‘ಅದೀಯೆ! ಕೆ.ಆರ್.ಪೇಟೆ, ಶಿರಾ ಗೆದ್ದುಕ್ಯಂಡು ಬಂದಿರಾ ದಾಸತ್ತುಗಾರ ಇಜಿಯಣ್ಣನಿಗೆ ಯುವರಾಜಾವುಲಿ ರಾಜ್ಯಾಭಿಸೇಕ ಮಾಡಿ ಅಂತ ಗುಮ್ಮನ್ನ ಬುಟ್ಟವರಂತೆ. ಕಮಲೇ ಕಮಲೋತ್ಪತ್ತಿಃ?’ ಯಂಟಪ್ಪಣ್ಣ ಒಗ್ರಣೆ ಹಾಕಿದರು.</p>.<p>‘ಮತ್ತಿನ್ನೇನ್ಲಾ, ನೆನ್ನೆ ಮೊನ್ನೆ ಬಂದೋರು ಎರಡು ಹಲ್ಲಿನ ಕರಾ ಆಡಿದಂಗೆ ಆಡ್ತಾವರೆ. ತರಗು ಗುಡ್ಸಿ ಪಕ್ಸ ಕಟ್ಟಿದ ಮೂಲನಿವಾಸಿಗಳು ಎಲ್ಲೋಗಬೇಕು?’ ತೇಟಾದ ಉತ್ತರ ಕೊಟ್ಟರು ತುರೇಮಣೆ.</p>.<p>‘ಥೋ, ಬರೀ ಬಂಡಾಟದ್ದೇ ಹೇಳತಾ ಕುಂತಿರತೀರಾ! ಅದಕ್ಕಿಂತಾ ಹೆಚ್ಚುಗಟ್ಲೆ ಸಮಾಚಾರ ಅದೆ. ಮೋದಿ ಮಾರಾಜ್ರು ವಿಸ್ತರಣಾವಾದ ಮಾನಸಿಕ ರೋಗ ಅಂದವ್ರೆ. ಇದ್ಯಾಕೆ ಹಿಂಗಂದ್ರು ಅಂತಾ!’ ಎಲ್ಲರಿಗೂ<br />ಆಶ್ಚರ್ಯವಾಯ್ತು.</p>.<p>‘ಅಲ್ಲುವರಾ ಮತ್ತೆ, ಸಂಪುಟ ವಿಸ್ತರಣೇನೆ ಕಷ್ಟಾಗ್ಯದೆ ಇನ್ನು ಮರಾಠರ ಅಭಿವೃದ್ಧಿಗೆ 50 ಕೋಟಿ ನಮ್ಮದಲ್ಲ ಅಂತ ಕೊಟ್ಟಿರದು ಗುಲ್ಲಾಗ್ಯದೆ! ಅದಕೆ ಮೋದಿ ಮಾರಾಜ್ರು ಹಂಗಂದಿರಬೇಕು ಸಾ’ ನನ್ನ ಮಾತು ಹಾಕಿದೆ.</p>.<p>‘ಮೋದಿ ಮಾರಾಜ್ರು ವಡಪಲ್ಲೇ ಮಾತಾಡ್ತರೆ. ಇದೆಲ್ಲೀದೋ ಸುದ್ದಿ?’ ತುರೇಮಣೆ ಕೇಳಿದರು.</p>.<p>‘ವತ್ತರೇಗೆ ಚಿಕನ್ ಕೋಳಿ-ಮಟನ್ ಮಾಂಸ ತರುಮಾ ಅಂತ ವೋಗಿದ್ನಾ, ಅಲ್ಲಿ ಯಾರೋ ಮಾತಾಡಿಕ್ಯತಿದ್ರು’ ಅಂದ ಚಂದ್ರು.</p>.<p>‘ಅಯ್ಯೋ ಪಾಪ, ಮಂತ್ರಿಯಾಯ್ತಿವಿ ಅಂತ ಕಾವುಗೋಳಿ ಥರ ಕೊರಗುಟ್ಟಿಕ್ಯಂಡು ಕುಂತಿದ್ರಲ್ಲಾ ಅವರ ಕತೆ ಹ್ಯಂಗೆ!’ ತುರೇಮಣೆ ಶೋಕ ವ್ಯಕ್ತಪಡಿಸಿದರು. ನಾನು ಆ ವೇಳೆ ಈ ಸುದ್ದಿಯ ಮೂಲ ಹುಡಿಕ್ಕಂಬಂದೆ.</p>.<p>‘ಸಾ, ಮೋದಿ ಮಾರಾಜ್ರು ವಿಸ್ತರಣಾವಾದ ಮಾನಸಿಕ ರೋಗ ಅಂದಿರದು ದಿಟ. ಆದ್ರೆ ಅದು ಚೀನಕ್ಕೆ ಎಚ್ಚರಿಕೆ ಕೊಟ್ಟಿರದು’ ಅಂತ ಪೇಪರ್ ತೋರಿಸಿದೆ.</p>.<p>‘ಅಯ್ಯೋ ಬಡ್ಡಿಹೈದ್ನೆ, ಆಕಾಂಕ್ಷಿಗುಳ ಆಸೆಗೆ ಬಗನಿಗೂಟ ಮಡಗಿದ್ದಲ್ಲೋ’ ಅಂತ ಚಂದ್ರನ್ನ ಬೋದರೆ ಎಲ್ಲಾ ಗೊಳ್ಳೆನರ ಕಿತ್ಕಳಗಂಟಾ ನಗಕ್ಕೆ ಸುರು ಮಾಡಿದ್ರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>